ಸದಸ್ಯ:Swaathi Nayak/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರನಾಥ ಸ್ವಾಮಿಎಡ ಬಸದಿ, ಹಿರಿಯಂಗಡಿ ಶ‍್ರೀ ಚಂದ್ರನಾಥ ಸ್ವಾಮಿಯ ಎಡ ಬಸದಿ, ಹಿರಿಯಂಗಡಿ ಕರ್ನಾಟಕದ ಬಸದಿಗಳಲ್ಲಿ ಒಂದು. ಈ ಬಸದಿಯು ಕಾರ್ಕಳದ ಪ್ರಸಿದ್ಧ ಹಿರಿಯಂಗಡಿ ಶ್ರೀ ನೇಮಿನಾಥ ಬಸದಿಯಎಡ ಬದಿಯಲ್ಲಿ ಈ ಚಂದ್ರನಾಥ ಸ್ವಾಮಿ ಬಸದಿ ಇದೆ ಈ ಬಸದಿಯಎದುರಿನಲ್ಲಿ ಭದ್ರ ಮಂಟಪ ಎಂಬ ಒಂದು ವಿಶೇಷ ಮಂಟಪ ಇದೆ.ಇದನ್ನು ಆಡಳಿತ ಮುಕ್ತೇಸರರು ಮತ್ತು ಜೈನಧರ್ಮ ಜೀರ್ಣೋದ್ದಾರ ಸಂಘದವರು ನಡೆಸುತ್ತಾರೆ.ಶ್ರೀ ನಾಗಕುಮಾರಇಂದ್ರರು ಈ ಬಸದಿಯ ಪೂಜಾದಿಗಳನ್ನು ನೇರವೇರಿಸುತ್ತಾರೆ.

ಇತಿಹಾಸ[ಬದಲಾಯಿಸಿ]

ಈ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದೆ. ಹಾಗೂ ಒಂದೆರಡು ವರ್ಷಗಳ ಹಿಂದೆ ಜೀರ್ಣೋದ್ದಾರಗೊಂಡಿದೆ.ಆದರೆಇದರ ನಿರ್ಮಾಣದ ಬಗ್ಗೆ ನಿಖರ ಮಾಹಿತಿ ಇಲ್ಲ. ಇಲ್ಲಿ ಹಿಂದೊಮ್ಮೆ ಮೂರ್ತಿ ಕಳವಾಗಿತ್ತು, ಆದರೆ ಅದು ನಂಬಿಕೆಯಂತೆ ಕ್ಷೇತ್ರಪಾಲ ಮತ್ತು ಭೂತಕ್ಕೆ ಹರಕೆ ಹೇಳಿಕೊಂಡಿದ್ದರಿಂದ ಜೀರ್ಣೋದ್ದಾರಕ್ಕಿಂತ ಒಂದು ತಿಂಗಳು ಮೊದಲು ಮೂರ್ತಿ ಪುನಃ ಬಂದಿದೆ.ಬಳಿಯ ಮಾನಸ್ತಂಭವು ಒಂಭತ್ತು ಬಸದಿಗಳಿಗೆ ಒಟ್ಟಾಗಿ ಒಂದೇ ಇದೆ.ಬಸದಿಯ ಆವರಣದಲ್ಲಿ ದಾಸವಾಳ ಹೂವಿನ ಗಿಡವಿದೆ.ಇಲ್ಲಿಗೆ ಆಚಾರ್ಯರಾದ ವಿಶ್ವನಂದಿ ಮುನಿಗಳು, ಶ್ರೀ ವಿಮಲಸಾಗರ ಮುನಿಗಳು ಶ್ರೀ ತರುಣಸಾಗರ ಮುನಿಗಳು ಹಿಂದೆ ಬೇಟಿ ನೀಡಿದ್ದರು.ಬಸದಿಯಲ್ಲಿ ಮುನಿವಾಸದಕೋಣೆಇದ್ದುಅದನ್ನು ಈಗ ಭಕ್ತಾಧಿಗಳಿಗೆ ವಿಶ್ರಾಂತಿಗಾಗಿ ಬಳಸುತ್ತಾರೆ.[೧]

