ಸದಸ್ಯ:Ankitha Patla/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂಗವಾಡಿ ಅರಮನೆಯ ಶ್ರೀ ಆದಿನಾಥ ಸ್ವಾಮಿ ಬಸದಿ

ಸ್ಥಳ[ಬದಲಾಯಿಸಿ]

ಈ ಬಸದಿಯು ಇಂದಿನ ಬಂಗವಾಡಿ ಅರಮನೆಯ ಮಧ್ಯದ ಪ್ರಾಂಗಣದಲ್ಲಿದೆ.

ಇತಿಹಾಸ[ಬದಲಾಯಿಸಿ]

ಮೂರ್ತಿಯು ಬಹಳ ಪ್ರಾಚೀನವಾದದ್ದು. ಬಂಗ ಅರಸುಮನೆತನವು ಬೇರೆ ಕಡೆಯಿಂದ ಇಲ್ಲಿಗೆ ಬಂದು ನೆಲೆಸಿದ್ದದ್ದಂತೂ ಐತಿಹಾಸಿಕ ಸತ್ಯ. ಇವರು ಮೈಸೂರು ಬಳಿಯ ಗಂಗವಾಡಿಹಿಂದ ಇಲ್ಲಿಗೆ ಬಂದ ಗಂಗವಂಶದವರಾದರೆಂಬ ಒಂದು ವಾದವೂ ಇದೆ. ಈ ವಾದಕ್ಕೆ ಈ ಜಿನಬಿಂಬವು ಪುಷ್ಟಿಯನ್ನು ನೀಡುವಂತದಾಗಿದ್ದು, ಇತಿಹಾಸ ದೃಷ್ಟಿಯಿಂದಲೂ ಬಹು ಅಮೂಲ್ಯವಾದುದು. ಗಂಗವಾಡಿಯ ಗಂಗಾ ಅರಸರಿಗೂ ಶ್ರೀ ಆದೀಶ್ವರ ಸ್ವಾಮಿ. ಬಂಗ ಅರಸರಿಗೂ ಶ್ರೀ ಆದೀಶ್ವರ ಸ್ವಾಮಿಯೇ ಮನೆದೇವರಾಗಿ ಇವರನ್ನು ಸುಮಾರು ಒಂದುಸಾವಿರ ವರ್ಷಗಳಷ್ಟು ಕಾಲ ಸಂರಕ್ಷಿಸುತ್ತಾ, ಅರಸುತ್ತ ಬಂದಿದ್ದಾರೆ.[೧]

ದೈವ[ಬದಲಾಯಿಸಿ]

ಶ್ರೀ ಆದೀಶ್ವರ ಸ್ವಾಮಿಯು ಅರಮನೆಯ ಮನೆದೇವರು.

ವಿನ್ಯಾಸ[ಬದಲಾಯಿಸಿ]

ಇಲ್ಲಿ ಬಸದಿಗೆ ಬೇಕಾದ ಎಲ್ಲಾ ಮಂಟಪಗಳಿಲ್ಲ. ಆದರೆ ಸುಂದರವಾದ ಘಂಟಾ ಮಂಟಪ ಮತ್ತು ಗರ್ಭಗೃಹಗಳು ಮಾತ್ರ ಇವೆ. ಗರ್ಭಗೃಹದಲ್ಲಿ ಪುರಾತನ ಲಕ್ಷಣಗಳುಳ್ಳ ವಿಸ್ತಾರವಾದ ಪ್ರಭಾವಳಿಯ ಮಧ್ಯದಲ್ಲಿ ಶ್ರೀ ಆದೀಶ್ವರ ಸ್ವಾಮಿಯ ಖಡ್ಗಾಸನ ಭಂಗಿಯ ಸುಂದರ ಬಿಂಬ ವಿರಾಜಮಾನವಾಗಿದೆ. ಎಡಬಲಗಳಲ್ಲಿ ನಿಂತುಕೊಂಡಿರುವ ಯಕ್ಷ-ಯಕ್ಷಿಯರ ಬಿಂಬಗಳಿವೆ. ಎಲ್ಲಕ್ಕಿಂತ ಮೇಲ್ಗಡೆಯಲ್ಲಿ ಕೀರ್ತಿ ಮುಖ, ಅದರ ಕೆಳಗಡೆ ಮೂರು ಹೆಡೆಗಳುಳ್ಳ ನಾಗ, ಅದಕ್ಕಿಂತ ಕೆಳಗಡೆ ಮುಕ್ಕೊಡೆ, ಅದಕ್ಕಿಂತ ಕೆಳಗಡೆ ಸ್ವಾಮಿ ಬಿಂಬವಿದ್ದು ಪೀಠದಲ್ಲಿ ಸೂಚ್ಯವಾಗಿ ವೃಷಭಲಾಂಛನವಿದೆ. ಬಳಿಯಲ್ಲಿ ಕೆಳಗಡೆ ಶ್ರೀ ಪದ್ಮಾವತಿ ದೇವಿಯ ಬಿಂಬವ ನಿಟ್ಟು ಪೂಜಿಸಲಾಗುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೧೬೦.