ಸದಸ್ಯ:Ponanna

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರದಕ್ಷಿಣೆ, ಬೇಡಿಕೆಯ ನಿಷೇಧಿಸುವ ನೀಡುವ ಮತ್ತು ವರದಕ್ಷಿಣೆ ತೆಗೆದುಕೊಳ್ಳುವ ಉದ್ದೇಶದಿಂದ ೧೯೬೧ರಲ್ಲಿ ಕಾನೂನು ನಿಷೇಧಿಸಲಾಗಿದೆ. ಪತಿ ಅಥವಾ ಪತ್ನಿ ತನ್ನ ಕುಟುಂಬದವರ ಪೀಡನೆಯ ಅಪರಾಧಗಳು ನಿಲ್ಲಿಸಲು, ವಿಭಾಗ ೪೯೮ಎ ಐಪಿಸಿ ಮತ್ತು ೧೯೬೮ರಲ್ಲಿ ಕ್ರಿಮಿನಲ್ ಪ್ರೋಸೀಜರ್ ಕೋಡ್ ಪರಿಚ್ಛೇದ ೧೯೮ಎ ಸೇರಿಸಲಾಯಿತು. ವರದಕ್ಷಿಣೆ ಕಾನೂನು ಕೆಲವೊಮ್ಮೆ ದುಬ೯ಳಕ್ಕೆ ಮಾಡಲಾಗಿದೆ ಎಂದು ಭಾವಿಸಲಾಗಿದೆ. ಗಂಡ ಮತ್ತು ಕ್ರೂರ ವತ೯ನ ಅವುಗಳನ್ನು ಆರೋಪಿಸಿ ಇಡೀ ವಿಸ್ತೃತ ಕುಟುಂಬದ ವಿರುದ್ಧ ಸುಳ್ಳು ಅಥವಾ ಉತ್ಟ್ರೇಕ್ಷಿತ ದೂರು ಲಾಡ್ಜ್ ಮಹಿಳೆಯರು. ದೇಟಾ ಪ್ರಕಾರ ವರದಕ್ಷಿಣೆ ಬೇಡಿಕೆ ನೋಂದಣೆ ಪ್ರಕರಣಗಳು ಮಾತ್ರ ೨%ವರ ಅಥವಾ ವರನ ಕುಟುಂಬದ ಕನ್ಟಿಕ್ಷನ್ ಕಾರಂವಾಯಿತು. ಈ ಪತಿಯ ಕುಟುಂಬ ಕಿರುಕುಳ ಮಹಿಳೆಯರು ಭಾರತದಲ್ಲಿ ವರದಕ್ಷಿಣೆ ಕಾನೂನುಗಳು ವ್ಯಾಪಕ ದುಬ೯ಳಕೆ ಬಗ್ಗೆ ಪ್ರಶ್ನೆಗಳನ್ನು ಏರಿಸಿದ್ದಾರೆ. ಒಂದುಪಾವತಿ ವರದಕ್ಷಿಣೆ ಸಾಮಾನ್ಯವಾಗಿ ಆಧಿ೯ಕ ಕೊಡುಗೆ, ವಿಶ್ವದ ಅನೇಕ ಭಾಗಗಳಲ್ಲಿ ಒಂದು ಸುದೀಘ೯ ಇತೆಹಾಸವನ್ನು ಹೊಂದಿದೆ.

ಕೆಲವು ಸಂಧಭ೯ದಲ್ಲಿ ಹೆಣ್ನುಮಗಳ ಮದುವೆ ಆದ ನಂತರ, ಗಂಡೆನಮನೆಯವರು ಅವಳಿಗೆ ಮತ್ತಷ್ಟು ವರದಕ್ಷಿಣೆ ತರಲು ಪೀಡುಸುತ್ತಾರೆ. ಆಕೆ ತನ್ನ ತವರು ಮನೆಗೆ ವರದಕ್ಷಿಣೆ ತರಲು ಹೋದಾಗ, ಆಕೆಯ ತಂದೆ-ತಾಯಿ "ಇಷ್ಟು ಕೊಟ್ಟಿರುವುದು ಸಾಕಲ್ಲವೇ, ಮದುವೆ ಆದಮೇಲೆ ನೀನು ಗಂಡನ ಮನೆಗೆ ತೆರಳಲು ಹೇಳುತ್ತಾರೆ. ಅಸಹಾಯಕಳಾದ ಆ ಹೆಣ್ಣುಮಗಳು ಏನು ಮಾಡಲೂ ತಿಳಿಯದೀ ಆತ್ಮಹತ್ಯೆಗೆ ಒಳಗಾಗುತ್ತಾಳೆ. ಅವಳ ಮಾನಸಿಕ ಸ್ಥಿತಿ ಕುಗ್ಗುತ್ತದೆ.

