ವಿಷಯಕ್ಕೆ ಹೋಗು

ಹುಲಿಯೂರು ದುರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಲಿಯೂರು ದುರ್ಗ
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ದಕ್ಷಿಣ (ರಾಮನಗರ)
ತಾಲ್ಲೂಕುಹುಲಿಯೂರು ದುರ್ಗ
ಹೋಬಳಿಕಸಬಾ
Languages
  OfficialKannada
Time zoneUTC+5:30 (IST)
Vehicle registrationKA 42


ಹುಲಿಯೂರು ದುರ್ಗ : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು, ಹುಲಿಯೂರು ದುರ್ಗ ನಗರವು ತಾಲ್ಲೂಕು ಮತ್ತು ಕಸಬಾ ಹೋಬಳಿಯ ಕೇಂದ್ರ ಕೇಂದ್ರವಾಗಿದೆ. 2025ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಹುಲಿಯೂರು ದುರ್ಗ ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ ಪ್ರದೇಶ ಈ ಹಿಂದೆ ಕುಣಿಗಲ್ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಉತ್ತರದಲ್ಲಿ ಕುಣಿಗಲ್ ತಾಲ್ಲೂಕು, ದಕ್ಷಿಣದಲ್ಲಿ ಚನ್ನಪಟ್ಟಣ ತಾಲ್ಲೂಕು, ಪೂರ್ವದಲ್ಲಿ ಮಾಗಡಿ ತಾಲ್ಲೂಕು, ಪಶ್ಚಿಮದಲ್ಲಿ ನಾಗಮಂಗಲ ತಾಲ್ಲೂಕುಗಳಿಂದ ಸುತ್ತುವರೆದಿದೆ.

ಕುಂಭಿ ಬೆಟ್ಟ, ಹೇಮಗಿರಿ ಬೆಟ್ಟಗಳು ಊರಿನ ಸರಹದ್ದಿನಲ್ಲಿಯೇ ಇವೆ. ಊರಿನ ಪೂರ್ವ ಭಾಗವು ಕುರುಚಲು ಕಾಡಿನಿಂದ ಆವೃತ್ತ ವಾಗಿದೆ. ಐತಿಹಾಸಿಕವಾಗಿ ನೋಡಿದಾಗ ಶಿಲಾಯುಗದ ನೆಲೆಗಳು ಇಲ್ಲಿ ಕಂಡು ಬರುತ್ತವೆ. ಉಜ್ಜನಿ ಶಾಸನದಲ್ಲಿ ಹುಲಿಯೂರು ಎಂಬ ಹೆಸರು ಇದೆ. ೧೫೪೦ರ ಸುಮಾರಿನವರೆಗೂ ಹುಲಿಯೂರು ಎಂಬ ಹೆಸರೆ ಚಾಲ್ತಿಯಲ್ಲಿತ್ತು. ೧೬ನೇ ಶತಮಾನದ ಕೊನೆಯ ಭಾಗದಲ್ಲಿ ಕೆಂಪೇಗೌಡನು ಕುಂಭಿ ಬೆಟ್ಟದಲ್ಲಿ ಕೋಟೆಯನ್ನು ಕಟ್ಟಿದ ನಂತರ ಹುಲಿಯೂರು ದುರ್ಗವಾಯಿತು. ಇಲ್ಲಿ ಮಲ್ಲಿಕಾರ್ಜುನ ದೇವಾಲಯವು ಹುಲಿಯೂರು ದುರ್ಗದ ಪಕ್ಕದಲ್ಲಿ ಹೇಮಗಿರಿ ಬೆಟ್ಟದ ಶಿಖರದಲ್ಲಿದೆ.18 ಕಿ. ಮೀ ದೂರದಲ್ಲಿ ತಾವರೆಕೆರೆ ಶ್ರೀ ಕೋಟೆ ವರದಾಂಜನೇಯ ಸ್ವಾಮಿಯ ದೇವಾಲಯವಿದೆ