ಸೂಳೆಕೆರೆ (ಶಾಂತಿ ಸಾಗರ)

Coordinates: 14°7′48″N 75°54′17″E / 14.13000°N 75.90472°E / 14.13000; 75.90472
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂಳೆಕೆರೆ
ಸ್ಥಳಚನ್ನಗಿರಿ, ದಾವಣಗೆರೆ, ಕರ್ನಾಟಕ
ನಿರ್ದೇಶಾಂಕಗಳು14°7′48″N 75°54′17″E / 14.13000°N 75.90472°E / 14.13000; 75.90472
ಮಾದರಿreservoir
ಪ್ರಾಥಮಿಕ ಒಳಹರಿವುಹರಿದ್ರಾ, ಭದ್ರಾ ಅಣೆಕಟ್ಟೆಯ ಬಲದಂಡೆ ನಾಲೆ
ಪ್ರಾಥಮಿಕ ಹೊರಹರಿವುಗಳುಸಿದ್ದ ನಾಲೆ, ಬಸವ ನಾಲೆ
ಸಂಗ್ರಹಣಾ ಪ್ರದೇಶ329.75 km2 (127.32 sq mi)
ಜಲಾನಯನ ಪ್ರದೇಶ ದೇಶಗಳುಭಾರತ
ಗರಿಷ್ಠ ಉದ್ದ8.1 km (5.0 mi)
ಗರಿಷ್ಠ ಅಗಲ4.6 km (2.9 mi)
ಮೇಲ್ಮೈ ಪ್ರದೇಶ2,651 ha (27 km2)
ಸರಾಸರಿ ಆಳ10 ft (3 m)
ಗರಿಷ್ಠ ಆಳ27 ft (8 m)
ನೀರಿನ ಪ್ರಮಾಣ3.5 tmcft
ತೀರದ ಉದ್ದ130 km (19 mi)
ಮೇಲ್ಮೈ ಎತ್ತರ612 m (2,008 ft)
1 Shore length is ಉತ್ತಮವಾಗಿ ವ್ಯಾಖ್ಯಾನಿಸಲಾದ ಅಳತೆಯಲ್ಲ.

ಸೂಳೆಕೆರೆ ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿರುವ ಒಂದು ಕೆರೆ. ಈ ಕೆರೆ ಶಾಂತಿ ಸಾಗರ ಎಂಬ ಮತ್ತೊಂದು ಹೆಸರಿನಿಂದಲೂ ಜನಪ್ರಿಯವಾಗಿದೆ. ೧೨ ನೇ ಶತಮಾನದಲ್ಲಿ ಕಟ್ಟಲಾದ, ಸುಮಾರು ೫೩೯.೧೬ ಚ.ಮೈಲಿ ವಿಸ್ತಾರವಿರುವ ಈ ಕೆರೆಯನ್ನು ಹರಿದ್ರಾವತಿ ನದಿಗೆ (ಹಿರೇ ಹಳ್ಳ) ಅಡ್ಡವಾಗಿ ಕಟ್ಟಲಾಗಿದೆ. ಈ ಕೆರೆಯು ಸುಮಾರು ೩೨ ಹಳ್ಳಿಗಳ ೨೮೭೬ ಹೆಕ್ಟೇರು ಜಾಗಕ್ಕೆ ನೀರುಣಿಸುತ್ತದೆ.

೧೨ ನೇ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು (ಈಗಿನ ಕಗತೂರು ಎಂಬ ಗ್ರಾಮ). ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಮಗಳು ಶಾಂತವ್ವ ಎಂದು. ಅವಳು ಸಿದ್ದೇಶ್ವರ ಎಂಬ ಯುವಕನೊಂದಿಗೆ ಗಾಂಧರ್ವ ವಿವಾಹವಾಗುತ್ತಾಳೆ. ಇದನ್ನು ಒಪ್ಪದ ಪಟ್ಟಣದ ಜನರು ಅವಳನ್ನು ಸೂಳೆ ಎಂದು ಕರೆಯುತ್ತಾರೆ. ಆನಂತರ ಶಾಂತವ್ವನು ಗಂಡನ ಜೊತೆ ಸೇರಿ ದೊಡ್ಡದಾದ ಕೆರೆಯನ್ನು ಕಟ್ಟಿಸಿ, ತನಗೆ ಬಂದಿರುವ ಕಳಂಕ ಹೋಗಲಿ ಎಂದು ಕೆರೆಗೆ ಹಾರವಾಗುತ್ತಾಳೆ. ನಂತರ ಗಂಡನಾದ ಸಿದ್ದೇಶ್ವರನು ಹೆಂಡತಿಯ ಅಗಲಿಕೆಯನ್ನು ತಾಳಲಾರದೆ ಪಕ್ಕದಲ್ಲಿರುವ ಬೆಟ್ಟಕ್ಕೆ ಹೋಗಿ ಇಹ ಲೋಕವನ್ನು ತ್ಯಜಿಸುತ್ತಾನೆ. ಈ ಹಿನ್ನೆಲೆಯಲ್ಲಿ ಗುಡ್ದದ ಮೇಲೆ ಈಗಲೂ ಸಿದ್ದೇಶ್ವರ ದೇವಾಲಯವಿದೆ. ಇವರ ನೆನಪಿಗಾಗಿ ಪ್ರತಿ ವರ್ಷ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಶಾಂತವ್ವಳ ನೆನಪಿಗಾಗಿ ಪ್ರತಿ ವರ್ಷ ಜಾತ್ರೆಯ ದಿನ ಶಾಂತವ್ವಳ ತವರು ಮನೆ ಕಗತಲೂರು ಗ್ರಾಮದಲ್ಲಿನ ಇವರ ಮನೆಯಿಂದ ಮಡ್ಲಕ್ಕಿ ಹೋದ ನಂತರವೆ ರಥ ಯಾತ್ರೆಗೆ ಚಾಲನೆ ನೀಡುವುದು.