ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಬಳ್ಳಾರಿ ಜಿಲ್ಲೆಹೂವಿನ ಹಡಗಲಿ ಅಲ್ಲಿರುವ ಒಂದು ಪ್ರಸಿದ್ದ ಸ್ತಳ. ತುಂಗಭದ್ರ ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ರೀತಿಯ ಹೇಳಿಕೆ ಇಲ್ಲಿಯ ಕಾರಣಿಕೋತ್ಸವದಲ್ಲಿ ಕೇಳಿಬಂದಿತ್ತು. ಸ್ವಾತಂತ್ರ್ಯಾನಂತರ ಈ ರೀತಿಯ ಹೇಳಿಕೆ ಕೇಳಿಬಂದಿರುವ ಹಿನ್ನಲೆಯಲ್ಲಿ ಭಕ್ತಾಧಿಗಳು ಇತಿಹಾಸವನ್ನು ಕೂಡ ಈ ಸಂದರ್ಭದಲ್ಲಿ ಮೆಲುಕು ಹಾಕುವಂತಾಗಿದೆ. ಅಷ್ಟೇ ಅಲ್ಲದೆ ಭಾರತ ಹುಣ್ಣಿಮೆಯ ಮೂರನೇ ದಿನ ಗೋರಪ್ಪಅಜ್ಜ ನಿ಼ಂದ ಕಾಣಿಕ ಮರುದಿನ ಗೋರಪ್ಪರಿಂದ ಪವಾಡಗಳು ನಡೆಯುತ್ತದೆ

ಗೊರವರ ಕುಣಿತ[ಬದಲಾಯಿಸಿ]

ಗೊರವರು ಮೈಲಾರಲಿಂಗನ ಪರಮ ಭಕ್ತರು. ಧಾರ್ಮಿಕ ಪರಂಪರೆಯನ್ನು ಪಡೆದಂತಹ ಈ ಕಲೆಯು ಉಪ್ಪಾರರು, ನಾಯಕರು ಹಾಗೂ ಹರಿಜನರಲ್ಲ್ಲಿ ಕಂಡುಬಂದರೂ ಹೆಚ್ಚು ಪ್ರಚಲಿತವಿರುವುದು ಕುರುಬ ಜನಾಂಗದವರಲ್ಲಿ. ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು 'ಹೊರೆ ಹೊರುವುದು' ಅಥವಾ 'ದೇವರನ್ನು ಹೊರುವುದು' ಎಂದು ಕರೆಯುವರು. ಸಂತಾನ ವೃದ್ಧಿ, ಕಷ್ಟ ನಿವಾರಣೆಗೆ ಈ ಹರಕೆಯನ್ನು ಮಾಡಿಕೊಳ್ಳುತ್ತಾರೆ.ಮೈಲಾರ ಜಾತ್ರೆಯ ಸಮಯದಲ್ಲಿ ಕರಣಿಕಾ ಉತ್ಸವ ನಡೆಯುತ್ತದೆ.