ಸದಸ್ಯ:Laxmikantambig/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ.ಸೀ ಜಿ.ವೆಂಕಟಸುಬ್ಬಯ್ಯ[ಬದಲಾಯಿಸಿ]

ವಿ.ಸೀ. ಯವರ ಸಾಹಿತ್ಯಕೃಷಿ ಬಹುಮುಖವಾದದ್ದು. ಅವರು ಮುಖ್ಯವಾಗಿ ಕವಿ, ವಿಮರ್ಶಕ. ಮಿಕ್ಕ ಎಲ್ಲ ಬಗೆಯ ಲೇಖನಗಳೂ, ಗ್ರಂಥಗಳೂ ಅವರಿಂದ ರಚಿತವಾಗಿದ್ದರೂ ನಮಗೆ ಮುಖ್ಯವಾಗಿ ಎದ್ದುಕಾಣುವುದು ಅವರ ಈ ಎರಡು ಕಾರ್ಯಗಳು. ಕವಿಯಾಗಿ ಮಾಡಿರುವ ಕೃಷಿ, ವಿಮರ್ಶಕರಾಗಿ ನೀಡಿರುವ ದೃಷ್ಟಿ.

ಕೃತಿಗಳು[ಬದಲಾಯಿಸಿ]

ಅವರ ಮೊದಲ ಗ್ರಂಥವಾದ `ಪಂಪಾಯಾತ್ರೆ'ಯಹಾಳು ಹಂಪೆ ಬಾಳು ಹಂಪೆಯಾಗಿದ್ದ ಕಾಲದ ವೈಭವದ ಚಿತ್ರ ಕಣ್ಮುಂದೆ ಸುಳಿದು ನಮ್ಮನ್ನು ಎಚ್ಚರಿಸುತ್ತದೆ. ಒಂದು ರಸಿಕ ಮನೋಧರ್ಮ ಇಂಥ ಪ್ರವಾಸದಲ್ಲಿ ಆಲೋಚಿಸಬಹುದಾದ ಅನೇಕ ವಿಷಯಗಳು ಇಲ್ಲಿ ಸುಳಿದು ಬರವಣಿಗೆಗೆ ಕಾವು ಬರುತ್ತದೆ; ಓದುಗನು ಬೇರೊಂದು ಪ್ರಪಂಚಕ್ಕೆ ಸಾಗಿಬಂದವವನಾಗುತ್ತಾನೆ.

