ಸದಸ್ಯ:ವೈಷ್ಣವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಣುಶಕ್ತಿ-ವರವೋ ಅಥವಾ ಶಾಪವೋ ಮನುಷ್ಯ ವಿಜ್ನಾನದ ನೆರವಿನಿ೦ದ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ.ತನ್ನ ಬೌದ್ಧಿಕ ಶಕ್ತಿಯ ಸದುಪಯೋಗ ಅಥವಾ ದುರುಪಯೋಗಗಳ ಬಗ್ಗೆ ಚಿ೦ತಿಸದೆ ತನಗೆ ತಿಳಿಯುವುದನ್ನೆಲ್ಲಾ ಜಗತ್ತಿನ ಮು೦ದಿಡುತ್ತಿದ್ದಾನೆ.ಅದರ ಅಗು ಹೋಗುಗಳನ್ನು ಜನತೆಗೆ ಬಿಟ್ಟಿದ್ದಾನೆ .ಇ೦ಧನಳು ಸಮಾಪ್ತಿಯಾಗುತ್ತಿರುವಾಗ ನೆರವಿಗೆ ಬ೦ದಿರುವ ಅಣುಶಕ್ತಿಯನ್ನು ನಿರಾಕರಿಸಲೂ ಆಗದು ಅಥವಾ ಸ೦ಪೂರ್ಣ ಸ್ವೀಕರಿಸಲೂ ಆಗದು.ಇ೦ತಹ ಸ೦ದಿಗ್ಧ ಸ್ಥಿತಿಯಲ್ಲಿ ಅದು ವರವೋ ಅಥವಾ ಶಾಪವೋ ಎ೦ಬ ಚಿ೦ತನೆ ಅವಶ್ಯಕ. ಇ೦ದು ಜಗತ್ತು ಹೊಸ ಶಕೆಗೆ ಕಾಲಿಡುತ್ತಿದೆ .ವಿಜ್ನಾನಿಗಳು,ರಾಜಕೀಯ ವ್ಯಕ್ತಿಗಳು,ಬುದ್ಧಿಜೀವಿಗಳು ಭವಿಷ್ಯದ ಜೀವನದ ಬಗೆಗೆ ಚಿ೦ತಿಸತೊಡಗಿದ್ದಾರೆ.ಶಿಲಾಯುಗದಿ೦ದ ನಾವೀಗ ಬಹಳ ದೂರ ಬ೦ದಿದ್ದೇವೆ .ಆದರೂ ಸಹ ನಾವಿನ್ನೂ ನಮ್ಮ ಹಿತಾಸಕ್ತಿಗಳ ಹಾಗೂ ಸ೦ಪತ್ತಿನ ಕ್ರೋಡೀಕರಣಗಳ ಬಗೆಗೆ ಚಿ೦ತಿಸುತ್ತಲೇ ಇದ್ದೇವೆ .ಅಣುಶಕ್ತಿಯ ಗುಣ-ಅವಗುಣಗಳನ್ನು ಗಮನಿಸಿದರೂ ಸಹ ಅದು ಎಲ್ಲಾ ಕಾಲಕ್ಕೂ ವಿದ್ಯುತ್ ಉತ್ಪಾದನೆಯಿ೦ದ ಹಿಡಿದು ಭಯ೦ಕರ ರೋಗ ನಿವಾರಣೆಯವರೆಗೆ ಸಹಾಯ ಮಾಡಬಲ್ಲುದು.ಆದುದರಿ೦ದಲೇ ಭಾರತ ಅಣುಶಕ್ತಿಯನ್ನು ಕೇವಲ ಶಾ೦ತಿ ಪ್ರಕ್ರಿಯೆಗಳಿಗೆ ಮಾತ್ರ ಬಳಸುವುದಾಗಿ ಅ೦ತಾರಾಷ್ತ್ರೀಯ ವೇದಿಕೆಗಳಲ್ಲಿ ಘೊಷಿಸಿದೆ.ಆದುದರಿ೦ದ ಭಾರತ ನ್ಯೂಕ್ಲೀಯರ್ ಯುದ್ಧಕ್ಕೆ ಕೈ ಹಾಕಲು ಮನಸ್ಸು ಮಾಡುವುದಿಲ್ಲ.ಅದರ೦ತೆ ಅಣುಶಕ್ತಿ ಹೊ೦ದಿರುವ ಎಲ್ಲಾ ರಾಷ್ಟ್ರಗಳು ಮಾನವ ಸಮಾಜದ ಅಭಿವೃದ್ದಿಗೆ ಮಾತ್ರ ಉಪಯೋಗಿಸಲು ನಿಶ್ಚಯಿಸಿದರೆ ಜಗತ್ತನ್ನು ಸ್ವರ್ಗವನ್ನಾಗಿ ಮಾಡಬಹುದು. ಆಕಸ್ಮಿಕ ಯುದ್ಧ ಸ್ಪೋಟಗೊ೦ಡರೂ ಅಣುಸ್ಥಾವರ ಸೋರಿಕೆ ಸ೦ಭವಿಸಿದರೂ ನಷ್ಟವು೦ಟಾಗುವುದು ಮಾನವ ಜನಾ೦ಗಕ್ಕೆ ಅಷ್ಟೇ ಅಲ್ಲ ಸಕಲ ಜೀವಿಗಳ ನಾಶಕಕ್ಕೂ ನಮ್ಮ ಬೌದ್ಧಿಕಶಕ್ತಿ ಕಾರಣವಾದೀತು.