ಜಯಂತಿ ಎಸ್. ಬಂಗೇರ
ಜಯಂತಿ ಎಸ್. ಬಂಗೇರ ಇವರು ಮೂಡಬಿದಿರೆಯ ಪ್ರಥಮ ಲೇಖಕಿ,ಇವರು "ಕಿತ್ತೂರು ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದಿದ್ದಾರೆ[೧].ಇವರ ಸಾಹಿತ್ಯ ಕೆಲಸಗಳು ಅಪಾರ.ಕಥೆ, ಕಾದಂಬರಿ,ನಾಟಕ ಹೀಗೆ ಎಲ್ಲದರಲ್ಲೂ ಪಳಗಿರುವ ಇವರು ನಟಿಯಾಗಿಯೂ ಗುರುತಿಸಿಕೊಂಡವರು.ಕನ್ನಡ- ತುಳು ಎರಡು ಭಾಷೆಗಳಲ್ಲೂ ನಾಟಕಗಳನ್ನೆಲ್ಲಾ ಬರೆಯುವುದಾದರೂ ತುಳುವಿನ ಮೇಲೆ ಅಪಾರ ಪ್ರೀತಿ ಇತ್ತು.
ಕೃತಿ[ಬದಲಾಯಿಸಿ]
ಇವರ ಮೊದಲ ಕೃತಿ 'ಮನಸ್ಸ್ ಬದಲಾನಗ'
ಕಾದಂಬರಿ[ಬದಲಾಯಿಸಿ]
- ಸೊರಗೆದ ಪೂ
ನಾಟಕಗಳು[ಬದಲಾಯಿಸಿ]
- ಮಾಯಿದ ಪುಣ್ಯಮೆ
- ಸತ್ಯ ನೆಗಪುನಗ
- ಮಾಪು ಮಲ್ಪುಲ ಮುಂತಾದವು
ಪ್ರಶಸ್ತಿಗಳು[ಬದಲಾಯಿಸಿ]
ಈ ಮೇಲ್ಕಂಡ ಕೃತಿ, ಕಾದಂಬರಿ, ನಾಟಕಗಳಿಗೆ ಇವರಿಗೆ ದೊರಕಿರುವ ಪ್ರಶಸ್ತಿಗಳು;[ಬದಲಾಯಿಸಿ]
- ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ತುಳುಕೂಟ, ಉಡುಪಿ ಇವರಿಂದ ೨೦೦೨ರ ಎಸ್.ಯು.ಪಣಿಯಾಡಿ ಪ್ರಶಸ್ತಿ
- ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ
- ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೨]
- ತುಳುನಾಡ ತುಳುಶ್ರೀ ಪ್ರಶಸ್ತಿ[೩]
ಇತರ ಮಾಹಿತಿಗಳು[ಬದಲಾಯಿಸಿ]
- ಇವರು ನಟಿಯಾಗಿ ದಕ್ಷಿಣಕನ್ನಡದಿಂದಾಚೆ ಬೆಂಗಳೂರು,ದೆಹಲಿಗಳಲ್ಲಿಯೂ ಅಭಿನಯಿಸಿದ್ದಾರೆ.
- 'ಬಂದೇ ಬರತಾವ ಕಾಲ' ಟಿ.ವಿ. ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
- ಈಗ ಏನನ್ನಾದರೂ ಸಾಧಿಸಬೇಕೆಂಬ ತುಡಿತವಿರುವ ಇವರು ತುಳು ಪತ್ರಿಕೆಯೊಂದನ್ನು ಹೊರತರುವ ತರತುರಿಯಲ್ಲಿದ್ದಾರೆ.
ಉಲ್ಲೇಖ[ಬದಲಾಯಿಸಿ]
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2015-12-12.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.