ಆಯುಷ್ಮಾನ್ ಭಾರತ್ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಜನೆಯ ಹೆಸರು
ಯೋಜನೆಯ ವಿಧಆರೋಗ್ಯ ವಿಮೆ
ದೇಶಭಾರತ
ಪ್ರಧಾನಮಂತ್ರಿನರೇಂದ್ರ ಮೋದಿ
ಮಂತ್ರಾಲಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಜಾರಿಯಗಿದ್ದು23 ಸೆಪ್ಟೆಂಬರ್ 2018; 2032 ದಿನ ಗಳ ಹಿಂದೆ (2018-೦೯-23)
Funding೮,೦೮೮ ಕೋಟಿ (ಯುಎಸ್$೧.೮ ಶತಕೋಟಿ) (2021–22) [೧]
ಸಧ್ಯದ ಸ್ಥಿತಿcheckY ಅಸ್ತಿತ್ವದಲ್ಲಿದೆ
ಅಧೀಕೃತ ಜಾಲತಾಣhttps://www.pmjay.gov.in/

ಆಯುಷ್ಮಾನ್ ಭಾರತ್ ಯೋಜನೆ (ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ-ಪಿಎಂಜೆಎವೈ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಎಂಬ ಹೆಸರುಗಳಿವೆ) ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ೨೦೧೮ರಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರ ಸರಕಾರ ಆರಂಭಿಸಿದ ಯೋಜನೆಯಾಗಿದೆ.[೨] ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆ ವ್ಯವಸ್ಥೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು, ತಡೆಗಟ್ಟುವ ಮತ್ತು ಉತ್ತೇಜಿಸುವ ಆರೋಗ್ಯ ಒಳಗೊಂಡಂತೆ, ಆರೋಗ್ಯ ರಕ್ಷಣೆಯನ್ನು ಸಮಗ್ರವಾಗಿ ಪರಿಹರಿಸಲು ಈ ಯೋಜನೆಯು ಉದ್ದೇಶಿಸಿದೆ.[೩] ಇದು ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳು ಮತ್ತು ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ (ಎನ್‌ಎಚ್‌ಪಿಎಸ್) ಎಂಬ ಎರಡು ಪ್ರಮುಖ ಆರೋಗ್ಯ ಉಪಕ್ರಮಗಳ ಕೆಳಗೆ ಬರುತ್ತದೆ. ಇಂದೂ ಭೂಷಣ್ ರವರು ಆಯುಷ್ಮಾನ್ ಭಾರತ್ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ ಮತ್ತು ಉಪ ಸಿಇಒ ಆಗಿ ದಿನೇಶ್ ಅರೋರಾರವರು ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಇತಿಹಾಸ[ಬದಲಾಯಿಸಿ]

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಹಿರಿಯ ನಾಗರಿಕ ಆರೋಗ್ಯ ವಿಮೆ ಯೋಜನೆ (ಎಸ್‌ಸಿಐಎಸ್), ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್), ನೌಕರರ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್) ಸೇರಿದಂತೆ ಅನೇಕ ಯೋಜನೆಗಳನ್ನು ಒಳಗೊಳ್ಳುವ ಮೂಲಕ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು (ಎನ್‌ಎಚ್‌ಪಿಎಸ್) ರೂಪುಗೊಂಡಿದೆ. ಆರೋಗ್ಯ ನೀತಿ, ೨೦೧೭ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಭಾರತದ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿ ರೂಪಿಸಿದೆ.[೪]

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಿಜಿಹೆಚ್ಎಸ್ ವ್ಯಾಪ್ತಿಯ ನಗರಗಳಲ್ಲಿ ವಾಸಿಸುವ ಅವರ ಅವಲಂಬಿತರಿಗೆ ಸಮಗ್ರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ೧೯೫೪ ರಲ್ಲಿ ಕೇಂದ್ರ ಆರೋಗ್ಯ ಯೋಜನೆ (ಸಿಜಿಹೆಚ್ಎಸ್) ಅನ್ನು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಈ ಆರೋಗ್ಯ ಯೋಜನೆ ಈಗ ಭುವನೇಶ್ವರ, ಭೋಪಾಲ್, ಚಂಡೀಗಢ್ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಔಷಧಾಲಯವು ಈ ಯೋಜನೆಯ ಬೆನ್ನೆಲುಬಾಗಿದೆ. ತಜ್ಞರು ಮತ್ತು ವೈದ್ಯಕೀಯ ಅಧಿಕಾರಿಗಳ ಮಾರ್ಗದರ್ಶನಕ್ಕಾಗಿ ಕಾಲಕಾಲಕ್ಕೆ ಈ ವಿವಿಧ ವಿಷಯಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯು ಅಲೋಪತಿ ಮತ್ತು ಹೋಮಿಯೋಪತಿ ವ್ಯವಸ್ಥೆಗಳ ಮೂಲಕ ಹಾಗೂ ಆಯುರ್ವೇದ, ಯುನಾನಿ, ಯೋಗ ಮತ್ತು ಸಿದ್ಧ ಮುಂತಾದ ಸಾಂಪ್ರದಾಯಿಕ ಭಾರತೀಯ ಔಷಧಿಗಳ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.[೫]