  • ಹಾಡುಗಳಿಗಾಗಿಯೇ ಹುಟ್ಟಿದ `ಗೀತಗಳು' ವಿ.ಸೀ. ಯವರ ಪ್ರಥಮ ಕವನ ಸಂಕಲನ. ಅದರ ಮುನ್ನುಡಿಯನ್ನು ಬಿ.ಎಂ. ಶ್ರೀಕಂಠಯ್ಯನವರು ಬರೆದಿದ್ದಾರೆ. ಅವರ ಮಾತುಗಳು ಇವು : “ಈ ಗೀತಗಳಲ್ಲಿ ಸಂಗೀತ ಕ್ರಮದಲ್ಲಿ ಹಾಡತಕ್ಕವು ಕೆಲವು; ಛಂದಸ್ಸಿಗನುಸಾರವಾಗಿ ಹೇಳತಕ್ಕವು ಕೆಲವು. ಹೊಸ ಛಂದಸ್ಸುಗಳ ಅವಶ್ಯಕತೆಯನ್ನು ತಿಳಿದ ವಿಮರ್ಶಕರು ಇಲ್ಲಿ ಕೆಲವು ಸುಂದರ ರೂಪಗಳನ್ನೂ ಕಾಣಬಹುದಾಗಿದೆ. ಸ್ವತಂತ್ರ ಪ್ರವೃತ್ತಿಯ ಕವಿ ಧೈರ್ಯವಾಗಿ ನಡೆಯಬಹುದಾದ ಮಾತುಗಳನ್ನು 1931ರಲ್ಲಿಯೇ ಪ್ರಥಮ ಕವನಸಂಕಲನದಲ್ಲಿಯೇ ಹೃದಯಂಗಮವಾಗಿ ವಿವರಿಸಿ ನುಡಿದು ಅವರು ಯುವಕರ ಮನಸ್ಸನ್ನು ಗೆದ್ದರು. *`ಪ್ರಶ್ನೆ', `ಚಿತ್ತ', `ಯಾನ', `ಸಮಭೂಮಿ',`ಮಧುಮಾಸ',`ವೀಣಗಾನ',`ಸ್ನೇಹ',`ಕೋಗಿಲೆ' ಮುಂತಾದ ಬಲು ಸೊಗಸಾದ ಕವನಗಳು ಈಗಲೂ ಗಾನಮಾಧುರ್ಯವನ್ನು ಬಿಂಬಿಸುತ್ತಿವೆ; ಭಾವವಿಸ್ತಾರವನ್ನು ಚಿತ್ರಿಸುತ್ತಿವೆ. ಸ್ನೇಹದ ಪೂರ್ಣ ಪ್ರಭಾವವನ್ನು ಚೆನ್ನಾಗಿ ಅರಿತಿದ್ದ, ಬಹು ಗಾಢವಾದ ಸ್ನೇಹವನ್ನು ಪಡೆದಿದ್ದ ಅವರ `ಸ್ವರ್ಗದೊಳಗೀಸ್ನೇಹ ದೊರೆವುದೇನೂ' ಎಂಬ ಸಾಲು ಇಂದಿಗೂ ಅನುರಣವಾಗುತ್ತಿದೆ. ಪ್ರಸಿದ್ಧ ವೈಣಿಕ ವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪನವವರ ವೀಣಾವಾದವನ್ನು ಕೇಳಿ ಬರೆದ `ವೀಣಾಗಾನ' ಬಹು ಅಪರೂಪದ ಕವನ. ಹೀಗೆ ಪ್ರಾರಂಭವಾದ ಕವನರಚನೆ ಕನ್ನಡದ ಕೆಲವು ಅತ್ಯಂತ ಶ್ರೇಷ್ಟವಾದ ಕವನಗಳನ್ನು ಸೃಷ್ಟಿಸಿವೆ.
  • `ಮೃಗಶಾಲೆಯ ಸಿಂಹಗಳು', `ಅಭೀ:', `ಮನೆ ತುಂಬಿಸುವುದು', `ಗಡಿದಾಟು', `ಶಿಲ್ಪಿ', `ಕ್ರೋಧಕೇತನ', `ಕಸ್ಮೈದೇವಾಲಯ', `ಬಾಳಹೆದ್ದಾರಿ', `ಪುರಂದರದಾಸರು'-ಮುಂತಾದ ಅತ್ಯುತ್ತಮ ಕವನಗಳು ವಿ.ಸೀ. ಯವರ ಇತರ ಕವನಸಂಕಲನಗಳಿಂದಲೂ ದೊರೆಯುವ ಮಣಿಗಳು. `ಅದಲು-ಬದಲು' ಕವನ ಸಂಕಲನದ ಮುನ್ನುಡಿಯಲ್ಲಿ ಕಾವ್ಯಮೀಮಾಸೆಯ ತಲಸ್ಪರ್ಶಿಯಾದ ವಿಶ್ಲೇಷಣೆಯಿದೆ. ಸಂಸ್ಕಾರದ ಪರಂಪರೆಯನ್ನು ಗುರುತಿಸಲಾದ ಜನ ಎನೇನೋ ಹೇಳಿ ಹಾರಾಡಬಹುದು. ಕಾವ್ಯದ ಹೃದಯದ ಅನ್ವೇಷಣೆ, ಸೌಂದರ್ಯದ ಸಮೀಕ್ಷೆ ಅಷ್ಟೊಂದು ಸುಲಭವಾಗಿ ಕೈಗತವಾಗುವ ವಸ್ತುವಲ್ಲ ಎಂದಿದ್ದಾರೆ. ಬಹು ನವಿರಾದ ಈ ಬರಹ ಅವರ ಮಾಗಿದ ಪರಿಣತಿಯ ಫಲ.

ವಿಮರ್ಶಾ ಕೃತಿಗಳು[ಬದಲಾಯಿಸಿ]

ವಿಮರ್ಶೆಯ ಕ್ಷೇತ್ರದಲ್ಲಿ`ಇದಮಿತ್ಥಂ', ಎಂದು ಹೇಳುವುದು ಎಷ್ಟು ದುಷ್ಕರವಾದದೆಂಬುದನ್ನು ಅವರು ಅನೇಕ ಬಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಪೂರ್ಣ ತಿಳಿವಳಿಕೆಯಿಂದ ಬಂದ ವಿಮರ್ಶೆಗಳಲ್ಲಿ ಕೂಡ, ಮೃದು-ಉಗ್ರ ಎಂಬ ಮಾರ್ಗಗಳಿರಬಹುದು. ``ಕೃತಿಯ ಸ್ವರೂಪಕ್ಕೆ ಹೊಂದುವಂತೆ ಭಾವಿಸದೆಸೌಹಾರ್ದದಿಂದ ಅನುಭವಿಸುತ್ತಿರುವವರಿಗೆ ಯಾವುದೆಲ್ಲ ಹೊಳೆದು ಪ್ರಕಟವಾಗುವುದೋ, ಯುಕ್ತವೆನಿಸುವುದೋ ಅದೆಲ್ಲ ಅರ್ಥಮಂಡಲ-ಅದೆಲ್ಲ ಬೆಲೆಯ ಕಲ್ಪನೆಯೇ.ಹೊದದ್ದು ಅನುಚಿತ, ವಿರಸ, ಅಸಂಗತ, ಸಹನಶೀಲವಾದ ವಿಮರ್ಶೆಗೆ ಅವರ ಮನ್ನಣೆ. ``ವಿಮರ್ಶೆ ಒದು ಟಾರ್ಚಲೈಟಾಗಬೇಕು. ಸಿಕ್ಕಿದ್ದನ್ನೆಲ್ಲ ಮಣ್ಣುಮುಕ್ಕಿಸುವ ಜಡ್ಡಿಯ ತೀರ್ಪಾಗಬಾರದು ಎಂಬುದು ಆಗಾಗ ಹೇಳುತಿದ್ದ ಮಾತು. ಅಂತರಂಗದ ವಿಶ್ವಾಸ, ಮಾನವೀಯವಾದ ಸೌಹಾರ್ದ,ಸದಭಿರುಚಿಯ ಪರಿಣಾಮ ಹೀಗಿರುವ ವಿಮರ್ಶೆ ಉಪಯುಕ್ತವಾಗಬಲ್ಲುದು ಕವಿಗೆ, ಓದುಗನಿಗೆ. ಮಿಕ್ಕಿದ್ದೆಲ್ಲ ಸ್ವಂತ ಕಹಳೆಯ ಊದು. ಅದರಿಂದ ಯಾವ ಪ್ರಯೋಜನವಿಲ್ಲ.

  • ಇಂಥ ನಿಶಿತವಾದ ಮತಿಯಿಂದಲೆ ಅವರು ರಚಿಸಿರುವ ಎರಡು ಮೂರು ಮುಖ್ಯ ವಿಮರ್ಶಾ ಗ್ರಂಥಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುತ್ತವೆ. `ಕರ್ನಾಟಕ ಕಾದಂಬರಿ', `ಅಭಿಜ್ಞಾನ ಶಾಕುಂತಲ ನಾಟಕ', `ಅಶ್ವತ್ಥಾಮನ್'- ಈ ಮೂರು ಆಯಾ ವಿಷಯವನ್ನೇ ಕುರಿತ ವಿಮರ್ಶೆ, ಅವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ರಚಿಸಲಾಗಿದ್ದ `ಆ ಗ್ರಹ' ನಾಟಕ ಇವೆರಡು ಒಂದು ರಸಜೋಡಿ. ಇವುಗಳ ಸ್ವಾರಸ್ಯವನ್ನು ಓದಿ ನೋಡದೆ ಕೇಳಿ ತಿಳಿಯುವುದಸಾಧ್ಯ.

