ಸುಪ್ರಿಯಾ ಎಸ್. ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಪ್ರಿಯಾ ಎಸ್. ರಾವ್, ಒಬ್ಬ ಬಹುಮುಖ ವ್ಯಕ್ತಿತ್ವದ ಕಲಾವಿದೆ. ಕನ್ನಡ ರಂಗಭೂಮಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲೂ ಪಾದಾರ್ಪಣೆ ಮಾಡಿದ್ದಾರೆ. ಅವರು ವಸ್ತ್ರ ವಿನ್ಯಾಸ, ಪ್ರಸಾಧನ, ಸ್ಟೇಜ್ ನ ಕೆಲಸಗಳು,ಸಂಗೀತ ಸಂಯೋಜನೆ,ಸಾಹಿತ್ಯ ರಚನೆ,ಮೊದಲಾದ ವಿಭಾಗಗಳಲ್ಲಿ ಒಳ್ಳೆಯ ಅನುಭವಿಗಳು. ಕಲಾತ್ಮಕ ಚಿತ್ರಗಳಲ್ಲಿ ಕೆಲಸಮಾಡುವ ಆಸೆಯುಳ್ಳವರು. [೧] ಸುಪ್ರಿಯ ಅವರು ಅಭಿನಯ ವೈವಿಧ್ಯಮಯ. ಅವರು

ಅಭಿನಯಿಸಿದ ನಾಟಕಗಳು[ಬದಲಾಯಿಸಿ]

  1. ಗಿರಿಜಾ ಕಲ್ಯಾಣ
  2. ಕರ್ಣಾಂತರಂಗ,
  3. ರಾವಣ ದರ್ಶನ,
  4. ಮೈಥಿಲಿ,[೨]
  5. ಮಂಥರೆ,
  6. ಯಹೂದಿ ಹುಡುಗಿ,

ಜನನ, ಪರಿವಾರ[ಬದಲಾಯಿಸಿ]

ಸುಪ್ರಿಯ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ತಾಯಿ ಸೀತಾಲಕ್ಷ್ಮಿ, ಸಂಗೀತ ಬಲ್ಲವರು. ಮಗಳಿಗೆ ಅವರಿಂದಲೇ ಸಂಗೀತದ ಕಲಿಕೆ ಶುರುವಾಯಿತು. ತಂದೆ ರಂಗಕರ್ಮಿ ಹಾಗೂ ನಟ. ಸುಪ್ರಿಯ ೮ ನೆಯ ತರಗತಿಯಲ್ಲಿದ್ದಾಗ, "ಎದೆತುಂಬಿಹಾಡಿದೆನು" ಎನ್ನುವ ಟೆಲಿವಿಶನ್ ಶೋನಲ್ಲಿ ಭಾಗವಹಿಸಿ ಕರುನಾಡಿಗೆ ಪರಿಚಿತಳಾದಳು. ಅವರು ಮೊದಲನೆಯ ಪಿಯುಸಿಯಲ್ಲಿದ್ದಾಗ,"ಸರಿಗಮಪ"ಸ್ಟಾರ್ ಸಿಂಗರ್-ಸೀಸನ್-೨ ನಲ್ಲಿ ಟೆಲಿವಿಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಗಳಿಸಿದರು. ಸುಪ್ರಿಯರವರು ಸಂಗೀತದ ಜೊತೆಗೆ, ಬಿ.ಬಿ.ಎ.ಪರೀಕ್ಷೆ ಮುಗಿಸಿ ಎಂ.ಕಾಂ ಪದವಿಗೆ ಶ್ರಮಿಸುತ್ತಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ[ಬದಲಾಯಿಸಿ]

  1. "ಹಸಿರು ರಿಬ್ಬನ್", ಕನ್ನಡದ ಹೆಸರಾಂತ ಲೇಖಕ, ಕವಿ, ಎಚ್ಚೆಸ್ವಿ ಯವರ ಬರೆದ, ಚಿತ್ರದಲ್ಲಿ ಅಭಿನಯಿಸಿದ್ದಾರೆ.[೩]
  2. "ಅಮೃತ ವಾಹಿನಿ", ನಿರ್ದೇಶಕ ನರೇಂದ್ರ ಬಾಬು ನಿರ್ದೇಶನದ ಚಿತ್ರ ನಿರ್ಮಾಣದ ಹಂತದಲ್ಲಿದೆ.

