ಸದಸ್ಯ:Devika kumar R/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

""ಜವಹರ್ ನವೋದಯ ವಿದ್ಯಾಲಯ"" ಜವಹರ ನವೊದಯ ವಿದ್ಯಾಲಯಗಳು' ಭಾರತದ ಕೇಂದ್ರ ಸರ್ಕಾರದ ವಸತಿಯಿಂದ ನದೆಸಲಾಗುತ್ತಿರುವ ಉಚಿತ ವಸತಿ ಶಾಲೆಗಳು. ಗ್ರಾಮೀಣ ಪ್ರದೇಶದ ಬುದ್ದಿವನ್ತ ಮಕ್ಕಳಿಗೆ ಉಚಿತ ವಿದ್ಯಭ್ಯಾಸ ಊಟ ಮತ್ತು ವಸತಿಯನ್ನು ಒದಗಿಸಿಕೊಡುವ ಈ ಶಾಲೆಗಳು ಭಾರತದ ಉದ್ದಗಲಕ್ಕು ಇವೆ. ೧೯೮೫ರಲ್ಲಿ ಅಂದಿನ ಮಾನವ ಸಂಪನ್ಮೂಲಗಳ ಮ್ಂತ್ರಿಯಾಗಿದ್ದ (ಮುಂದೆ ಭಾರತದ ಪ್ರಧಾನಮಂತ್ರಿಯಾದರು) ಪಿ.ವಿ. ನರಸಿಂಹರಾವ್ ಅವರ ಕನಸಿನ ಕೂಸಾಗಿ ಶುರುವಾದ ಈ ವಿದ್ಯಾಲಗಳ ಮುಖ್ಯ ಗುರಿ ಭಾರತದ ಗ್ರಾಮೀಣ ಭಾಗದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಭ್ಯಾಸವನ್ನು ಕೊಡಮಾಡುವುದು. ಶುರುಮಾಡುವಾಗ ಬರೀ ನವೋದಯ ವಿದ್ಯಾಲಯಗಳಗಿದ್ದ ಈ ಶಾಲೆಗಳು ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮಶತಾಬ್ದಿಯ ವರ್ಷದಲ್ಲಿ ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍'ಜವಹರ ನವೋದಯ ವಿದ್ಯಾಲಯ'ಗಳೆಂದು ಪುನಃನಾಮಕರಣಗೊಂಡವು. ಈಗ ಹೆಚ್ಚುಕಡಿಮೆ ೫೫೭ ನವೋದಯ ವಿದ್ಯಾಲಯಗಳು ತಮಿಳುನಾಡು ರಾಜ್ಯವನ್ನುಳಿದು ಭಾರತದೆಲ್ಲೆಡೆ ಇವೆ. ಈ ವಿದ್ಯಾಲಯಗಳು ಜಿಲ್ಲಾಮಟ್ಟದಲ್ಲಿ ನಡೆಯುವ ರಾ‌‌‍‍‍‍‍‍‍‍‍‍‌‍ಷ್ಟ್ರವ್ಯಾಪ್ತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಭ್ಯಾಸ, ಊಟ ಮತ್ತು ವಸತಿಯನ್ನೊದಗಿಸಿಕೊಡುತ್ತದೆ. ಪ್ರವೇಶ ಕಾರ್ಯವಿಧಾನ ಅಖಿಲ ಭಾರತ ಮಟ್ಟದ ಪ್ರವೇಶ್ ಪರೀಕ್ಷೆಯ ಮೂಲಕ ಭರತದಲ್ಲಿನ ಪ್ರತೀ ಜಿಲ್ಲೆಯಲ್ಲಿನ ೫ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕೊಡ್ಲಾಗುವುದು. ಪ್ರವೇಶ್ ಪ್ರೀಕ್ಷೆಯ ಪ್ರಶ್ನೆಗಳು ಆಯ್ಕೆ ಆಧಾರಿತ ಹಾಗು ಸಾಂಕೇತಿಕವಾಗಿರುತ್ತದೆ. ಇತ್ತೀಚೆಗೆ ೯ನೇ ಮತ್ತು ೧೧ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ, ಗಣಿತ, ವಿಜ್ನಾನ್ ಹಾಗು ಸಮಾಜಜ್ನಾನ ಆಧರಿತವಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ಬಿಟ್ಟುಹೋದುದರಿಂದ ತೆರವಾದ ಸ್ಥಾನಗಳಿಗೆ ೯ನೇ ತರಗತಿಯ ಪ್ರವೇಶ್ ಅವಕಾಶಗಳು ನೀಡಲಾಗುತ್ತದೆ. ಅರ್ಹತೆ ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರಬೇಕು. ವಿದ್ಯಾರ್ಥಿಯು ೯-೧೨ನೇ ವಯೋಮಿತಿಯಲ್ಲಿರಬೇಕು. ೩,೪ ಮತ್ತು ೫ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿಯಲ್ಲಿ ಪರಿಗಣಿಸಲ್ಪಡುತ್ತಾರೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಮೊದಲ ಬಾರಿಗೆ ಮಾತ್ರ ಪಾಲ್ಗೊಳ್ಳಬೇಕು. ಮೀಸಲಾತಿ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುತ್ತದೆ. ಶೇ. ೮೦ರಷ್ಟು ಸ್ಥಾನಗಳನ್ನು ಜಿಲ್ಲೆಯ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿನ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. ೩ನೇ ೧ರಷ್ಟು ಸ್ಥಾನಗಳನ್ನ ಹೆಣ್ಣುಮಕ್ಕಳಿಗೆ ಮೀಸಲಿಡಲಾಗುತ್ತದೆ. ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ೬ನೇ ತರಗತಿಯಿಂದ ೧೨ನೇ ತರಗತಿಯವರೆಗೆ ಉಚಿತ ವಿದ್ಯಭ್ಯಾಸ ನೀಡಲಾಗುವುದು. ವಿದ್ಯಾರ್ಥಿಗಳ ಊಟ, ವಸತಿಗಳನ್ನ ಶಾಲೆ ನೋಡಿಕೊಳ್ಳುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಅವಶ್ಯಕವಾದ ಶಾಲಾ ಸಮವಸ್ತ್ರ, ಪಠ್ಯ-ಪುಸ್ತಕಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳಾದ ಸೋಪ್, ಪೇಸ್ಟ್ ಎಲ್ಲಾ ವಸ್ತುಗಳನ್ನು ಶಾಲೆಯೆ ಒದಗಿಸುತ್ತದೆ.