ವೈಶಿಷ್ಟ್ಯಗಳು[ಬದಲಾಯಿಸಿ]

ಆಯುಷ್ಮಾನ್ ಭಾರತ್ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ.

1. ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ[ಬದಲಾಯಿಸಿ]

ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು ಇದು ೧೦ ಕೋಟಿ (ನೂರು ಮಿಲಿಯನ್) ಬಡ ಮತ್ತು ದುರ್ಬಲ ಕುಟುಂಬಗಳನ್ನು (ಸರಿಸುಮಾರು ೫೦ ಕೋಟಿ (ಐದು ನೂರು ಮಿಲಿಯನ್) ಫಲಾನುಭವಿಗಳನ್ನು ಒಳಗೊಂಡಿರುತ್ತದೆ. ಅದಲ್ಲದೆ ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಲಕ್ಷ ರೂಪಾಯಿಗಳವರೆಗೆ ($೭,೧೦೦) ನೀಡುವಷ್ಟು ವ್ಯಾಪ್ತಿಯನ್ನು ಹೊಂದಿದೆ ಹಾಗೂ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಯೋಜನೆಯ ಪ್ರಯೋಜನಗಳು ದೇಶಾದ್ಯಂತ ಬಳಸಬಹುದಾಗಿದ್ದು, ಈ ಯೋಜನೆಯಡಿ ಬರುವ ಫಲಾನುಭವಿಗೆ ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗಳಿಂದ ಖರ್ಚಿಲ್ಲದೆ ಪ್ರಯೋಜನಗಳನ್ನು ಪಡೆಯಲು ಅವಕಾಶವಿರುತ್ತದೆ.

ಇದು ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಸಿಸಿ) ಡೆಟಾಬೇಸ್ ನ ಅಭಾವದ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಅರ್ಹತೆಯೊಂದಿಗೆ ಆಧಾರಿತ ಯೋಜನೆಯಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಒಳಗೊಂಡಿದೆ. ಇತ್ತೀಚಿನ ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಸಿಸಿ) ದತ್ತಾಂಶದ ಪ್ರಕಾರ ಸುಮಾರು ೧೦.೭೪ ಕೋಟಿ ಬಡ, ಅವಕಾಶ ವಂಚಿತ ಗ್ರಾಮೀಣ ಕುಟುಂಬಗಳನ್ನು ಮತ್ತು ನಗರ ಕಾರ್ಮಿಕರ ಕುಟುಂಬಗಳಲ್ಲಿ ಗುರುತಿಸಲಾದ ಉದ್ಯೋಗ ವರ್ಗವನ್ನು ತಲುಪುವ ಗುರಿಯಿರಿಸಿದೆ.

ಆಯುಷ್ಮಾನ್ ಭಾರತ್ - ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಷನ್‌ನ ಒಂದು ಪ್ರಮುಖ ತತ್ವವೆಂದರೆ ಸಹಕಾರದ ಸಂಯುಕ್ತತೆ ಮತ್ತು ರಾಜ್ಯಗಳಿಗೆ ನಮ್ಯತೆಯನ್ನು ಒದಗಿಸುವುದಾಗಿದೆ.

ಅದರೊಂದಿಗೆ ನೀತಿ ನಿರ್ದೇಶನಗಳನ್ನು ನೀಡಲು ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಷನ್ ಕೌನ್ಸಿಲ್ (ಎಬಿ-ಎನ್‌ಎಚ್‌ಪಿಎಂಸಿ) ಅನ್ನು ಉನ್ನತ ಮಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಲ್ಲದೆ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರತಿ ರಾಜ್ಯದಲ್ಲಿ ರಾಜ್ಯ ಆರೋಗ್ಯ ಸಂಸ್ಥೆ (ಎಸ್‌ಎಚ್‌ಎ) ಹೊಂದಿರಬೇಕು.[೬]

2. ಸ್ವಾಸ್ಥ್ಯ ಕೇಂದ್ರಗಳು[ಬದಲಾಯಿಸಿ]

೧.೫ ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ೧೨೦೦ ಕೋಟಿ ರೂ. ($೧೭೦ ಮಿಲಿಯನ್) ನಿಗದಿಪಡಿಸಲಾಗಿದೆ. ಇದರ ಅಡಿಯಲ್ಲಿ ೧.೫ ಲಕ್ಷ ಕೇಂದ್ರಗಳನ್ನು ಪ್ರತಿನಿತ್ಯದ ಅಗತ್ಯಗಳಲ್ಲದೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮತ್ತು ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನೂ ಒಳಗೊಂಡಂತೆ ಸಮಗ್ರ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಸ್ಥಾಪಿಸಲಾಗುತ್ತದೆ. ಔಷಧಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒದಗಿಸಲಾಗುತ್ತದೆ.[೭] ಸರ್ಕಾರವು ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸ್ವಾಸ್ಥ್ಯ ಕೇಂದ್ರಗಳಿಗೆ ನವೀಕರಿಸಲಿದೆ. ಕಲ್ಯಾಣ ಯೋಜನೆಯನ್ನು ಆಗಸ್ಟ್ ೧೫, ೨೦೧೮ ರಂದು ರೂಪಿಸಲಾಗಿತ್ತು.[೮] ಇದಲ್ಲದೆ, ಈ ಕೇಂದ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಿಎಸ್ಆರ್ ಮತ್ತು ಲೋಕೋಪಕಾರಿ ಸಂಸ್ಥೆಗಳ ಮೂಲಕ ಖಾಸಗಿ ವಲಯದ ಕೊಡುಗೆಯನ್ನು ಸಹ ಊಹಿಸಲಾಗಿದೆ.[೯]

ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದಲ್ಲಿ ಒದಗಿಸಬೇಕಾದ ಸೇವೆಗಳ ಪಟ್ಟಿಯಲ್ಲಿ ಇವು ಸೇರಿವೆ:

  • ಗರ್ಭಧಾರಣೆಯ ಆರೈಕೆ ಮತ್ತು ತಾಯಿಯ ಆರೋಗ್ಯ ಸೇವೆಗಳು
  • ನವಜಾತ ಮತ್ತು ಶಿಶು ಆರೋಗ್ಯ ಸೇವೆಗಳು
  • ಮಕ್ಕಳ ಆರೋಗ್ಯ
  • ದೀರ್ಘಕಾಲದ ಸಾಂಕ್ರಾಮಿಕ ರೋಗಗಳು
  • ಸಾಂಕ್ರಾಮಿಕವಲ್ಲದ ರೋಗಗಳು
  • ಮಾನಸಿಕ ಅಸ್ವಸ್ಥತೆಯ ನಿರ್ವಹಣೆ
  • ಹಲ್ಲಿನ ಆರೈಕೆ
  • ಜೆರಿಯಾಟ್ರಿಕ್ ಆರೈಕೆ ಮತ್ತು ತುರ್ತು ಔಷಧ

ಪ್ರಗತಿ[ಬದಲಾಯಿಸಿ]

ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿ ಉಳಿದ ೨೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಒಪ್ಪಿಕೊಂಡಿವೆ.[೧೦] ಅಕ್ಟೋಬರ್ ೨೦೧೮ ರವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಯೋಜನೆಯ ಲಾಭವನ್ನು ಪಡೆದಿದ್ದಾರೆ.[೧೧] ನವೆಂಬರ್ ೨೬ ರ ಹೊತ್ತಿಗೆ ೮೨೫,೦೦೦ ಕ್ಕೂ ಹೆಚ್ಚು ಇ-ಕಾರ್ಡ್‌ಗಳನ್ನು ಉತ್ಪಾದಿಸಲಾಗಿತ್ತು ಮತ್ತು ಈ ಯೋಜನೆಗೆ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ನೇಮಕ ಮಾಡುವ ಒತ್ತಡವೂ ಇತ್ತು.[೧೨] ಈ ಮೂರು ಆಸ್ಪತ್ರೆಗಳು ಬೇಗನೇ ಈ ಯೋಜನೆಗೆ ಕೈ ಸೇರಿಸಿದ್ದವು :

  • ನಂಗ್ಲೊಯ್‌ನ ಸಿಗ್ನಸ್ ಸೋನಿಯಾ ಆಸ್ಪತ್ರೆ
  • ಡಾ. ಶ್ರಾಫ್ ಅವರ ಚಾರಿಟಿ ಐ ಆಸ್ಪತ್ರೆ ಮತ್ತು
  • ಸಿಗ್ನಸ್ ಎಂಎಲ್ಎಸ್ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ.

ವಿವಾದಗಳು[ಬದಲಾಯಿಸಿ]

ನಕಲಿ ವೈದ್ಯಕೀಯ ಮಸೂದೆಗಳನ್ನು ಸಲ್ಲಿಸುವ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯನ್ನು ಖಾಸಗಿ ಆಸ್ಪತ್ರೆಗಳು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದೆ ಎಂಬ ಮಾಧ್ಯಮ ವರದಿಗಳು ಬಂದಿವೆ. ಯೋಜನೆಯಡಿಯಲ್ಲಿ, ಬಹಳ ಹಿಂದೆಯೇ ಡಿಸ್ಚಾರ್ಜ್ ಆಗಿರುವ ವ್ಯಕ್ತಿಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ ಮತ್ತು ಮೂತ್ರಪಿಂಡ ಕಸಿ ಸೌಲಭ್ಯವಿಲ್ಲದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಡೆಸಿದಂತೆ ತೋರಿಸಲಾಗಿದೆ.[೧೩] ಉತ್ತರಾಖಂಡ ರಾಜ್ಯದಲ್ಲಿ ಮಾತ್ರ ಕನಿಷ್ಠ ೬೯೭ ನಕಲಿ ಪ್ರಕರಣಗಳಿವೆ. ಈ ಯೋಜನೆಯಡಿಯಲ್ಲಿ ನಡೆದ ವಂಚನೆಗಾಗಿ ಆಸ್ಪತ್ರೆಗಳಿಗೆ ಒಂದು ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಡಿಯಲ್ಲಿ ಅನೇಕ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ನಿರಂತರವಾಗಿ ವಿಕಸಿಸುತ್ತಿರುವ ವಂಚನೆ-ನಿಯಂತ್ರಣ ವ್ಯವಸ್ಥೆಯು ಯೋಜನೆ ಬೆಳೆದಂತೆ ಅದನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.[೧೪]

ಉಲ್ಲೇಖಗಳು[ಬದಲಾಯಿಸಿ]

  1. "Budget 2020 : Healthcare gets Rs 69,000 crore; Rs 6,400 crore for Ayushman Bharat - ET HealthWorld".
  2. http://infnd.com/ayushman-bharat-yojana-in-hindi/
  3. http://www.pib.gov.in/PressReleaseIframePage.aspx?PRID=1518544
  4. https://economictimes.indiatimes.com/small-biz/entrepreneurship/can-pm-modis-ayushman-bharat-help-healthcare-startups-scale/articleshow/68147401.cms
  5. https://www.india.gov.in/people-groups/life-cycle/senior-citizens/central-government-health-scheme
  6. https://www.india.gov.in/spotlight/ayushman-bharat-national-health-protection-mission
  7. http://www.pib.gov.in/PressReleaseIframePage.aspx?PRID=1518544
  8. http://pib.nic.in/newsite/PrintRelease.aspx?relid=177817
  9. https://www.india.gov.in/spotlight/ayushman-bharat-national-health-protection-mission
  10. "ಆರ್ಕೈವ್ ನಕಲು". Archived from the original on 2019-09-30. Retrieved 2019-09-30.
  11. https://www.financialexpress.com/economy/ayushman-bharat-off-to-flying-start-1-lakh-subscribers-join-modis-insurance-scheme-in-just-1-month/1356710/
  12. https://indianexpress.com/article/delhi/ayushman-bharat-fresh-push-by-national-health-agency-to-get-hospitals-on-board-5464090/
  13. https://timesofindia.indiatimes.com/india/under-ayushman-bharat-how-hospitals-use-bizarre-ways-to-siphon-off-public-funds/articleshow/70654696.cms
  14. https://www.orfonline.org/research/ayushman-bharat-pmjay-at-one-a-step-closer-to-universal-health-coverage-55807/