ಸದಸ್ಯ:Abubakkar Siddeek H/ನನ್ನ ಪ್ರಯೋಗಪುಟ15

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಮಲ್ಲಿನಾಥ ಸ್ವಾಮಿಯಕೆರೆಬಸದಿ,ಮೂಡುಬಿದಿರೆ

ಸ್ಥಳ[ಬದಲಾಯಿಸಿ]

ಪ್ರಾಂತ್ಯ ಗ್ರಾಮದ ಪ್ರಸಿದ್ಧ ಬಸದಿ ಅಂದರೆಕೆರೆ ಬಸದಿ. ಶ್ರೀ ಮಲ್ಲಿನಾಥ ಸ್ವಾಮಿಯನ್ನು ಮೂಲನಾಯಕ ಸ್ವಾಮಿಯಾಗಿ ಪೂಜಿಸುತ್ತಾರೆ.ಬಸದಿಯ ಹತ್ತಿರಕೆರೆ ಇರುವುದರಿಂದ ಈ ಹೆಸರು ಬಂದಿದೆ. ಇದರ ಹತ್ತಿರವೇ ಬೈಕಣತಿಕಾರಿ ಬಸದಿಯಿದೆ. ಬಸದಿಗೆ ಸಂಬಂಧ ಪಟ್ಟಕುಟುಂಬದವರು ಆಗಾಗ ಈ ಬಸದಿಗೆ ಬರುತ್ತಾರೆ.ಮೂಡುಬಿದಿರೆಯ ಶ್ರೀ ಮಠಕ್ಕೆ ಈ ಬಸದಿಯು ಸೇರಿದೆ. ಶಿಲಾಮಯವಾದ ಈ ಬಸದಿಯ ಮಾಡನ್ನು ಹಂಚಿನಿಂದ ನಿರ್ಮಿಸಲಾಗಿದೆ. ಈಗ ಈ ಬಸದಿಯನ್ನು ಮೂಡುಬಿದಿರೆ ಮಠದ ಸ್ವಸ್ತಿ ಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ನಡೆಸುತ್ತಿದ್ದಾರೆ.[೧]

ಇತಿಹಾಸ[ಬದಲಾಯಿಸಿ]

1500 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆಎಂದು ಸಾಮಾನ್ಯ ಅಭಿಪ್ರಾಯ.1985ರಲ್ಲಿ ಬಸದಿಯನ್ನು ಜೀರ್ಣೋದ್ಧಾರಗೊಳಿಸಲಾಯಿತು. ಭಗವಾನ್ ಮಲ್ಲಿನಾಥ ಸ್ವಾಮಿಯ ಬಿಂಬವು ನುಣುಪಾದ ಕರಿಶಿಲೆಯಿಂದ ಮಾಡಲ್ಪಟ್ಟಿದ್ದು ಕಾಲುಗಳ ಬಳಿ ಯಕ್ಷಿಯನ್ನು ಭುಜಗಳಿಂದ ಮೇಲ್ಭಾಗದಲ್ಲಿ ಶಿಲಾ ಮಕರತೋರಣವನ್ನು ಮುಕ್ಕೊಡೆಯನ್ನು ಹೊಂದಿ ಶೋಭಾಯಮಾನವಾಗಿದೆ.

ಮೂರ್ತಿಗಳು[ಬದಲಾಯಿಸಿ]

ಪದ್ಮಾವತಿ ಅಮ್ಮನವರ ಮತ್ತು ಬ್ರಹ್ಮದೇವರ ಮೂರ್ತಿಗಳು ಇಲ್ಲಿವೆ.ಬಸದಿಯನ್ನು ಪ್ರವೇಶಿಸುವಾಗ ಎಡ ಮತ್ತು ಬಲ ಬದಿಗಳಲ್ಲಿರುವ ಗೋಪುರವಿದೆ.ಬಸದಿಯ ಸುತ್ತಲೂ ವಿಜಯನಗರ ಶೈಲಿಯ ಕಂಬಗಳಿವೆ. ಯುಕ್ತ ಸ್ಥಳಗಳಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ.ತೀರ್ಥಂಕರ ಸ್ವಾಮಿಯ ಬಳಿ ಹೋಗುವಾಗ ಸಿಗುವ ಮಂಟಪದಲ್ಲಿಗಂಧಕುಟಿಯ ಬಳಿಯಲ್ಲಿ ಬ್ರಹ್ಮದೇವರ ಮೂರ್ತಿಯಿದೆ. ಬಸದಿಯಲ್ಲಿಇವರಿಗೂ ಪೂಜೆ ನಡೆಯುತ್ತದೆ. ಕುಬೇರಯಕ್ಷ ಮತ್ತುಅಪರಾಜಿತಾ ಯಕ್ಷಿಗಳು ಬಸದಿಯಲ್ಲಿ ಪೂಜಿಸಲ್ಪಡುವ ಯಕ್ಷ-ಯಕ್ಷಿಗಳು.ಪದ್ಮವತಿದೇವಿಯ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ತೊಡಿಸಿ, ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ.

