ಸದಸ್ಯ:Rakshithasuresh1910469/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಲಾರ ಸೊಗಡು ಸಂಕ್ರಾಂತಿ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ವಿಶ್ವದ ಉನ್ನತ ಹಾಗು ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿರುವ,ನಮ್ಮ ಭಾರತ ದೇಶದ ದಕ್ಷಿಣ ಭಾಗದಲ್ಲಿ ಸಂಕ್ರಾಂತಿಯನ್ನು ಬಹಳ ವಿಜೃಂಭಣೆ ,ಸಂತೋಷ-ಸಡಗರದಿಂದ ಆಚರಿಸಲಾಗುತ್ತದೆ. ದಕ್ಷಿಣ ಭಾಗದಲ್ಲೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕೆಲ ಆಚರಣಾ ಪದ್ಧತಿಗಳಲ್ಲಿ ವ್ಯತ್ಯಾಸಗಳಿವೆ. ಅದರಲ್ಲೂ ಕೋಲಾರದಲ್ಲಿ ಈ ಹಬ್ಬವನ್ನು ಬಹಳ ವಿಶೇಷ, ಉತ್ಸಾಹ, ತಳಿರು ತೋರಣಗಳೊಂದಿಗೆ ಸಂಭ್ರಮದಿಂದ ಆಚರಿಸ್ಪಡುತ್ತದೆ. ಸ್ವಾತಂತ್ರ್ಯದ ನಂತರ ಮೊತ್ತಮೊದಲ ಮುಖ್ಯಮಂತ್ರಿಯಾದ ಕೆ.ಸಿ ರೆಡ್ಡಿ, ಕವಿ ಮಾಸ್ತಿ ವೆಂಕಟೇಶ್ ಅಯ್ಯಗಾರ್ ಮುಂತಾದ ಮಹಾನ್ ಕವಿಗಳು ಹಾಗು ವ್ಯಕ್ತಿಗಳು ಜನಿಸಿದ ಪುಣ್ಯ ಭೂಮಿ ನಮ್ಮ ಜಿಲ್ಲೆ. ಇಡೀ ಜಗತ್ತಿಗೆ ಚಿನ್ನ ರಪ್ತು ಮಾಡುವಷ್ಠು ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿ. ಇಂತಹ ಉನ್ನತ ಸಂಪ್ರದಾಯಗಳ, ಸಂಸ್ಕತಿಗಳ, ಮೌಲ್ಯಗಳ, ಸನಾತನ ಧರ್ಮಗಳ, ಜನರ ಸಹ ಜೀವನಗಳ ಹಾಗು ಆಂಧ್ರ, ತಮಿಳುನಾಡು ರಾಜ್ಯಗಳಿಗೆ ಗಡಿ ಜಿಲ್ಲೆಯಾದ ಇಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. 

