ಸದಸ್ಯ:Diksha ramona soans/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                              ಚಿಕ್ಕಮಗಳೂರು-ಅವಿಶ್ರಾಂತರಿಗೆ ವಿರಾಮ ನೀಡುವಂತಹ ತಾಣ


=== ಚಿಕ್ಕಮಗಳೂರು ಪಟ್ಟಣವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಜನಪ್ರಿಯವಾಗಿದೆ. ಚಿಕ್ಕಮಗಳೂರು ಪಟ್ಟಣವು ರಾಜ್ಯದ ಮಲೆನಾಡು ಪ್ರದೇಶದಲ್ಲಿದ್ದು ಗುಡ್ಡಗಾಡು ಮತ್ತು ಗದ್ದೆಗಳನ್ನು ಹೊಂದಿದೆ. ಚಿಕ್ಕಮಗಳೂರು ಎಂದರೆ ‘ಚಿಕ್ಕ ಮಗಳ ನೆಲ’ ಎಂದರ್ಥ. ಈ ನೆಲವನ್ನು ಇಲ್ಲಿನ ಮುಖ್ಯಸ್ಥನ ಕಿರಿಯ ಪುತ್ರಿಯ ಮದುವೆಯ ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಹೇಳಲಾಗುತ್ತದೆ, ಮತ್ತು ಇಲ್ಲಿ ಹಿರೇಮಗಳೂರು ಎಂಬ ಇನ್ನೋಂದು ಪ್ರದೇಶವಿದ್ದು ಈಗ ಚಿಕ್ಕಮಗಳೂರು ಜಿಲ್ಲೆಯ ಒಂದು ಭಾಗವಾಗಿರುವ ಅದು “ಹಿರೇ ಮಗಳ ನೆಲ” ವಾಗಿದೆ. ಪಟ್ಟಣ ಹಾಗೂ ಅದರ ರಮಣೀಯತೆ ಚಿಕ್ಕಮಗಳೂರು ಪಟ್ಟಣವು ಅತಿ ಪುರಾತನ ರೀತಿಯದ್ದಾದರೂ ಇದನ್ನು ಅತ್ತ್ಯುತ್ತಮ ವಿಶ್ರಾಂತಿ ನೆಲೆ ಎಂದು ವರ್ಣಿಸಬಹುದಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶವು ವಿವಿಧ ಸ್ವರೂಪದ ಭೂಚಿತ್ರಣವನ್ನು ಹೊಂದಿದೆ- ಇಳಿಜಾರಿನ ಸಮತಟ್ಟಾದ ಭೂಮಿಯಿಂದ ಹಿಡಿದು ಮಲೆನಾಡಿನ ಬೆಟ್ಟದ ಪ್ರದೇಶಗಳು ಇಲ್ಲಿವೆ. ಜಿಲ್ಲೆಯಲ್ಲಿನ ಬೃಹತ್ ಸಂಖ್ಯೆಯ ಕಾಫಿ ತೋಟಗಳನ್ನು ನೇರವಾಗಿ ಕರ್ನಾಟಕದ ಕಾಫಿ ಬಂಡವಾಳವೆಂದು ಪರಿಗಣಿಸಲಾಗಿದೆ. ಪ್ರಸಿದ್ಧ ಮಹಾತ್ಮ ಗಾಂಧಿ ಉದ್ಯಾನವನವು ಪಟ್ಟಣದ ಪ್ರಮುಖ ತಾಣವಾಗಿದೆ. ಪ್ರವಾಸಿಗರು ಮುಖ್ಯವಾಗಿ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಮುಖ್ಯವಾಗಿ ದಸರಾ(ನವರಾತ್ರಿ ನಂತರದ) ಅವಧಿಯಲ್ಲಿ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಜರಗುವ ಜಾನಪದ ಪ್ರದರ್ಶನ ಮತ್ತು ಸಾಂಸ್ಕೃತಿಕ ದೃಶ್ಯಗಳು ಪ್ರತಿಯೊಬ್ಬರ ಮನಸ್ಸಿಗೆ ನಾಟುವಂತಹದ್ದಾಗಿರುತ್ತದೆ. ಶಾಪಿಂಗ್ ಪ್ರಿಯರು ಎಂ.