ಸದಸ್ಯ:Prajwala Manjunath Shiralikar/ಮಂದಡಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mandadam
Police Outpost in Mandadam
Police Outpost in Mandadam
CountryIndia
StateAndhra Pradesh
DistrictGuntur
Janakiramapuram15.c
Area
 • Total೨೦.೧೮ km (೭.೭೯ sq mi)
Elevation
೨೭ m (೮೯ ft)
Population
 (2020)[೧]
 • Total೮,೦೦೦
 • ಸಾಂದ್ರತೆ೪೦೦/km (೧,೦೦೦/sq mi)
Languages
ಸಮಯ ವಲಯಯುಟಿಸಿ+5:30 (IST)
PIN
522 237
Telephone code+91–8645
ವಾಹನ ನೋಂದಣಿAP-13

ಮಂದಡಂ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಒಂದು ಗ್ರಾಮವಾಗಿದೆ . [೨] ಗ್ರಾಮ ಪಂಚಾಯತ್ ಆಗಿ ಡಿನೋಟಿಫಿಕೇಶನ್ ಮಾಡುವ ಮೊದಲು ಇದು ಗುಂಟೂರು ಜಿಲ್ಲೆಯ ತುಲ್ಲೂರು ಮಂಡಲದ ಗ್ರಾಮವಾಗಿತ್ತು. [೩]

ಇತಿಹಾಸ[ಬದಲಾಯಿಸಿ]

ಕ್ರಿ.ಶ ೧೧೯೯ ರಿಂದ ಕ್ರಿ.ಪೂ. ೧೨೬೧ ರವರೆಗೆ ಆಳಿದ ಕಾಕತೀಯ ರಾಜವಂಶದ ರಾಜ ಗಣಪತಿ ದೇವನು ಮಂದಡಂ ಮತ್ತು ವೇಲಗಪುಡಿ ಎಂಬ ಎರಡು ಗ್ರಾಮಗಳನ್ನು ಮಂದಡಂನಲ್ಲಿರುವ ಗೋಲಕಿ ಮಠದ ಆಧ್ಯಾತ್ಮಿಕ ಬೋಧಕ ಶಿವಾಚಾರ್ಯರಿಗೆ ಉಡುಗೊರೆಯಾಗಿ ನೀಡಿದ್ದನು.

ಚಕಾಕತೀಯ ರಾಜವಂಶದ ದೊರೆ ರಾಣಿ ರುದ್ರಮಾ ದೇವಿಯ ಜನ್ಮ ದಿನಾಚರಣೆಯ ನೆನಪಿಗಾಗಿ ನಿರ್ಮಿಸಲಾದ ೧೩ ನೇ ಶತಮಾನದ ಶಿಲಾ ಶಾಸನವು ಮಂದಡಂ ಗ್ರಾಮದಲ್ಲಿ ನಿರ್ಲಕ್ಷ್ಯದ ಸ್ಥಿತಿಯಲ್ಲಿದೆ. ಮಲ್ಕಪುರಂ ಶಾಸನ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಕ್ರವರ್ತಿ ಗಣಪತಿ ದೇವನಿಂದ ಸ್ಥಾಪಿಸಲ್ಪಟ್ಟ ಈ ಶಾಸನವು ಕಾಕತೀಯ ರಾಜವಂಶದ ಸಾಧನೆಗಳನ್ನು ನೆನಪಿಸುವ ಅಪರೂಪದ ಪುರಾತತ್ವ ಸಂಶೋಧನೆಯಾಗಿದೆ. ಮಂದಡಂನಲ್ಲಿ ಗಣಪತಿ ದೇವನು ತನ್ನ ಮಗಳು ರುದ್ರಮಾ ದೇವಿಯನ್ನು ತನ್ನ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಿದನು ಮತ್ತು ನಂತರ 30 ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ೧೩ನೇ ಶತಮಾನದಲ್ಲಿ ಒಂದು ಸುವರ್ಣ ಅಧ್ಯಾಯವನ್ನು ಬರೆಯುತ್ತಾನೆ. ೧೪.೬X ೨.೯ X೨.೯ಅಡಿ ಅಳತೆಯ ಬೃಹತ್ ಗ್ರಾನೈಟ್ ಕಂಬದ ಮೇಲೆ ನಿರ್ಮಿಸಲಾದ ಶಾಸನವು ಸಂಸ್ಕೃತ ಮತ್ತು ತೆಲುಗಿನಲ್ಲಿ ೧೮೨ ಸಾಲುಗಳನ್ನು ಕೆತ್ತಲಾಗಿದೆ. ಇದು ರುದ್ರಮಾ ದೇವಿಯ ಜನ್ಮ, ಅವಳ ಪಟ್ಟಾಭಿಷೇಕ, ವಿಶ್ವೇಶ್ವರ ದೇವಸ್ಥಾನಕ್ಕೆ ದಾನ ಮಾಡಿದ ಭೂಮಿ ಮತ್ತು ದಾನ ಮಾಡಿದ ದತ್ತಿಗಳನ್ನು ಪಟ್ಟಿ ಮಾಡುತ್ತದೆ. ಇದು ಸಂಸ್ಕೃತ ಹಾಗೂ ಶೈವ ಪಠ್ಯವನ್ನು ಬೋಧಿಸುವ ಶೈಕ್ಷಣಿಕ ಕಟ್ಟಡವನ್ನು ಸಹ ಸೂಚಿಸುತ್ತದೆ.