ವಿನ್ಯಾಸ[ಬದಲಾಯಿಸಿ]

ಅಮ್ಮನವರ ಕಾಲಿನ ಬಳಿ ಕುಕ್ಕುಟ ಸರ್ಪವಿದೆ.ಅಮ್ಮನವರ ಮೂರ್ತಿಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅವರ ಕಾರಣಿಕ ಎಂದರೆಜನರಿಗೆ ಕಷ್ಟ ಬಂದಾಗ ರಕ್ಷಿಸುತ್ತಾಳೆ. ಅಮ್ಮನವರಎದುರು ಹೂ ಹಾಕಿ ನೋಡುವಕ್ರಮವಿದೆ. ಈನ ಬಿಂಬಗಳ ಮತ್ತು ಪೀಠಗಳ ಮೇಲೆ ಓದಲು ಕಷ್ಟವಾಗುವ ಬರವಣಿಗೆಯಿದೆ.ಸ್ವಾಮಿಯ ಮೂರ್ತಿಯುಕಪ್ಪು ಶಿಲೆಯಾಗಿದ್ದು, ಖಡ್ಗಾಸನ ಭಂಗಿಯಲ್ಲಿದೆ. ಸ್ವಾಮಿಯ ಸುತ್ತಲೂ ಮಕರತೋರಣದ ಪ್ರಭಾವಳಿಯಿದೆ.

ಅಭಿಷೇಕ[ಬದಲಾಯಿಸಿ]

ಮೂಲ ಸ್ವಾಮಿಗೆ ದಿನವೂ ಕ್ಷೀರಾಭಿಷೇಕ ಮತ್ತು ಜಲಾಭಿಷೇಕ ಮಾಡಲಾಗುತ್ತದೆ. ನಗರದೇವತೆಯ ಪೂಜೆ, ಮಹಾ ನೈವೇದ್ಯ ಪೂಜೆ ಮತ್ತುಇತರ ಆರಾಧನೆಗಳನ್ನು ಸ್ವಾಮಿಗೆ ಸಲ್ಲಿಸಲಾಗುತ್ತದೆ. ಪದ್ಮಾವತಿಅಮ್ಮನವರಿಗೆ ವಿದ್ಯಾಬುದ್ಧಿಗೆ, ಕಷ್ಟ ಪರಿಹಾರಕ್ಕೆ, ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ದೀಪಾವಳಿ,ಯುಗಾದಿ, ಹುಣ್ಣಿಮೆ ನೋಂಪು, ಜೀವದಯಾಷ್ಟಮಿ ಮುಂತಾದ ಹಬ್ಬಗಳನ್ನು ಬಸದಿಯಲ್ಲಿಆಚರಿಸಲಾಗುತ್ತದೆ. ಬಸದಿಯ ಅಂಗಳದಲ್ಲಿ ಬಲಮೂಲೆಯಲ್ಲಿಕ್ಷೇತ್ರಪಾಲನ ಸನ್ನಿಧಿಯಿದೆ. ಬಳಿಯಲ್ಲಿ ತ್ರಿಶೂಲ ಮತ್ತು ನಾಗರಕಲ್ಲಿದೆ.ಈಕ್ಷೇತ್ರಪಾಲನಲ್ಲಿ ಮಹಾನವಮಿ ಪೂಜೆ ಮಾಡಿಸಿ ಮಳೆ ಬರದಾಗ ಹರಕೆ ಹೇಳುವ ವಿಸೆಷ ಸಂಪ್ರದಾಯವಿದೆ. ಅಂಗಳದಲ್ಲಿ ಅಷ್ಟ ದಿಕ್ಪಾಲಕರ ಮೂರ್ತಿಗಳಿದ್ದು ಪೂಜೆ ಸಲ್ಲಿಸಲಾಗುತ್ತದೆ. ಬಸದಿಯ ಸುತ್ತ ಪ್ರಾಕಾರಗೋಡೆಯಿದ್ದು, ಅದನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ.

  1. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೩೬.

ವರ್ಗ ಜೈನ ಧರ್ಮದ ಪುಣ್ಯ ಕ್ಷೇತ್ರಗಳು