ಚರ್ಚೆಪುಟ:ಇಸ್ಲಾಂ ಧರ್ಮ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

DARGA ZIYARATH SARIYAA?

ಲೇಖನ ಒಪ್ಪಗೊಳಿಸುವಿಕೆ[ಬದಲಾಯಿಸಿ]

ವಿಕಿಪೀಡಿಯಕ್ಕೆ ತಕ್ಕಂತೆ ಲೇಖನವನ್ನು ಒಪ್ಪಗೊಳಿಸಲು User:‎ಈಜಾಝುದ್ದೀನ್ ಉಮರಿಯವರ ಸಂಪಾದನೆಯೆ ಕೆಳಗಿನ ಸಾಲುಗಳನ್ನು ತೆಯಗೆಯುತ್ತಿದ್ದೇನೆ. -- ತೇಜಸ್ / ಚರ್ಚೆ/ ೦೭:೦೭, ೧ ಏಪ್ರಿಲ್ ೨೦೧೨ (UTC)

ಮೋಡ ಕವಿದ ಸೂರ್ಯ

ಪ್ರಸಕ್ತ ಭೂಮುಖದ ಮೇಲೆ ಇಸ್ಲಾಮಿನಷ್ಟು ಅಪಪ್ರಚಾರ ಮತ್ತು ಅವಹೇಳನಕ್ಕೆ ಗುರಿಯಾದ ಬೇರೊಂದು ವಸ್ತು ಇರಲಾರದು. ಪ್ರಕಾಶಿಸುತ್ತಿದ್ದ ಸೂರ್ಯನನ್ನು ಮೋಡಗಳು ಆವರಿಸಿದಂತೆ ಇಸ್ಲಾಮನ್ನು ಸಂಶಯಗಳ ಕಪ್ಪು ಮೋಡಗಳು ಸುತ್ತಿಕೊಂಡಿವೆ.ಅಪಪ್ರಚಾರಗಳ ಈ ಕಪ್ಪು ಮೋಡಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.ಮೋಡಗಳು ಕವಿದರೇನಂತೆ ಸೂರ್ಯನು ತನ್ನ ಪ್ರಕಾಶವನ್ನು ಕಳಕೊಳ್ಳುತ್ತಾನೆಯೇ? ಇವರು ತನ್ನ ಬಾಯಿಯಿಂದ ಊದಿ ದೇವ ಬೆಳಗಿದ ಈ ಜ್ಯೋತಿಯನ್ನು ನಂದಿಸಲು ಹೊರಟಿದ್ದಾರೆ.ಆದರೆ ಅಲ್ಲಾಹನು ತನ್ನ ಜ್ಯೋತಿಯನ್ನು ಹಬ್ಬಿಸಿಯೇ ತೀರಲು ನಿರ್ಧರಿಸಿದ್ದಾನೆ.