ಸದಸ್ಯ:ಚಾಂದ್ ಬಾಷ ಅರಸೀಕೆರೆ ಕಾವೇರಿ/ಲಕ್ಷ್ಮಣ್ ಜೂಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಪೋವನದಿಂದ ಲಕ್ಷ್ಮಣ ಜೂಲಾ ಸೇತುವೆಯ ನೋಟ

ಲಕ್ಷ್ಮಣ್ ಜೂಲಾ ಎಂಬುದು ಗಂಗಾ ನದಿಗೆ ತೂಗು ಸೇತುವೆಯಾಗಿದ್ದು ಇದು, ಭಾರತದ ಈಶಾನ್ಯ ರಾಜ್ಯ ಉತ್ತರಾಖಂಡಋಷಿಕೇಶ ನಗರದಲ್ಲಿದೆ. ಈ ಸೇತುವೆಯು ೫ ಕಿ.ಮಿ. (೩ಮೈಲಿ)ನಷ್ಟು ವ್ಯಾಪಿಸಿದೆ. ಈ ಸೇತುವೆಯು ತೆಹ್ರಿ ಗರ್ವಾಲ್ ಜಿಲ್ಲೆಯ ತಪೋವನ್ ನ ಎರಡು ಗ್ರಾಮಗಳನ್ನು ನದಿಯ ಪಶ್ಚಿಮ ದಂಡೆಯಲ್ಲಿ, ಪೌರಿ ಗರ್ವಾಲ್ ಜಿಲ್ಲೆಯ ಜೊಂಕ್ ನ್ನು, ಪೂರ್ವ ದಂಡೆಯಲ್ಲಿ ಸಂಪರ್ಕಿಸುತ್ತದೆ. ಲಕ್ಷ್ಮಣ್ ಜೂಲಾ ಪಾದಚಾರಿಗಳ ಸೇತುವೆಯಾಗಿದ್ದು ಇದನ್ನು ಮೋಟಾರ್ ಬೈಕ್‌ಗಳ ಓಡಾಟಕ್ಕೂ ಸಹ ಬಳಸುತ್ತಿದ್ದಾರೆ. ಇದು ನಗರದ ಹೊರವಲಯದಲ್ಲಿದ್ದರೂ, ಋಷಿಕೇಶದ ಸಾಂಪ್ರದಾಯಿಕ ವಿಶೇಷತೆಗಳಲ್ಲಿ ಒಂದಾಗಿದೆ. ಲಕ್ಷ್ಮಣ್ ಜೂಲಾದ ಕೆಳಭಾಗಕ್ಕೆಇರುವ ೨ಕಿ.ಮಿ. (೧.೨ ಮೈಲು) ವಿಸ್ತಿರ್ಣದ ದೊಡ್ಡ ಸೇತುವೆಯೇ ರಾಮ ಜೂಲಾ

ನವೆಂಬರ್ ೫,೨೦೨೦ ರ ಹೊತ್ತಿಗೆ, ಈ ಸೇತುವೆಯನ್ನು ಪಾದಚಾರಿಗಳ ಪ್ರವೇಶಕ್ಕೆ ನಿರ್ಬಂಧಿಸಿ, ಸಮಾನಾಂತರವಾದ ಬದಲಿ ಸೇತುವೆಯನ್ನು ನಿರ್ಮಿಸಿ, ಅದನ್ನು ಶಾಶ್ವತವಾಗಿ ಮುಚ್ಚುಲಾಗಿದೆ. ಎರಡೂ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿ, ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳು ಸೇರಿದಂತೆ ವಾಹನಗಳ ಸಂಚಾರವನ್ನು ನಿಯಂತ್ರಿಸಿದೆ. ಹಾಗಿದ್ದರೂ, ಪಾದಚಾರಿಗಳ ಪ್ರವೇಶವು ಇನ್ನೂ ಸಾಧ್ಯವಿದೆ ಎಂಬುವುದು ಕೆಳಹಾದಿ ವೀಕ್ಷಕರಿಂದ ಧೃಢಕರಿಸಲ್ಪಟ್ಟಿದೆ. ಹಾಗು ಸೇತುವೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂಬ ಮಾಧ್ಯಮ ವರದಿಗಳು ಸಹ ನಿಖರವಾಗಿಲ್ಲ. ಈಗ ಸೇತುವೆ ಕ್ಷೀಣಿಸುತ್ತಿರುವ ಕಾರಣ ಅದನ್ನು ಬದಲಾಯಿಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳಿಗಾಗಿ ದಯವಿಟ್ಟು ಸುದ್ದಿ ವರದಿಗಳನ್ನು ನೋಡಿ. ಈ ಸೇತುವೆಯು ದ್ವಿಚಕ್ರ ಅಥವ ನಾಲ್ಕುಚಕ್ರ ವಾಹನಗಳಿಗೆ ಮುಚ್ಚಲಾಗಿದ್ದು, ಪಾದಚಾರಿಗಳ ಓಡಾಟಕ್ಕೆ ಮುಕ್ತವಾಗಿದೆ.