ಭೂಗೋಳಶಾಸ್ತ್ರ[ಬದಲಾಯಿಸಿ]

ಇದು ಕೃಷ್ಣಾ ನದಿಯಿಂದ ೩ ಕಿ.ಮೀ. ಹಾಗೂ ವಿಐಟಿ ವಿಶ್ವವಿದ್ಯಾಲಯದಿಂದ ೮ ಕಿಮೀ. ಹಾಗೂ ಎಸ್‌ಆರ್‌ಎಂ ವಿಶ್ವವಿದ್ಯಾಲಯದಿಂದ ೯.೨ ಕಿಮೀ. ಮತ್ತು AIIMS ಮಂಗಳಗಿರಿಯಿಂದ ೧೩ ಕಿ.ಮೀ ದೂರದಲ್ಲಿದೆ. ಆಂಧ್ರಪ್ರದೇಶ ಹೈಕೋರ್ಟ್‌ನಿಂದ 7 ಕಿಮೀ ದೂರದಲ್ಲಿ ಎಲ್ಲಾ ಸೌಲಭ್ಯಗಳಿಗೆ ಹತ್ತಿರದಲ್ಲಿದೆ. ಅಷ್ಟೇ ಅಲ್ಲದೆ ಇದು ಅತ್ಯಂತ ಪ್ರಸಿದ್ಧವಾದ ಸ್ಥಳ ಟಿಟಿಡಿ ವೆಂಕಟೇಶ್ವರ ದೇವಸ್ಥಾನಕ್ಕೆ ೪.೨ಕಿ.ಮೀ. ದೂರದಲ್ಲಿದೆ.

ಮಂದಡಂ ಆಂಧ್ರಪ್ರದೇಶದ ಸಚಿವಾಲಯ ಮತ್ತು ವಿಧಾನಸಭೆಗೆ ೨ ಕಿ.ಮೀ. ಅಮೃತ ವಿಶ್ವವಿದ್ಯಾಲಯಕ್ಕೆ ೧೦ ಕಿ.ಮೀ. ಎನ್‌ಆರ್‌ಐ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಣಿಪಾಲ್ ಆಸ್ಪತ್ರೆ ವಿಜಯವಾಡಕ್ಕೆ ೧೪ ಕಿ.ಮೀ. ದೂರದಲ್ಲಿದೆ.

ಆಂಧ್ರಪ್ರದೇಶ ರಾಜ್ಯದ ಹೊಸ ರಾಜಧಾನಿ "ಅಮರಾವತಿ"ಗೆ ರೈತರು ಭೂಮಿಯನ್ನು ದಾನ ಮಾಡಿದ ಹಳ್ಳಿಗಳಲ್ಲಿ ಮಂದಡಂ ಗ್ರಾಮವೂ ಒಂದಾಗಿದೆ.

ಇದು ಒಂದು ಪ್ರಮುಖ ಸ್ಥಳವಾಗಿದೆ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಂದಾಗ ಮಂದಡಂ ಬಂದಾಗ . ಬಹಳಷ್ಟು ವಿಷಯಗಳಿದ್ದು, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಸ್ಟಲ್ ಲೋಕಲ್ ಏರಿಯಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಹಕಾರ ಸಂಘ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಹೊಂದಿದೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

೨೦೨೦ ರ ಪ್ರಕಾರ ಸೆನ್ಸಸ್ ಆ‍ಫ್ ಇಂಡಿಯಾ ಮಂದಾಡಂ ಗ್ರಾಮವು ೮೦೦೦ ಜನರ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ೩,೯೦೦ ಪುರುಷರು ಮತ್ತು ೪೧೦೦ ಮಹಿಳೆಯರು ಇದ್ದು,ಆರು ವರ್ಷದೊಳಗಿನವರ ಜನಸಂಖ್ಯೆಯು೬೫೨ ಆಗಿದೆ. ಈ ಗ್ರಾಮದ ಅಂದಾಜು ಸಾಕ್ಷರತಾ ಪ್ರಮಾಣವು ೬೮.೯೫ ಆಗಿದ್ದು, ೪೦೯೩ ಸಾಕ್ಷರರನ್ನು ಹೊಂದಿದೆ.

ಸಾರಿಗೆ[ಬದಲಾಯಿಸಿ]

ಮಂದಡಂ ವಿಜಯವಾಡ ಮತ್ತು ಅಮರಾವತಿ ಮಾರ್ಗದಲ್ಲಿದೆ. APSRTC ಬಸ್ಸುಗಳು ಈ ಮಾರ್ಗದಲ್ಲಿ ಸಾರಿಗೆ ಸೇವೆಗಳನ್ನು ಒದಗಿಸುತ್ತವೆ. [೪] , ಇದು ವಿಜಯವಾಡಕ್ಕೆ ೧೨ ಕಿಲೋಮೀಟರ್‌ಗಳಷ್ಟು ಬಹಳ ಹತ್ತಿರದಲ್ಲಿದೆ. ಮಂದಡಂನ ಕೇಂದ್ರವು ಯಾವಾಗಲೂ ಸಚಿವಾಲಯದ ನೌಕರರು ಮತ್ತು ನಿರ್ಮಾಣ ಕಾರ್ಮಿಕರಿಂದ ತುಂಬಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "District Census Handbook – Guntur" (PDF). Census of India. p. 14,258. Retrieved 27 December 2015.
  2. "New Andhra capital Amaravati to compete for Smart City tag". The New Indian Express. 25 May 2016. Retrieved 6 June 2016.
  3. "Declaration of A.P. Capital City Area–Revised orders" (PDF). Andhra Nation. Municipal Administration and Urban Development Department. 22 September 2015. Archived from the original (PDF) on 24 June 2016. Retrieved 21 February 2016.
  4. "Four lane road to Andhra Pradesh new capital soon".