ಸದಸ್ಯ:Kiran.C

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕ್ ಚನ್ನರಾಯಪಟ್ಟಣ ಗ್ರಾಮದ ನಿವಾಸಿಗಳಾದ ಹೀರೇಗೌಡರ ಚಂದ್ರಶೇಖರ್ ಮತ್ತು ಶೋಭಾ ದಂಪತಿಗಳಿಗೆ ಮಗನಾಗಿ ಹುಟ್ಟಿದ್ದೇನೆ, ನನ್ನ ವಿದ್ಯಾಭ್ಯಾಸವನ್ನು ನನ್ನ ಹುಟ್ಟುರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಮದುವರೆಸಿ, ಕಾಲೇಜು ಶಿಕ್ಷಣಕ್ಕಾಗಿ ನನ್ನ ಹುಟ್ಟುರಿನಿಂದ 7 ಕಿಲೋ ಮೀಟರ್ ದೂರದಲ್ಲಿರುವ ವಿಜಯಪುರ ಪಟ್ಟಣದಲ್ಲಿರುವ ವಿಜಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡು 2 ವರ್ಷ ಮುಗಿಸಿ, ತದ ನಂತರ ವಿಜಯಪುರ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿರುವ ದೇವನಹಳ್ಳಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ವರ್ಷ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡು ವಿದ್ಯಾಭ್ಯಾಸ ಮುಮದುವರೆಸಿದೆ ಆ ನಂತರ DDU-GKY ಎಂಬ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮದ ಅಡಿಯಲ್ಲಿ 3 ತಿಂಗಳು ತರಭೇತಿಯನ್ನು ಪಡೆದುಕೊಂಡು ಒಂದು ಖಾಸಗಿ ಕಂಪನಿಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಪ್ರಸ್ತುತ ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ರಾಜ್ಯ ತುರ್ತು ನಿರ್ವಹಣಾ ಕೇಂದ್ರದಲ್ಲಿ ಟೆಲಿಪೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ.