ಸದಸ್ಯ:ಪ್ರದೀಪ ಕುಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮಲ್ ಹಾಸನ್ ಒಬ್ಬ ಯುನಿವರ್ಸಲ್ ಹೀರೋ[ಬದಲಾಯಿಸಿ]

ತಮಿಳರ ಅಚ್ಚುಮೆಚ್ಚಿನ 'ಉಲಗ ನಾಯಗನ್' (ಅಪ್ರತಿಮ ನಾಯಕ) ಕಮಲ್ ಹಾಸನ್ ಶನಿವಾರ (ಫೆ.9) ಬೆಂಗಳೂರಿಗೆ ಭೇಟಿ ಅಚ್ಚರಿ ಮೂಡಿಸಿದರು. ಅವರು ಮೊದಲು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೆಪಿ ನಗರದ ಮನೆಗೆ ಭೇಟಿ ನೀಡಿ ಉಭಯಕುಶಲೋಪರಿ ವಿಚಾರಿಸಿದರು. ಅಂಬಿ ಮನೆಯಲ್ಲಿ ಅವರು ಲಘು ಉಪಹಾರ ಸ್ವೀಕರಿಸಿದ ಬಳಿಕ ಮಲ್ಲೇಶ್ವರಂನ ರೇಣುಕಾ ಥಿಯೇಟರ್ ಗೆ ಆಗಮಿಸಿದರು. ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದನ್ನು ಕಮಲ್ ಅಭಿನಂದಿಸಿದರು. ಬಹುಶಃ ತಾವು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಅವರಿಗೆ ಈ ಗೌರವ ಲಭಿಸಿರುವುದು ಕಾಕತಾಳೀಯವೇನೋ ಎಂದು ಕಮಲ್ ಹೇಳಿದರು. ಸ್ಲೈಡ್ ಗಳಲ್ಲಿ ಓದಿ ಕಮಲ್ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು.