ರಾಜ್ಯಸಭೆಯ ಚುನಾವಣೆ ಮತ್ತು ಪಕ್ಷಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

  • ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ,

ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ[ಬದಲಾಯಿಸಿ]

ದಿನಾಂಕ : ೪-೯-೨೦೧೩ :

  • September 04, 2013
ಕ್ರ.ಸಂ ಪಕ್ಷ ಸ್ಥಾನಗಳು ಕ್ರ.ಸಂ ಪಕ್ಷ ಸ್ಥಾನಗಳು
1 ಕಾಂಗ್ರೆಸ್ (INC ) (ಯುಪಿಎ) 72 16 ಶಿರೋಮಣಿ ಅಕಾಲಿದಳ(SAD ) - 3
2 ಬಿ.ಜೆ.ಪಿ. (BJP) ಎನ್.ಡಿಎ 49 17 ರಾಷ್ತ್ರೀಯ ಜನತಾದಳ (ಲಾಲೂ ಯಾದವ) (RJD )(ಯುಪಿಎ) 2
3 ಬಹುಜನ.ಸ,ವಾದಿ ಪಾರ್ಟಿ (ಮಾಯಾವತಿ)(BSP )  15 18 ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ (J&KNC )(ಯುಪಿಎ) 2
4 ಕಮ್ಯೂನಿಸ್ಟ್ ಪಾರ್ಟಿ(Marxist) (CPI(M) 11 19 ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI ) 2
5 ಜನತಾ ದಳ (ಶರದ್ ಯಾದವ್) (United) (JD(U) 9 20 ಬೋಡೋ ಲ್ಯಾಂಡ್ ಪೀಪಲ್ ಪಾರ್ಟಿ (BPF )  1
6 ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC 9 21 ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB ) 1
7 ನಾಮಕರಣ (NOM) 9 22 ಇಂಡಿಯನ್ ನ್ಯಾಶನಲ್ ಲೋಕ ದಳ (INLD )(ಯುಪಿಎ) 1
8 ಸಮಾಜವಾದಿ ಪಾರ್ಟಿ(-ಮುಲಾಯಂ ಸಿಂಗ್) (SP 9 23 ಝಾರ್ಕಂಡ್ ಮುಕ್ತಿ ಮೋರ್ಚಾ (JMM )  1
9 ಪಕ್ಷ ರಹಿತ -+-ಇತರೆ (IND. 8 24 ಕೇರಳ ಕಾಂಗ್ರೆಸ್ (ಮಣಿ) (KC(M))(ಯುಪಿಎ)  1
10 ಆಲ್ ಇಂಡಿಯಾ ಅಣ್ಣಾದ್ರವಿಡ ಮುನ್ನೇತ್ರ ಕಜಗಮ್ (AIADMK )  7 25 ಲೋಕ ಜನ ಶಕ್ತಿ ಪಾರ್ಟಿ (LJP )  1
11 ಬಿಜು ಜನತಾದಳ(BJD ) ಎನ್.ಡಿಎ 6 26 ಮಿಜೋ ನ್ಯಾಶನಲ್ ಫ್ರಾಂಟ್ t (MNF )  1
12 ದ್ರವಿಡ ಮುನ್ನೇತ್ರ ಕಜಗಮ್(DMK)(ಯುಪಿಎ) 6 27 ಅಸೋಂಮ್ ಗಣ್ ಪರಿಷತ್ (AGP ) -- 1
13 ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್)(NCP)(ಯುಪಿಎ) 6 28 ನಾಗಾಲ್ಯಾಂಡ್ ಪೀಪಲ್ ಫ್ರಾಂಟ್ (NPF )  1
14 ಶಿವ ಸೇನಾ (SS ) 4 29 ಸಿಕ್ಕಿಮ್ ಡೆಮೋಕ್ರಾಟಿಕ್ ಫ್ರಾಂಟ್ (SDF )(ಯುಪಿಎ) 1
15 ತೆಲಗು ದೇಶಮ್ ಪಾರ್ಟಿ( TDP )- 4 30  ಖಾಲಿ ಸ್ಥಾನ ಗಳು 7
ಯುಪಿಎ- (ಬಹುಮತ-123ಕ್ಕೆ ಕಡಿಮೆ=32) 91 ಒಟ್ಟು ಸ್ಥಾನಗಳು (245) 250

