ಸದಸ್ಯ:Madhu appaji/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಧಾರಣೆ ಎಂಬ ಪ್ರಕ್ರಿಯೆ ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಇತಿಹಾಸದಲ್ಲಿ ತಿಳಿದಿರುವಂತೆ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಸುಧಾರಣೆಗಳು ಮಾನವನ ಮೇಲೆ ಎಷ್ಹ್ಟೊಂದು ಪ್ರಾಭಾವ ಬೀರಿವೆ. ಹೀಗೆ ಚುನಾವಣಾ ಸುಧಾರಣೆಗಳೂ ಸಹ ಪ್ರಭಾವ ಬೀರುತ್ತವೆ.ಚುನಾವಣೆ ಎಂದರೆ ಒಂದು ಸಮೂಹದ ಜನರು ತಮ್ಮ ಆಶೆ-ಅಭಿಲಾಷೆಗಳಿಗೆ,ಜೀವಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಿ, ಸುಖ ಸಂತೋಷದಿಂದ ಜೀವಿಸಲು ಅನುವು ಮಾಡಿಕೊಡುವ, ಹಾಗೂ ಸಹಕರಿಸುವಂತಹ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಅಥವಾ ಗುಂಪನ್ನು ಅಯ್ಕೆ ಮಾಡುವ ಪ್ರಕ್ರಿಯೆ. ಚುನಾವಣೆಯು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರಜೆಗಳ ಕೈಯಲ್ಲಿರುವ ಶಕ್ತಿಶಾಲಿ ಅಸ್ತ್ರವಾಗಿ ಸಂವಿಧಾನದಿಂದ ಪಡೆದವರ ಚುನಾವಣೆಯನ್ನು ಪ್ರಜಾಪ್ರಭುತ್ವದ ಆಧಾರ ಸ್ಥಂಭ ಎಂದು ಕರೆಯಲಾಗುತ್ತದೆ. ಇದು ಮುಕ್ತ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣಾಗಳಾಗಿದ್ದು, ವ್ಯಕ್ತಿಯ ಪ್ರತಿಷ್ಟೆ ಹಾಗೂ ಮೌಲ್ಯಗಳನ್ನು ಹೆಚ್ಚಿಸುತ್ತವೆ.

ಈ ಚುನಾವಣೆಯು ಪರೋಕ್ಷಾವಾಗಿತ್ತು. ಸಂವಿಧಾನದಲ್ಲಿ ೧೫ನೇ ಭಾಗದಲ್ಲಿರುವ ೩೨೪ರಿಂದ ೩೨೯ರವರೆಗಿನ ವಿಧಿಗಳು ಚುನಾವಣೆಗೆ ಸಂಬಂಧಿಸಿದಂತೆ ಉಪಬಂಧಗಳನ್ನು ಹೊಂದಿವೆ. ಭಾರತದಲ್ಲಿ ಚುನಾವಣೆಯನ್ನು ನಡೆಸುವ ಜವಾಬ್ದಾರಿಯನ್ನು ಚುನವಣಾ ಆಯೋಗಕ್ಕೆ ನೀಡಲಾಗಿದೆ. ಪ್ರಸ್ತುತ ಭಾರತದಲ್ಲಿನ ಚುನಾವಣೆಗಳಲ್ಲಿ ಈ ಕೆಳಕಂಡಂತಹ ಸುಧಾರಣೆಗಳು ಆತ್ಯವಶ್ಯಕವಾಗಿವೆ. ನಕಲಿ ಮತದಾನ, ಹಣದ ಪ್ರಭಾವ, ಗೂಂಡಾಗಿರಿ, ಮತ ಪೆಟ್ಟಿಗೆಗಳ ಅಪಹರಣ, ಚುನಾವಣಾ ಅವ್ಯವಹಾರಗಳನ್ನು ನಿಯಂತ್ರಿಸಲು ೧೯೫೦ ಜನ ಪ್ರತಿನಿಧಿ ಕಾಯ್ದ್ದೆ ಹಾಗೂ ಚುನಾವಣಾ ಆಯೋಗವು ಅನೇಕ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದೆ.

