ಸದಸ್ಯ:Veekshan MP/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                     ಎಸ್.ಜಿ.ಶಾಸ್ತ್ರಿ

ಎಸ್.ಜಿ.ಶಾಸ್ತ್ರಿ ಎಂಬ ಹೆಸರಿನ ಪೂರ್ತಿ ರೂಪ "ಸೋಸಲೆ ಅಯ್ಯಶಾಸ್ತ್ರೀ ಗರಳಪುರಿ ಶಾಸ್ತ್ರೀ" ಎಂಬುದು . ವೆಂಕಟೇಶಸಂಗಲಿ ಅವರ ಗ್ರಂಥಕರ್ತರ ಚರಿತ್ರೆಕೋಶದಲ್ಲಿ "ಸೋಸಲೆ ಗರಳಪುರಿಶಾಸ್ತ್ರಿ ಅಯ್ಯಶಾಸ್ತ್ರಿ" ಎಂದಿರುವುದು ಸರಿಯಲ್ಲ . ಇದು ಅವರ ತಂದೆ ಅಯ್ಯಶಾಸ್ತ್ರೀಗಳನು ನಿರ್ದೇಶಿಸುತದೆ . "ಎಸ್ ಅಂಬುದು ಸೋಸಲೆ ಅಯ್ಯಶಾಸ್ತ್ರೀ ಎಂಬ ಅವರ ತಂದೆಯವರ ಹೆಸರಿನ ಸಂಕೇತ "ಜಿ ಅನ್ನುವುದು ಅವರ ಹೆಸರಿನ ಸಂಕೇತ . ಗರಳಪುರಿ ಶಾಸ್ತ್ರಿ ಎಂಬ ಇನ್ನೊಬ್ಬ ಲೆಖ್ಖಕರು ಇವರ ಮನೆತನದವರೇ ಆಗಿದ್ದಾರೆ . ಅವರು ಈ ಎಸ್.ಜಿ.ಶಾಸ್ತ್ರಿಗಳ ತಾತಂದಿರು ಆಗಿಧಾರೆ . ಅಯ್ಯಶಾಸ್ತ್ರಿ ಗಳ ಪ್ರಚಲಿತ ಹೆಸರೇ "ಸೋಸಲೆ ಅಯ್ಯಶಾಸ್ತ್ರೀ" ಎಂದಿರುವುದರಿಂದ ಅದು ಊರಿನ ಹೆಸರಿನ ಸೂಚನೆಯಾದರೂ ವ್ಯಕ್ತಿನಾಮವಾಗಿರುವುದರಿಂದ ಅದನ್ನು ಪ್ರತ್ಯೇಕಿಸುವಂತಿಲ್ಲ . ಆದ್ಧರಿಂದ ಎಸ್.ಜಿ.ಶಾಸ್ತ್ರಿ ಹೆಸರನ್ನು ವಿಸ್ತರಿಸುವುದಾದರೆ "ಸೋಸಲೆ ಅಯ್ಯಶಾಸ್ತ್ರೀ ಗರಳಪುರಿ ಶಾಸ್ತ್ರೀ" ಎಂದು ವಿಸ್ತರಿಸುವುದೇ ಸರಿಯಾದ ಕ್ರಮ . ಇದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಇವರ ತಂದೆ ಅಯ್ಯಶಾಸ್ತ್ರೀ ಅವರನ್ನೂ ಅಥವಾ ತಾತ ಗರಳಪುರಿ ಶಾಸ್ತ್ರೀಗಳನ್ನೋ ಸೂಚಿಸಿಬಿಡುತದೆ . ಇವರ ತಂದೆಯವರು , ತಮ್ಮ ಮಗನಿಗೆ ಪ್ರೀತಿಯಿಂದ ಮತ್ತು ಅವರ ತಂದೆಯ ಮೇಲಿನ ಅಭಿಮಾನದಿಂದ ಹಾಗು ಸಂಪ್ರದಾಯದ ವಾಡಿಕೆಯಂತೆ ತಮ್ಮ ತಂದೆ ಯವರ ಹೆಸರನ್ನೇ ಎಟ್ಟಿರುವುದರಿಂದ ಇವರ ಹೆಸರಿನಲ್ಲಿ ಇಷ್ಟೆಲ್ಲ ಗೊಂದಲಗಳುಉಂಟಾಗಲು ಕಾರಣವಾಗಿದೆ . ಇದನ್ನು ತಪ್ಪಿಸಲು ಇವರನ್ನು ಎಸ್.ಜಿ.ಶಾಸ್ತ್ರಿಗಳೆಂದ್ದೆ ನಿರ್ದೇಶಿಸುವುಧು ಉತ್ತಮ .