11-6-2014 ಚುನಾವಣೆ[ಬದಲಾಯಿಸಿ]

  • 11-6-2014-ತೆರವಾದ ನಾಲ್ಕು ಸ್ಥಾನಗಳಿಗೆ ಕರ್ನಾಟಕ ವಿಧಾನ ಪರಿಷತ್ತಿನಿಂದ ರಾಜ್ಯ ಸಭೆಗೆ ಅವಿರೋಧ ಆಯ್ಕೆ
  • ಬಿ.ಕೆ.ಹರಿಪ್ರಾಸಾದ್ -ಕಾಂಗ್ರೆಸ್.
  • ಪ್ರೊ.ಎಂ.ವಿ.ರಾಜೀವ ಗೌಡ -ಕಾಂಗ್ರೆಸ್.
  • ಪ್ರಭಾಕರ ಬಿ.ಕೋರೆ.-ಕಾಂಗ್ರೆಸ್.
  • ಡಿ.ಕುಪೇಂದ್ರ ರೆಡ್ಡಿ -ಜೆ.ಡಿ.{ಎಸ್.)

೨೫-೪-೨೦೧೬ ರಲ್ಲಿ ಆಯ್ಕೆ[ಬದಲಾಯಿಸಿ]

  • ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯರು,
  • ಕಾಂಗ್ರೆಸ್ ಸದಸ್ಯರು: ಹಿಮಾಚಲ ಪ್ರದೇಶ ಆನಂದ್ ಶರ್ಮಾ;
  • ಅಸ್ಸಾಂನಿಂದ ರಾಣೇ ನಾರಾಹ ಮತ್ತು ರಿಪುನ್ ಬೋರಾ, ಮತ್ತು ಪ್ರತಾಪ್ ಸಿಂಗ್ ಬಾಜ್ವಾ ಮತ್ತು
  • ಪಂಜಾಬ್ನಿಂದ ಶಂಶೇರ್ ಸಿಂಗ್ ದುಲ್ಲೊ.
  • ಕಮ್ಯುನಿಸ್ಟ್ ಪಕ್ಷ ಭಾರತೀಯ ಮಾರ್ಕ್ಸ್ವಾದಿ (ಸಿಪಿಎಂ)ಇಬ್ಬರು ಸದಸ್ಯರು; ಕೇರಳದಿಂದ ಕೆ ಸೋಮಪರಸಾದ್; ತ್ರಿಪುರದಿಂದ ಝಾರ್ನಾ ದಾಸ್ ಬೈದ್ಯ,
  • ಪಂಜಾಬ್ ನಿಂದ ಶಿರೋಮಣಿ ಅಕಾಲಿ ದಳದ ಸದಸ್ಯ ನರೇಶ್ ಗುಜ್ರಾಲ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಶ್ವೆತ್ ಮಲಿಕ್ [೧]

ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರು[ಬದಲಾಯಿಸಿ]

  • (ಏಪ್ರಿಲ್ 2016 25)
  • ಮೈತ್ರಿಗಳು ->
ಪಕ್ಷ ಸಂಸದರ ಸಂಖ್ಯೆ
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)= 64
ಭಾರತೀಯ ಜನತಾ ಪಕ್ಷ 47
ತೆಲುಗುದೇಶಂ ಪಕ್ಷ 6
ಶಿರೋಮಣಿ ಅಕಾಲಿ ದಳದ 3
ಶಿವಸೇನೆ 3
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 2
ಭಾರತೀಯ ಗಣತಂತ್ರವಾದಿ ಪಕ್ಷ (Athawale) 1
ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 1
ನಾಗ ಪೀಪಲ್ಸ್ ಫ್ರಂಟ್ 1
ಯುಪಿಎ=ಸ್ಥಾನಗಳು:71
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 65
ದ್ರಾವಿಡ ಮುನ್ನೇತ್ರ ಕಳಗಂ 4
ಕೇರಳ ಕಾಂಗ್ರೆಸ್ (ಮಣಿ) 1
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 1
ಜನತಾ ಪರಿವಾರ:ಸ್ಥಾನಗಳು: 16
ಜನತಾ ದಳ (ಸಂಯುಕ್ತ) 13
ಭಾರತೀಯ ರಾಷ್ಟ್ರೀಯ ಲೋಕದಳ 1
ಜನತಾ ದಳ (ಸೆಕ್ಯುಲರ್) 1
ರಾಷ್ಟ್ರೀಯ ಜನತಾ ದಳ 1
ಇತರ ಪಕ್ಷಗಳು:ಸ್ಥಾನಗಳು: 74
ಸಮಾಜವಾದಿ ಪಕ್ಷದ 15
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ 12
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 12
ಬಹುಜನ ಸಮಾಜ ಪಾರ್ಟಿ 10
ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) 8
ಬಿಜು ಜನತಾ ದಳ 7
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 6
ಭಾರತೀಯ ಕಮ್ಯುನಿಸ್ಟ್ ಪಾರ್ಟಿ 1
ಜಾರ್ಖಂಡ್ ಮುಕ್ತಿ ಮೋರ್ಚಾ 1
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 1
ತೆಲಂಗಾಣ ರಾಷ್ಟ್ರ ಸಮಿತಿ 1
ನಾಮನಿರ್ದೇಶಿತ 11
ಪಕ್ಷೇತರರು 7
ಖಾಲಿ ಸ್ಥಾನಗಳು

