ಸದಸ್ಯ:Rahulkumar555/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು[ಬದಲಾಯಿಸಿ]

ಈ ದೇಶದಲ್ಲಿ ಎಷ್ಟೋ ವರುಷಗಳಿಂದಲೂ ಸಹಕಾರಿ ಪತ್ತಿನ ಸಂಘಗಳು ವ್ಯವಸಾಯಕ್ಕೆ ಗ್ರಾಮೀಣ ಭಾಗದಲ್ಲಿ ಹಣಕಾಸಿನ ಸಹಾಯವನ್ನು ಮಾಡುತ್ತಲೇ ಬಂದಿದ್ದವು. ಆದರೂ ಈ ಸಹಕಾರಿ ಸಂಘಗಳು ಒಟ್ಟು ಗ್ರಾಮೀಣ ಭಾಗಗಳ ಸಾಲಗಳಲ್ಲಿ ಕೇವಲ ಶೇಕಡಾ ೩೨ರಷ್ಟನ್ನು ಮಾತ್ರ ಕೊಡುತ್ತಿದ್ದವು. ಆದರೆ ಇಡೀ ಭಾರತದಲ್ಲಿ ಈ ಸಹಕಾರಿ ಚಳುವಳಿ ಕೇವಲ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯಗಲಲ್ಲಿ ಮಾತ್ರ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಇದರಿಂದ, ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕುಗಳು ಹೋಗಿ, ಅಲ್ಲಿನ ಜನರಿಗೆ ಬೇಕಾಗುವ ಸಾಲವನ್ನು ಈ ಹೊಸ ಗ್ರಾಮೀಣ ಬ್ಯಾಂಕುಗಳು ಕೊಡಬೇಕೆಂದು, ಸರಕಾರವು ಮೊದಲು ಐದು ರಾಜ್ಯಗಳಲ್ಲಿ ಆರು ಶಾಖೆಗಳನ್ನು ತೆರೆದು ಈ ಯೋಜನೆಗೆ ಅಸ್ತು ಎಂದಿತು.

ಈ ಪ್ರಾದೇಶಿಕ ಬ್ಯಾಂಕುಗಳನ್ನು ರಚಿಸುವ ಹೊಣೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಹಿಸಿಕೊಡಲಾಯಿತು.ಪ್ರಾಥಮಿಕ ಹಂತದಲ್ಲಿ ಇವುಗಳ ಅಧಿಕೃತ ಬಂಡವಾಳ ಒಂದು ಕೋಟಿ ರೂಪಾಯಿ ಇದ್ದು, ಸಂದಾಯವಾದ ಬಂಡವಾಲಾ ೨೫ ಲಕ್ಷ ರೂಪಾಯಿ ಎಂದು ನಿರ್ಧರಿಸ ಲಾಯಿತು. ನಂತರ ಅಧಿಕೃತ ಬಂಡವಾಳವನ್ನು ಐದು ಕೋಟಿ ರೂಪಾಯಿಗಳಿಗೇರಿಸಿ ಸಂದಾಯ ವಾದ ಹಣವನ್ನು ಒಂದು ಕೋಟಿ ರೂಪಾಯಿಗಳಿಗೆ ಏರಿಸಲಾಯಿತು. ಈ ಸಂದಾಯವಾದ ಬಂಡವಾಳದಲ್ಲಿ ಸರಕಾರವು ಶೇಕಡಾ ೫೦, ಸಂಬಂಧಿಸಿದ ರಾಜ್ಯಸರಕಾರಗಳು ಶೇಕಡಾ ೧೫ ಮತ್ತು ಈ ಪ್ರಾದೇಶಿಕ ಬ್ಯಂಕುಗಳನ್ನು ತೆರೆಯಲು ಹೊಣೆಗಾರಿಕೆ ಹೊತ್ತು ವ್ಯವಸ್ಧೆ ಮಾಡಿದ ಪ್ರಾಯೋಜಕ ಬ್ಯಂಕು ಉಳಿದ ಶೇಕಡಾ ೩೫ ರಷ್ಟನ್ನು ಒದಗಿಸಬೇಕೆಂದು ಕಾನೂನನ್ನೇ ರಚಿಸಲಾಯಿತು.


ಇವುಗಳ ಉದ್ದೇಶಗಳು ಮುಂದಿನಂತಿವೆ[ಬದಲಾಯಿಸಿ]

  • ಉತ್ವಾದನೆಯಲ್ಲಿ ತೊಡಗಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಭೂರಹಿತ ಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಮಾಡಿಕೊಂಡು ಇರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳು ದೊರೆಯಬೇಕು.
  • ದೇಶವು ಆರ್ಥಿಕ ಅಭಿವೃಧ್ಧಿಯನ್ನು ಸಾಧಿಸಲು ಗ್ರಾಮೀಣ ಭಾಗದಲ್ಲಿಯ ವ್ಯವಸಾಯ, ವ್ಯಾಪಾರ, ಉದ್ಯೋಗಗಳಿಗೆ ಹಣಸಹಾಯವನ್ನು ನೀಡುವುದು.
  • ಹಳ್ಳಿಗಳಲ್ಲಿ ಅಭಿವೃಧ್ಧಿಗೊಳ್ಳುವ ವ್ಯವಸಾಯ ಮತ್ತು ವಾಣೆಜ್ಯಗಳಿಂದ ಬರುವ ಲಾಭವನ್ನು ಉಳಿತಾಯ ಮಾಡುವ ಅಭ್ಯಾಸವನ್ನು ಹಳ್ಳಿಗರಲ್ಲಿ ಬೆಳೆಸುವುದು.
  • ಗ್ರಾಮೀಣ ಭಾಗದ ಸುಶಿಕ್ಷಿತ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವನ್ನು ನೀಡುವುದು.
  • ಮುಖ್ಯವಾಗಿ, ನಗರಳಲ್ಲಿ ಕಾರ್ಯಮಾಡುತ್ತಿದ್ದ ಬ್ಯಾಂಕುಗಳಿಗಿಂತ ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಬ್ಯಾಂಕುಗಳನ್ನು ತೆರೆಯುವುದು ಮತ್ತು ಕಡಿಮೆ ವೆಚ್ಚದಲ್ಲಿ ನಡೆಸುವುದು.