ಸದಸ್ಯ:Anvaya.m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದಿದ್ರಾವಿಡ

ಪೀಠಿಕೆ[ಬದಲಾಯಿಸಿ]

ತುಳುನಾಡು ಪರಶಯರಾಮನ ನಾಡು ಎಂದೇ ಪ್ರಸಿದ್ದವಾಗಿದೆ. ಸುಮಾರು ೧೫೦ ವರ್ಷಗಳಿಂದ ಇಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆಲೆಯೂರಿದ್ದಾರೆ. ಹಿಂದಿನಿಂದಲೂ ಕೀಳು ಜನಾಂಗ ಎಂದೆನೆಸಿಕೊಂಡಿರುವ ಈ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ.

ಹಿನ್ನೆಲೆ[ಬದಲಾಯಿಸಿ]

ಸಮಾಜದಲ್ಲಿ ಕೀಳರಿಮೆಯನ್ನು ಅನುಭವಿಸಿದ ಇವರು ತಮ್ಮನ್ನು ತಾವು ತಮ್ಮನ್ನು ಸಮಾಜದಲ್ಲಿ ಗುರುತಿಸಿಕೊಳ್ಳಲು ನಡುರಾತ್ರಿಯಲ್ಲಿ ಕಲ್ಲಿನ ಮೂರ್ತಿಯನ್ನು ಹಿಡಿದು ಸ್ವಾಮಿ ಎಂದು ಕೂಗಿದ್ದರು. ಇದೇ ಸಮಯದಲ್ಲಿ ಶಿವ ಹಾಗೂ ಪಾರ್ವತಿ ಪಾಲ್ಗುಣಿ ಸರೋವರದ ವೀಕ್ಷಣೆಗೆಂದು ಬಂದಿದ್ದರು. ಇದನ್ನು ನೋಡಿದ ಅವರು ಯಕ್ಷಿಣಿ ದೇವತೆಗೆ ಆದೇಶಿಸುತ್ತಾರೆ. ಅದರಂತೆ ಯಕ್ಷಿಣಿ ದೇವತೆಯು ಆದಿದ್ರಾವಿಡ ಎಂಬ ಕುಲದಲ್ಲಿ ಕಾನದ ಕಟ್ಟದ ಎಂಬ ಇಬ್ಬರು ಅವಳಿ ಮಕ್ಕಳಾಗುತ್ತಾರೆ.ಇವರು ಕೂಡ ಇತರರಂತೆ ಬೆಳೆದು ದೊಡ್ಡವರಾಗುತ್ತಾರೆ. ಹೀಗೆ ಅವರು ಬಾಲ್ಯದಲ್ಲಿ ಆಡುತ್ತಿರುವ ಸಂದರ್ಭದಲ್ಲಿ ಬಿಲ್ಲವ ಸಮಾಜದ ವೀರ ಪುರುಷರಾದ ಕೋಟಿ ಚೆನ್ನಯರ ಜೊತೆ ಮಾತುಕತೆ ಆಗಿ ಜಗಳವಾಗಿರುತ್ತದೆ. ನೀರಿಗಾಗಿ