ಎಚ್. ಗಿರಿಜಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Vikashegde (ಚರ್ಚೆ | ಕಾಣಿಕೆಗಳು) |
Vikashegde (ಚರ್ಚೆ | ಕಾಣಿಕೆಗಳು) |
||
೫೪ ನೇ ಸಾಲು: | ೫೪ ನೇ ಸಾಲು: | ||
*ಸಂತಾನಹೀನತೆ |
*ಸಂತಾನಹೀನತೆ |
||
*ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ<ref>https://kanaja.karnataka.gov.in/ebook/wp-content/uploads/2020/PDF/667.pdf</ref> |
*ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ<ref>https://kanaja.karnataka.gov.in/ebook/wp-content/uploads/2020/PDF/667.pdf</ref> |
||
*ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ) |
|||
===ಆತ್ಮಕಥನ=== |
===ಆತ್ಮಕಥನ=== |
೧೯:೦೦, ೨೮ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ
ಡಾ. ಎಚ್. ಗಿರಿಜಮ್ಮ | |
---|---|
ಜನನ | ಹರಿಹರ, ಕರ್ನಾಟಕ |
ಮರಣ | ಆಗಸ್ಟ್ ೧೭, ೨೦೨೧ ದಾವಣಗೆರೆ, ಕರ್ನಾತಕ |
ವೃತ್ತಿ | ವೈದ್ಯೆ, ಲೇಖಕಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಥೆ, ಕಾದಂಬರಿ, ವೈದ್ಯ ವಿಜ್ಞಾನ |
ಪ್ರಭಾವಗಳು |
ಡಾ. ಎಚ್. ಗಿರಿಜಮ್ಮ ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ. ಹಲವು ಕಥಾಸಂಕಲನಗಳನ್ನು, ವೈದ್ಯವಿಜ್ಞಾನ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಚಲನಚಿತ್ರ, ಸಾಕ್ಷ್ಯಚಿತ್ರಗಳ ಬರೆವಣಿಗೆ, ನಿರ್ಮಾಣಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು.
ಜೀವನ
ಇವರು ಹರಿಹರದಲ್ಲಿ ಜನಿಸಿದರು. ಪಿಯುಸಿವರೆಗೆ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹರಿಹರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿದರು. ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.[೧]
ವೃತ್ತಿ ಪ್ರವೃತ್ತಿ
ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಒಂದು ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ೧೫ ಟೆಲಿಫಿಲ್ಮ್ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.[೨]
ಸಾಹಿತ್ಯ
ಹಲವು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕತೆಗಳನ್ನು, ನೀಳ್ಗತೆಗಳನ್ನು ಬರೆದಿದ್ದಾರೆ. ಅವರು ಒಟ್ಟು ೫೦ ಕತೆಗಳನ್ನು, ೨೭ ಕಾದಂಬರಿಗಳನ್ನು, ೫ ಕಥಾಸಂಗ್ರಹಗಳನ್ನು ಬರೆದಿದ್ದಾರೆ. ೨೬ ವೈದ್ಯ ವಿಜ್ಞಾನ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.
(ಕೆಳಗಿನದು ಅಪೂರ್ಣ ಪಟ್ಟಿ)
ಕಾದಂಬರಿಗಳು
- ಮೇಘ ಮಂದಾರ (ಈ ಕಾದಂಬರಿಯು ಚಲನಚಿತ್ರವಾಗಿದೆ. ೧೯೯೨)
- ಚಂದಮಾಮ
- ತಮಸೋಮ ಜ್ಯೋತಿರ್ಗಮಯ
- ಅಂಬರತಾರೆ
ಕಥಾಸಂಕಲನಗಳು
ವೈದ್ಯ ವಿಜ್ಞಾನ ಕೃತಿಗಳು
- ನಿಮ್ಮ ಮಗು
- ಸ್ತ್ರೀ ದೇಹ
- ಬಸಿರು
- ಬಂಜೆತನ ಮತ್ತು ಪರಿಹಾರೋಪಾಯಗಳು
- ಮಕ್ಕಳು ಮನಸ್ಸು ಮತ್ತು ಬೆಳವಣಿಗೆ
- ಸಂತಾನಹೀನತೆ
- ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ[೩]
- ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ)
ಆತ್ಮಕಥನ
- ಕಾಡತಾವ ನೆನಪುಗಳು
ಪ್ರಶಸ್ತಿ ಗೌರವಗಳು[೪]
- ರಾಜ್ಯೋತ್ಸವ ಪ್ರಶಸ್ತಿ - ೨೦೧೪
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೨೦೦೬[೫]
- ಅತ್ತಿಮಬ್ಬೆ ಪ್ರಶಸ್ತಿ
- ಬಿ. ಸರೋಜಾದೇವಿ ದತ್ತಿನಿಧ ಪ್ರಶಸ್ತಿ
- ವಿಶ್ವೇಶ್ವರಾಯ ಪ್ರಶಸ್ತಿ
- ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ
- ಡಾ. ಪಿ.ಇ ಎಸ್. ಶಂಕರ್ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯ’ ಸಾಹಿತಿ ಪ್ರಶಸ್ತಿ[೬]
ನಿಧನ
೧೭ಆಗಸ್ಟ್ ೨೦೨೧ ರಂದು ದಾವಣಗೆರೆಯಲ್ಲಿ ನಿಧನರಾದರು.[೭] ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
ಉಲ್ಲೇಖಗಳು
- ↑ ಸಂಜೆವಾಣಿ ವರದಿ, ೧೭ ಆಗಸ್ಟ್ ೨೦೨೧
- ↑ http://www.viggy.com/english/current_ananya.asp
- ↑ https://kanaja.karnataka.gov.in/ebook/wp-content/uploads/2020/PDF/667.pdf
- ↑ ಡಾ. ಎಚ್. ಗಿರಿಜಮ್ಮ, ೧೭ ಆಗಸ್ಟ್ ೨೦೨೧, ಕನ್ನಡಪ್ರಭ
- ↑ "Five writers selected for Kannada Sahitya Academy awards". The Hindu. Bangalore. 25 February 2006. Retrieved 1 November 2014.
- ↑ ‘ಶ್ರೇಷ್ಠ ವೈದ್ಯ’ರಾಗಿ ಡಾ.ಸಿ.ಆರ್.ಚಂದ್ರಶೇಖರ್ ಹಾಗೂಡಾ.ಗಿರಿಜಮ್ಮ, ೦೭ ಡಿಸೆಂಬರ್ ೨೦೦೧, ಕನ್ನಡ ಒನ್ ಇಂಡಿಯಾ
- ↑ ಗಿರಿಜಮ್ಮ ನಿಧನ, ೧೭ ಆಗಸ್ಟ್ ೨೦೨೧, ವಿಜಯವಾಣಿ