ನಾಟಕಗಾರರಾಗಿ ವಿ.ಸೀ[ಬದಲಾಯಿಸಿ]

ವಿ.ಸೀ. ನಾಲ್ಕು ಸ್ವಂತ ನಾಟಕಗಳನ್ನೂ ಎರಡು ಇಂಗ್ಲಿಷ್ ನಾಟಕಗಳ ಅನುವಾದಗಳನ್ನೂ ರಚಿಸಿದ್ದಾರೆ. `ಸೊಹ್ರಾಬ್-ರುಸ್ತುಂ' ಮ್ಯಾಥ್ಯೂ ಆರ್ನಾಲ್ಡನ ಕವಿತೆಯ ನಾಟಕ ರೂಪ. `ಆಗ್ರಹ' ಭಾರತದ ಸೌಪ್ತಿಕಪರ್ವದ ಕಥೆಯ ಅಶ್ವತ್ಥಾಮನನ್ನು ಚಿತ್ರಿಸುವ ರೂಪಕ. `ಚ್ಯವನ' ಆಧುನಿಕ ಜೀವನದ ಸಮಸ್ಯೆಯನ್ನು ಅಧಿಕರಿಸಿ ರಚಿತವಾಗಿರುವ ನಾಟಕ. `ಶ್ರೀಶೈಲ ಶಿಖರ' ಅವರ ಮಿತ್ರರು ಹೇಳಿದ ಕಥೆಯ ರೂಪಾಂತರ. ಒಂದು ಹೆಣ್ಣಿನ ಬಾಳು, ಭಾವನೆಗಳ ಅಂತರವನ್ನು ಚಿತ್ರಸುವ ಈ ನಾಟಕ ಬಹು ಬೆಲೆ ಬಾಳುವ ತತ್ವವನ್ನು ಸಾರುತ್ತದೆ. ಮಾನವಿಯತೆಗೆ ಬೆಲೆ ಕೊಡುವ ಈ ನಾಟಕವೇ ಅವರ ನಾಟಕಗಳಲ್ಲಿ ಅತ್ಯುತ್ತಮವಾದುದು. ಮಿಕ್ಕೆರಡು ಅನುವಾದಗಳಲ್ಲಿ ಅನುವಾದಕನಿಗೆ ಎದುರಾಗುವ ಅನೇಕ ಸಮಸ್ಯೆಗಳನ್ನು ವಿ ಸೀ. ಯವರೂ ಎದುರಿಸಿದ್ದಾರೆ. ಎಷ್ಟು ಸಾರ್ಥಕವಾಗಿದೆ ಈ ಅನುವಾದಗಳು ಎಂಬುದನ್ನು ನಾಟಕ ಪ್ರದರ್ಶನದಲ್ಲಿ ಅಳೆಯಬೇಕು : ಬೆಲೆ ಕಟ್ಟಬೇಕು. ಹಾಗೆಯೇ ಅಭಿಪ್ರಾಯ ಸೂಚುಸುವುದು ಅಷ್ಟು ಉಚಿತವಾಗಿರಲಾರದು.

  • ವಿ ಸೀ ಸಂಪಾದಿಸಿದಷ್ಟು ಮಿತ್ರವರ್ಗ ಬೇರೆಯವರಿಗೆ ಇರುವುದು ಸಾಧ್ಯವಿಲ್ಲ. ಅವರ ವ್ಯಕ್ತಿತ್ವದ ಸತ್ಯವೇ ಮೈತ್ರಿಯಿಂದ ಕೂಡಿದ್ದು. ಅವರ ಹಿರಿಯರನ್ನು, ಮಿತ್ರರನ್ನು ಕುರಿತ ಗ್ರಂಥಗಳು: 'ಮಹನೀಯರು' 'ಶಿವರಾಮ ಕಾರಂತರು', 'ಕಾಲೇಜಿನ ದಿನಗಳು'- ಇವುಗಳಲ್ಲಿ ಇರುವ ಚಿತ್ರಪರಂಪರೆ ನೆನಪಿಗೆ ಸದ ಹಸಿರನ್ನು ಕೊಡುತ್ತದೆ.