ವಿನ್ಯಾಸ[ಬದಲಾಯಿಸಿ]

ಬಸದಿಯ ಗೋಡೆಗಳ ಮುಂದೆದ್ವಾರ ಪಾಲಕರಚಿತ್ರಕಂಡುಬರುದಿಲ್ಲ. ಒಳಗೆ ವಿಶೇಷವಾಗಿ ಶಾಸನ ದೇವತೆಗಳಾದ ಶಾಮಯಕ್ಷ ಹಾಗೂ ಜ್ವಾಲಾ ಮಾಲಿನಿ ಯಕ್ಷಿಯನ್ನು ಪೂಜಿಸಲಾಗುತ್ತದೆ.ಆದರೆಇಲ್ಲಿಗಣಧರಪಾದ ಶ್ರುತ ಬ್ರಹ್ಮದೇವರುಯಾವುದೂ ಕಂಡುಬರುವುದಿಲ್ಲ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ಸುಂದರವಾದ ಪಂಚಲೋಹದ ವಿಗ್ರಹವು ಸುಮಾರು ೩.೫ ಎತ್ತರವಿದ್ದು.ಪದ್ಮ ಪೀಠದ ಮೇಲೆ ಬಹು ಸುಂದರವಾಗಿ ವಿರಾಜಮಾನವಾಗಿದೆ.ಮೂರ್ತಿಯಿಂದ ಸ್ವಲ್ಪಎದುರುಗಡೆ ಹಲವಾರು ಜೀನ ಬಿಂಬಗಳನ್ನು ಇಡಲಾಗಿದೆ.ಪ್ರಾರ್ಥಾನ ಮಂಟಪವು ಚಿಕ್ಕದಾಗಿದ್ದುಅದಕ್ಕೆಕಬ್ಬಿಣದ ಬಾಗಿಲನ್ನು ಹೆಚ್ಚಿನ ಸುರಕ್ಷತೆಗೊಸ್ಕರಇತ್ತಿಚೇಗೆಜೋಡಿಸಲಾಗಿದೆ.ಇಲ್ಲಿರುವ ಕಂಬಗಳ ಮೇಲಾಗಲಿ ಗೋಡೆಗಳ ಮೇಲಾಗಲಿ ಯಾವುದೇ ಕೆತ್ತನೆಗಳಿಲ್ಲ.ಹೊರಗಿನಜಗಲಿಗೆ ಬರುತ್ತಿರುವಂತೆ ಬಾಗಿಲಿನ ಎರಡು ಬದಿಗೆ ಇರುವಂತಹದ್ವಾರ ಬಂಧದ ,ಮೇಲೆ ಕಲಶಗಳನ್ನು ತೋರಿಸಲಾಗಿದೆ. ಕಲಶಕ್ಕಿಂತ ಮೇಲಿನ ಭಾಗದಲ್ಲಿಎಲೆಯ ಮತ್ತು ಹೂವಿನ ಆಕೃತಿಗಳಿವೆ. ಎಲ್ಲಕ್ಕಿಂತ ಮೇಲಿನ ಮಧ್ಯಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿಕೊಂಡಿರುವ ತೀರ್ಥಶಂಕರ ಬಿಂಬವಿದೆ.ಬದಿಗಳಲ್ಲಿ ಚಾಮರಗಳು ಕಂಡುಬರುತ್ತವೆ. ಬಿಂಬದತಲೆಯ ಮೇಲ್ಭಾಭಾಗದಲ್ಲಿ ಮುಕ್ಕೋಡೆಇದೆ.ಅದಕ್ಕಿಂತ ಮೇಲೆ ಇರುವಂತಹಕಲ್ಲಿನತೊಲೆಯಲ್ಲಿರೇಖಾಕಾರದ ಹಲವಾರು ಚಿತ್ರಗಳಿವೆ. ಇನ್ನೂಮೇಲ್ಬಾಗದಲ್ಲಿಕಲ್ಲನ್ನು ಹಾಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.ಜಗಲಿಯ ಹೊರ ಭಾಗದಲ್ಲಿರುವಎರಡು ಕಂಬಗಳು ಅಲಂಕಾರಗೊಂಡು ವಿಜಯನಗರದ ಶಿಲ್ಪ ಶೈಲಿಗೆ ಒಳ್ಳೆಯ ಉದಾಹರಣೆಯಾಗಿದೆ. ಎಡ ಬದಿಯಕಂಬದ ಒಳ ಭಾಗದಲ್ಲಿರೆಕ್ಕರಇರುವಂತಹಕುದುರೆಯಆಕೃತಿಯನ್ನುಕಾಣಬಹುದು.ದಕ್ಷಿಣಭಾಗಕ್ಕೆ, ನಿಂತುಕೊಂಡತಹ ಜಿನಬಿಂಬವಿದೆ.ಇದರ ಸುತ್ತಲೂ ಒಂದು ಸುಂದರವಾದ ಮಂಟಪವಿದೆ.ಅದಕ್ಕಿಂತ ಮೇಲೆ ಅದೇರೀತಿಯಜಿನಬಿಂಬದಕೆತ್ತನೆಯಿದೆ.ಪೂರ್ವ ಭಾಗದ ಮೈಮೇಲೆ ಯಾವುದೇಕೆತ್ತನೆಇಲ್ಲ. ಬದಲಾಗಿಅಲಂಕಾರಿಕ ಪಟ್ಟಿಗಳಿವೆ.ಎದುರು ಭಾಗದಲ್ಲಿ ವೀರಾವೇಶದದಿಂದಕುಳಿತುಕೊಂಡ ನರಸಿಂಹನ ಆಕೃತಿಯಿದೆ. ಮೇಲ್ಗಡೆಯಲ್ಲಿ ಕಾಳಿಂಗಮರ್ಧನ ಕೃಷ್ಣನ ಆಕೃತಿಯಿದೆ. ಹಾಗೇಯೇ ಇನ್ನೂ ಮೇಲೆ ಹೋದಂತೆ ಕಂಬವು ದುಂಡಗೆಯ ರಚನೆಯನ್ನು ಹೊಂದಿದೆ. ಮೇಲೆ ಬೋದುಗೆ ಇದೆ.ಬೋದುಗೆಯಲ್ಲಿಯೂ ಇನ್ನೂಎಡಕಂದಲ್ಲಿ ಒಳ ಮೈಗೆ ಕಲಶದಆಕೃತಿಯಿದ್ದು ಮೇಲ್ಗಡೆಯಲ್ಲಿ ಪುನಃ ಒಂದು ಸಿಂಹದ ಆಕೃತಿಇದೆ.ಅದರ ಮೇಲೆ ಕೀರ್ತಿ ಮುಖವಿದೆ. ಮೇಲೆ ಹೋದಂತೆ ವೃತ್ತಾಕಾರವನ್ನು ಹೊಂದಿದೆ.,ಒAದುಕಡೆಅಶ್ವತ್ಥ ಎಲೆಗಳ ಮತ್ತು ಹೂಗಳ ರಚನೆಇದೆ. ಈ ಕಂಬದಎದುರು ಭಾಗಕ್ಕೆ ಹಂಸದಚಿತ್ರವಿದೆ.ಅದರಿಂದ ಮೇಲ್ಗಡೆ ನರಸಿಂಹನ ಆಕೃತಿ ಇದೆ.ಅದರ ಮೇಲೆ ಎರಡುಕಡೆ ಮುಖ ಮಾಡಿರುವ ಸಿಂಹದ ಆಕೃತಿಗಳಿವೆ. ಪಶ್ಚಿಮ ಭಾಗದ ಮೈಮೇಲೆ ಯಾವುದೇ ಆಕೃತಿಗಳಿಲ್ಲ. ದಕ್ಷಿಣ ಭಾಗದಲ್ಲಿಕುದುರೆಯನ್ನು ಹೋಲುವ ಆನೆಯ ಸೊಂಡಿಲಿನAತಹ ಕಾ;ಪನಿಕ ಅಥವಾ ಪೌರಾಣಿಕ ಮೃಗದಕೆತ್ತನೆಇದೆ. ಮೇಲೆ ಹೋದಂತೆ ಕಂಬವು ದುಂಡಗೆಯಅಲAಕಾರಿಕರಚನೆಯನ್ನು ಹೊಂದಿದೆ ಪ್ರಾರ್ಥನಾ ಮಂಟಪದಿಂದ ಹೊರಗೆ ಹೋಗುವಲ್ಲಿ ಮರದ ಬಾಗಿಲನ್ನುಜೋಡಿಸಲಾಗಿದೆ.ಇತ್ತೀಚೆಗೆ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ.ಅದಕ್ಕಿಂತ ಮೇಲ್ಭಾಗಲ್ಲಿ ಸುಂದರವಾದ ಬೋದಿಗೆ ಇದೆ.ಅಡ್ಡಕಲ್ಲಿನ ಮಧ್ಯದಲ್ಲಿಅಧೋಮುಖಕಮಲದಆಕೃತಿಯನ್ನುಕೆತ್ತಲಾಗಿದೆ. ಇದುಇಲ್ಲಿಕಲಾಕಾರದಒಂದು ಸಂಕ್ಷಿಪ್ತಚಿತ್ರಣ.ಈ ಬಸದಿಯ ಮೇಲ್ಛಾಚವಣಿಯನ್ನು ಮರದ ಪಕ್ಕಾಸುಗಳನ್ನು ಅಳವಡಿಸಿ ಹಂಚಿನ ಮಾಡಿನಿಂದ ನಿರ್ಮಿಸಲಾಗಿದೆ.ಸ್ಥಲೀಯ ಶ್ರೀ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕರುಕೊಡುವ ಸಹಾಯವೇ ಈ ಬಸದಿ ಯಆದಾಯ. ಸರಕಾರದ ಸಹಾಯವನ್ನುಇದುವರೆಗೆ ಕೇಳಲಿಲ್ಲ. ಬಸದಿಗೆ ಪ್ರತ್ಯೇಕವಾದ ಕಾರ್ಯಲಯಗಳಾಗಲೀ ಅನ್ನಛತ್ರವಾಗಲೀಇಲ್ಲ. ಮುಂದೆ ಮಾಡುವ ಯೋಜನೆಯೂ ಇಲ್ಲ. ಬಸದಿಯ ನೀರಿನ ವ್ಯವಸ್ಥೆಗಾಗಿ ಬಾವಿ ಇದೆ, ನಳ್ಳಿಯ ವ್ಯವಸ್ಥೆಇಲ್ಲ. ಈ ಬಸದಿಯ ಆವರಣಗೋಡೆಯನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ.

ವಿಧಿ ವಿಧಾನ[ಬದಲಾಯಿಸಿ]

ಸ್ವಾಮಿಗೆ ಪೂಜೆಯನ್ನು ದಿನಕ್ಕೆ ಒಂದು ಬಾರಿ ಮಾಡಲಾಗುತ್ತದೆ.ರಥೋತ್ಸವ , ವಾರ್ಷಿಕೋತ್ಸವಇತ್ಯಾದಿ ವಿಶೇಷ ಆಚರಣೆಗಳನ್ನು ಮಾಡಲಾಗುದಿಲ್ಲ. ಸ್ವಾಮಿಗೆಜಲಾಭಿಷೇಕ, ಕ್ಷೀರಾಭಿಷೇಕ, ಪಂಚಮೃತಾಭಿಷೇಕಗಳನ್ನು ಮಾಡಲಾಗುತ್ತದೆ. ಅಭಿಷೇಕದ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು.ನೈರ್ಮಲ್ಯಕ್ಕೆ ವಿಶೇಷ ಪ್ರಾಧ್ಯಾನ್ಯತೆಕೊಡಲಾಗಿದೆ.

ಉಲ್ಲೇಕಗಳು[ಬದಲಾಯಿಸಿ]

  1. ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೫ ed.). ಮಂಜುಶ್ರೀ ಪ್ರಿಂಟರ್ಸ್. p. ೩೪-೩೫.