ಸದಸ್ಯ:Aileennavya1940547/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಹೆಸರು ಐಲಿನ್ ನವ್ಯ ಐ.ನಾನು ಬೆಳೆದು ಬಂದ ಊರು ಬೆಂಗಳೂರು.ನನ್ನ ತಂದೆಯ ಹೆಸರು ಈಶ್ವರ್ ಪ್ರಕಾಶ್ ಮತ್ತು ನನ್ನ ತಾಯಿಯ ಹೆಸರು ರೀಟಾ ಪ್ರಕಾಶ್.ನನಗೆ ಒಬ್ಬ ಅಣ್ಣನಿದ್ದಾನೆ ಅವನ ಹೆಸರು ಮಾರ್ಟಿನ್.ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ ಶಾಲೆಯಲ್ಲಿ ಮುಗಿಸಿದ ನಂತರ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಕೂಡ ಅದೇ ಶಾಲೆಯಲ್ಲಿ ಮುಂದುವರಿಸಿದೆ.ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ.

ನಾನು ನನ್ನ ಡಿಗ್ರಿಯನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ ನನಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಇದೆ .ಚಿತ್ರ ಬಿಡಿಸುವುದು ಮತ್ತು ಡೇರಿ ಬರೆಯುವುದು ಮುಂತಾದವು ನನ್ನ ಹವ್ಯಾಸಗಳು.ಸಂಗೀತವನ್ನು ಕೇಳುವುದೆಂದರೆ ನನಗೆ ಬಹಳ ಪ್ರೀತಿ.ನನಗೆ ಹಾಡಲು ಮತ್ತು ನೃತ್ಯ ಮಾಡಲು ತುಂಬಾ ಇಷ್ಟ.ಸಾಕು ಪ್ರಾಣಿಗಳಲ್ಲಿ ಒಂದಾದ ನಾಯಿಯನ್ನು ಸಾಕಲು ನನಗೆ ಒಲವು.ನನಗೆ ನನ್ನ ಕುಟುಂಬವೇ ಎಲ್ಲ. ನನಗೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಸುತ್ತಾಡಲು ಬಹಳ ಇಷ್ಟನನಗೆ ಸಾಕು ಪ್ರಾಣಿಗಳೆಂದರೆ ಬಹಳ ಇಷ್ಟ ,ಅದರಲ್ಲೂ ವಿಶೇಷವಾಗಿ ನಾಯಿಗಳ ಕಂಡರೆ ಇನ್ನೂ ಇಷ್ಟ.ನನಗೆ ಇಷ್ಟವಾದ ಬಣ್ಣ ಕೆಂಪು ಹಾಗೂ ಕಪ್ಪು.ನನಗೆ ನಮ್ಮ ಕನ್ನಡ ನಾಡಿನ ಬಗ್ಗೆ ಬಹಳ ಅಭಿಮಾನವಿದೆ .ಹಾಗೂ ನಮ್ಮ ಭಾಷೆಯನ್ನು ಉಳಿಸಿ ಹಾಗೂ ಬೆಳೆಸಬೇಕೆಂಬ ಆಸೆ ಇದೆ.

ನನಗೆ ನಮ್ಮ ಕರ್ನಾಟಕದಲ್ಲಿರುವ ಸ್ಥಳಗಳಿಗೆ ಹೋಗಬೇಕೆಂದು ಬಹಳ ಆಸೆ.ಏಕೆಂದರೆ ಒಂದೊಂದು ಜಿಲ್ಲೆಯಲ್ಲೂ ಅದರದೇ ಆದ ವೈಶಿಷ್ಟ್ಯವಿದೆ ಹಾಗೂ ನಾವು ನಮ್ಮ ಕರ್ನಾಟಕದ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು.ನಾನು ಮೊದಲನೇ ಬಾರಿ ಕರ್ನಾಟಕದಿಂದ ಹೊರ ಹೋಗಿದ್ದು ನನ್ನ ಹತ್ತನೇ ತರಗತಿಯಲ್ಲಿದ್ದಾ. ನಾನು ಡಾರ್ಜಿಲಿಂಗ್ ,ಕೋಲ್ಕತ್ತಾ ಮುಂತಾದ ಉತ್ತರ ಭಾರತದ ಸ್ಥಳಗಳಿಗೆ ಪ್ರವಾಸ ಹೋಗಿದ್ದೆ. ಹಾಗೂ ನಾನು ಅಲ್ಲಿ ಕಳೆದ ದಿನಗಳಿಂದ ಬಹಳ ವಿಷಯಗಳನ್ನು ಕಲಿತೆ. ನಮ್ಮ ಭಾರತ ದೇಶದ ವೈಭವವನ್ನು ಗುರುತಿಸಲು ನನಗೆ ಈ ಪ್ರವಾಸದಿಂದ ಒಂದು ಅವಕಾಶ ದೊರಕಿತು.



