ಸದಸ್ಯ:Honakerappasanshi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗ್ಗಲಗಿ ಮೇಳ[ಬದಲಾಯಿಸಿ]

ಭಾರತ ಬಹು ಸಂಸ್ಕೃತಿಗಳನಾಡು. ಹಲವು ಧರ್ಮಗಳ ಬಿಡು. ಆದರೆ ಇಂದು ಪ್ರಾದೇಶಿಕ, ಬಾಷೆ ಸಂಸ್ಕೃತಿ ಅಳಸಿ ಹೋಗುವ ಮುನ್ಸೂಚನೆಗಳು ವಾಸ್ತವದಲ್ಲಿ ಗೋಚರವಾಗುತ್ತಿವೆ. ಆದರೆ, ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಭಾರತದ ಸಂಸ್ಕೃತಿ ಸಾಹಿತ್ಯವನ್ನು ಬಿಂಬಿಸುವ ಕಾರ್ಯ ಜನಪದಗಳ ಮೂಲಕ ಆಗುತ್ತಿದೆ. ಜಾನಪದ ಹಾಡುಗಳು, ಗಾಯಕರು ಪ್ರಸ್ತುತವಾಗಿ ಇಂದು ಬೆರಳೆಣಿಕೆಯಷ್ಟು ಉಳಿದುಕೊಂಡಿದ್ದಾರೆ. ನಮ್ಮ ಆಚಾರ,ವಿಚಾರಗಳು,ಪರಂಪರೆ, ಸಂಸ್ಕೃತಿಬಿAಬಿಸುವ; ಕರಡಿ ಮಜಲು,ಕೊಡದ ಕುಣಿತ, ಜೊಗತಿಯ ಕುಣಿತ,ಡೊಳ್ಳು ಕುಣಿತ, ದಿಮ್ಮಿ ಮೇಳ, ದಟ್ಟಿಯ ಕುಣಿತ, ಮರವಂತಿಕೆ, ಭಜನೆ, ಭೂತೇರ ಕುಣಿತ, ಹೆಜ್ಜೆ ಮೇಳ, ಹೆಜ್ಜೆಮಜಲು, ರಿವಾಯತ್, ಜಗ್ಗಲಗಿ ಮೇಳದಂತಹ ಜನಪದಗಳು ಇಂದು ಕಣ್ಮರೆಯಾಗುತ್ತಿವೆ. ಉತ್ತರ ಕರ್ನಾಟಕದ ಜಾನಪದಕಲೆಯಲ್ಲಿ ಒಂದಾಗಿರುವ ಜಗ್ಗಲಗಿ ಮೇಳವೂ ಇದಕ್ಕೆ ಹೊರತಲ್ಲ .ಕನ್ನಡಿಗರ ಪ್ರಾದೇಶಿಕ ಸಂಸ್ಕುçತಿಯ ತುರ್ತುಪಸ್ಥಿತಿ ಸಮಯ ಇದು ಎಂದು ಹೇಳುವುದು ಸಮಯೋಚಿತವಾಗಿದೆ.ಅಲಿಖಿತÀ ವಿಧದ ಮೂಲಕ ಹಾಡುಗಾರಿಕೆ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರು, ಸಾಹಿತ್ಯವನ್ನು ತಮ್ಮದೆ ದಾಟಿಯಲ್ಲಿ ಉಳಿಸಿಕೊಂಡು ಬಂದಿರುವ ಹಾಡುಗಳನ್ನೆ ನಾವು ಇಂದು ಜಾನಪದ ಎಂದು ಪರಿಗಣಿಸಿದ್ದೆವೆ. ಆಧುನಿಕ ಸ್ಪರ್ಶ ಸಿಗದ ಜಾನಪದಕಷ್ಟದಲ್ಲಿ ಉಸಿರಾಡುತ್ತಿದೆ. ಇದನ್ನುಅರೆತಿರುವ ಸರ್ಕಾರ ಜಾನಪದ ವಿಶ್ವವಿಧ್ಯಾಲಯತೆರೆದು ಜಾನಪದ ಉಳಿಸಿ,ಬೆಳೆಸುವ ಕಾರ್ಯಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಜನ ಸಾಮಾನ್ಯರು ಇಂದು ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುವ ಮನಸ್ಥಿತಿ ಬದಲಾವಣೆಹೊಂದುವಲ್ಲಿ ವಿಫಲರಾಗಿದ್ದಾರೆ.ಉಡುಗೆ, ತೊಡುಗೆ, ಆಭರಣ, ಅಲಂಕಾರ, ಬಣ್ಣ ಬಾಷೆ ಹೀಗೆ ಸಂಸ್ಕೃತಿ ಕನ್ನಡಿಯಂತಿರುವ ಸಾಮಾಜಿಕ ನೈತಿಕ ಅಂಶಗಳು ಇಂದು ಕಣ್ಮರೆಯಾಗುತ್ತವೆ.ಕಾರಣ ನಮ್ಮಲ್ಲಿ ಅಡವಳಿಕೊಂಡಿರುವ ಪಾಶ್ಚಿಮಾತ್ಯ ಸಂಸ್ಕೃತಿ. ಇಲ್ಲೊAದು ಗ್ರಾಮವಿದೆ.ಸಾಂಸ್ಕುçತಿಕ, ಸಾಹಿತ್ಯಿಕವಾಗಿ ತನ್ನತನ ಯಾವತ್ತು ಬಿಟ್ಟುಕೊಡದಿರುವ ಗ್ರಾಮ. ಇಲ್ಲಿ ಯುವಕರ ತಂಡವೊAದು ನಿರಂತರವಾಗಿ ಶ್ರಮಿಸುತ್ತಿದೆ.ರಾಜ್ಯ, ರಾಜಧಾನಿ,ನವದೆಹಲಿಯಲ್ಲಿ ನಡೆಯು ಗಣರಾಜ್ಯೊತ್ಸವ ನಡೆಯುವ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದಾರೆ. ಜಾನಪದವೆ ಜೀವ, ಜೀವನ ಎಂದು ಬದುಕುತ್ತಿರುವ ಇವರೆಲ್ಲರ ಸಾಮಾಜಿಕ ಕಾರ್ಯಕ್ಕೆ ಹಲಾವರು ವೇದಿಕೆಗಳು ಇವರನ್ನು ಅಭಿನಂದಿಸಿವೆ.

ಜಗ್ಗಲಗಿ ವಾದ್ಯ[ಬದಲಾಯಿಸಿ]

ಜಗ್ಗಲಗಿ ಎನ್ನುವುದು ಒಂದು ಭಿನ್ನವಾದ ನಾದಹೊಮ್ಮಿಸುವ ವಿಶೇಷ ವಾದ್ಯ. ಈ ಪರಿಕರವನ್ನು ಮರಣ ಹೊಂದಿದ ಪ್ರಾಣಿಗಳ ಚರ್ಮದಿಂದ, ಎತ್ತಿನ ಗಾಡಿಯ (ಚಕ್ಕಡಿ) ಗಾಲಿಯ ಕಬ್ಬಿಣ ಹಳಿಯಿಂದ ಈ ವಾದ್ಯ ತಯಾರಿಸಲಾಗುತ್ತದೆ.ನೋಡಲು ಇದು ಬೃಹುತ್ತಾಕಾರ ವಾದವಾಗಿದ್ದು. ಅಂದ ಹೆಚ್ಚಾಗಲು ಗ್ರಾಮೀಣ ಸೊಗಸಿನ ಚಿತ್ರಣಗಳನ್ನು ಇದರ ಮೇಲೆ ಬಿಡಿಸಲಾಗಿರುತ್ತದೆ. ಜಗ್ಗಲಗಿಯ ಮೇಳದ ಇತಿಹಾಸ ಈ ಜಗ್ಗಲಗಿ ಜಾನಪದ ವಾದ್ಯದಇತಿಹಾಸ ಸ್ವಾತಂತ್ರ ಪೂರ್ವದಿಂದಲೂ ಇದೆ. ಇಂದು ಕರ್ನಾಟಕದಲ್ಲಿ ಕೆಲವೊಂದಿಷ್ಟು ಪ್ರದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜಗ್ಗಲಗಿ ವಾದ್ಯವನ್ನು ಜಾನಪದ ಹಾಡುವುದರ ಮೂಲಕ ಆಕರ್ಷಿಣಿಯ ರೀತಿಯಲ್ಲಿ ಉಳಿಸಿಕೊಂಡು ಬಂದಿವೆ. ಜಗ್ಗಲಗಿ ಮೇಳ(ತಂಡ), ಜಾತ್ರೆ, ಮೈಸೂರು ದಸರಾ, ಕನ್ನಡ ಮತ್ತು ಸಂಸ್ಕುçತಿ ಇಲಾಖೆಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಸುವುದರ ಮೂಲಕ ಜಾನಪದ ಸಾಹಿತ್ಯ ಪಸರಿಸುವÀ ಕಾರ್ಯವಾಗುತ್ತಿದೆ. ಧಾರವಾಡ ತಾಲೂಕು, ಕೇಲಗೆರಿ ಗ್ರಾಮದಲ್ಲಿ, ೧೯೫೩ ರಲ್ಲಿ ಜಗ್ಗಲಗಿ ಮೇಳ ಪ್ರಾರಂಭವಾಯಿತು. ತಂಡದ ಸದಸ್ಯರು ಬಸಪ್ಪ ಯಲ್ಲಪ್ಪ ಹಂಚಿನಮನಿ,ಫಕ್ಕಿರಪ್ಪ ಕಲ್ಲಪ್ಪ ಹಂಚಿನಮನಿ,ದೇವರಾಜ ಕರಿಯಪ್ಪ ಬೆವಿನಗಡ,ಕಲ್ಲಪ್ಪ ಯಲ್ಲಪ್ಪ ಹಂಚಿನಮನಿ ಇನ್ನಿತರ ಸದಸ್ಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಕೆಲವೊಂದು ಗ್ರಾಮ, ಕುಟುಂಬಗಳು. ಅಂಥ ಕುಟುಂಬ ಹಂಚಿನಮನಿಯವರ ಕುಟುಂಬವೂ ಒಂದು. ಈ ಮನೆಯ ಸದಸ್ಯರೆ ಹೆಚ್ಚಾಗಿ ಈ ತಂಡದಲ್ಲಿ ಇದ್ದಾರೆ.ಮೈಸೂರು ದಸರಾದಲ್ಲಿ ವರ್ಷವೂ ಈ ತಂಡ ಭಾಗವಹಿಸುತತ್ತದೆ. ಹಂಪಿಯಲ್ಲಿ ಬಿಜಾಪೂರ ತಾಲೂಕಿನ ಸಾಂಭಾದಲ್ಲಿ ಪ್ರತಿ ವರ್ಷ ಇವರು ಕಾರ್ಯಕ್ರಮವನ್ನು ನೀಡುತ್ತಾರೆ. ಆಳ್ವಾಸ್ ಶೀಕ್ಷಣ ಸಂಸ್ಥೆಯಲ್ಲಿ ನಡೆಯುವ ನುಡಿಸಿರಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷವೂ ಈ ತಂಡ ಭಾಗವಹಿಸುತ್ತದೆ. ವಜ್ರಮಹೊತ್ಸವ, ಕರಾವಳಿ ಉತ್ಸವ ಬಳ್ಳಾರಿ ಜಿಲ್ಲೆ, ಕರ್ನಾಟಕ ರಾಜ್ಯದಾದ್ಯಂತ ಇವರ ತಂಡದಿAದ ನೀಡಿದೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ರಲ್ಲಿ ಇವರ ತಂಡ ಬಾಗವಹಿಸಿತ್ತು. ಪ್ರತಿ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ತಂಡ ಭಾಗವಹಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

http://www.aayaama.com/ed8/%2B%2B.php

https://books.google.co.in/books?id=W1mYAwAAQBAJ&pg=PT141&lpg=PT141&dq=%E0%B2%9C%E0%B2%97%E0%B3%8D%E0%B2%97%E0%B2%B2%E0%B2%BF%E0%B2%97%E0%B3%86+%E0%B2%AE%E0%B3%87%E0%B2%B3&source=bl&ots=tF9RNXsbIW&sig=ACfU3U1ARMveD33mZ4kQWUaY7kEC2Jjjmw&hl=kn&sa=X&ved=2ahUKEwi1yN-_85vnAhX14jgGHcM2D5EQ6AEwEXoECAoQAQ