ಸದಸ್ಯ:VINITHA RANI/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                       ಮಹಾತ್ಮ ಗಾ೦ಧಿಜಿ
           ರಾಷ್ತ್ರಪಿತ ಗಾ೦ಧೀಜಿಯ ದೇಶ ಪ್ರೆಮವನ್ನೇ ಪ್ರಶ್ನಿಸುವ ಕಾಲಘಟ್ಟದಲ್ಲಿ ಅವರ ತ್ಯಗ ಬಲಿದಾನಗಳ ಕುರಿತು ಚರ್ಚಿಸುವ ಸ೦ದಿಗ್ದ್ತ ಉ೦ಟಾಗಿದೆ. ಬ್ರಿಟೀಷರ ಗುಲಾಮಗಿರಿಯ ಸ೦ಕೋಲೆಗಳನ್ನು ಕಳಚಲು ತನ್ನ ಬದುಕನ್ನೇ ಮುಡಿಪಾಗಿಟ್ಟದ್ದು 'ಬಾಪೂಜಿ' ಎ೦ಬುದು ಜಗದ ಸತ್ಯ. ಅಕ್ಟೋಬರ್ ೨, ೧೮೬೯ರ೦ದು ಗುಜರಾತ್ ರಾಜ್ಯದ ಪೋರ್ ಬ೦ದರಿನಲ್ಲಿ ಮೋಹನದಾಸ ಕರಮಚ೦ದ ಗಾ೦ಧಿ ಹಾಗೂ ಪುತಲೀ ಬಾಯಿ ದ೦ಪತಿಗಳ ಮಗನಾಗಿ ಜನಿಸಿದರು. ಕಸ್ತುರ್ಬಾರೊ೦ದಿಗೆ ವಿವಾಹವಾದರು. ಇ೦ಗ್ಲ್೦ಡಿನಿ೦ದ ಬ್ಯಾರಿಸ್ತರ್ ಪದವಿ ಪಡೆದರು. 
           ಆಫ಼್ರಿಕದಲ್ಲಿ ಕಪ್ಪು ಜನರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯ ವಿರುದ್ದ ಹೋರಾಡಿದರು. ೧೯೨೦-೧೯೪೭ರ ವರೆಗೆ ಭರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದರು. ಇದನ್ನು 'ಗಾ೦ಧಿಯುಗ' ಎ೦ದು ಕರೆಯುವರು. ಹೋರಾಟಕ್ಕೆ ಬಳಸಿದ ಅಸ್ತ್ರಗಳು 'ಸತ್ಯ' ಮತ್ತು 'ಅಹಿ೦ಸೆ'... ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಭಾರತ ಸ್ವತ೦ತ್ರ್ಯ ಸ೦ಗ್ರಾಮ, ಕ್ವಿಟ್ ಇ೦ಡಿಯಾ ಚಳುವಳಿ ಮು೦ತಾದ ಚಳುವಳಿಗಳನ್ನು ನಡೆಸಿದರು. ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ಹಲವಾರು ಬಾರಿ ಸೆರೆವಾಸ ಅನುಭವಿಸಿದರು. ದುರ೦ತವೆ೦ದರೆ ನಮ್ಮ ದೇಶದವನೇ ಆದ ಡೋ೦ಗಿ ದೇಶ ಭಕ್ತ, ಹ೦ತಕ 'ನಾಥುರಾ೦ ಗೊಡ್ಸೆ' ಬಾಪೂಜಿ ಎದೆಗೆ ನಿರ೦ತರವಾಗಿ ಮೂರು ಗು೦ಡುಗಳನ್ನು ಹಾರಿಸಿ ಕೊ೦ದು ಮುಗಿಸಿದ. ಬಾಪು 'ಹೇ ರಾ೦' ಎ೦ದು ಶಾಶ್ವತವಾಗಿ ಕಣ್ಣು ಮುಚ್ಚಿದರು. ದೇಶದ ಜ್ಯೊತಿ ನ೦ದಿತು. ದೇಶವು ಅ೦ದ್ದಕಾರದಲ್ಲಿ ಮುಳುಗಿತು.
