ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ10

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿ, ಬೈಲು ಪಲ್ಲದ ಬಿಡು ಈ ಬಸದಿಯು ಮಂಗಳೂರು ತಾಲೂಕು ಕೊಳಂಬೆಯಲ್ಲಿದೆ. ಇದು ಸುಮಾರು ೯೦ ವರ್ಷದ ಹಿಂದೆಯದೆಂದು ಪ್ರತೀತಿಯಿದೆ.

ಬಸದಿಯ ಹೊರಾಂಗಣ[ಬದಲಾಯಿಸಿ]

ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಬಸದಿಯ ಎದುರು ದ್ವಾರಪಾಲಕರ ಚಿತ್ರಗಳನ್ನು, ಪ್ರಾರ್ಥನೆಯನ್ನು ಹಾಕಲಾಗಿದೆ.

ಪೂಜಾ ವಿಧಾನ[ಬದಲಾಯಿಸಿ]

ಸ್ವಾಮಿ ಚಂದ್ರನಾಥ ಸ್ವಾಮಿಯ ಪಂಚಲೋಹದ ಬಿಂಬ ಅಂದಾಜು ಎರಡು ಅಡಿ ಎತ್ತರವಿದೆ. ಪ್ರಭಾವಳಿ ಇದೆ. ನಿತ್ಯ ಪೂಜೆ ನಡೆಯುತ್ತಿದೆ. ಭಾನುವಾರ ಮೂಲ ಸ್ವಾಮಿಗೆ ಪಂಚಾಮೃತಅಭಿಷೇಕ ಮಾಡಲಾಗುತ್ತದೆ. ಒಂದು ಪೂಜೆ ಮಾತ್ರ ನಡೆಯುತ್ತದೆ. ವಿಶೇಷವಾಗಿ ವಾರ್ಷಿಕೋತ್ಸವ ಪೂಜೆ ಮಾತ್ರ ನಡೆಯುತ್ತದೆ.