ಜಿ. ರಸ್ತೆಯಲ್ಲಿ ಉತ್ತಮವಾಗಿ ಕಾಲ ಕಳೆಯಬಹುದು ಮತ್ತು ಸಾಹಸಿಗಳು ಸುತ್ತಮುತ್ತಲಿನ ಸ್ಥಳಗಳನ್ನು ಪರಿಶೋಧಿಸಬಹುದು. ಕಾಂಕ್ರೀಟ್ ಕಾಡಿನಿಂದ ಬಚವಾಗಲು ಒಳ್ಳೆಯ ತಾಣ ಚಿಕ್ಕಮಗಳೂರು ಎಲ್ಲಾ ಪ್ರವಾಸಿಗರಿಗೆ ಸ್ವರ್ಗವಿದ್ದಂತೆ ಏಕೆಂದರೆ, ತೀರ್ಥಯಾತ್ರಾ ತಾಣಗಳಿಂದ ಹಿಡಿದು ಕಾಫಿ ಚಿತ್ರಗಳು ನೆಡುತೋಗಳವರೆಗೆ ರಜೆ ಮತ್ತು ವನ್ಯಜೀವಿ ಪ್ರವಾಸೋದ್ಯಮಗಳಿಂದ ಹಿಡಿದು ಸಾಹಸ ಕ್ರೀಡಾ ಸ್ಥಳಗಳವರೆಗೆ ಎಲ್ಲ ಬಗೆಯ ಪ್ರವಾಸೀ ತಾಣಗಳೂ ಇಲ್ಲಿಗೆ ಹತ್ತಿರದಲ್ಲಿವೆ. ಬೆಟ್ಟ ಪ್ರದೇಶಗಳು , ದೇವಸ್ಧಾನ –ಪಟ್ಟಣಗಳು ಜಲಪಾತಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು- ಚಿಕ್ಕಮಗಳೂರು ಎಲ್ಲವನ್ನೂ ಹೊಂದಿದೆ. ಕೆಮ್ಮಣ್ಣುಗುಂಡಿ, ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ನೆಚ್ಚಿನ ರಜಾ ತಾಣವಾಗಿತ್ತು. ಇದು ಒಂದು ಮೋಡಿಮಾಡುವಂತಹ ಗಿರಿಧಾಮ. ಗುಲಾಬಿ ವನ ಮತ್ತು ಸುಂದರ ಜಲಪಾತಗಳಂತಹ ಅನೇಕ ಆಕರ್ಷಣೆಗಳನ್ನು ಒಳಗೊಂಡಿದ್ದು ಪಟ್ಟಣದಿಂದ ಅನತಿ ದೂರದಲ್ಲಿದೆ. ಸೊಂಪಾದ ಹುಲ್ಲುಗಾವಲುಗಳು ಮತ್ತು ದಟ್ಟ ಕಾಡುಗಳನ್ನು ಹೊಂದಿರುವ ಕುದುರೆಮುಖ ಚಿಕ್ಕಮಗಳೂರು ಪಟ್ಟಣದ ಬಳಿ ಇರುವ ಮತ್ತೊಂದು ಸಂದರ ಪರ್ವತ ಶ್ರೇಣಿ. ಒಂದು ನಿರ್ದಿಷ್ಟ ಕೋನದಲ್ಲಿ ನೋಡಿದಾಗ ಇಲ್ಲಿನ ಒಂದು ಬೆಟ್ಟವು ಕುದುರೆಯ ಮುಖವನ್ನು ಹೋಲುವದರಿಂದ ಈ ಸ್ಥಳವು ಕುದುರೆಮುಖ ಎಂಬ ಹೆಸರನ್ನು ಪಡೆದುಕೊಂಡಿದೆ ಮತ್ತು ಕುದುರೆಮುಖವನ್ನು ನೇರವಾಗಿ ಕುದುರೆಯ ಮುಖ ಎಂದು ಭಾಷಾಂತರಿಸಬಹುದು. ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲಿಗೆ ಸೇರಿದ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ. ಬೆಟ್ಟದ ಎತ್ತರ 1930 ಮೀಟರ್ ಮತ್ತು ಇದು ಚಾರಣಕ್ಕೆ ಉತ್ತಮ ತಾಣವಾಗಿದೆ. ಶಿಖರದಿಂದ ಗೋಚರಿಸುವ ರುದ್ರರಮಣೀಯ ಒಂದೆ ಒಂದು ನೋಟವು ಪ್ರವಾಸದ ಮೌಲ್ಯವನ್ನು ಸರಿದೂಗಿಸಿ ಬಿಡುತ್ತದೆ. ಈ ಪ್ರದೇಶವು ಕಳತಗಿರಿ ಜಲಪಾತ ಅಥವಾ ಕಾಳಹಸ್ತಿ ಜಲಪಾತ ದಿಂದ ಹೆಬ್ಬೆಜಲಪಾತದವರೆಗೆ ಬಹಳಷ್ಟು ಜಲಪಾತಗಳನ್ನು ಹೊಂದಿದ್ದು ಇವು ಎರಡು ಹಂತಗಳನ್ನು ಹೊಂದಿದ್ದು ಇವು ಎರಡು ಹಂತಗಳಲ್ಲಿ ಹರಿಯುತ್ತದೆ. ಇತರೆ ಜಲಪಾತಗಳಿಂದ ಮಾಣಿಕ್ಯಧಾರ, ಶಾಂತಿ ಮತ್ತು ಕಡಾಂಬಿ ಜಲಪಾತಗಳನ್ನೂ ಸಹ ಈ ಪ್ರದೇಶದಲ್ಲಿ ಭೇಟಿ ನೀಡಬಹುದು. ವನ್ಯ ಮತ್ತು ಆಧ್ಯಾತ್ಮಿಕತೆಯ ಉಳಿಕೆ ಶೃಂಗೇರಿಯಿಂದ ಹೊರನಾಡು ಮತ್ತು ಕಳಸ ದವರೆಗೆ ಹಲವಾರು ಆಧ್ಯಾತ್ಮಿಕ ಕ್ಷೇತ್ರಗಳು ಚಿಕ್ಕಮಗಳೂರಿಗೆ ಸಮೀಪದಲ್ಲಿವೆ. ಭದ್ರ ಅಭಯಾರಣ್ಯ ಚಿಕ್ಕಮಗಳೂರು ಪಟ್ಟಣದಿಂದ 38 ಕಿಮೀ ದೂರದಲ್ಲಿದ್ದು ನೆಚ್ಚಿನ ತಾಣವಾಗಿದೆ. ಗುಂಡಿಗೆ ಗಟ್ಟಿ ಇರುವವರು ಅತ್ಯುತ್ತಮ ಪ್ರಕೃತಿ ಅನುಭವಕ್ಕಾಗಿ ಈ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು. ಒಟ್ಟಾರೆ, ಈ ಪಟ್ಟಣ ಮತ್ತು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಅವರವರ ಅಭಿರುಚಿಗೆ ತಕ್ಕಂತಹ ನೋಡತಕ್ಕ ಸ್ಥಳಗಳಿದ್ದು ವಿಶ್ರಾಂತವಾಗಿ ರಜೆಕಳೆಯಲು ಅನುಕೂಲಕರವಾಗಿರುವದರ ಮೂಲಕ ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

===
                                                              



                                                                       ತಣ್ಣೀರಬಾವಿ ಕಡಲತೀರ, ಮಂಗಳೂರು

