ಸದಸ್ಯ:Abubakkar Siddeek H/ನನ್ನ ಪ್ರಯೋಗಪುಟ16

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ವಿಮಲನಾಥ, ಅನಂತನಾಥ, ಧರ್ಮನಾಥ ಸ್ವಾಮಿಯವರ ಪಡುಬಸದಿ, ಮೂಡುಬಿದಿರೆ

ಸ್ಥಳ[ಬದಲಾಯಿಸಿ]

ಪಡುಬಸದಿಯು ಮೂಡುಬಿದಿರೆಯ ಬಸ್ ನಿಲ್ದಾಣದಿಂದಒಂದು ಕೀಮಿ ದೂರದಲ್ಲಿದೆ. ಶ್ರೀ ಜೈನ ಮಠದ ಸಮೀಪದಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕರು 13ನೇ ತೀರ್ಥಂಕರರಾದ ಶ್ರೀ ವಿಮಲನಾಥ ಸ್ವಾಮಿ, 14ನೇ ತೀರ್ಥಂಕರ ಅನಂತನಾಥ ಸ್ವಾಮಿ,15ನೇ ತೀರ್ಥಂಕರಧರ್ಮನಾಥ ಸ್ವಾಮಿ.

ಇತಿಹಾಸ[ಬದಲಾಯಿಸಿ]

ಇಲ್ಲಿ 1955ರ ಹೊತ್ತಿಗೆ ಪ್ರಾಚೀನ ತಾಡೋಲೆಗಳು ಮತ್ತುಕಲ್ಲಿನ ವಿಗ್ರಹಗಳು ಮೇಲ್ಛಾವಣಿಯಲ್ಲಿ ಸಿಕ್ಕಿವೆ.ಬಸದಿಯ ಉತ್ತರಕ್ಕೆ ಗೆಜ್ಜೆ ಬ್ರಹ್ಮನ ವಿಗ್ರಹವಿದೆ. ಇಲ್ಲಿಯಕ್ಷಿಯ ಮೂರ್ತಿಗಳಿದ್ದರೂ ಪ್ರಧಾನವಾಗಿ ಬ್ರಹ್ಮದೇವರನ್ನೇಗುರುವಾರದಂದು ಪೂಜಿಸಲಾಗುತ್ತದೆ. ಪಡುಬಸದಿಗೆ ಯಾವುದೇ ಮಾನಸ್ತಂಭವಿರುವುದಿಲ್ಲ.ಇಲ್ಲಿ ನಾಗನಕಲ್ಲುವಾಯುವ್ಯ ದಿಕ್ಕಿನಲ್ಲಿದ್ದು ಪ್ರಾಯಶಃ ನೈರುತ್ಯದಿಕ್ಕಿನಲ್ಲಿರುವಕಲ್ಲನ್ನು ನಂತರ ವಾಯುವ್ಯ ದಿಕ್ಕಿನಲ್ಲಿರಿಸಲಾಗಿದೆಎನ್ನಬಹುದು.[೧]

ಪೂಜೆ[ಬದಲಾಯಿಸಿ]

ಈ ಬಸದಿಯು ಗುರುಗಳ ಬಸದಿಗೆ ಸಮಕಾಲೀನ ಬಸದಿಯಾಗಿದೆ. ಗರ್ಭಗುಡಿಯಲ್ಲಿ ವಿವಿಧ ಕೆತ್ತನೆಯಿಂದ ಕೂಡಿದ ನಾಲ್ಕು ಶಿಲಾ ಸ್ತಂಭಗಳಿವೆ. ಇಲ್ಲಿ ಸಭಾಂಗಣ ಮತ್ತು ಗಂಧಕುಟಿ ಮಂಟಪವನ್ನುಕಾಣಬಹುದು. ಗರ್ಭಗುಡಿಯ ಮೇಲೆ ಉಲ್ಲೇಖಿಸಿರುವ 3 ಜಿನೇಶ್ವರರನ್ನು ಪೂಜಿಸಲಾಗುತ್ತದೆ. ಮೂರ್ತಿಗಳು ಶಿಲೆಯದ್ದಾಗಿವೆ. 3 ಅಡಿ ಎತ್ತರದ ಈ ಮೂರು ಮೂರ್ತಿಗಳು ಖಡ್ಗಾಸನ ಭಂಗಿಯಲ್ಲಿವೆ.ಪಡುಬಸದಿಯಲ್ಲಿ ಪ್ರತಿನಿತ್ಯ ದಿನಕ್ಕೆರಡು ಸಲ ಪೂಜೆ ನಡೆಯುತ್ತದೆ, ಬೆಳುವಾಯಿ ಮತ್ತುಕಾಂತಾವರ ಪುತ್ತಿಗೆ ಮತ್ತು ಪ್ರಾಂತ್ಯಗ್ರಾಮದ ಪರಂಪರಾಗತ ಪ್ರಮುಖರು ಪೂಜೆ ಪುರಸ್ಕಾರ ಸಲ್ಲಿಸುತ್ತಾರೆ.ಇದೇ ಜಮೀನಿನಲ್ಲಿ ಹಿಂದೆ ಶ್ರೀ ಜೈನ ಮಠವಿದ್ದು ಪ್ರಾಚೀನ ಮಠವು ಇಲ್ಲಿತ್ತೆಂದು ತಿಳಿದು ಬರುತ್ತದೆ.

ಆಡಳಿತ[ಬದಲಾಯಿಸಿ]

ಪಡು ಬಸದಿಯ ಆಗ್ನೇಯ ದಿಕ್ಕಿನಲ್ಲಿಒಂದು ಚಿಕ್ಕ ಕೇಂದ್ರ ಕಚೇರಿಯಿದ್ದು ಮೂಲ ವ್ಯವಸ್ಥಾಪಕ ಮಂಡಳಿ ಶ್ರೀ ಮಠದಲ್ಲಿದೆ. ಶ್ರೀ ಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಆಡಳಿತವನ್ನು ನಿರ್ವಹಿಸಲಾಗುತ್ತದೆ. 1994ರ ಸುಮಾರಿಗೆಜೀರ್ಣೋದ್ಧಾರ ಮಾಡಲಾಗಿದೆ.2000-2013ರಲ್ಲಿ 2 ಬಾರಿರಿಪೇರಿಕಾರ್ಯ ಮಾಡಲಾಗಿದೆ.ಇಲ್ಲಿರುವ ಶ್ರೀ ಅನಂತನಾಥ ಸ್ವಾಮಿಯ ಬಿಂಬವು ಉಳಿದ ಎರಡು ಮೂರ್ತಿಗಳಿಗಿಂತ ಹೆಚ್ಚು ಪ್ರಾಚೀನವೆಂದುಇಲ್ಲಿಯತಾಮ್ರ ಶಾಸನಗಳು ಹೇಳುತ್ತವೆ.

ಉಲ್ಲೇಖ

  1. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೩೮.

ಜೈನ ಧರ್ಮದ ಪುಣ್ಯ ಕ್ಷೇತ್ರಗಳು