ಚುನಾಯಿತ ಸೀಟ್ - 1

ನಾಮನಿರ್ದೇಶಿತ-1

2
ಒಟ್ಟು 245

[೨]

ರಾಜ್ಯಸಭೆ ಚುನಾವಣೆ 2016[ಬದಲಾಯಿಸಿ]

  • ರಾಜ್ಯಸಭಾ ಸದಸ್ಯರನ್ನು ನೇರವಾಗಿ ಜನರು ಆಯ್ಕೆ ಮಾಡುವುದಿಲ್ಲ. ಸಾರ್ವಜನಿಕರು ಆಯ್ಕೆ ಮಾಡಿದ ಜನಪ್ರತಿನಿಧಿಗಳಾದ ಶಾಸಕರು(ಎಂಎಲ್ಎ) ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ರಾಜ್ಯ ಆಸೆಂಬ್ಲಿಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷದ ಸಹಜವಾಗಿ ಹೆಚ್ಚು ಸದಸ್ಯರನ್ನು ತನ್ನ ಪಕ್ಷದಿಂದ ರಾಜ್ಯಸಭೆಗೆ ಕಳಿಸಬಹುದು. ಮತ ಲೆಕ್ಕಾಚಾರ ಹೇಗಿರುತ್ತೆ? ಒಟ್ಟು ಮತಗಳು / (ರಾಜ್ಯಸಭಾ ಸ್ಪರ್ಧೆಗಿರುವ ಸ್ಥಾನಗಳು +1) +1 ಉದಾ: ರಾಜ್ಯಸಭಾ ಸ್ಥಾನ ಗೆಲ್ಲಲು ಕರ್ನಾಟಕದ ಅಭ್ಯರ್ಥಿಗೆ (240/4+1) +1 ಅಂದರೆ 45ಮತಗಳು ಬೇಕು. ನಾಮ ನಿರ್ದೇಶನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸದಸ್ಯರನ್ನು ನಾಮನಿರ್ದೇಶಿತರಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಬಹುದಾಗಿದೆ. ಉಳಿದ ಸದಸ್ಯರನ್ನು ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಆಯ್ಕೆ ಮಾಡುತ್ತಾರೆ. ದೇಶದ ಪ್ರತಿ ನಿಗದಿಗೊಳಿಸಿದ ಸದಸ್ಯರು ರಾಜ್ಯಸಭೆಗೆ ಆಯ್ಕೆ ಆಗಲು ಅವಕಾಶವಿರುತ್ತದೆ.
  • ರಾಜ್ಯಸಭೆಗೆ ಆಯ್ಕೆಯಾದ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. 30 ವರ್ಷ ಕನಿಷ್ಠ ವಯೋಮಿತಿ ಇರುವ ಅಭ್ಯರ್ಥಿಗಳು ಸ್ಪರ್ಧಿಸಬಹುದು.
  • ಲೋಕಸಭೆಯ ಸಮನಾದ ಅಧಿಕಾರವನ್ನು ರಾಜ್ಯಸಭೆ ಹೊಂದಿದ್ದು, ಕೆಲವು ವಿಷಯಗಳಲ್ಲಿ ಲೋಕಸಭೆಯು ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದಾಗಿದೆ. ಕೆಲವು ಪ್ರಮುಖ ವಿಷಯಗಳ ಬಗ್ಗೆ ಜಂಟಿ ಸದನಗಳ ಬೈಠಕ್ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
  • ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಯು ತಮ್ಮ ನಾಮಪತ್ರವನ್ನು ನಿಗದಿತ ನಮೂನೆ 2ಸಿಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಟ ಹತ್ತು ಜನ ಹಾಲಿ ಶಾಸಕರು ಸಹಿ ಮಾಡಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ ರೂ 5000 ರೂ., ಇತರ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿ ಇಡಬೇಕು.

