ರುದನೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರುದನೂರ ಇದು ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲಪೇಟ ವಲಯದಲ್ಲಿ ಬರುವ ಗ್ರಾಮ. ಈ ಗ್ರಾಮವನ್ನು ರುದ್ನೂರ ಎಂದೂ ಕೂಡ ಬರೆಯುತ್ತಾರೆ. ಈ ಊರಿನ ಮುಖ್ಯ ಬೆಳೆ ತೊಗರಿ, ಉದ್ದು, ಹೆಸರು, ಕಡಲೆ. ಇಲ್ಲಿನ ಮುಖ್ಯ ಪ್ರೇಕ್ಷಣೀಯ ಸ್ಥಳ ಶ್ರೀ ತೋಂಟದಾರ್ಯ ಸಿದ್ದೇಶ್ವರ ಮಠ. ಈ ಗ್ರಾಮಕ್ಕೆ ಹೋಗುವ ಮಾರ್ಗ: ಕಲಬುರ್ಗಿ-ಸೇಡಂ-ಎಲ್ಲಮಗೇಟ-ರುದ್ನೂರ. ಸೇಡಂನಿಂದ 14 ಕಿಲೋಮೀಟರ್ ಅಂತರದಲ್ಲಿ ಇದೆ. ಈ ಗ್ರಾಮಕ್ಕೆ ಅತಿ ಸಮೀಪದಲ್ಲಿ ಚಿಂತಪಳ್ಳಿ, ಭೂತಪುರ, ರಾಯಕೋಡ ಗ್ರಾಮಗಳನ್ನು ಕಾಣಬಹುದು.

ಕಲಬುರಗಿಯನ್ನು ಹಿಂದಿನ ದಿನಗಳಲ್ಲಿ 'ಕಲಬುರ್ಗಿ' ಎಂದು ಕನ್ನಡದಲ್ಲಿ ಕರೆಯಲಾಗುತ್ತಿತ್ತು . ಇದರ ಅರ್ಥ ಕಲ್ಲಿನ ಭೂಮಿ ಎಂದು . ಕಲಬುರಗಿ ಜಿಲ್ಲೆಯು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಮುಂಚಿನ ದಿನಗಳಲ್ಲಿ, ಕಲಬುರಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಯಾಗಿತ್ತು ಮತ್ತು ರಾಜ್ಯಗಳ ಮರು ಸಂಸ್ಥೆಯ ನಂತರ ಕರ್ನಾಟಕದ ಭಾಗವಾಯಿತು.

ಈ ಜಿಲ್ಲೆಯ ಇತಿಹಾಸ ೬ನೇ ಶತಮಾನ ಎ.ಡಿ. ರಾಷ್ಟ್ರಕೂಟರು ಹಳೆಯ ಪ್ರದೇಶದ ನಿಯಂತ್ರಣವನ್ನು ಪಡೆದುಕೊಂಡಿತು. ಆದರೆ ಚಾಲುಕ್ಯರು ಅಲ್ಪ ಅವಧಿಯಲ್ಲಿ ತಮ್ಮ ಸ್ಥಳವನ್ನು ಮತ್ತೆ ಪಡೆದು ಇನ್ನೂರು ವರ್ಷಗಳು ಆಳಿದರು. ನಂತರ ಕಲಹರಿಯವರು 12 ನೇ ಶತಮಾನದ ತನಕ ಆಳ್ವಿಕೆ ನಡೆಸಿದರು.

"https://kn.wikipedia.org/w/index.php?title=ರುದನೂರ&oldid=718809" ಇಂದ ಪಡೆಯಲ್ಪಟ್ಟಿದೆ