ಸದಸ್ಯ:Chandan nandarabettu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲತಃ ವಿಟ್ಲದವರಾದ, ಗಾಳಿಬೀಡು ಗ್ರಾಮದಲ್ಲಿ ವಾಸವಿರುವ ಚಂದನ್ ನಂದರಬೆಟ್ಟು ಅವರು ವಿನೂತನ ಶೈಲಿಯಲ್ಲಿ ಲೇಖನ ಹಾಗು ಕಥೆಗಳನ್ನು ಬರೆಯುವುದಲ್ಲದೆ, ಬಹಳಷ್ಟು ಕವನಗಳನ್ನು ರಚಿಸಿದ್ದು ಇವರ ಕವನಗಳು ಬಹಳಷ್ಟು ಜನಪ್ರಿಯವಾಗಿದೆ. ಜೊತೆಗೆ ಸಿನಿಮಾ ಹಾಗು ಪುಸ್ತಕ ವಿಮರ್ಶಕರೂ ಹೌದು.

ರಕ್ತದ ಕುರಿತಾಗಿ ವಿಸ್ತೃತ ವಿವರಣೆ ಇರುವ 'ನೆತ್ತರು' ಪುಸ್ತಕವನ್ನೂ ಪ್ರಕಟಿಸಿದ್ದಾರೆ. ನಟನೆಯಲ್ಲೂ ಆಸಕ್ತಿ ಹೊಂದಿರುವ ಇವರು ಗುಬ್ಬಿ ಕ್ರಿಯೇಷನ್ ತಂಡದ ಸದಸ್ಯರಾಗಿದ್ದು ಹಲವಾರು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

     ಕೊಡಗಿನ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ, "ಕಳೆದುಹೋದವಳ ಏಳು ವರ್ಷಗಳ ಬಳಿಕ ಕೈ ಹಿಡಿದು ಕರೆದೊಯ್ದರು - ನೆರಳು ಕೊಟ್ಟ ತನಲ್ ನಸುನಗುತ್ತಿತ್ತು" ಎನ್ನುವ 'ಮಾನವೀಯ' ವರದಿಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಜಿಲ್ಲಾ ಪ್ರಶಸ್ತಿಗೂ ಭಾಜನರಾದವರು.

ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಭಿನ್ನ ಶೈಲಿಯ ಬರವಣೆಗೆಯ ಮೂಲಕ ಜನಮನ್ನಣೆ ಗಳಿಸಿರುವ ಚಂದನ್ ನಂದರಬೆಟ್ಟು ಅವರು ಹಲವಾರು ಸನ್ಮಾನಗಳಿಗೆ ಭಾಜನರಾಗಿದ್ದಾರೆ.