ಜನರು, ವರದಕ್ಷಿಣೆ ಮರೆಯಾಗುತ್ತಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗಿದ್ದಾರೆ. ಆದರೆ ಈ ವರದಕ್ಷಿಣೆಯ ಮಾಯೆ ಮಾಯಾಜಾಲವಾಗಿ ಹರಡುತ್ತಿದೆ. ಅದರ ಪರಿಣಾಮ ದಿನೇ ಹೆಚ್ಚಾಗುತ್ತಿದೆ. ವರದಕ್ಷಿಣೆಯ ಬಳಿಕೆಯು ಬೇರೆ ಬೇರೆ ಅಪಾಯಕಾರಿಯ ಪ್ರಭಾವವನ್ನು ಹೊಂದುತ್ತಿವೆ. ಪೀಡಿಕೆ, ಧಭಾಳಿಕೆ, ಹಿಂಸೆ, ಲೈಂಗಿಕ ಕಿರುಕುಳ ಮುಂತಾದವು ಹೇಚ್ಚಾಗಿವೆ. ಮಹಿಳೆಯ ಮನಸ್ತಿತಿಯನ್ನು ತಿಳಿಯದೇ ಅವಳ ಮೇಲೆ ಹೀಗೆ ಹಿಂಸೆ ವಾಡುವುದು ಪಾಪಕರ ವಿಚಾರ. ಹೆಣ್ಣುಮಗಳ ಮನಸ್ಸುನೋಡಿ ಪ್ರೀತಿಸಿ ಅವಳಿಗೆ ಗೌರವ ನೀಡುವುದು ಪದ್ಧತಿ, ಅವಳ ಆಸ್ತಿ ನೋಡಿ ಮದುವೆ ಆಗುವುದು ಹಾಗೇ ಪೀಡಿಸುವುದು ತಪ್ಪು . ಮನುಶತ್ವವನ್ನು ಹೊಂದಿ ಅವಳನ್ನು ಗೌರವಿಸಬೇಕು.

ಸಮಾಜದಲ್ಲಿ ಇಂದು ಹೆಣ್ಣು ಮಕ್ಕಳನ್ನು ವಕ್ರದೃಷ್ಟಿಯಿಂದಲೇ ನೋಡಲಾಗುತ್ತದೆ. ಸಮಾಜದಲ್ಲಿ ಹೆಣ್ಣುಮಗಳು ಮದುವೆಯಾಗದೇ ಉಳಿದಲ್ಲಿ ಸಮಾಜದ ಕೆಲವರ ಹೊಲಸು ನಾಲಿಗೆಗೆ ಬಲಿಯಾಗಬೇಕಾಗುತ್ತದೆ. ಆರೋಪ ಆಪಾದನೆಗಳ ಸುಳಿಯಲ್ಲಿ ಸಿಲುಕುವ ಸಂದರ್ಭವೂ ಇರುತ್ತದೆ. ಈ ಮುಜುಗರಗಳನ್ನೆಲ್ಲಾ ಹೆಣ್ಣು ಹೆತ್ತವರೂ ಅನುಭವಿಸಬೇಕಾಗುತ್ತದೆ.