೧೯೫೦ರ ಜನಪ್ರತಿನಿಧಿ ಕಾಯ್ದೆ : ಈ ಕಾಯ್ದೆಯು ಮತದಾರರ ಅರ್ಹತೆಗಳು, ಮತದಾರರ ಪಟ್ಟಿಯ ಸಿದ್ದತೆ, ಕ್ಷೇತ್ರಗಳ ಪುನರ್ವಿಂಗಡನೆ, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಸ್ಥಾನಗಳ ಹಂಚಿಕೆ ಮುಂತಾದ ವಿಷಯಗಳೀಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿದೆ. ೧೯೫೧ರ ಜನಪ್ರತಿನಿಧಿ ಕಾಯ್ದೆ : ಈ ಕಾಯ್ದೆಯು ಚುನಾವಣೆಗಳನ್ನು ನಡೆಸುವ ಬಗ್ಗೆ , ಚುನಾವಣೆಗಳನ್ನು ನಡೆಸುವ ಆಡಳಿತ ಯಂತ್ರ, ಚುನಾವಣಾ ಅಪರಾಧಿಗಳಿಗೆ ಶಿಕ್ಷೆ, ಚುನಾವಣಾ ವಿವಾದಗಳು, ಉಪ ಚುನಾವಣೆಗಳು ಹಾಗೂ ರಾಜಕೀಯ ಪಕ್ಷಗಳ ನೊಂದಣಿ ಮುಂತಾದವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿದೆ.


ಭಾರತದ ಚುನಾವಣಾ ವ್ಯವಸ್ಟಯಲ್ಲಿ ಇತೀಚೆಗೆ ಈ ಕೆಳಗಿನ ಸುಧಾರಣೆಗಳನ್ನು ತರಲಾಗಿದೆ.

