ಸದಸ್ಯ:Dhananjaya didaga/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧನಂಜಯ ದಿಡಗ ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೋಕಿನ ದಿಡಗ ಎಂಬ ಗ್ರಾಮದಲ್ಲಿ. ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದು, ಅಲ್ಲಿಯೇ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ಬಹುತೇಕ ಕರ್ನಾಟಕದ ಎಲ್ಲ ಜಿಲ್ಲೆಯಲ್ಲಿ ರಂಗ ತರಬೇತಿ ನೆಡೆಸಿಕೊಟ್ಟಿರುತ್ತಾರೆ. ಕರ್ನಾಟಕದ ಯುವ ರಂಗ ನಿರ್ದೇಶಕರಲ್ಲಿ ಇವರದು ಬಹುಮುಖ್ಯ ಹೆಸರು. ತುಘಲಕ್, ಕುಸುಮಬಾಲೆ, ಅಂಧಯುಗ, ಮಹಾಮಾಯಿ, ಆ್ಯನ್ ಫ್ರಾಂಕ್ ಡೈರಿ, ವಿಶ್ರಾಂತ, ಅಸಂಗತ ಸ್ವಗತಗಳು, ಸೇವಂತಿ ಪ್ರಸಂಗ, ಅಲ್ಲಮಪ್ರಭು, ಮಹಾಚೇತನ ಇವರ ಬಹುಮುಖ್ಯ ರಂಗ ಪ್ರಯೋಗಗಳು. ಸಾಹಿತ್ಯ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಇರುವ ಇವರು. ಇನ್ನು ಸಾಕು ಬದುಕಿದ್ದು ಕವನ ಸಂಕಲನ ರಚಿಸಿದ್ದಾರೆ. ಹವ್ಯಾಸಿ ಪತ್ರಕರ್ತರಾಗಿ ಪ್ರಜಾವಾಣಿಗೆ ವಿಮರ್ಶೆ ಬರೆಯುವ ಇವರದು. ಬಹುಮುಖಿ ಆಸಕ್ತಿಯ ವ್ಯಕ್ತಿತ್ವ.