ಲಾಲ್ ಬಾಗ್[ಬದಲಾಯಿಸಿ]

ಲಾಲ್ ಬಾಗ್ ಗಾಜಿನ ಮನೆ

ದೆಹಲಿಯ ಕೆಂಪು ಕೋಟೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಬಂದು ನಿಂತಿದೆ. ಇದು ಕಲ್ಲಿನಿಂದ ಕಟ್ಟಿದ ಕೋಟೆಯಲ್ಲ, ಹೂಗಳಿಂದ ಅರಳಿದ ಕೋಟೆ, ಅಲ್ಲಿ ಸಂಗೀತದ ಇಂಪು, ಹೂಗಳ ಕಂಪು ಎಲ್ಲವೂ ಇದೆ. ಪಕ್ಕದಲ್ಲಿ ಹೂಗಳಿಂದಲೇ ರಚಿಸಿರುವ ವಾದ್ಯ ಪರಿಕರಗಳ ನೋಟ ಕದಲಲು ಬಿಡುವುದಿಲ್ಲ.ಗಣರಾಜ್ಯೋತ ಸವ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ವಿಶೇಷಗಳ ಆಗರ. ಪಾಟ್‌ಗಳಲ್ಲೇ ಬೆಳೆಸಬಹುದಾದ ಸೇಬು, ಸ್ಟ್ರಾಬೆರಿ, ಅಪ್ರಿಕ್ಯಾಟ್, ದಾಳಿಂಬೆ ಇತ್ಯಾದಿ ಹಣ್ಣಿನ ಗಿಡಗಳು ಸಹ ನಿಮ್ಮನ್ನು ಆಕರ್ಷಿಸುತ್ತವೆ.ಲಾಲ್ ಬಾಗ್ ಗಾಜಿನ ಮನೆಯಲ್ಲಿ 50 ಅಡಿ ಉದ್ದ ಹಾಗೂ 40 ಅಡಿ ಎತ್ತರದ ಕೆಂಪುಕೋಟೆಯನ್ನು 3 ಲಕ್ಷಕ್ಕೂ ಹೆಚ್ಚಿನ ಆರ್ಕಿಡ್, ಆಲ್‌ಸ್ಟಿಮೇರಿ ಹೂವುಗಳಿಂದ ಅಲಂಕೃತಗೊಳಿಸಲಾಗಿದೆ. ಅದರ ಹಿಂಭಾಗದಲ್ಲಿ ಹೂಗಳಿಂದ ನಿರ್ಮಾಣ ಮಾಡಿರುವ ಇಂಡಿಯಾ ಗೇಟ್ ಗಮನ ಸೆಳೆಯುತ್ತದೆ. ಇದರ ಹಿಂಭಾಗಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಅಚ್ಚ ಬಿಳುಪಿನ ಸ್ಟ್ಯಾಚ್ಯು ಆಫ್ ಲಿಬರ್ಟಿ ಮತ್ತು ನ್ಯಾಯದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೆಯ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ)" ಜನಪದ ಜಾತ್ರೆ"ಯನ್ನು ನಡೆಸಲಾಗುತ್ತದೆ. ಇದನ್ನು ಕರ್ನಾಟಕ ಸರ್ಕಾರವು ಆಯೋಜಿಸುತ್ತದೆ. ಜನಪದ ಜಾತ್ರೆಯಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದಲು ಬಂದ ತಂಡಗಳು ಮುಖ್ಯವಾಗಿ ಜಾನಪದ ನೃತ್ಯ, ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಈ ಪ್ರದರ್ಶನವು ಕರ್ನಾಟಕದ ಸಾಂಸ್ಕೃತಿಕ ಜಾನಪದ, ಸಾಂಪ್ರದಾಯಿಕ ತೊಡುಗೆಗಳು ಮತ್ತು ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ[ಬದಲಾಯಿಸಿ]

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ.ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು. 45000 ಚದರ ಅಡಿ ವಿಸ್ತಿರ್ಣ ಹೊಂದಿರುವ ಈ ಅರಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 82 ವರ್ಷಗಳು ಬೇಕಾಯಿತು.ಇದರ ಸೌಂದರ್ಯವು ಎಷ್ಟೊಂದು ಹೆಸರುವಾಸಿಯಾಗಿದೆ ಎಂದರೆ, ಒಮ್ಮೆ ನೀವು ಮುಖದ್ವಾರದ ಮೂಲಕ ಒಳಗೆ ಪ್ರವೇಶಿಸಿದರೆ, ಅದರ ಅದ್ವಿತೀಯ ಸೌಂದರ್ಯವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅರಮನೆಯು ಇತ್ತಿಚಿಗಷ್ಟೆ ನವೀಕರಣಗೊಂಡಿದೆ.ಇದರ ಒಳಾಂಗಣ ವಿನ್ಯಾಸವು ತುಡಾನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಅರಮನೆಯ ಕೆಳಮಹಡಿಯು ತೆರೆದ ಅಂಗಳವನ್ನು ಹೊಂದಿದ್ದು, ಕೂಡಲು ಗ್ರಾನೈಟ್ ಕಲ್ಲಿನ ಕಟ್ಟೆಗಳನ್ನು ಕೆತ್ತಲಾಗಿದೆ.ಇವುಗಳು ತಮ್ಮ ಮೆಲ್ಮೈ ಮೇಲೆ ನೀಲಿ ಬಣ್ಣದ ಟಾಯಿಲಗಳನ್ನು ಹೊಂದಿದ್ದು ರಾತ್ರಿಯಲ್ಲಿ ನೋಡಲು ಸೊಗಸಾಗಿರುತ್ತವೆ. ರಾಜನು ಸಭೆ ನಡೆಸುತ್ತಿದ್ದ ವಿಶಾಲವಾದ ದರ್ಬಾರ ಹಾಲ್ ಅನ್ನು ಮೆಲ್ಮಹಡಿಯಲ್ಲಿ ಕಾಣಬಹುದು. ಅರಮನೆಯ ಒಳಗೊಡೆಗಳು ಗ್ರೀಕ್,ಡಚ್ ಮತ್ತು ಪ್ರಸಿದ್ಧನಾದ ರಾಜಾ ರವಿವರ್ಮನ ಚಿತ್ರಕಲೆಗಳಿಂದ ಅಲಂಕೃತಗೊಂಡಿದ್ದು ನೋಡಲು ಸುಂದರವಾಗಿವೆ.

ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ[ಬದಲಾಯಿಸಿ]

ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ

ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ ಭಾರತದ ಮೊದಲ ಏರೋಸ್ಪೇಸ್ ಮ್ಯೂಸಿಯಂ. ಬೆಂಗಳೂರಿನ ಎಚ್‌ಎಎಲ್ ಏರೋಸ್ಪೇಸ್ ಮ್ಯೂಸಿಯಂ ವಾಯುಯಾನ ಉದ್ಯಮದ ಪರಂಪರೆಯನ್ನು ಸಂರಕ್ಷಿಸಲು ಮೀಸಲಾಗಿರುವ ಮ್ಯೂಸಿಯಂ ಕಮ್ ಹೆರಿಟೇಜ್ ಕೇಂದ್ರವಾಗಿದೆ. ಇದು ಕರ್ನಾಟಕದ ಬೆಂಗಳೂರಿನ ಗಾರ್ಡನ್ ಸಿಟಿಯಲ್ಲಿದೆ.ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆವರಣದಲ್ಲಿದೆ. 2001 ರಲ್ಲಿ ಸ್ಥಾಪನೆಯಾದ ಈ ವಸ್ತುಸಂಗ್ರಹಾಲಯವು ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋ ಸ್ಪೇಸ್ ಮ್ಯೂಸಿಯಂನ ಭಾಗವಾಗಿದೆ ಮತ್ತು ಇದು ಆರು ದಶಕಗಳ ಕಾಲ ಭಾರತೀಯ ವಾಯುಯಾನ ಉದ್ಯಮ ಮತ್ತು ಎಚ್‌ಎಎಲ್‌ನ ಬೆಳವಣಿಗೆಯನ್ನು ತೋರಿಸುತ್ತದೆ.ವಸ್ತುಸಂಗ್ರಹಾಲಯದಲ್ಲಿ ವಿವಿಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು, ವಿಮಾನ ಎಂಜಿನ್ ಮಾದರಿಗಳು, ಫ್ಲೈಟ್ ಸಿಮ್ಯುಲೇಟರ್‌ಗಳು, ಅಣಕು ವಾಯು ಸಂಚಾರ ನಿಯಂತ್ರಣ ಗೋಪುರ ಮತ್ತು ಭಾರತೀಯ ವಾಯುಯಾನ ಇತಿಹಾಸದ ಪ್ರದರ್ಶನವಿದೆ. ಮ್ಯೂಸಿಯಂ ಅನ್ನು ಎಚ್‌ಎಎಲ್ (ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಕಂಪನಿಗಳಲ್ಲಿ ಒಂದಾಗಿದೆ) ನಿರ್ವಹಿಸುತ್ತದೆ.ಸಾಂಪ್ರದಾಯಿಕ ವಸ್ತುಸಂಗ್ರಹಾಲಯಗಳ ವ್ಯಾಖ್ಯಾನವನ್ನು ವಸ್ತುಸಂಗ್ರಹಾಲಯವು ನಿರಾಕರಿಸುತ್ತದೆ. ಸಂದರ್ಶಕರಿಗೆ ಆರೋಗ್ಯಕರ ಏರೋಸ್ಪೇಸ್ ಅನುಭವವನ್ನು ಒದಗಿಸಲು ಇದು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಅನುಕೂಲಕರ ಏರೋಸ್ಪೇಸ್ ಪರಿಸರದಲ್ಲಿ ಜ್ಞಾನವನ್ನು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ. ಇದು ಫೈಟರ್ ಜೆಟ್‌ಗಳು ಮತ್ತು ವಾಣಿಜ್ಯ ವಿಮಾನಗಳ ಅನುಭವವನ್ನು ಬದುಕಲು ಮೂಲ ಸಿಮ್ಯುಲೇಟರ್ ಆಟ ಮತ್ತು ಚಲನೆಯ ಸಿಮ್ಯುಲೇಟರ್ ಅನ್ನು ಹೊಂದಿದೆ.

ಕಮರ್ಷಿಯಲ್ ಸ್ಟ್ರೀಟ್[ಬದಲಾಯಿಸಿ]

ಕಮರ್ಷಿಯಲ್ ಸ್ಟ್ರೀಟ್

ಕಮರ್ಷಿಯಲ್ ಸ್ಟ್ರೀಟ್ ಭಾರತದ ಕರ್ನಾಟಕದ ರಾಜ್ಯ ರಾಜಧಾನಿಯಾದ ಬೆಂಗಳೂರಿನ ಒಂದು ಬೀದಿಯಾಗಿದೆ. ನಗರದ ಅತ್ಯಂತ ಹಳೆಯ ಮತ್ತು ಅತ್ಯಂತ ಜನನಿಬಿಡ ಶಾಪಿಂಗ್ ಪ್ರದೇಶಗಳಲ್ಲಿ ಒಂದಾದ ಬೀದಿ ಬಟ್ಟೆ, ಪಾದರಕ್ಷೆಗಳು, ಆಭರಣಗಳು, ಎಲೆಕ್ಟ್ರಾನಿಕ್ಸ್ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ; ಮತ್ತು ಆಹಾರ ಕೀಲುಗಳು. ನಾಲ್ಕು ಚಕ್ರಗಳಿಗೆ ಬೀದಿಯಲ್ಲಿ ಕೇವಲ 75 ಪಾರ್ಕಿಂಗ್ ಸ್ಲಾಟ್‌ಗಳು ಲಭ್ಯವಿವೆ, ನಗರವು ನಗರದಲ್ಲಿ ಹೆಚ್ಚು ಜನದಟ್ಟಣೆಯಾಗಿದೆ.ಕಮರ್ಷಿಯಲ್ ಸ್ಟ್ರೀಟ್ ನಗರದ ಮಧ್ಯಭಾಗದಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿದೆ, ಮತ್ತೊಂದು ಜನಪ್ರಿಯ ಶಾಪಿಂಗ್ ಪ್ರದೇಶವಾದ ಎಂ ಜಿ ರಸ್ತೆ ಮತ್ತು ಶಿವಾಜಿನಗರದ ರಸ್ಸೆಲ್ ಮಾರ್ಕೆಟ್‌ಗೆ ಹತ್ತಿರದಲ್ಲಿದೆ.

ವಿಧಾನ ಸೌಧ[ಬದಲಾಯಿಸಿ]

ಬೆಂಗಳೂರಿನಲ್ಲಿರುವ ವಿಧಾನ ಸೌಧವು ಕರ್ನಾಟಕದ ರಾಜ್ಯ ವಿಧಾನಸಭೆಯ ಸ್ಥಾನವಾಗಿದೆ. ಇದನ್ನು ಕೆಲವೊಮ್ಮೆ ಮೈಸೂರು ನಿಯೋ-ದ್ರಾವಿಡ, ಎಂದು ವಿವರಿಸಲಾಗಿದೆ ಮತ್ತು ಇಂಡೋ-ಸಾರಾಸೆನಿಕ್ ಮತ್ತು ದ್ರಾವಿಡ ಶೈಲಿಗಳ ಅಂಶಗಳನ್ನು ಒಳಗೊಂಡಿದೆ.ನಿರ್ಮಾಣವು 1956 ರಲ್ಲಿ ಪೂರ್ಣಗೊಂಡಿತು.ವಿಧಾನ ಸೌಧದ ಕಲ್ಪನೆ ಮತ್ತು ನಿರ್ಮಾಣದ ಹೆಗ್ಗಳಿಕೆಗೆ ಕೆಂಗಲ್ ಹನುಮಂತಯ್ಯ ಪಾತ್ರರಾಗಿದ್ದಾರೆ. ಜುಲೈ 13, 1951 ರಂದು ಅಂದಿನ ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಆಗಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಅಡಿಪಾಯ ಹಾಕಿದರು. ಆದರೆ, ವಿಧಾನ ಸೌಧದ ಮರುವಿನ್ಯಾಸ ಮತ್ತು ತ್ವರಿತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು ಹನುಮಂತಯ್ಯ ಕಟ್ಟಡವನ್ನು ನಿರ್ಮಿಸಲು ಸುಮಾರು 15 ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಿದ್ದಕ್ಕಾಗಿ ಹನುಮಂತಯ್ಯ ಅವರನ್ನು ಟೀಕಿಸಲಾಯಿತು.ಆದರೆ ಅವರು ವಿನ್ಯಾಸಗೊಳಿಸಿದ ಕಟ್ಟಡವು ನಿಯೋ ದ್ರಾವಿಡ ಶೈಲಿಯ ಮಹೋನ್ನತ ರಚನೆಯಾಗಿದೆ. ಭೂಪ್ರದೇಶ 60 ಎಕರೆ. ಕಟ್ಟಡದ ಮುಂಭಾಗವನ್ನು "ಸರ್ಕಾರದ ಕೆಲಸ ದೇವರ ಕೆಲಸ" ಮತ್ತು ಕನ್ನಡ ಸಮಾನ ಎಂಬ ಘೋಷಣೆಯೊಂದಿಗೆ ಕೆತ್ತಲಾಗಿದೆ.ಇದು ಶೇಷಾದ್ರಿಪುರದ ಡಾ.ಅಂಬೇಡ್ಕರ್ ರಸ್ತೆಯಲ್ಲಿದೆ.ವಿಧಾನ ಸೌಧಾ ಎದುರು ಕರ್ನಾಟಕದ ಹೈಕೋರ್ಟ್ ಇದೆ. ಎರಡೂ ಕಟ್ಟಡಗಳು ಕಬ್ಬನ್ ಉದ್ಯಾನವನದಲ್ಲಿವೆ, ಅದು ಕೆ.ಎಸ್.ಎಲ್.ಟಿ.ಎ (ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್) ಬಳಿ ಇದೆ.

ರಂಗ ಶಂಕರ[ಬದಲಾಯಿಸಿ]

ರಂಗ ಶಂಕರ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದಾಗಿದೆ. ಇದು ಜೆ.ಪಿ.ನಗರದ ದಕ್ಷಿಣ ಬೆಂಗಳೂರು ಪ್ರದೇಶದಲ್ಲಿದೆ ಮತ್ತು ಇದನ್ನು ಶಂಕೆಟ್ ಟ್ರಸ್ಟ್ ನಡೆಸುತ್ತಿದೆ. 2004 ರಲ್ಲಿ ಪ್ರಾರಂಭವಾದ ಸಭಾಂಗಣವನ್ನು ಅರುಂದತಿ ನಾಗ್ ಅವರು ದಿವಂಗತ ಪತಿ ಶಂಕರ್ ನಾಗ್ ಅವರ ನೆನಪಿಗಾಗಿ ಕನ್ನಡ ಚಲನಚಿತ್ರೋದ್ಯಮದ ಖ್ಯಾತ ನಟರಾಗಿದ್ದರು.ಇದು ಎಲ್ಲಾ ಭಾಷೆಗಳಲ್ಲಿ ರಂಗಭೂಮಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಅತ್ಯಂತ ಕಡಿಮೆ ದರದಲ್ಲಿ ಜಾಗವನ್ನು ಸಾಲವಾಗಿ ನೀಡುವಲ್ಲಿ ಹೆಮ್ಮೆಪಡುತ್ತದೆ. ಇದು ವಾರದಲ್ಲಿ ಆರು ದಿನಗಳು(ಸೋಮವಾರ ಹೊರತುಪಡಿಸಿ) ಕನಿಷ್ಠ "ದಿನಕ್ಕೆ ಒಂದು ನಾಟಕ" ನೀತಿಯನ್ನು ಅನುಸರಿಸುತ್ತದೆ.ಇದರ ವಾರ್ಷಿಕ ನಾಟಕ ಉತ್ಸವವು ದೇಶಾದ್ಯಂತದ ನಗರ ನಾಟಕಗಳನ್ನು ತರುತ್ತದೆ, ಪ್ರೇಕ್ಷಕರಿಗೆ ಆಯ್ಕೆ ಮಾಡಲು ಉತ್ತಮ ಹರಡುವಿಕೆಯನ್ನು ನೀಡುತ್ತದೆ. ಪ್ರಾರಂಭದಿಂದಲೂ 2,700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪ್ರದರ್ಶಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಕನ್ನಡದಲ್ಲಿವೆ, ಆದರೂ ಇತರ 20 ಭಾಷೆಗಳಲ್ಲಿ ನಾಟಕಗಳು ನಡೆದಿವೆ. ರಂಗ ಶಂಕರ ಸಂಕೀರ್ಣವನ್ನು ವಾಸ್ತುಶಿಲ್ಪಿ ಶಾರುಖ್ ಮಿಸ್ತ್ರಿ ವಿನ್ಯಾಸಗೊಳಿಸಿದರು ಮತ್ತು ಇದನ್ನು ಅಕ್ಟೋಬರ್ 28, 2004 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.

ಬರುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಹಾಗೂ ಹೋಗುವಾಗ ಏನನ್ನು ಹೊತ್ತುಕೊಂಡು ಹೋಗುವುದಿಲ್ಲ ಬಾಳುವ ಈ ಮೂರು ದಿನದ ಬದುಕಿನಲ್ಲಿ ಇರುವಷ್ಟು ದಿನ ಸಂತೋಷದಿಂದ ಬದುಕಿ ಇತರರಿಗೆ ಸಹಾಯವನ್ನು ಮಾಡಿ ಹೋಗಬೇಕೆಂಬುದೇ ನನ್ನ ಜೀವನದ ಮಹತ್ತರ ಆಸೆ .ನನ್ನ ಮೇಲೆ ನನಗೆ ಬಹಳ ನಂಬಿಕೆ ಇದೆ ಏಕೆಂದರೆ ನಮ್ಮ ಮೇಲೆ ನಮಗೆ ನಂಬಿಕೆ ಇದ್ದಾಗ ಮಾತ್ರ ನಾವು  ಏನನ್ನು ಬೇಕಾದರೂ ಸಾಧಿಸಬಹುದು .ನಾನು ಎಲ್ಲರಿಗೂ ಹೇಳುವುದೇನೆಂದರೆ ಮೊದಲು ನಿಮ್ಮ ಮೇಲೆ ನೀವು ನಂಬಿಕೆ ಇಡಿ ಬೇರೆಯವರ ಮಾತುಗಳಿಗೆ ಕಿವಿ ಕೊಡದಿರಿ .

ನನ್ನ ಜೀವನದಲ್ಲಿ ನನ್ನ ಗೆಳತಿಯರ ಪಾತ್ರ ಬಹಳ ಇದೆ .ಅವರುಗಳ ಸಹಾಯವಿಲ್ಲದಿದ್ದರೆ ನಾನು ಇಲ್ಲಿಯ ತನಕ ಬರಲು ಸಾಧ್ಯವೇ ಇರುತ್ತಿರಲಿಲ್ಲ .ನನ್ನ ಚೇಷ್ಟೆಗಳನ್ನು ಸಹಿಸಿಕೊಂಡು ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ಬೆಂಬಲವಾಗಿ ನಿಂತಿದ್ದಾರೆ .ನಾನು ಎಷ್ಟೋ ಬಾರಿ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಕೈಕಟ್ಟಿ ಕುಳಿತಾಗ ಅವರುಗಳು ನನಗೆ ಹುರುಪು ತುಂಬಿದ್ದಾರೆ .ನನ್ನ ಜೀವನದ ಅವಿಭಾಜ್ಯಅಂಗವಾಗಿರುವ ನನ್ನ ಸ್ನೇಹಿತರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ .ನನ್ನ ನೆಚ್ಚಿನ ಬಣ್ಣ ನೀಲಿ ,ನನಗೆ ಇಷ್ಟವಾದ ಆಹಾರ ಪದಾರ್ಥ ಎಂದರೆ ಅದು ಚಪಾತಿ ಹಾಗೂ ಬಿರಿಯಾನಿ.ನನಗೆ ಕಲಾತ್ಮಕವಾಗಿ ಇರಲು ಬಹಳ ಇಷ್ಟ .

ಕಬ್ಬನ್ ಪಾರ್ಕ್

ನಾನು ಪ್ರಕೃತಿ ಪ್ರೇಮಿ ಹಾಗೂ ಪ್ರವಾಸಗಳನ್ನು ಮಾಡುವುದೆಂದರೆ ನನಗೆ ಬಹಳ ಇಷ್ಟ ಅದರಲ್ಲೂ ಒಬ್ಬಂಟಿಯಾಗಿ ಪ್ರವಾಸ ಮಾಡುವುದೆಂದರೆ ಇನ್ನೂ ಇಷ್ಟ .ನನ್ನ ಜೀವನದ ಬಹುದೊಡ್ಡ ಆಸೆ ಎಂದರೆ ಅದು ಈ ಪ್ರಪಂಚವನ್ನು ಸುತ್ತಿ ಬರಬೇಕೆಂಬುದು .ನನಗೆ ಸೈಕಲ್ ಓಡಿಸುವುದೆಂದರೆ ಬಹಳ ಇಷ್ಟ ,ಏಕೆಂದರೆ ಅದು ಪರಿಸರ ಪ್ರೇಮಿ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ ಹಾಗೂ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ.

ನಾನು ಇಂದು ಏನಾಗಿದ್ದೇನೋ ಅದೆಲ್ಲಾ ಆ ಭಗವಂತನ ಕೃಪೆ ,ಅದಕ್ಕಾಗಿ ಅವನಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲುವುದಿಲ್ಲ .ಈ ಇಡೀ ಜೀವನವೇ ಆತನು ಕೊಟ್ಟ ಭಿಕ್ಷೆ .ಅವನಿಗೆ ನನ್ನ ನಿರ್ಮಲ ಭಕ್ತಿಯನ್ನು ಬಿಟ್ಟರೆ ಬೇರೆ ಏನನ್ನೂ ಕೊಡಲು ಸಾಧ್ಯವಿಲ್ಲ .ಹಾಗಾಗಿ ನಾನು ನನ್ನ ಜೀವನದಲ್ಲಿ ಏನೇ ತಪ್ಪು ಕೆಲಸಗಳನ್ನು ಮಾಡಿದ್ದರೂ ಅದನ್ನು ಕ್ಷಮಿಸಿ ,ನನಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವ ಬುದ್ಧಿಯನ್ನು ಕೊಡು ಎಂದು ಆತನಲ್ಲಿ ಬೇಡಿಕೊಳ್ಳುತ್ತೇನೆ .