ಹಬ್ಬದ ಆಚರಣೆ ಬಗ್ಗೆ[ಬದಲಾಯಿಸಿ]

ಪ್ರತಿ ವರ್ಷವು ಕಾಯಮ್ಮಾಗಿ ಮೊಟ್ಟ ಮೊದಲ ಹಬ್ಬವು ಜನವರಿ 14 ರಂದು ಆರಂಭವಾಗಿ ಅಂದಿನಿಂದ ಸುಮಾರು ಒಂದು ತಿಂಗಳವರೆಗು ಹಳ್ಳಿಗಳ ಆಗು ಹೋಗುಗಳಿಗೆ ಅನುಸಾರವಾಗಿ ಹಬ್ಬವನ್ನು ಆಚರಿಸುತ್ತಾರೆ.  ಹಿಂದೂ ಧರ್ಮದ ಪಂಚಾಂಗದಂತೆ ಜನವರಿ 14ಕ್ಕೂ ೧ತಿಂಗಳ ಹಿಂದಯೇ ಮಾರ್ಗಶಿರ ಮಾಸದಂದು ಆರಂಭವಾಗುತ್ತದೆ. ಈ ಮಾಸದ ಮೊದಲದಿನದ ಮುಂಚಾನೆ 3 ಗಂಟೆಗೆ ಧೈವ ಭಕ್ತರು,ಭಜನೆ ಕಲಾವಿದರು, ಪೋಷಕರು, ಮಕ್ಕಳು ಎಲ್ಲರೂ ಭಜನೆ ಮಂದಿರ ಅಥವಾ ವಿಷ್ಣು ದೇವಾಲಯಗಳಲ್ಲಿ ಸೇರಿ, ಅಖಂಡ ವಾದ್ಯ ಮತ್ತು ಭಜನೆಗಳೊಂದಿಗೆ ಅಖಂಡ ಜ್ಯೋತಿಯನ್ನು ಎತ್ತಿಕೊಂಡು, ಊರಿನ ಸುತ್ತಲು ಮೆರವಣಿಗೆ ಮಾಡುತ್ತಾ ಕಾಣಿಕೆ ಹಾಗು  ಧಾನ್ಯಗಳನ್ನು ಪಡೆಯುತ್ತಾರೆ. ಈ ಮೆರವಣಿಗೆಯ ಸಂದರ್ಭದಲ್ಲಿ ಅಖಂಡ ಜ್ಯೋತಿಗೆ ಪೊಜೆ ಮಾಡುತ್ತಿದ್ದರು. ಮೆರವಣಿಗೆ ಮುಗಿಸಿ ಮಂದಿರಕ್ಕೆ ಮರಳಿದ ನಂತರ ಅತಿ ಭಕ್ತಿಯಿಂದ ದೇವರುಗಳಿಗೆ ಪೊಜೆ ಮಾಡಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸುತ್ತಾರೆ. ಆ ತಿಂಗಳಿನಲ್ಲಿ ಪ್ರತಿ ಮುಂಚಾನೆ ಮೇಲ್ಕಂಡತೆ ಮಾಡುತ್ತಾರೆ. ತಾವು ಬೆಳೆದಿರುವ ಬೆಳೆಗಳು ಕಟಾವಿಗೆ ಬಂದಿರುವ ಕಾಲ ಹಾಗು ದನಕರುಗಳಿಗೆ ಹಸಿರು ಮೇವುಗಳನ್ನು ತಿನ್ನಿಸಿ ಗಟ್ಟುಮಸ್ತಾಗಿ ಬೆಳೆಸುತ್ತಾರೆ .