ರಾಜ್ಯಸಭೆ ಬಲಾಬಲ[ಬದಲಾಯಿಸಿ]

  • 2016 ಮೇ:
ಪಕ್ಷ-ಒಕ್ಕೂಟ ಸದಸ್ಯರು
ಎನ್ ಡಿಎ : 64
ಜನತಾ ಪರಿವಾರ 16
ಯುಪಿಎ 71
ಇತರೆ ಪಕ್ಷ 74
ಒಟ್ಟು 245

ಕರ್ನಾಟಕದ ಸದಸ್ಯರು[ಬದಲಾಯಿಸಿ]

ಕರ್ನಾಟಕ ಅಸೆಂಬ್ಲಿ: 224 ಸದಸ್ಯರ ಅಸೆಂಬ್ಲಿಯಲ್ಲಿ 124 ಸ್ಥಾನ ಬಲ ಹೊಂದಿರುವ ಕಾಂಗ್ರೆಸ್ ಗೆ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶವಿದೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ (40) ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ 46 ಸದಸ್ಯರ ಬಲ ಹೊಂದಿದೆ

  • ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ಸದಸ್ಯರ ಪೈಕಿ ಮೂವರು ನಿವೃತ್ತರಾಗಲಿದ್ದು, ಒಂದು ಸ್ಥಾನ ರಾಜೀನಾಮೆಯಿಂದ ತೆರವಾಗಿದೆ. ಈ ಸ್ಥಾನಗಳನ್ನು ಭರ್ತಿ ಮಾಡಲು 2016ರ ಜೂನ್ 11ರಂದು ಚುನಾವಣೆ ನಡೆಸಲಾಗುತ್ತದೆ.
  • ನಿವೃತ್ತರಾಗಲಿರುವವರು
  • ಎಂ.ವೆಂಕಯ್ಯ ನಾಯ್ಡು (ಬಿಜೆಪಿ)
  • ಆಯನೂರು ಮಂಜುನಾಥ್ (ಬಿಜೆಪಿ)
  • ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್)
ರಾಜೀನಾಮೆ ನೀಡಿದವರು
  • ವಿಜಯ್ ಮಲ್ಯ (ಪಕ್ಷೇತರ)
ಚುನಾವಣೆ ವೇಳಾಪೆಟ್ಟಿ
  • ಮೇ 24ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ.
  • ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.
  • ಜೂನ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
  • ನಾಮಪತ್ರ ವಾಪಸ್ ಪಡೆಯಲು ಜೂನ್ 3 ಕೊನೆಯ ದಿನವಾಗಿದೆ.
  • ಜೂನ್ 11ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.
  • ಅಂದು ಸಂಜೆ ಫಲಿತಾಂವನ್ನು ಪ್ರಕಟಿಸಲಾಗುತ್ತದೆ.

[೩]

  • ಮಹಾರಾಷ್ಟ್ರ :ಆರು ರಾಜ್ಯಸಭಾ ಸ್ಥಾನಗಳಿಗೆ ಕಣದಲ್ಲಿ ಆರು ಮಂದಿ ಮಾತ್ರ ಇದ್ದರು. ಹೀಗಾಗಿ, ಆರೂ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ವಿಧಾನ ಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
  • ರಾಜ್ಯಸಭೆಗೆ ಕೇಂದ್ರ ವಿದ್ಯುತ್‌ ಸಚಿವ ಪಿಯೂಷ್‌ ಗೋಯಲ್‌ ಮತ್ತು ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಎನ್‌ಸಿಪಿಯ ಕೇಂದ್ರ ಮಾಜಿ ಸಚಿವ ಪ್ರಫುಲ್‌ ಪಟೇಲ್‌, ಬಿಜೆಪಿಯ ವಿನಯ್‌ ಸಹಸ್ರಬುದ್ಧೆ ಹಾಗೂ ವಿಕಾಸ್‌ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್‌ ರಾವತ್‌ ಅವರು ಮಹಾರಾಷ್ಟ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  • ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
  • ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. [೪]