ಈ ಕಾರಣದಿಂದಲೇ ಇಂದು ಹೆಣ್ಣು ಪಿಂಡ ಎಂದ ಕೂಡಲೇ ಅದನ್ನು ಮೊಳಕೆಯಲ್ಲೇ ಚಿವುಟುವ ಭ್ರೂಣ ಹತ್ಯೆಯು ನಿರಂತರ ನಡೆಯತ್ತಲೇ ಇದೆ. ಇದು ಹೀಗೆಯೇ ಮುಂದುವರಿದಲ್ಲಿ ಹೆಣ್ಣು ಸಂತತಿಯ ಅವಸಾನ ಕಾಲ ಬಹಳ ಹತ್ತಿರದಲ್ಲದೆ ಮಾನವ ಸಂತತಿಯು ಅವಸಾನವಾಗುವುದು ನಿಶ್ಚಿತ ಆದುದರಿಂದ ಇನ್ನಾದರೂ ಹೆಣ್ಣುಹೆತ್ತವರು ಎಚ್ಚೆತ್ತುಕೊಳ್ಳಬೇಕಾಗಿದೆ. ಹೆಣ್ಣು ಹೆತ್ತೆವರು ಎಚ್ಚೆತ್ತುಕೊಳ್ಳಬೇಕಾಗಿದೆ. ಹೆಣ್ಣುಹೆತ್ತವರ ತಮ್ಮ ಹೆಣ್ಣು ಮಕ್ಕಳನ್ನು ಕೇವಲ ಮನೆಕೆಲಸ ಮಾಡುವುದಕ್ಕೋ, ಮದುವೆಯಾಗುವುದಕ್ಕೋ, ಮಾತ್ರ ಅಣಿಗೊಳಿಸದೆ ಗಂಡುಮಕ್ಕಳಂತೆ ಹೆಣ್ಣುಮಕ್ಕಳನ್ನು ಧೈರ್ಯವಂತರಾಗಿ ಬೆಳೆಸಬೇಕು. ಅನ್ಯಾಯದ ವಿರುದ್ಧ ಧ್ವನಿಯೆತ್ತುವುದಕ್ಕೆ ಕಲಿಸಿಕೊಡಬೇಕು ಒಳ್ಳೆಯ ವ್ಯಾಸಂಗವನ್ನು ಕೊಡಿಸಿ ತನ್ನ ಕಾಲ ಮೇಲೆ ತಾನೇ ನಿಲ್ಲುವಂತೆ ತಯಾರುಮಾಡಿ ಗಂಡಿಗೆ ಸರಿಸಮಾನಾಗಿ ನಿಲ್ಲುವಂತೆ ಮಡಬೇಕು ಹೀಗಾದಾಗ ಅ ಹೆಣ್ಣು ಜೀವಕ್ಕೆ ಬೆಲೆ ಬರುತ್ತದೆ.

`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ.

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ ಹೆಣ್ಣು ಭ್ರೂಣ ಹತ್ಯೆಗೆ ಕೊಡುವ ದೊಡ್ಡ ಕಾರಣವೆಂದರೆ ವರದಕ್ಷಿಣೆ. ತಮ್ಮ ಹೆಣ್ಣುಮಗಳ ಮದುವೆಗಾಗಿ ಸಾಲ ಮಾಡಿ ನರಳುವ, ಅದಕ್ಕಾಗಿ ಇದ್ದ ಹೊಲ ಗದ್ದೆ ಕಳೆದುಕೊಂಡು ನರಳುವ ಜನರು ಮಂಡ್ಯದ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯ‘ (ಪುಟ 90) ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.