ಆದ್ದರಿಂದಲೇ ಇಸ್ಲಾಮಿನ ವಿರುದ್ಧ ಕುತಂತ್ರಗಳು ಹೆಚ್ಚಿದಂತೆಲ್ಲಾ ಅದನ್ನು ಸ್ವೀಕರಿಸಿ ತನ್ನ ಜೀವನವನ್ನು ಧನ್ಯರಾಗಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಇನ್ನು ಮನೆಯಂಗಳವನ್ನು ಬೆಳಗಿಸುವ ಸೂರ್ಯನಿಂದ ಮನದಂಗಳವನ್ನು ಬೆಳಗಿಸಲು ಸಾಧ್ಯವೇ!? ಮನಸ್ಸಿನಲ್ಲಿ ಕವಿದ ಅಂಧಕಾರವನ್ನು ಹೋಗಲಾಡಿಸಲು ಕೇವಲ ಇಸ್ಲಾಮಿನಿಂದ ಮಾತ್ರ ಸಾಧ್ಯ .. ಮನುಷ್ಯನು ಅನೇಕ ಯಂತ್ರಗಳನ್ನು ಕಂಡು ಹಿಡಿದಿದ್ದಾನೆ.ಆದರೆ ಇಸ್ಲಾಂ ಮನುಷ್ಯನನ್ನು ಮನುಷ್ಯನಾಗಿಸುವ ದೈವಿಕ ಯಂತ್ರವಾಗಿದೆ....ಬುದ್ಧಿಜೀವಿಗಳಿಗೆ ಇದರ ಮುಂದೆ ಸುಮ್ಮನೆ ಸಾಗಲು ಸಾಧ್ಯವೇ ಇಲ್ಲ .ಇದೆ ಕಾರಣವಾಗಿರಬಹುದು ಅಬೂ ತಾಲಿಬ್ ರಿಂದ ಹಿಡಿದು ಆಧುನಿಕ ಕಾಲದ ಬರ್ನಾಡ್ ಷಾ, ಮಹಾತ್ಮಾ ಗಾಂಧೀಜಿ , ಸ್ವಾಮಿ ವಿವೇಕಾನಂದ ಮತ್ತು ಇವರಂತಹ ಅನೇಕ ಚಿಂತಕರು ಮತ್ತು ದಾರ್ಶನಿಕರು ಇಸ್ಲಾಮನ್ನು ಸ್ವೀಕರಿಸದಿದ್ದರೂ ಈ ಸತ್ಯಧರ್ಮವನ್ನು ಮುಕ್ತಕಂಠದಿಂದ ಹೊಗಳಿ ಹೋದರು. ಮುಂದಿನ ಸಾಲುಗಳಲ್ಲಿ ಇಸ್ಲಾಮಿನ ಸಂಕ್ಷಿಪ್ತ ಚಿತ್ರಣವನ್ನು ನಿಮ್ಮ ಮುಂದಿಡುವುದಕ್ಕಿಂತ ಮುಂಚಿತವಾಗಿ ಇಂತಹದೇ ಕೆಲ ಜಗದ್ವಿಖ್ಯಾತರ ಮತ್ತು ಗಣ್ಯವ್ಯಕ್ತಿಗಳ ಇಸ್ಲಾಮಿನ ಕುರಿತಾದ ಹೇಳಿಕೆಗಳನ್ನು ಉಲ್ಲೇಖಿಸುತ್ತಿದ್ದೇನೆ.ಇದು ಇಸ್ಲಾಮಿನ ನೈಜತೆಯನ್ನರಿಯಲು ಸಹಕಾರಿಯಾಗಬಹುದು.