೧. ಮತದಾರರ ಗುರುತಿನ ಚೀಟಿಯ ಬಳಕೆ: ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡುಗಳು ಈಗ ಎಲ್ಲ ನಾಗರಿಕರ ಅಸ್ತಿತ್ವವದ ಕುರುಹಾಗಿವೆ. ಮತದಾರರ ಗುರುತಿನ ಚೀಟಿಗಳನ್ನು ೧೯೯೩ರಲ್ಲಿ ಟಿ ಎನ್ ಶೇಷನ್ ರವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಜಾರಿಗೆ ತರಲಾಯಿತು. ೨೦೦೯ರ ಸಾವರ್ತ್ರಿಕ ಚುನಾವಣೆಯಲ್ಲಿ ೫೮೨ ದಶಲಕ್ಶ ಮತದಾರರಿಗೆ ಗುರುತಿನ ಕಾರ್ಡುಗಳನ್ನು ವಿತರಿಸಲಾಗಿತ್ತು. ೧೪ನೇ ಲೋಕಸಭೆಗೆ ಚುನಾವಣೆ ೨೦೦೪ರ ಎಪ್ರಿಲ್-ಮೇನಲ್ಲಿ ನೆಡೆಸಲಾಯಿತು. ಅದನ್ನು ಜಗತ್ತಿನ ಡೊಡ್ದ ಚುನಾವಣಾ ನಿರ್ವಹಣೆ ಎಂದು ವರ್ಣಿಸಲಾಯಿತು. ಆಗ ೮,೩೫,೦೦೦ ಮತಗಟ್ಟೆಗಳಲ್ಲಿ ೭೧೪ ದಶಲಕ್ಸ ಮತದಾರರು ೧.೨ ದಶಲಕ್ಸ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಚುನಾವಣಾ ಕಾರ್ಯನಿರ್ವಹಣೆಗೆ ೧೧ ದಶಲಕ್ಷ ಚುನವಧಿಕಾರಿಗಳನ್ನು ನೇಮಿಸಲಾಗಿತ್ತು. ಜಗತ್ತಿನಲಿಯೇ ದೊಡ್ದ ಚುನಾವಣಾ ನಿರ್ವಹಣೆ ಎಂದು ಪರಿಗಣಿಸಲ್ಪಟ್ಟೈದ್ದರೂ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಕೆಲ ವರ್ಗಗಳು ಮುಖ್ಯವಾಗಿ ಯುವಜನತೆ ಪಾಲ್ಗೊಳ್ಲದೇ ಇರುವುದರ ಬಗ್ಗೆ ಆಯೋಗಕ್ಕೆ ಕಳವಳವಿದೆ . ೧೮ ವರ್ಷ ಮೇಲ್ಪಟ್ಟ ಯುವಕರ ಹೆಸರುಗಳು ಮತದಾರರ ಪಟ್ಟಿಗಳಿಂದ ಕಾಣೆಯಾಗುತ್ತಿರುವುದಕ್ಕೆ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಯುವ ಜನತೆಯ ಪಾಲ್ಗೊಳ್ಲುವಿಕೆಯನ್ನು ಹೆಚ್ಚಿಸಲು ಆಯೋಗ ಪ್ರತಿ ವರ್ಷದ ಜನವರಿ ೧ ರಂದು ೧೮ ವರ್ಷ ಮೇಲ್ಪಟ್ಟ ಅರ್ಹ ಮತದಾರರನ್ನು ಗುರುತಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯ ದೇಶಾದ್ಯಂತ ೮.೫ ಲಕ್ಸ ಮತಗಟ್ಟೆಗಳಲ್ಲಿ ನಡೆಯುತ್ತದೆ. ಹೊಸದಾಗಿ ನೋಂದಾಯಿಸಲ್ಪಡುವ ಈ ಮತದಾರರಿಗೆ ಭಾರತದ ನಾಗರಿಕರಾದ ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದು ನಮ್ಮ ದೇಶದ ಪ್ರಜಾಸತ್ತಾತ್ಮಕ ಮತ್ತು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ಪರಂಪರೆಯನ್ನು ಎತ್ತಿ ಹಿಡಿಯುತೇವೆ ಹಾಗೂ ಪ್ರತಿ ಸಲದ ಚುನಾವಣೆಯಲ್ಲಿ ನಿರ್ಭಯದಿಂದ, ಯಾರ ಪ್ರಭಾವಕ್ಕೆ ‌ ಒಳಗಾಗದೆ ಮುಕ್ತ್ತವಾಗಿ ಮತದಾನ ಮಾಡುತ್ತೇವೆ, ಮತದಾನ ಮಡುವಾಗ ಧರ್ಮ, ಜಾತಿ, ಸಮುದಾಯ ಭಾಷೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರತಿಗ್ನೆ ಮಾಡುತ್ತೇವೆ ಎಂಬ ಪ್ರತಿಗ್ನಾ ವಿಧಿಯನ್ನು ಭೋಧಿಸಲಾಗುತ್ತದೆ. ಹೊಸದ್ದಾಗಿ ನೋಂದಾಯಿಸಲ್ಪಡುವ ಮತದಾರರಿಗೆ ("proud to be a voter ready to vote") ಎಂಬ ಘೋಷ ವಾಕ್ಯವಿರುವ ಲಾಂಛನವನ್ನು ನೀಡಲಾಗುತ್ತದೆ. ೧೮ ವರ್ಷ ವಯಸ್ಸಿನ ಪ್ರತಿಯೋಬ್ಬ ಯುವಕ/ಯುವತಿಯರನ್ನು ಮತದಾರರನ್ನಾಗಿ ನೋಂದಾಯಿಸಲು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಆಯೋಗ ನಿರ್ದೆಶನ ನೀಡಿದೇ. ಮತದಾನ ಮಾಡುವ ಮೂಲಕ ಬದಲಾವಣೆಯ ಹರಿಕಾರರಾಗುವ ಯುವಜನರನ್ನು ಪ್ರೋತ್ಸಾಹಿಸಲು ಆಯೋಗವು ಸಮಗ್ರ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಲ್ಗೊಳ್ಳುವಿಕೆ ಆಂದೋಲನ (SVEEP-comprehensive syatamatic voters education and electoral participation campaign)ವನ್ನು ನಡೆಸುತ್ತದೆ.

೨. ವಿದ್ಯುನ್ಮಾನ ಮತಯಂತ್ರ ಬಳಕೆ : ಜೀವನದ ಪ್ರತಿಯೊಂದು ರಂಗದಲ್ಲಿ ತಂತ್ರಜ್ನಾನ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ. ಕದುಮೆ ಅವಧಿಯಲ್ಲಿ ಮುಕ್ತ, ನಿಷ್ಪಕ್ಷಪಾತ ಮತ್ತು ಶಾಂತಿಯುತ ಚುನಾವನಣೆ ನಡೆಸಲು ತಂತ್ರಜ್ನಾನ ಹಲವಾರು ಉಪಕರಣಗಳನ್ನು ಒದಗಿಸಿದೆ. ಚುನಾವಣೆಗಳಲ್ಲಿ ವೆದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸುವುದಕ್ಕೆ ಅನೂಕೂಲವಾಗುವಂತೆ ೧೯೫೧ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ .



saMvidhaanadiMda javabdaariyannu