ಅವರ 'ಹಣಪ್ರಪಂಚ' ಕನ್ನಡ ಬಾಷೆಯಲ್ಲಿ ರಚಿತವಾದ ಅತ್ಯಮೂಲ್ಯವಾದ ಶಾಸ್ತ್ರ ಗ್ರಂಥ.

  • 'ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ' ಎಂಬ ಗ್ರಂಥದಲ್ಲಿ ಮೂಡಿಬಂದಿರುವ ವಿಚಾರದ ವಿಸ್ತಾರ ಮತ್ತು ಅಳ ಅಪಾರವಾದ ಮತ್ತು ಖಚಿತವಾದ ವಿದ್ವತ್ತಿನಿಂದ ಮಾತ್ರ ಮೂಡುಸುವುದು. ಒಂದು ವಿಷಯವನ್ನು ಎಷ್ಟು ದೃಷ್ಠಿಯಿಂದ ನೋಡಬಹುದು ಎಂಬುದು ಇಲ್ಲಿ ಸ್ಪಷ್ಟವಾಗಿ ರೂಪಗೊಳುತ್ತದೆ. ಅಲ್ಲಲ್ಲಿ ಬರುವ “ ವಿಮರ್ಶಕರೂ ಸರ್ವಜ್ಞರಂತೆ ನುಡಿಬೇಕಿಲ್ಲ. ಅವರಿಗೆ ಎಲ್ಲದರ, ಎಲ್ಲಾ ಬಗೆಯ ಪರಿಚಿತೆಯು ಇದೆ ಎಂಬುದನ್ನು ಯಾರು ಪ್ರಾಮಾಣ ಪ್ರಶಸ್ತಿ ಕೊಟ್ಟಿದ್ದಾರೆ? 'ಎಂಬ ಎಚ್ಚರಿಕೆಯ ಮಾತುಗಲು ಎಷ್ಟು ಸಮಯೋಚಿತವಾಗಿವೆ ಇಂದಿಗೆ!
  • 'ಸತ್ಯ ಮತ್ತು ಮೌಲ್ಯ' ದರ್ಶನಶಾಸ್ತ್ರ ಪರವಾದ ಗ್ರಂಥ. ಇದು ಬಹು ವ್ಯಾಪಕವಾದ ಕ್ಷೇತ್ರಗಳನ್ನು ಅಳವಡಿಸಿಕೊಂಡು ರಚಿತವಾಗಿರುವ ಗ್ತಂಥ. ಮಾನವನ ಮನಸ್ಸು ಎಷ್ಟು ಅಳವಾಗಿ ವಿಚಾರ ಮಾಡಬಹುದು ಎನ್ನುವುದನ್ನು ತೋರಿಸುವ ಗ್ರಂಥ. ಈ ಎರಡೂ ಗ್ರಂಥಗಳೂ ಉಪನ್ಯಾಸಗಳ ವಿಸ್ತøತರೂಪಗಳು. ಇವೊಂದೊಂದನ್ನು ಕುರಿತು ನಾಲ್ಕಾರು ಸಂಘಟಗಳು ರಚಿಸುವ ಸಾಮಗ್ರಿ ವಿ.ಸೀ. ಯವರಲ್ಲಿ ಸಂಗ್ರಹಿತವಾಗಿತ್ತು.

ಈ ಲೇಖನದಲ್ಲಿ ವಿ.ಸೀ. ಯವರ ಕೃತಿಗಳ ಪರಿಚಯಕ್ಕೆ ಪ್ರಯತ್ನ ಮಾಡಿಲ್ಲ. ದಿಗ್ಪ್ರದರ್ಶನಕ್ಕಾಗಿ ಕೆಲವಂಶಗಳನ್ನು ಗುರುತಿಸಿ ತೋರಿಸಲಾಗಿದೆ. ಒಬ್ಬ ವ್ಯಕ್ತಿ ಅವರ ಸಾಹಿತ್ಯ ಸೇವೆಯನ್ನು ಕುರಿತು ಪಿ.ಎಚ್.ಡಿ ಪದವಿಗೆ ಮಹಾಪ್ರಬಂಧವನ್ನು ಬರೆಯುವಷ್ಟು ವಿಷಯವ್ಯಾಪ್ತಿ ಅವರ ಗ್ರಂಥಗಳಲ್ಲಿವೆ ಎಂದು ಹೇಳಿದರೆ ಸಾಕು. ಯುವಕರಾಗಿ ಅವರು ಕೈಗೊಂಡ ವ್ರತವನ್ನು ಈ ಸಾಲುಗಳು ತಿಳಿಸುತ್ತಿವೆ.

ಹೋರುವೆವು ಮಲ್ಲರೊಲು ಕಾಲದೊಡನೆ

ಕಾಲವೆಮ್ಮಯದಾಗಿ ಆಗುವತನಕ ;

ಗರಿಯಿಕ್ಕದೆಳೆವಕ್ಕಿ ಎಮ್ಮಾಸೆ ಇನ್ನೂ

ತುಂಬುಗರಿವಕ್ಕಿಯದು ಆಗಮನಕ,-

ಆಗಿ ಭೋರಿಡುವ ಬಿರುಗಾಳಿ ಸಮಕೂ

ಗಾಳಿ ಕಡೆ ರೆಕ್ಕೆಗಳ ಹರಡುವತನಕ.

ಈ ಕಾರ್ಯದಲ್ಲಿ ಅವರ ವಿಶ್ವಾಸವೆಷ್ಟಿತ್ತೆಂಬುದನ್ನು ಅವರದೆ ಕವನವೊಂದು ಬಲು ಸುಂದರವಾ ಚಿತ್ರಿಸುತ್ತದೆ :

ವಿಶ್ವಾಸ[ಬದಲಾಯಿಸಿ]

ಮಾನವನೆತ್ತರ ಆಗಸದೇರಿಗೆ

ಏರುವವರೆಗೂ ಬೆಳೆದವು;

ಮಾನವ ಹೃದಯಕೆ ವಿಸ್ವಾವಿಶಾಲತೆ

ಹಾಯುವವರೆಗೂ ಹಾದೇವು.

ತತ್ವದ ಸಿದ್ಧಿಯ ಕಾಲಕೆ ಕಾದರೆ

ಯುಗ ಯಗಗಳು ಸಾಕಾದವೇ ?

ಸಖ್ಯಕೆ ಸಹನೆಗೆ ಕರುಣೆಗೆ ಒಲವಿಗೆ

ಗಡಿನುವ ಮನಗಳ ಸುಡುವ ನಿರಾಸೆಯ

ವೇಗದ ಕಟ್ಟಲೆ ತಡಿದೀತೆ?

ಮೃದು ಸೌಹಾರ್ದವು ನೋವಿಗೆ ಕರಗದೆ

ಸಾಹ್ಯಕ್ಕೆ ನುಗ್ಗದೆ ನಿಂತೀತೆ ?

ಶತ ಶತಮಾನವೂ ತಾವೊಪ್ಪುವ ತೆರ

ನವ ವಿಶ್ವಾಸವು ತೊಟ್ಟಾವು ;

ಇಹದಲಿ ಒಪ್ಪಲು ಆಗದ ಪರವನು

ಬಯಕೆಯ ಕರೆವುದೆ ಕೈಚಾಚಿ ?

ಬಾಳನು ಶೋಧಿಸಿ ಶುಚಿಯನು ಬೆಳೆದರೆ

ಇಹವೇ ಅರಳದೆ ಪರವಾಗಿ ?