ಇದನ್ನು ಸುಗ್ಗಿಯ ಕಾಲವೆಂದು ಹೇಳುತ್ತಾರೆ. ರೈತರು ಹಾಗೂ ದನಗಳು ಒಂದು ವರ್ಷದ ಕಾಲ ಶ್ರಮ ಪಟ್ಟು ಬೆಳೆಗಳನ್ನು ಬೆಳೆಸಿ ಜನರಿಗೆ ದವಸ ಧಾನ್ಯಗಳು, ಹಾಗೂ ದನಕರುಗಳಿಗೆ ಮೇವು ಸಂಗ್ರಹಿಸಿ ವರ್ಷ ಪೂರ್ತಿ ತಿನ್ನಲು ಆಗುವಷ್ಟು ಬೆಳೆದಿಟ್ಟುಕೊಳ್ಳುವ ಕಾಲವಾಗಿರುತ್ತದೆ. ಇದೇ ಕಾಲವನ್ನು ನಮ್ಮ ಪೂರ್ವಜರು ತಲತಲಾಂತರಗಳಿಂದ ಮಕರ ಸಂಕ್ರಾಂತಿಯಂದು ಹಬ್ಬವಾಗಿ ಆಚರಿಸುತ್ತಾರೆ. 2 ಅಯನಗಳು ಬದಲಾಗುವ ಕಾಲ ಅಂದರೆ ಅವುಗಳನ್ನು ಉತ್ತರಾಯಣ, ದಕ್ಷಿಣಾಯಣ ಕಾಲಗಳೆಂದು ಕರೆಯುತ್ತಾರೆ. ಉತ್ತರಾಯಣ ಹುಟ್ಟುವ ಮೊದಲ ದಿನದಿಂದಲೆ ಹಬ್ಬಕ್ಕೆ ಪ್ರಾಮುಖ್ಯತೆ ನೀಡಿ ಕರ್ನಾಟಕ, ಆಂಧ್ರ ರಾಜ್ಯಗಳಲ್ಲಿ ಸಾರ್ವತ್ರಿಕ ಸರ್ಕಾರಿ ರಜೆ ಸಹ ನೀಡುತ್ತಾರೆ. ಹಬ್ಬದ ಮುಂಚೆಯೇ ತಮ್ಮ ಎಲ್ಲಾ ಬಂಧುಗಳಿಗೆ ಇಂತಹ ದಿನದಂದು ಹಬ್ಬ ಆಚರಿಸುತ್ತೇವೆಂದು ಆಹ್ವಾನ ಮುಟ್ಟಿಸಿ ಮನೆಯಲ್ಲಿನ ಎಲ್ಲರಿಗೂ ಹೊಸ ಬಟ್ಟೆಗಳನ್ನು ಹೊಲಿಸಿ ಧನ ಕರುಗಳಿಗೆ ಅಲಂಕರಿಸುವ ವಸ್ತುಗಳನ್ನು ಬಟ್ಟೆಗಳನ್ನು ಪೂರ್ವ ತಯಾರಾಗಿ ತರಿಸಿ ಇಟ್ಟು ಕೊಳ್ಳುತ್ತಾರೆ.

ಪ್ರತಿ ಊರಿಗೂ ಅನಾದಿ ಕಾಲದಿಂದಲೂ ಯಜಮಾನರನ್ನು ನೇಮಿಸಿರುತ್ತಾರೆ, ಆ ಯಜಮಾನರ ಮನೆಯಿಂದಲೇ ಮೊದಲು ಎತ್ತುಗಳನ್ನು ಹದ್ದಿನ ರಸ್ತೆಯಲ್ಲಿ ಓಡಿಸಿ, ನಂತರ ಊರಿನ ಎಲ್ಲರು ತಮ್ಮ ದನ ಕರುಗಳನ್ನು ಅಲ್ಲಿ ಬಿಡಬೇಕು, ಎಂಬ ಸಂಪ್ರದಾಯವಿದೆ. ಪ್ರತಿ ಮನೆಯ ಬಾಗಿಲ ಮುಂದೆಯು ಸ್ವಚ್ಚ ವಾಗಿ ಶುಚಿಗೊಳಿಸಿ ರಂಗೋಲಿ ಹಾಕಿ ಅದರ ಮಧ್ಯೆ ಸಗಣಿಯಲ್ಲಿ ಗೊಂಬೆ ತಯಾರಿಸಿ, ಅದಕ್ಕೆ ಹರಿಶಿನ ಕುಂಕಮ ಹೂವುಗಳನ್ನು ಇಟ್ಟು ಪೂಜೆಮಾಡಿ ಭದ್ರವಾಗಿ ಮುಚ್ಚಿಡುತ್ತಾರೆ. ಹಸುಗಳನ್ನು ಬಿಡುವಾಗ  ತೆಗೆದು ಹಾಕುತ್ತಾರೆ. ಎತ್ತುಗಳನ್ನು ಬಿಡುವ ಬೀದಿಯ ಆರಂಭದಲ್ಲಿ  ಹದ್ದು