ಬಿಸಿಬೇಳೆ ಬಾತ್‌

ನನ್ನ ಸುತ್ತಮುತ್ತಲೂ ಇರುವ ಜನರು ಸಂತೋಷದಿಂದ ಮತ್ತು ನಗುನಗುತ್ತ ಇರುವುದನ್ನು ಕಾಣಲು ನನಗೆ ತುಂಬಾ ಇಷ್ಟ .ನನಗೆ ತಿಂಡಿ ಪದಾರ್ಥಗಳನ್ನು ಪ್ರಯೋಗ ಮಾಡಲು ಇಷ್ಟ.ಒಬ್ಬಂಟಿಯಾಗಿ ಪ್ರವಾಸ ಹೋಗುವುದು ನನ್ನ ಬಹುದಿನದ ಕನಸು ಏಕೆಂದರೆ ಇದರಿಂದ ನಾನು ಬಹಳ ವಿಷಯವನ್ನು ಗ್ರಹಿಸಿಕೊಳ್ಳಬಹುದು ಹಾಗೂ ಅದನ್ನು ನನ್ನ ಜೀವನಕ್ಕೆ ಅಳವಡಿಸಿಕೊಳ್ಳಬಹುದು.ನನಗೆ ಒಂದು ನಿರ್ದಿಷ್ಟವಾದ ಗುರಿ ಎಂಬುದು ಇಲ್ಲ.ಆದರೆ ಈ ಜಗತ್ತನ್ನು ಕಾಪಾಡಲು ಹಾಗೂ ಎಲ್ಲರನ್ನು ಪ್ರೀತಿಯಿಂದ ಕಾಣಲು ಬಹಳ ಇಷ್ಟ .ಜಗತ್ತಿನ ಎಲ್ಲರಿಗೂ ಒಂದೇ ಮತ್ತು ಸಮಾನ ಗೌರವ ಮತ್ತು ಸೌಲಭ್ಯಗಳು ಇರುವ ಜಗತ್ತನ್ನು ಕಾಣುವುದು ನನ್ನ ಆಸೆ ಹಾಗೂ ಗುರಿ ಎನ್ನಬಹುದು .ನಮ್ಮ ಪರಿಸರವನ್ನು ಮತ್ತು ಈ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯವೆಂದು ನಾವು ಅರಿತುಕೊಂಡರೆ ಈ ಜಗತ್ತಿನ ಮೇಲೆ ನಡೆಯುತ್ತಿರುವ ಹಲವು ಆಕ್ರಮಣಗಳನ್ನು ನಾವು ಕಡಿಮೆ ಮಾಡಬಹುದು.

ನಾನು ದ್ವೇಷ,ಅಸೂಯೆ,ಭೇದ-ಭಾವ ಮತ್ತು ಕೇಡು ಬಯಸುವುದು ಮುಂತಾದ ಹಲವು ಕೆಟ್ಟ ವಿಷಯಗಳು ಇಲ್ಲದೇ ಇರುವ ಜಗತ್ತನ್ನು ನೋಡಲು ಬಯಸುತ್ತೇನೆ .ಈ ರೀತಿಯ ಜಗತ್ತನ್ನು ಕಾಣಲು ನಾವೆಲ್ಲರೂ ಕಷ್ಟಪಟ್ಟು ಪ್ರಯತ್ನ ಮಾಡಬೇಕುಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ . ನಮ್ಮ ಸುತ್ತಮುತ್ತಲೂ ನೋಡಿದರೆ ಸಾಕು ಹಲವು ಕೃತ್ಯಗಳು ನಮಗೆ ಪ್ರೇರಣೆಯನ್ನು ನೀಡಬಹುದು ಎಂಬುದನ್ನು ನಾನು ನಂಬುತ್ತೇನೆ .ನಾನು ನನ್ನನ್ನು ಪ್ರೀತಿಸುವ ಹಾಗೆ ನನ್ನ ನೆರೆ ಹೊರೆಯವರನ್ನು ಪ್ರೀತಿಸುತ್ತೇನೆ .ನಾನು ಬೇರೆಯವರಿಗೆ ಎಂದು ನೋವನ್ನು ಉಂಟು ಮಾಡುವುದಿಲ್ಲ .

ಇರುವುದರಲ್ಲೇ ತೃಪ್ತಿ ಪಡುವುದು ನನ್ನ ವಿಶೇಷ ಗುಣ .ನನ್ನ ಕುಟುಂಬವನ್ನು ಯಾವಾಗಲೂ ಸಂತೋಷದಿಂದ ಇಡಬೇಕೆಂಬ ಆಸೆಯಿದೆ .ಈ ದೇಶಕ್ಕಾಗಿ ನನ್ನಿಂದ ಏನಾದರೂ ಕೊಡುಗೆ ಕೊಡಬೇಕೆಂಬ ಆಸೆ ಇದೆ .ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ನನ್ನಿಂದಾದ ಸಹಾಯವನ್ನು ಮಾಡಬೇಕೆಂಬ ಆಸೆ ನನಗಿದೆ.ನಾನು ಸಾಯೋ ಕ್ಷಣದಲ್ಲಿ ನಾನು ಸಂತೋಷವಾಗಿ ಮತ್ತು ಇತರರಿಗೆ ನನ್ನ ಸಂತೋಷವನ್ನು ಹಂಚಿದೆ ಎಂಬ ತೃಪ್ತಿಯನ್ನು ಅನುಭವಿಸಲು ಬಯಸುತ್ತೇನೆ.


ವಂದನೆಗಳು .