     ಎಸ್ .ಜಿ.ಶಾಸ್ತ್ರಿಗಳು ೧೮೯೦ರಲ್ಲಿ ಮೈಸೂರಿನಲ್ಲಿ ಸೋಸಲೆ ಅಯ್ಯಶಾಸ್ತ್ರಿ -ಲಕ್ಷ್ಮೀದೇವಮ್ಮ ದಂಪತಿಗಳಿಗೆ ಜೇಷ್ಠಪುತ್ರರಾಗಿ ಜನಿಸಿದರು . ಮೈಸೂರಿನಲ್ಲೇ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದರು . ತಂದೆಯವರು ಅರಮನೆಯ ಆಶ್ರಮದಲ್ಲಿದ್ಧ ಅಸ್ಥಾನವಿದ್ವಾಂಸಾರಾಗಿಧರು . ಹಲವು ಕನ್ನಡ ಸಂಸ್ಕೃತದ್ದ ಕಾವ್ಯ ನಾಟಕ ರಚಿಸುವುದಲ್ಲದೆ ಪ್ರಾಚೀನ ಕನ್ನಡ ಕಾವ್ಯಗಳ್ಳನ್ನು ಸಂಪಾದಿಸಿಧರು ; ಅರಮನೆಯ ಅರಸು ಮಕ್ಕಳಿಗೆ ವಿದ್ಯಾ ಗುರುಗಳಾಗಿದ್ಧರು . ಹೀಗಾಗಿ ಅರಮನೆಯ ಸಂಪರ್ಕದಲ್ಲಿ ಎಸ್.ಜಿ.ಶಾಸ್ತ್ರಿಗಳ ವಿದ್ಯಾಭ್ಯಾಸ ನಿರ್ವಿಗ್ನವಾಗಿ ನಡೆಯಿತು . ಮನೆಯಲ್ಲಿಯೂ ತಂದೆಯವರಿಂದಲೇ ಸಂಸ್ಕೃತ ಕನ್ನಡ ಸಾಹಿತ್ಯ ಆಸಕ್ತಿಯನ್ನು ಬೆಳ್ಳೆಸಿಕೊಳ್ಳಲು ಅಗತ್ಯವಾದ ವಾತಾವರಣವಿತು .ಸೋಸಲೆ ಅಯ್ಯಶಾಸ್ತ್ರಿಗಳದ್ದು ತುಂಬು ಕುಟುಂಬ . ಎಸ್.ಜಿ.ಶಾಸ್ತ್ರಿಗಳಿಗೆ ಮೂರೂ ಜನ ತಮ್ಮಂದಿರು ಹಾಗು ನಾಲ್ಕು ಜನ ಅಕ್ಕತಂಗಿಯರು . ಎವರಲ್ಲಿ ತಮ್ಮ ಕೃಷ್ಣಸ್ವಾಮಿಶಾಸ್ತ್ರಿಯವರು ಅಣ್ಣನಂತೆಯೇ ಸಾಹಿತ್ಯಾಸಕ್ತಿ ರೂಡಿಸಿಕೊಂಡಿಧರಲ್ಲದೆ ಮುಂದೆ ತಂದೆಯವರ ಆಸ್ಥಾನ ಗೌರವವನ್ನು ಪಡೆದಿದ್ದ ವಿದ್ವಾಂಸರೆನಿಸಿಕೊಂಡರು . ಪ್ರಾಚ್ಯ ವಿದ್ಯಾ ಸಂಸಂಶೋದನಾ ಸಂಸ್ಥೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಾಹಿಸಿ ಹಲವಾರು ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದಾರೆ . ಒಬ್ಬ ತಂಗಿ ಎಂ.ಎಸ್.ಪುಟ್ಟಣ್ಣನವರ ಸೊಸೆಯಾಗಿದಾರೆ .