೨೦೧೬ ಒಟ್ಟು ಫಲಿತಾಂಶ[ಬದಲಾಯಿಸಿ]

  • ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ, ಆರ್‌ಜೆಡಿಯಿಂದ ರಾಮ್‌ಜೇಠ್ಮಲಾನಿ, ಮತ್ತು ತಮಿಳುನಾಡಿನಿಂದ ಎಐಎಡಿಎಂಕೆ ಮತ್ತು ಡಿಎಂಕೆಯ 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಪಿಯ ಕೇಂದ್ರ ಮಾಜಿ ಸಚಿವ ಪ್ರಫುಲ್‌ ಪಟೇಲ್‌, ಬಿಜೆಪಿಯ ವಿನಯ್‌ ಸಹಸ್ರಬುದ್ಧೆ ಹಾಗೂ ವಿಕಾಸ್‌ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್‌ ರಾವತ್‌ ಅವರು ಆಯ್ಕೆಯಾಗಿದ್ದಾರೆ.ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
  • ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಸದಸ್ಯರು[ಬದಲಾಯಿಸಿ]

ಎನ್ಡಿಎ ಯುಪಿಎ ಇತರೆ
ಸುರೇಶ್ ಪ್ರಭು (ಬಿಜೆಪಿ) ಪಿ.ಚಿದಂಬರಂ (ಕಾಂಗ್ರೆಸ್) ಶರದ್ ಯಾದವ್ (ಜೆಡಿಯು)
ಪಿಯೂಷ್ ಗೋಯಲ್ (ಬಿಜೆಪಿ) ಸುನೀಲ್ ಕುಮಾರ್ Jakhar (ಕಾಂಗ್ರೆಸ್) RCP ಸಿಂಗ್ (ಜೆಡಿಯು)
ವಿನಯ್ ಸಹಸ್ರಬುದ್ಧೆ(ಬಿಜೆಪಿ) ಅಂಬಿಕಾ ಸೋನಿ (ಕಾಂಗ್ರೆಸ್) ರಾಮ್ ಜೇಠ್ಮಲಾನಿ (ಆರ್ಜೆಡಿ)
ವಿಕಾಸ್ ಮಹಾತ್ಮೆ (ಬಿಜೆಪಿ) ಪ್ರಫುಲ್ ಪಟೇಲ್ (ಎನ್ಸಿಪಿ) ಮಿಡ್ನೈಟ್ ಭಾರತಿ (ಆರ್ಜೆಡಿ)
ವೈ ಎಸ್ ಚೌಧರಿ (ಬಿಜೆಪಿ) ಆರ್ .ವೈತಲಿಂಗಮ್(ಎಐಎಡಿಎಂಕೆ)
ಸಂಜಯ್ ರಾವುತ್ (ಶಿವಸೇನೆ) ಎ. ನವನೀತಕೃಷ್ಣನ್ (ಎಐಎಡಿಎಂಕೆ)
ವೈ ಸತ್ಯನಾರಾಯಣ ಚೌಧರಿ (ಟಿಡಿಪಿ) ಎ ವಿಜಯಕುಮಾರ್ (ಎಐಎಡಿಎಂಕೆ)
ಟಿಜಿ ವೆಂಕಟೇಶ್ (ಟಿಡಿಪಿ) S.R.ಬಾಲಸುಬ್ರಮಣಿಯನ್ (ಎಐಎಡಿಎಂಕೆ)
ಬಲ್ವಿಂದರ್ ಸಿಂಗ್ Bhunder (ಅಕಾಲಿ) ಆರ್.ಎಸ್ ಭಾರತಿ (ಡಿಎಂಕೆ)
ಸುರೇಶ್ ಪ್ರಭು (ಬಿಜೆಪಿ) T.K.S.ಎಲಂಗೋವನ್ (ಡಿಎಂಕೆ)
ಪ್ರಸನ್ನ ಆಚಾರ್ಯ (ಬಿಜೆಡಿ)
ವಿಷ್ಣು ಚರಣ್ ದಾಸ್ (ಬಿಜೆಡಿ)
ಎನ್ ಭಾಸ್ಕರ್ ರಾವ್ (ಬಿಜೆಡಿ)

