ಸದಸ್ಯ:Koustubhahsimha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂದರಗಿರಿ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ತುಮಕೂರು ಜಿಲ್ಲೆಯಲ್ಲಿ ಮಂದರಗಿರಿ ಅಥವ ಬಸದಿ ಬೆಟ್ಟ ಎ೦ಬ ದಿಗಂಬರ ಜೈನರ ಧಾರ್ಮಿಕ ಸ್ಥಳವಿದೆ. ಮಂದರಗಿರಿಯು ತುಮಕೂರು ನಗರದಿ೦ದ ೧೦.೫ ಕಿಲೋ ಮೀಟರ್ ದೂರದಲ್ಲಿದೆ.ಬೆಟ್ಟದ ಮೇಲಿನ ಶ್ರೀ ಚಂದ್ರಪ್ರಭು ತೀರ್ಥಂಕರ ದೆವಸ್ಥಾನವು ೧೨ನೇ ಶತಮಾನದದಲ್ಲಿ ಸ್ಥಾಪಿತವಾಗಿದೆ. ಬೆಟ್ಟದ ಮೇಲಿನ ಪಾರ್ಶ್ವನಾಥ ತೀರ್ಥಂಕರರ ವಿಗ್ರಹವನ್ನು ೧೬ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಬೆಟ್ಟದ ಬುಡದಲ್ಲಿರುವ ಪಿಂಚಿ ಆಕಾರದ ಗುರುಮಂದಿರವು ೮೧ಅಡಿ ಎತ್ತರವನ್ನು ಹೊಂದಿದ್ದು ಗುರು ದಿಗಂಬರ ಜೈನ ಸನ್ಯಾಸಿ ಆಚಾರ್ಯ 108 ಶ್ರೀ ಶಾಂತಿಸಾಗರ್ ಮಹಾರಾಜ್ರವರಿಗೆ ಅರ್ಪಿತವಾಗಿದೆ.

ಭೌಗೂಳಿಕ ವಿವರಣೆ[ಬದಲಾಯಿಸಿ]

  • ಈ ಗಿರಿಯು ೪೩೫ ಮೆಟ್ಟಿಲುಗಳನ್ನು ಹೊಂದಿದೆ.
  • ಬೆಟ್ಟದ ಬುಡದಲ್ಲಿರುವ ಗುರುಮಂದಿರವು ಪಿಂಚಿ ಆಕಾರವನ್ನು ಹೊಂದಿದೆ.[೧]
  • ಸುಮಾರು ೨೦ ಅಡಿ ಎತ್ತರದ ಚಂದ್ರನಾಥ ತೀರ್ಥಂಕರರ ಪ್ರತಿಮೆಯನ್ನು ೨೦೧೧ರಲ್ಲಿ ಬೆಟ್ಟದ ಬುಡದಲ್ಲಿ ಸ್ಥಾಪಿಸಲಾಯಿತು.[೨]

ಉಲ್ಲೇಖಗಳು[ಬದಲಾಯಿಸಿ]

  1. https://www.sakrecubes.com/2015/06/mandaragiri-hills-basadi-betta-tumkur.html
  2. https://www.flickr.com/photos/vinayakh/36149260161