ಎಸ್ .ಜಿ .ಶಾಸ್ತ್ರಿಗಳು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ೧೯೧೩ ಬಿ.ಎ. ಪದವಿ ಪಡೆದ ನಂತರ ಉನ್ನತ ವ್ಯಾಸಂಗಕಾಗಿ ಲಂಡನ್ಗೆ ಹೋಗಿ ೧೯೧೬ ರಲ್ಲಿ ರಾಸಾಯನಶಾಸ್ತ್ರದಲ್ಲಿ ಎಂ .ಎಸ್ .ಸಿ ಪದವಿ ಪಡೆದು ಬಂದರು . ಆ ಕಾಲಕ್ಕೆ ವಿದೇಶಿ ಪ್ರಯಾಣ ಮಾಡಿಬಂದಿದ್ಧ ಕೆಲವೇ ಭಾರತೀಯರಲ್ಲಿ ಇವರು ಒಬ್ಬರೆನಿಸಿಧರು . ಮೈಸೂರು ಸಾಬೂನು ಕಾರ್ಖಾನೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಆರಂಭಿಸುವ ಮೂಲಕ ಬೆಂಗಳೂರಿನಲ್ಲಿ ವ್ರಿತಿಗಿವನ ಆರಂಭಿಸಿ ಅವರು   ಮೈಸೂರು ಸ್ಯಾಂಡಲ್ ಸೋಪನ್ನು ಜಗದ್ವಿಖ್ಯಾತ ಗೊಳಿಸಿದ ಕೀರ್ತಿವಂತರು . ಆಧರಿಂದಲೇ ಉದ್ಯಮವನಲಯದಲಿ ಇವರನ್ನು ಸೂಪಶಾಸ್ತ್ರಿ ಎಂದೇ ಕರೆಯಲು ಆರಂಭಿಸಿದರು . ನಂತರ ಇವರು ೧೯೪೮ ರಲ್ಲಿ ನಿವೃತಿ ಗೊಂಡರು .

ಎಸ್ .ಜಿ .ಶಾಸ್ತ್ರಿಗಳು  ವೃತಿಯಲ್ಲಿ ವಿಜ್ನ್ಯಾನಿಗಳು ಉದ್ಯಮಿಗಳು ಆಗಿದ್ದರೂ ಪ್ರವೃತಿಯಲ್ಲಿ ಸಾಹಿತಿಗಳೇ . ಮನುತನದಿಂದ ಬಂದಿದ್ದು ಬಳುವಳಿಯಾಗಿ ರಕ್ತತಗವಾಗಿದ್ಧ ಸಾಹಿತ್ಯಾಸಕ್ತಿ ಅವರಲ್ಲಿ ಸದಾ ಜಾಗೃತಿ ಆದಂತೆ ತೋರುತದೆ . ಜೊತೆಗೆ ಉನ್ನತ ಅಭ್ಯಾಸದಿಂಧ ದೊರೆತ ಇಂಗ್ಲಿಷ್ಸಾಹಿತ್ಯಧಾ ತಿಳುವಳಿಕೆಯು ಕನ್ನಡದತ್ತ ಹೊರಳಿ ಕನ್ನಡಕ್ಕೆ ಅದರ ಪರಿಚಯ ಮಾಡಿಕೊಡುವ ಹಂಬಲ ವ್ಯಕ್ತವಾಗಿರುವುಧು ಸಹಜವಾದುದೇ ಆಗಿದೆ . ವೃತಿಯಲ್ಲಿ ಎದ್ದುಕೊಂಡು ಹಲವು ಇಂಗ್ಲಿಷ್ ಕೃತಿಗಳನ್ನು ಕನ್ನಡಕೆ ಕೋತಿಧಾರೆ . ಆಗಳಲ್ಲಿ ಮುಖ್ಯವು ನಾಟಕಗಳಾಗಿಧವೇ  . ಜೊತೆಗೆ ಅರಮನೆಯ ಕಂಪನಿಯ ಮೂಲಕ ತಂದೆಯವರ ಮತ್ತು ಬಸವಪಶಾಸ್ತ್ರಿಗಳಂತಹ ಪ್ರಮುಖ ನಾಟಕಕಾರರು ರಚಿಸಿದ ನಾಟಕಕಾರರು ರಚಿಸಿದ ನಾಟಕಗಳನ್ನು ಪ್ರಧರ್ಷಿಸುತಿಧನಾಟಕ ಪ್ರಭಾವವಿದಾ ಕಾಲವಾದ್ದರಿಂದ ಇಂಗ್ಲೀಷನಿಂದಲೂ ಕೆಲವು ನಾಟಕಗಳನ್ನು ಪರಿಚಯಿಸಬೇಕೆಂಬ ತುಡಿತ ಎಸ್ .ಜಿ .ಶಾಸ್ತ್ರಿಗಳಲಿ ಮೊಳೆತಿರುಧು ಸಂದರ್ಭಯೋಚಿತವು ಆಗಿರುವಂತಿದೆ .

ಹೆನ್ರಿಕ್ .ಎಬ್ಜೆನ್ಸ್  ನ ದಿ ವಾರಿಯನ್ ಇನ್ ಹೆಗಲ್ಲ್ಯಾಂಡ್ ನಾಟಕದ  ಅನುವಾದ ಆರ್ಯಕ (೧೯೧೬)ಮಾತು ಡಾಲ್ಸ್ ಹೌಸ್ ನಾಟಕದ ಅನುವಾದ ಸೂತ್ರದ ಬೋಂಬೆ(೧೯೬೨) ಸಾಕ್ರೆಟೀಸ್ ಮರಣ (೧೯೩೭) ವನ್ನಾಗಿ ಹೌಸ್ಮನ್ನ ಡೆತ್ ಓಫ್ ಸಾಕ್ರಟಿಸ್ ಅನ್ನು ಅನುವಾದಿಸಿಧಾರೆ . ಇದು ಪ್ರಸಿದ್ಧ ವಾಗಿ ಹಲವಾರು ಯಶಸ್ವಿ ಪ್ರಯೋಗಗಳನ್ನು ಕಂಡಿದುದಲ್ಲದೆ ಹಲವು ಬರಿ ಪಠ್ಯ ಪುಸ್ತಕ ವಾಗಿಯೂ ಜನಪ್ರಿಯವಾಗಿತು . ಮಾರಿಸ್ ಮ್ಯಾಟರ್ಲಿಂಕ್ ನ ಒಂದು ನಾಟಕವನ್ನು ಮೋನ್ನ-ವನ್ನ ಎಂಬ ಹೆಸರಿನಲ್ಲಿ ೧೯೫೫ ರಲ್ಲಿ ಅನುವಾದ ಮಾಡಿದಾರೆ. ಕಣ್ಣು ಬಿಚ್ಚಲೇ ಮುಂತಾದ ಇನ್ನು ಕೆಲವು ಕೃತಿಗಳು ಇದ್ದು ಇವುಗಳೊಂದಿಗೆ ಕಥೆಯನ್ನು ಕೆಲವನ್ನು ಅನುವಾದಿಸಿರುವುದಾಗಿ ಟಿಲ್ಲಿದ್ದು ಬರುವುದಾದರೂ ಈ ಯಾವ ಸಾಕಷ್ಟನ್ನು ಪಡೆದಿದೆ ಎಂದರೆ ಅತಿಶಯೋಕ್ತಿಯಾಗದು . ಇವರ ಅಲ್ಲ ಕೃತಿಗಳನ್ನು ಕಲೆಹಾಕಿ ಅಧ್ಯಯನ ಮಾಡುವ ಅಗತ್ಯವಿದೆ .