ಆವಿರೋಧ ಆಯ್ಕೆ ಪಕ್ಷವಾರು[ಬದಲಾಯಿಸಿ]

ಪಕ್ಷ ಸದಸ್ಯರ ಸಂಖ್ಯೆ
ಮಹಾರಾಷ್ಟ್ರ ಕಾಂಗ್ - 3;
ಎನ್ಸಿಪಿ - 1
ಬಿಜೆಪಿ - 8 (ಮಹಾ -3; ಆಂಧ್ರ -2; ಬಿಹಾರ -1; ಪಂಜಾಬ್ -1; ಛತ್ತೀಸ್ಗಢ-1)
ಜೆಡಿಯು 2
ಆರ್'ಜೆಡಿ 2
ಎಐಎಡಿಎಂಕೆ; 4
ಡಿಎಂಕೆ - 3
ಬಿಜೆಡಿ 3
ಟಿಡಿಪಿ = 2 2
ಅಕಾಲಿ -1 1
Ind 1
ಒಟ್ಟು 30

ಚುನಾಯಿತರಾದವರ ವಿವರ[ಬದಲಾಯಿಸಿ]

11-6-2016ಚುನಾವಣೆ ವಿವರಗಳು
ಉತ್ತರ ಪ್ರದೇಶ 11 ಸ್ಥಾನ
ಎಸ್ಪಿ 7
ಬಿಎಸ್ಪಿ 2
ಕಾಂಗ್ರೆಸ್ 1
ಬಿಜೆಪಿ 1
ಹರಿಯಾಣ 2 ಸ್ಥಾನ
ಬಿಜೆಪಿ 1
ಬಿಜೆಪಿ ಬೆಂಬಲದೊಂದಿಗೆ 1
ಮಧ್ಯಪ್ರದೇಶ 3 ಸ್ಥಾನ
ಕಾಂಗ್ರೆಸ್ 1
ಬಿಜೆಪಿ 2
ರಾಜಸ್ಥಾನ 4 ಸ್ಥಾನ
ಬಿಜೆಪಿ 4
ಉತ್ತರಾಖಂಡ್ 1 ಸ್ಥಾನ
ಕಾಂಗ್ರೆಸ್ 1
ಜಾರ್ಖಂಡ್ 2 ಸ್ಥಾನ
ಬಿಜೆಪಿ 2
ಕರ್ನಾಟಕ 4 ಸ್ಥಾನ
ಕಾಂಗ್ರೆಸ್ 3
ಬಿಜೆಪಿ 1
ಒಟ್ಟು 27

[೫] [೬]


ಚುನಾವಣೆ ನಂತರ -ಮೈತ್ರಿಕೋಟ- ಬಲಾಬಲ[ಬದಲಾಯಿಸಿ]

  • 245 ಸದಸ್ಯ ಬಲದ ರಾಜ್ಯಸಭೆಯಲ್ಲಿ 69 ಸದಸ್ಯರನ್ನು ಹೊಂದಿದ್ದ ಎನ್‌ಡಿಎ ಬಲ ಇದೀಗ ಐವರು ಹೊಸ ಸದಸ್ಯರ ಸೇರ್ಪಡೆಯಿಂದಾಗಿ 74ಕ್ಕೆ ಜಿಗಿದಿದ್ದು, 74 ಸದಸ್ಯರನ್ನು ಹೊಂದಿದ್ದ ಯುಪಿಎ ಮೂವರನ್ನು ಕಳೆದುಕೊಳ್ಳುವ ಮೂಲಕ ಅದರ ಬಲ 71ಕ್ಕೆ ಇಳಿದಿದೆ. ಮತ್ತೂಂದೆಡೆ ಪ್ರಾದೇಶಿಕ ಪಕ್ಷಗಳ ಬಳಿ ಮೊದಲಿನಂತೆಯೇ 89 ಸದಸ್ಯರು ಇದೆ. [೭]
ಪಕ್ಷದ ಮೈತ್ರಿ ಚುನಾವಣೆಗೆ ಮೊದಲು ಮೊದಲು ಚುನಾವಣೆ 2016 ನಂತರ
ಯುಪಿಎ 74 71
ವಿವರ
ಕಾಂಗ್ರೆಸ್ 67 64
ದ್ರಾವಿಡ ಮುನ್ನೇತ್ರ ಕಳಗಂ 4 4
ಕೇರಳ ಕಾಂಗ್ರೆಸ್ (ಎಂ) 1 1
ಮುಸ್ಲಿಂ ಲೀಗ್ 1 1
ಇತರೆ 1 1
ಎನ್ಡಿಎ 74
ವಿವರ
ಬಿಜೆಪಿ 43 49
ಟಿಡಿಪಿ 6
ಶಿವಸೇನೆ 3
ಅಕಾಲಿದಳ 3
ಪಿಡಿಪಿ 2
ಇತರೆ+ಬಿಜು ಜನತಾದಳ 4 4+7
ಇತರೆ 89 89
ಇತರೆ ವಿವರ
ಸಮಾಜವಾದಿ ಪಾರ್ಟಿ 14 14+5
ಐಎನ್'ಎಲ್'ದಳ 1
ಜೆ ಡಿ (ಎಸ್ ) 1
ಜೆಡಿಯು + ಆರ್ಜೆಡಿ(1) 14
ಟಿಎಂಸಿ 12 12
ಎಐಎಡಿಎಂಕೆ 12 12
ಸಿಪಿಎಂ 8 8
ಬಿಎಸ್ಪಿ 10 10
(ಬಿಜು ಜನತಾದಳ- ಎನ್`ಡಿ`ಎ.) 7
ಸಿಪಿಐ 1 1
ಎನ್'ಸಿ'ಪಿ 6 6
ತೆಲಂಗಾಣ ರಾಷ್ಟ್ರ ಸಮಿತಿ 1 1
ಪಕ್ಷೇತರ 4
ನಾಮನಿರ್ದೇಶಿತ 9 9
ಖಾಲಿ (ಚುನಾಯಿತ ಸ್ಥಾನ) 5
ಒಟ್ಟು - 245 +5=250

ದಿ.೧೩-೬-೨೦೧೬-ಪ್ರಜಾವಾಣಿ;ರಾಜ್ಯಸಭೆ:ಏರಿದ ಎನ್'ಡಿಎ. ಬಲ [೮]

  • ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು ಅವರು ರಾಜ್ಯಸಭಾ ಸದಸ್ಯತ್ವಕ್ಕೆ ದಿ.೧೭-೭-೨೦೧೬ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸಿಧು ರಾಜೀನಾಮೆ ಪತ್ರವನ್ನು ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಅಂಗೀಕರಿಸಿದ್ದಾರೆ. ಸಿಧು ಅವರು ನಾಮನಿರ್ದೇಶನದ ಮೂಲಕ ಏಪ್ರಿಲ್ 22ರಂದು ರಾಜ್ಯಸಭಾ ಸದಸ್ಯರಾಗಿದ್ದರು.

[೯]

೨೦೧೬ ಕರ್ನಾಟಕದ ಚುನಾಔಣಾ ಫಲಿತಾಂಶ[ಬದಲಾಯಿಸಿ]

ದಿ.೧೧-೬-೨೦೧೬:ರಾಜ್ಯಸಭೆಗೆ ಕರ್ನಾಟಕ ವಿಧಾನಪರಿಷತ್ತಿನಿಂದ ಆಯ್ಕೆಯಾದರು: ಒಟ್ಟು ಚಲಾವಣೆಯಾದ ಮತ 224:

ಜಯ
  • ಕಾಂಗ್ರೆಸ್‌ನ ಕೆ.ಸಿ.ರಾಮಮೂರ್ತಿ 52 ಮತ
  • ಕಾಂಗ್ರೆಸ್‌ ಅಭ್ಯರ್ಥಿಗಳಾದ ಜೈರಾಂ ರಮೇಶ್‌- 47,
  • ಕಾಂಗ್ರೆಸ್‌ ಆಸ್ಕರ್‌ ಫ‌ರ್ನಾಂಡಿಸ್‌- 46 ಮತ್ತು
  • ಬಿಜೆಪಿಯ ನಿರ್ಮಲಾ ಸೀತಾರಾಮನ್‌- 46 ಮತ ,
  • ಫೋಟೊ:w:prajavani.net/article/ರಾಜ್ಯಸಭೆ-ನಿರೀಕ್ಷಿತ-ಫಲಿತಾಂಶ
ಪರಾಭವ
  • ಜೆಡಿಎಸ್‌ನ ಬಿ.ಎಂ.ಫಾರೂಕ್‌ 33 ಮತ (ಸೋಲು)