ಕಿರುತೆರೆಯಲ್ಲಿ[ಬದಲಾಯಿಸಿ]

ನಿರ್ದೆಶಕ, ಟೀ.ಎನ್.ಸೀತಾರಾಂರವರ "ಮಗಳು ಜಾನಕಿ" ಧಾರಾವಾಹಿಯಲ್ಲಿ ನಿರಂಜನನ ಅಕ್ಕ"ಸಂಜನ" ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  • ಗಾನಶ್ರೀ-೨೦೦೮ ಪ್ರಶಸ್ತಿ,
  • ಸಹ್ಯಾದ್ರಿ ಸುಗಮ ಸಂಗೀತ ಅಕ್ಯಾಡೆಮಿ ಪುರಸ್ಕಾರ,
  • ಮೈಥಿಲಿ ಏಕ ವ್ಯಕ್ತಿ ಪ್ರದರ್ಶನಕ್ಕಾಗಿ, ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರಿಂದ ಮೆಚ್ಚುಗೆ ಪುರಸ್ಕಾರ,
  • ಶಿವಮೊಗ್ಗ ದಸರಾ-೨೦೧೪ ರಲ್ಲಿ ಮೈಥಿಲಿ ನಾಟಕಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ,
  • ಉಡುಪಿ ರಂಗಭೂಮಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ,
  • ಕಲಾ ಪ್ರತಿಭೋತ್ಸವದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಅಪೇಕ್ಷಾ ಕಲಾವೃಂದದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
  • ೧೮ ನೇ ಅಖಿಲಭಾರತ ಕುವೆಂಪು ಏಕಾಂಕ ನಾಟಕ ಸ್ಪರ್ಧೆ-೨೦೧೪ ಕರ್ಣಾಂತರಂಗ ನಾಟಕಕ್ಕೆ ಪ್ರಶಸ್ತಿ,
  • ಶ್ರೀಗಂಧ ಸಂಸ್ಥೆಯಿಂದ ಆರ್. ಏನ್. ಜಯಗೋಪಾಲ್ ಅತ್ಯುತ್ತಮ ಗಾಯಕಿ ಪ್ರಶಸ್ತಿ,
  • ಸ್ಪಂದನ ಶ್ರೀ ಟ್ರಸ್ಟ್ ವತಿಯಿಂದ ಕಲಾಸೇವೆಯನ್ನು ಗುರುತಿಸಿ ಸ್ಪಂದನ ಶ್ರೀ ಪ್ರಶಸ್ತಿ,

ಉಲ್ಲೇಖಗಳು[ಬದಲಾಯಿಸಿ]

  1. ಸುಪ್ರಿಯಾ ಗಾನಾಭಿನಯ
  2. ಏಕವ್ಯಕ್ತಿ ನಾಟಕದ ಬಹುಮುಖೀ ಪ್ರತಿಭೆ, ಸುಪ್ರಿಯಾ ರಾವ್
  3. asianetnews, ಸುವರ್ಣ ನ್ಯೂಸ್, ಚಿತ್ರ ವಿಮರ್ಶೆ, ಹೇಗಿದೆ ಹಸಿರು ರಿಬ್ಬನ್

ಬಾಹ್ಯಸಂಪರ್ಕಗಳು[ಬದಲಾಯಿಸಿ]

  1. ಚಿತ್ರೀಕರಣ ಮುಗಿಸಿಕೊಂಡ 'ಅಮೃತವಾಹಿನಿ',ಮಾರ್ಚ್,೧೯,೨೦೧೯,Public Vibe