ಆಧುನಿಕ ಅಭಿವೃದ್ಧಿಯ ನೀತಿಗಳು ಆಳದಲ್ಲಿ ಜನಮಾನಸವನ್ನು ಕಂಗೆಡಿಸುವಂತಹದಾಗಿರುತ್ತದೆ. ಕೃಷ್ಣರಾಜಸಾಗರದ ನೀರಾವರಿಗೆ ಬೃಹತ್ ವಿಸ್ತರಣೆ ಸಿಕ್ಕಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ತಮಗಿದ್ದ ಪಾತ್ರ ಮತ್ತು ಮನ್ನಣೆ ಎರಡನ್ನೂ ಮಂಡ್ಯದ ಮಹಿಳಾ ಸಂಕುಲ ಕಳೆದುಕೊಳ್ಳುತ್ತಾ ಬಂದಿದೆ ಎಂಬುದನ್ನು ಈ ಕೃತಿ ಗುರುತಿಸುತ್ತದೆ. ಇದೇ ರೀತಿ ಸರಿಸುಮಾರು ಸಂಪೂರ್ಣವಾಗಿ ನೀರಾವರಿಗೆ ಒಳಗಾಗಿರುವ ಸಕ್ಕರೆಯ ಕಣಜ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಜಿಲ್ಲೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆಸಕ್ತಿಯ ಸಂಗತಿ ಎಂದರೆ, 0-6 ವಯೋಮಾನದ ಗಂಡು-ಹೆಣ್ಣು ಮಕ್ಕಳ ಅನುಪಾತ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಡಗು ಮೊದಲ ಸ್ಥಾನ ಪಡೆದರೆ ಕೋಲಾರ ಎರಡನೆಯ ಸ್ಥಾನ ಪಡೆದಿದೆ. `ವೈದಿಕ ಧರ್ಮಕ್ಕೆ ಹೊರತಾದ ಕೊಡವ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಹಾಗೂ ವೈದಿಕ ಧರ್ಮಕ್ಕೆ ಪಾರಂಪರಿಕವಾಗಿ ಸೆಡ್ಡು ಹೊಡೆದಿರುವ ಪರಿಶಿಷ್ಟ ಜಾತಿಗಳು ಹೆಚ್ಚಾಗಿರುವ ಕೋಲಾರದಲ್ಲಿ ಹೆಂಗಸರ ಸಂಖ್ಯೆ ಹೆಚ್ಚಾಗಿ ಇರುವುದು ಸಾಮಾಜಿಕವಾಗಿ ಅತಿ ಮಹತ್ವದ ವಿಚಾರವಾಗಿದೆ‘ (ಪುಟ 33). ಇದೇ ರೀತಿ ಹುಣಸೂರು ತಾಲ್ಲೂಕಿನಲ್ಲಿ 1000 ಗಂಡು ಮಕ್ಕಳಿಗೆ 1009 ಹೆಣ್ಣು ಮಕ್ಕಳಿರುವ ಸಕಾರಾತ್ಮಕ ಪ್ರವೃತ್ತಿಗೆ, ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಆದಿವಾಸಿ ಜನಸಮುದಾಯದ ಕೊಡುಗೆ ಕಾರಣ ಎಂಬಂತಹ ಹೆಚ್ಚಿನ ಸಾಮಾಜಿಕ ಅಧ್ಯಯನಗಳಿಗೆ ಪ್ರೇರಕವಾಗಬಹುದಾದ ಅಂಶಗಳನ್ನೂ, ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಮದುವೆ ಶಾಸ್ತ್ರ ಹೆಣ್ಣು ನೋಡುವ ಶಾಸ್ತ್ರದಲಿ ಕೂಡಿಬಂದರೂ ಜಾತಕ ಆಗಲಿಲ್ಲ ಮದುವೆಶಾಸ್ತ್ರ ಯಾಕೆಂದರೆ ಕುಸಿದು ಹೋದಳು ಹೊರಲಾರದೆ ದುಡ್ಡು ಬಂಗಾರದ ತೂಕ ವರದಕ್ಷಿಣೆ ಗಂಡು ಹೆಣ್ಣಿನ ಮಧುರ ಮಿಲನಕೆ ಮದುವೆಯೊಂದೆ ಬೆಸುಗೆ ಈ ಬೆಸುಗೆಬೀಳಬೇಕಾದರೆ ವರದಕ್ಷಿಣೆಯೆಂಬ ಹಾಕಬೇಕು ಹೆಣ್ಣು ಗಂಡಿನ ಬೊಗಸೆಗೆ ಹೆಣ್ಣು ಮನಸ್ಸು ಮಾಡಿದರೆ ಸಾಧಿಸಲಾಗದ್ದು ಯಾವುದೂ ಇಲ್ಲ ನಾರಿಮುನಿದರೆ ಮಾರಿ ಎಂಬಂತೆ ಹೆಣ್ಣು ತನ್ನ ನಿಜ ಸ್ವರೂಪವನ್ನು ತೋರಿಸಬೇಕಾಗಿದೆ. ವರದಕ್ಷಿಣೆಕೊಟ್ಟು ನಾನು ಮದುವೆಯಾಗುವುದಿಲ್ಲ ಎಂಬ ಕೂಗು ಹೆಣ್ಣಿನ ಕಂಠದಿಂದ ಹೊರಬರಬೇಕಾಗಿದೆ. ಆ ಕೂಗು ವರದಕ್ಷಿಣೆ ಕೇಳುವ ಗಂಡುಗಳ ಕಿವಿಗೆ ಅಪ್ಪಳಿಸಬೇಕಾಗಿದೆ ಹಾಗಾದಾಗ ವರದಕ್ಷಣೆಯೆಂಬ ಪೆಡಂಭೂತ ನಮ್ಮ ಸಮಾಜದಿಂದ ತೊಲಗಬಹುದು ಆ ದಿನ ಯಾವಾಗಬರುವುದೋ? ಈ ವರದಕ್ಷಿಣೆ ವಿರುದ್ಧ ಕಾನೂನು ಏನೋ ಇದೆ. ಕಾನೂನು ಎಷ್ಟೇ ಕಠಿಣವಾದರೂ ಕಾನೂನಿಂದ ಏನೂ ಮಾಡಲೂ ಸಾಧ್ಯವಿಲ್ಲ ವರದಕ್ಷಿಣೆಯನ್ನು ಎದುರಿಸಬೇಕಾದರೆ ನಾವೇ ಅಣಿಗೊಳ್ಳಬೇಕಾಗಿದೆ.