[೧೦]

ನಾಮಕರಣ ಸದಸ್ಯರು[ಬದಲಾಯಿಸಿ]

  • ನಾಮ ನಿರ್ದೇಶನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸದಸ್ಯರನ್ನು ನಾಮನಿರ್ದೇಶಿತರಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಬಹುದಾಗಿದೆ. ಉಳಿದ ಸದಸ್ಯರನ್ನು ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಆಯ್ಕೆ ಮಾಡುತ್ತಾರೆ. ದೇಶದ ಪ್ರತಿ ನಿಗದಿಗೊಳಿಸಿದ ಸದಸ್ಯರು ರಾಜ್ಯಸಭೆಗೆ ಆಯ್ಕೆ ಆಗಲು ಅವಕಾಶವಿರುತ್ತದೆ.(ಅವರು ಎಎಪಿ ಸೇರುವ ಸಾಧ್ಯತೆ ಇದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಧು ಅವರು ಪಕ್ಷದ ಮುಂಚೂಣಿ ನಾಯಕರಾಗಿ ಬಿಂಬಿತರಾಗಲಿದ್ದಾರೆ ಎನ್ನಲಾಗಿದೆ.)

ನೋಡಿ[ಬದಲಾಯಿಸಿ]

ಲೋಕಸಭೆ

ಬಾಹ್ಯ ಸಂಪರ್ಕ ಕೊಂಡಿಗಳು[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. [[೧]]
  2. ಆಧಾರ:ರಾಜ್ಯಸಭಾ ಸಚಿವಾಲಯ[[https://web.archive.org/web/20170220034324/http://164.100.47.5/Newmembers/partymemberlist.aspx Archived 2017-02-20 ವೇಬ್ಯಾಕ್ ಮೆಷಿನ್ ನಲ್ಲಿ.]]
  3. http://kannada.oneindia.com/news/karnataka/rajya-sabha-election-2016-calendar-events-103655.html
  4. 03 Jun 2016kannadaprabha[[೨]]
  5. "ಆರ್ಕೈವ್ ನಕಲು". Archived from the original on 2016-07-10. Retrieved 2016-08-04.
  6. 12/6/2016 prajavaniರಾಜ್ಯಸಭೆಗೆ-ನಾಯ್ಡು-ಸಿಬಲ್‌-ನಖ್ವಿw:prajavani.net/article/ರಾಜ್ಯಸಭೆಗೆ-ನಾಯ್ಡು-ಸಿಬಲ್‌-ನಖ್ವಿ
  7. kannadaprabha.13, Jun, 2016[[೩]]
  8. AS ON :- Monday, June 13, 2016 [[https://web.archive.org/web/20160829001143/http://www.rajyasabha.nic.in/ Archived 2016-08-29 ವೇಬ್ಯಾಕ್ ಮೆಷಿನ್ ನಲ್ಲಿ.]][[https://web.archive.org/web/20170220034324/http://164.100.47.5/Newmembers/partymemberlist.aspx Archived 2017-02-20 ವೇಬ್ಯಾಕ್ ಮೆಷಿನ್ ನಲ್ಲಿ.]]
  9. ದಿ.19-7-2016-ಪ್ರಜಾವಾಣಿ; ರಾಜ್ಯಸಭೆಗೆ ರಾಜೀನಾಮೆ ಎಎಪಿಯತ್ತ ಸಿಧು ಮುಖ?
  10. ರಾಜ್ಯಸಭೆ ಚುನಾವಣೆ ಉದಯವಾಣಿ, Jun 12, 2016,[[https://web.archive.org/web/20160820232507/http://www.udayavani.com/kannada/news/state-news/152853/jairam-rajya-sabha-again-oscar-nirmala#tzBYSj0HxGb7SF5G.99 Archived 2016-08-20 ವೇಬ್ಯಾಕ್ ಮೆಷಿನ್ ನಲ್ಲಿ.]]