ಹಾಗೂ ಮುಕ್ತಾಯದ ಜಾಗದಲ್ಲಿ ಗಂಗಾದೇವಿಯನ್ನು ಕೆತ್ತಿರುವ ಮರದ ಹಲಗೆಯನ್ನು ಇಟ್ಟು ವಿಶೇಷವಾಗಿ ಪೂಜೆ ಮಾಡುತ್ತಾರೆ. ಈ ಪೂಜೆಯ ತಟ್ಟೆಯನ್ನು ಊರಿನ ಯಜಮಾನರ ಮನೆಯಿಂದಲೇ ತರಬೇಕು. ದನಕರುಗಳಿಗೆ ಸ್ನಾನ ಮಾಡಿಸಿ  ಕೊಂಬುಗಳನ್ನು ಶುಚಿಗೊಳಿಸಿ ಬಣ್ಣ ಹಚ್ಚುತ್ತಾರೆ. ಮೈಮೇಲೆ ಅಲಂಕಾರ ವಸ್ತ್ರಗಳಿಂದ ಸಿಂಗರಿಸಿ, ಮೈಯೆಲ್ಲಾ ಬಲೂನುಗಳನ್ನು, ಕುತ್ತಿಗೆಗೆ ಪಂಚೆ ಮತ್ತು ಘಂಟೆಗಳನ್ನು, ಕೊಂಬುಗಳ ಮುಂದೆ ಸಿಂಗರಿಸಿದ ಪಲಕಗಳನ್ನು ಕಟ್ಟಿ ಅಲಂರಿಸುತ್ತಾರೆ. ಅಂದು ಹೆಚ್ಚಿನ ಜನರು ತಮ್ಮಮನೆಗಳಲ್ಲಿ ಮಾಂಸದ ಆಹಾರವನ್ನು ಸೇವಿಸುತ್ತಾರೆ. ಅಲ್ಲದೆ ಬೇರೆ ಊರಿಂದ ಬಂದ ಜನರಿಗೆ ಆತ್ಮೀಯವಾಗಿ ಕರೆಸಿ ಊಟ ಬಡಿಸುತ್ತಾರೆ. ಹೋರಿಗಳಿಗೆ ವಸ್ತ್ರಗಳನ್ನು  ಕಟ್ಟಿ ಹದ್ದಿನ ಬಳಿ ನೆರೆದಿರುವ ಜನರು ಕಿತ್ತುಕೊಳ್ಳೂವಂತೆ ಅಥವಾ ಆಗದಿದ್ದರೆ ಹೋರಿಗಳ ಮಾಲಕನಿಗೆ ಅದು ಬಿಡುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳ ಪೈಕಿ ಯಾವ ಮೂರು ಅತಿ ವೇಗವಾಗಿ ಓಡಿ ಹದ್ದನ್ನು ದಾಟುತ್ತವೆಯೋ ಅವುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯವೆಂಬ ನಾನಾ ವಿಧದ ಬಹುಮಾನಗಳನ್ನು ಅವುಗಳ ಮಾಲಿಕರಿಗೆ  ನೀಡಿ ಗೌರವಿಸುತ್ತಾರೆ. ನಮ್ಮ ಜಿಲ್ಲೆಗೆ ಮಾತ್ರ ಸೀಮಿತವಲ್ಲದೆ ಎರಡು ರಾಜ್ಯಗಳಲ್ಲಿ ತಮ್ಮ ಮನೆಗೆ ಬರುವ ಪಸಲಿನ ಸಂತೋಷಕ್ಕೂ ತಮ್ಮ ದನಕುರುಗಳಿಗೆ ಮೇವು ಸಂಗ್ರಹಿಸುವ ಸಂತೋಷಕ್ಕೂ ಅದೇ ಕಾಲವಾಗಿರುವುದರಿಂದ ಮಕರ ಸಂಕ್ರಾಂತಿಯಂದು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ.


ಹಬ್ಬದ ವಿಶೇಷತೆಗಳು[ಬದಲಾಯಿಸಿ]

ಸಂಕ್ರಾಂತಿ ಹಬ್ಬದಂದು ದನಕರುಗಳನ್ನು ಒಂದೇ ಬೀದಿಯಲ್ಲಿ ಕ್ರಮವಾಗಿ ಒಬ್ಬರ ಹಿಂದೆ ಮತ್ತೋಬ್ಬರಂತೆ ನಿಧಾನವಾಗಿ ಒಂದು ಬಾರಿ ನಡೆಸಿಕೊಂಡು ಹೋಗುತ್ತಾರೆ. ನಂತರ ಹಲವು ಬಾರಿ ಜೋರಾಗಿ ಓಡಿಸುತ್ತಾರೆ. ಊರಿನ ಸಂಪ್ರದಾಯದಂತೆ ಹಲಿಗೆ ಬಾರಿಸಲು ಒಂದು ಕುಟುಂಬಸ್ತರು ತಲಾಂತರಗಳಿಂದ ಇರುತ್ತಾರೆ. ಊರಿನ ಯಜಮಾನರ ಮನೆಯಿಂದ ಹೋರಿಗಳನ್ನು ಹಲಿಗೆ ವಾದ್ಯಗಳಿಂದ  ಹಾಗೂ ಪೊಜೆಯ ತಟ್ಟೆಗಳನ್ನು ಮೆರವಣಿಗೆಯಲ್ಲಿ ತರಿಸುತ್ತಾರೆ. ಅನಂತರ(ಹಸುಗಳನ್ನು) ದನಕರುಗಳನ್ನು ಓಡಿಸುವುದು ಮುಗಿಯುವವರೆಗೂ ಅಲ್ಲಿಯೇ ಜೋರಾಗಿ ಹಲಿಗೆಗಳನ್ನು ಬಾರಿಸುತ್ತಾ ಇರುತ್ತಾರೆ. ಹದ್ದಿನ ಬಳಿ ನೂರಾರು ಜನ ಹೋರಿಗಳನ್ನು ಹಿಡಿದು ಅವುಗಳಿಗೆ ಕಟ್ಟಿರುವ ಪಂಚೆಗಳನ್ನು ಹಾಗೂ ಹಣವನ್ನು ಕಿತ್ತೂಕೂಳ್ಳಲು ಪ್ರಯತ್ನಿಸುತ್ತಾರೆ. ಅಂದು ಎಲ್ಲಿ ನೋಡಿದರು ಧ್ವನಿವರ್ದಕ, ಬಣ್ಣ ಬಣ್ಣದ ಕಾಗದಗಳು, ಮಾವಿನ ಎಲೆಗಳಿಂದ ಹಸಿರು ತೋರಣಗಳನ್ನು ಕಟ್ಟಿ, ಇಡೀ  ಊರಿನ ಮನೆಗಳನ್ನು  ಹಾಗೂ ಬೀದಿಗಳನ್ನು ಸಿಂಗರಿಸುತ್ತಾರೆ. ದನಕರುಗಳನ್ನು ಸಿಂಗರಿಸುವುದರಲ್ಲಿ ಒಬ್ಬರಿಗಿಂತ ಮತ್ತೊಬ್ಬರಂತೆ ಪೈಪೋಟಿಗಿಳಿದು ಸಿಂಗರಿಸಿ ಪ್ರಶಂಸೆಗಳನ್ನು ಬಯಸುತ್ತಾರೆ. ದನ ಕರುಗಳನ್ನು ಹದ್ದಿನಲ್ಲಿ ಬಿಡುವುದು ಮುಗಿದ ನಂತರ ಹಲಿಗೆ ಬಾರಿಸುತ್ತಾ ಮನೆ ಮನೆಗೆ ತೆರಳಿ ಹಣ-ಧಾನ್ಯಗಳನ್ನು  ಪಡೆಯತ್ತಾರೆ. ಇದನ್ನು ದೊಡ್ಡಹಬ್ಬವೆಂದು ಎರಡು  ವಿಧಗಳಾಗಿ ಮಾಡುತ್ತಾರೆ, ಆ ಹಬ್ಬಕ್ಕೆ ಬೇರೆ ಬೇರೆ ಊರುಗಳಿಂದ ಹೋರಿಗಳನ್ನು ತಂದು ಬಿಡುತ್ತಾರೆ.