ಎಂದೂ ಬರ್ನಾಡ್ ಷಾ ಹೇಳಿರುತ್ತಾನೆ. ಈ ಎಲ್ಲ ಅಬಿಪ್ರಾಯಗಳಿಂದ ವ್ಯಕ್ತವಾಗುವುದೇನೆಂದರೆ ಇಸ್ಲಾಂ ಮಾತ್ರ ಸರ್ವಸಮಸ್ಯೆಗಳ ಏಕೈಕ ಪರಿಹಾರವಾಗಿದೆ. ರಾಜಭಾವನದಲ್ಲೂ, ತನು ಮನದಲ್ಲೂ ಆಡಳಿತ ನಡೆಸಲು ಯೋಗ್ಯವಾದ ಮಾತ್ರವಲ್ಲ ಅದನ್ನು ನಿಜ ಜೀವನದಲ್ಲಿ ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ ಇಸ್ಲಾಂ. ಬುದ್ಧಿಯುಳ್ಳವರು ಮತ್ತು ಚಿಂತನೆ ನಡೆಸುವವರಿಗೆ ಇದನ್ನು ಅಂಗೀಕರಿಸದೆ ಬೇರೆ ಉಪಾಯವಿಲ್ಲ.


ಕ್ರಾಂತಿಯ ತಿರುಳು

ನಿಜ ಹೇಳುವುದಾದರೆ ಈ ಭಾಷಣ ಇಸ್ಲಾಮಿನ ಸುಂದರ ಪರಿಚಯವಾಗಿರುತ್ತದೆ ಮಾತ್ರವಲ್ಲ ಇಸ್ಲಾಂ ಮನುಷ್ಯನ ಮನ ಮಸ್ತಿಷ್ಕ ಮತ್ತು ಅವನ ಆಚಾರ-ವಿಚಾರಗಳಲ್ಲಿ ಯಾವ ತರದ ಬದ ಲಾವಣೆ ತರಬಯಸುತ್ತ ದೆಂಬುದನ್ನೂ ವ್ಯಕ್ತ ಪಡಿಸುತ್ತದೆ.ಅಂದಿನ ನೈತಿಕ ದಿವಾಳಿತನವನ್ನು ನಿವಾರಿಸಲು ಇಸ್ಲಾಮಿನಿಂದ ಸಾಧ್ಯವಾಯಿತು.ಇಂದು ಕೂಡಾ ಈ ರೋಗವನ್ನು ಶಮನಗೊಳಿಸಲು ಕೇವಲ ಇಸ್ಲಾಮಿ ನಿಂದ ಮಾತ್ರ ಸಾಧ್ಯ. ಮಾನವಜಗತ್ತು ಇಂದು ಕೂಡಾ ಪತನದ ಹಾದಿ ತುಳಿದಿರಿವುದನ್ನು ನೀವು ನೋಡುತ್ತಿಲ್ಲವೇ.ವಿಚಾರಗಳು ವಿನಾಶವನ್ನು ಹೊತ್ತುಕೊಂಡಿವೆ.ಮಕ್ಕಳು ಭಯಾನಕ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ.ಯುವ ಪೀಳಿ ಗೆಯ ರಕ್ತದಲ್ಲಿ ವಿಷ ಸಂಚರಿಸುತ್ತಿದೆ.ವ್ರಧ್ಯಾಪವು ವಿಕಾರಗೊಳ್ಳುತ್ತಿವೆ.ಮಾನವ ಸಭ್ಯತೆ ಮತ್ತು ನಾಗರಿಕತೆ ಯ ಹೆಸರಲ್ಲಿ ಮ್ರಗತ್ವವನ್ನು ಸ್ವೀಕರಿಸುತ್ತಿದ್ದಾನೆ. ಹೀಗಿರುವಾಗ ಮೋಕ್ಷದ ಏಕೈಕಮಾರ್ಗ ಇಸ್ಲಾಂ ಮಾತ್ರ ಆಗಿರುತ್ತದೆ. ಇಸ್ಲಾಂ ಮನುಷ್ಯನನ್ನು ಮನುಷ್ಯನಾಗಿಸುತ್ತದೆ. ಅವನ ಆತ್ಮ ಮತ್ತು ಶರೀರ ವನ್ನು ಪರಿಶುದ್ಧ ಮತ್ತು ಪಾವನ ಗೊಳಿಸುತ್ತದೆ. ಇದು ಸಕಲಮಾನವರ ಬದುಕನ್ನು ಸುಗಮ ಮತ್ತು ಸುಂದರ ಗೊಳಿಸಲು ಅವತೀರ್ಣಗೊಂಡ ದೈವಿಕ ಜೀವನ ವ್ಯವಸ್ಥೆಯಾಗಿದೆ.ಆದರೆ ಅನೇಕರು ಇದನ್ನರಿಯದೆ ಅಜ್ಞಾನದಲ್ಲಿದ್ದಾರೆ


ಒಟ್ಟಿನಲ್ಲಿ ಇಸ್ಲಾಂ ಅಂಧಕಾರದಲ್ಲೊಂದು ನಂದಾದೀಪ ವ್ಯಾಕುಲರಿಗೊಂದು ಸಂಧ್ಯಾರಾಗ ಕತ್ತಲು ಭಾಗ್ಯದ ಆಶಾ ಕಿರಣ

ಸಂದೇಹ :[ಬದಲಾಯಿಸಿ]


ಇಡೀ ಲೇಖನದಲ್ಲಿ ಕುರ್ ಆನ್ ಅಥವಾ ಕುರಾನ್ ಗ್ರಂಥದ ವಿಷಯವೇ ಬಂದಿಲ್ಲ ಏಕೆ?

ನೋಡಿ[ಬದಲಾಯಿಸಿ]


§ಸೃಷ್ಟಿ ಮತ್ತು ಕುರಾನ್

ಎಡ್ಮಿನ್ ಗಳ ಗಮನಕ್ಕೆ[ಬದಲಾಯಿಸಿ]

  • ಈ ಪುಟವನ್ನು ಅನೇಕರು ಐಪಿ ವಿಳಾಸದಲ್ಲಿ ಸಂಪಾದನೆ ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟಲು ಕೋರಿಕೆ.--Lokesha kunchadka (ಚರ್ಚೆ) ೧೨:೫೨, ೬ ಆಗಸ್ಟ್ ೨೦೧೮ (UTC)