=== ಮಂಗಳೂರಿನಿಂದ ಉತ್ತರ ಭಾಗದಲ್ಲಿ 10 ಕಿ.ಮೀ. ದೂರದಲ್ಲಿರುವ ಪನ್ನಂಬೂರು ತಣ್ಣೀರಬಾವಿ ಕಡಲ ತೀರವಿದೆ. ನದಿಯ ನೀರು ಸಮುದ್ರವನ್ನು ಸೇರುವ ವಿಹಂಗಮ ನೋಟವನ್ನು ಈ ತಾಣ ವೀಕ್ಷಕರಿಗೆ ನೀಡುತ್ತದೆ. ಇಲ್ಲಿ ಬಂದವರಿಗೆ ನದಿ ನೀರಿನ ಶಾಂತತೆ ಹಾಗೂ ಕಡಲಿನ ಅಲೆಗಳ ಅಬ್ಬರ ಎರಡೂ ನೋಡಲು ಸಿಗುತ್ತದೆ. ಮಂಗಳೂರು ನಗರದಿಂದ ಈ ಮಾರ್ಗವಾಗಿ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ತೆರಳುತ್ತಿರುತ್ತವೆ. ಇದರಿಂದ ಇಲ್ಲಿಗೆ ತಲುಪುವುದು ಅತ್ಯಂತ ಸುಲಭ. ಇದು ಅತ್ಯಂತ ದಟ್ಟವಾಗಿ ಜನರಿಂದ ತುಂಬಿರುವುದಿಲ್ಲ. ನಿರಾಳವಾಗಿದ್ದು, ವೀಕ್ಷಕರಿಗೆ ಅತ್ಯಂತ ಸಂತಸ ನೀಡುತ್ತದೆ. ನೈಸರ್ಗಿಕ ವಾತಾವರಣದ ನಿಜವಾದ ಚಿತ್ರಣ ಇಲ್ಲಿ ಸಿಗುತ್ತದೆ. ಅಲ್ಲದೇ ಇಲ್ಲಿ ಯಾವುದೇ ಕೃತಕ ಆಕರ್ಷಣೆಗಳು, ನಿರ್ಮಾಣವಾಗಿರದ ಕಾರಣ ನಿಸರ್ಗದ ಮಡಿಲಲ್ಲಿಯೇ ಇರುವಂತೆ ಭಾಸವಾಗುತ್ತದೆ. ನಿಸರ್ಗವನ್ನು ನೈಜವಾಗಿ ಅನುಭವಿಸಲು ಇಚ್ಛಿಸುವವರು ಇಲ್ಲಿಗೆ ಆಗಮಿಸಬಹುದು. ಈ ಕಡಲತೀರದ ಇನ್ನೊಂದು ಭಾಗದಲ್ಲಿ ಒಂದು ಫೈರ್ಡ್ ಬಾರ್ಜ್ ಇದೆ. ಇಲ್ಲಿಗೆ ರಸ್ತೆ ಹಾಗೂ ದೋಣಿ ಮೂಲಕ ತೆರಳಬಹುದು. ದೋಣಿ ಮೂಲಕ ಸಾಗಿದರೆ ಗುರುಪುರ ನದಿ ಮೂಲಕ ಸುಲ್ತಾನ್ ಬತ್ತೇರಿ ತಲುಪಬಹುದು. ದುರಂತ ಎಂದರೆ ಈ ಕಡಲತೀರವನ್ನೂ ಸರ್ಕಾರ ಸರಿಯಾಗಿ ಗುರುತಿಸಿಲ್ಲ. ಇದನ್ನೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಈ ನಿಟ್ಟಿನಲ್ಲಿ ಆಗಿಲ್ಲ. ನಿರ್ಲಕ್ಷ್ಯದಿಂದ ಇಲ್ಲಿ ಸಾಕಷ್ಟು ಅಪಘಾತಗಳು, ಅನಾಹುತಗಳು ಆಗುತ್ತಿರುತ್ತವೆ. ಈ ಸಂದರ್ಭದಲ್ಲಿ ಸೂಕ್ತ ಜೀವ ರಕ್ಷಕ ಸೌಲಭ್ಯ, ಸಲಕರಣೆ ಪೂರೈಕೆ ಸರ್ಕಾರದಿಂದ ಆಗುತ್ತಿಲ್ಲ. ಇದರಿಂದ ಜನರಿಗೆ ತಿಳಿಸುವ ಸಂದೇಶ ಎಂದರೆ ಸೌಂದರ್ಯವನ್ನು ಅನುಭವಿಸಿ, ಆದರೆ ಜಾಗೃತೆಯಿಂದ ಎಂಬುದಾಗಿದೆ.


===