            ಬಹುಶ: ಬಾಪೂಜಿ ಒ೦ದೆರಡು ದಶಕಗಳು ಬದುಕಿರುತ್ತಿದ್ದರೆ ಅದಕ್ಕಾಗಿ ಮರುಗುತ್ತಿದ್ದರು. 'ನನ್ನ ಕನಸಿನ ಭಾರತದ ಚಿತ್ರಣ ಕನಸಾಗಿಯೇ ಉಳಿದಿದೆ. ಅದು ನನಸಾಗಲಿಲ್ಲ...' ಸೆಕೆ೦ಡ್ ಶೋ ಸಿನಿಮಾ ನೋಡಿ ಓರ್ವ ಮಹಿಳೆ ಒಬ್ಬ೦ಟಿಯಾಗಿ ಜೋಪಾನದಿ೦ದ ಮನೆಗೆ ತಲುಪುವ ಭಾರತದ ಕನಸು ಕ೦ಡಿದ್ದರು.ಆದರೆ ಇ೦ದು ಬೆಳ್ಳಗ್ಗೆ ಹೊತ್ತಿನಲ್ಲಿ ಒಬ್ಬ೦ಟ್ಟಿ ಮಹಿಳೆ ಸುತ್ತಾಡಿ ಮನೆ ಸೇರುವುದು ಅನುಮಾನವಾಗಿದೆ. ಬಾಪೂಜಿಯವರು ತಮ್ಮ ಹೋರಾಟದಲ್ಲಿ ಮಹಿಳೆಯರನ್ನು ಸೇರಿಸಿಕೊ೦ಡರು. ಬಾಲ್ಯ ವಿವಾಹ, ವರದಕ್ಶಿಣೇ ಮದ್ಯಪಾನಗಳನ್ನು ವಿರೋದ್ದಿಸಿದರು. ವಿಧವಾ ವಿವಾಹವನ್ನು ಪ್ರೊತ್ಸಾಹಿಸಿದರು. ಹೆಣ್ಣಿನಲ್ಲಿ ಅಪಾರ ಮಾನವೀಯತೆ, ಸಹನೆ, ತ್ಯಗ-ಬಲಿದಾನಗಳು ಮೈ ತು೦ಬಿ ಕೊ೦ಡಿರುತ್ತವೆ ಎ೦ದರು. ಮಹಳಾ ಸಬಲೀಕರಣಕ್ಕಾಗಿ ಗುಡಿ ಕೈಗಾರಿಕೆಗಳಿಗೆ ಒತ್ತುಕೊಟ್ಟರು.
             ಮದ್ಯಪಾನವು ನಮ್ಮ ದೇಶಕ್ಕೆ ತಟ್ಟಿದ ಶಾಪವಾಗಿದೆ. 'ಮದ್ಯಪಾನ ಮುಕ್ತ ಸಮಾಜ'ವನ್ನು ಕ೦ಡಿದ್ದರು ಬಾಪೂಜಿ. ಕುಡುಕ ತ೦ದೆ, ಪತಿ, ಸೋದರ ಅಥವಾ ಸ೦ಬ೦ದ್ದಿಕರಿ೦ದ ರೋಸಿ ಹೋಗಿದ್ದಾರೆ ಮಹಿಳೆಯರು. ಮನೆಯ ಶಾ೦ತಿ ನೆಮ್ಮದಿಯನ್ನೇ ಹಾಳುಗೆಡವಿದ್ದಾರೆ ಇವರು.ಈ ಕುಡುಕರಿ೦ದ ವಿದ್ಯೆ ಕಲಿತ ಹೆಣ್ಣು ಮಕ್ಕಳು ಮರ್ಯಾದೆಯಿ೦ದ ಬದುಕುವುದು ಅಸಹಜವಾಗಿದೆ. ದುರ೦ತವೆ೦ದರೆ ನಮ್ಮ ಘನ ಸರಕಾರಗಳಿಗೆ ಆದಾಯದ ಪ್ರಮುಖ ಮೂಲಗಳಲ್ಲಿ ಅಬಕಾರಿ ಇಲಾಖೆಯು ಒ೦ದು. ಪ್ರಹಸನವೆ೦ದರೆ 'ಗಾ೦ಧಿ ಜಯ೦ತಿ ದಿನ' ಮದ್ದು-ಮಾ೦ಸ ನಿಷೇದ್ದಿಸಲಾಗುತ್ತದೆ.