ಪುರಾಣಗಳ ಪ್ರಕಾರ ಲಕ್ಷ್ಮಣನು ಹಿಂದೂ ದೇವತೆಯಾದ ಗಂಗೆಯನ್ನು ಸೆಣಬಿನ ಹಗ್ಗಗಳಿಂದ ನಿರ್ಮಿಸಿರುವ ಈ ಸೇತುವೆಯ ಮೇಲೆ ದಾಟಿಸಿದನೆಂದು ಉಲ್ಲೇಖಿಸಲಾಗಿದೆ [೧].

ಸೇತುವೆಯ ಪಶ್ಚಿಮ ಭಾಗದ ಬುಡದಲ್ಲಿ ಎರಡು ಫಲಕಗಳು ಅಸ್ತಿತ್ವದಲ್ಲಿವೆ.

ಮೊದಲ ಫಲಕ ಹೀಗಿದೆ:

೧೯೨೯ ರಲ್ಲಿ ಲಕ್ಷ್ಮಣ್ ಜೂಲಾ ಪೂರ್ಣಗೊಂಡಿತು

ಎರಡನೇ ಫಲಕ ಹೀಗಿದೆ:

ಲಕ್ಷ್ಮಣ್ ಜೂಲಾ ತೂಗು ಸೇತುವೆ

ವ್ಯಾಪ್ತಿ - ೪೫೦ ಅಡಿಗಳು

ಬೇಸಿಗೆಯ ನೀರಿನ ಮಟ್ಟಕ್ಕಿಂತ ಮೇಲಿನ ರಸ್ತೆಯ ಎತ್ತರ - ೫೯ ಅಡಿಗಳು

೧೧ನೇ ಏಪ್ರಿಲ್ ೧೯೩೦ ರಂದು ಸಿ.ಸಿ.ಐ.ಇ. ಕೆ.ಸಿ.ಎಸ್.ಐ. ಯುನೈಟೆಡ್ ಪ್ರಾಂತ್ಯಗಳ ಗವರ್ನರ್ ಎಚ್‌ಇ ಸರ್ ಮಾಲ್ಕಮ್ ಹ್ಯಾಲಿ ಅವರಿಂದ ಸಂಚಾರಕ್ಕೆ ಮುಕ್ತವಾಗಿದೆ ಎಂದು ಧೃಡಿಕರಿಸಿದೆ. ಈ ಸೇತುವೆಯನ್ನು ೧೯೨೭-೨೯ನೇಯ ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದೆ. ಈ ಸೇತುವೆಯು ೨೮೪ ಅಡಿಗಳಷ್ಟು ಹಳೆಯ ಸೇತುವೆಯನ್ನು ಬದಲಾಯಿಸುತ್ತದೆ, ಇದು ರಾಯ್ ಬಹದ್ದೂರ್ ಶೆಪರ್‌ಷಾದ್ ತುಲ್ಶಾನರ ತಂದೆ ರಾಯ್ ಬಹದ್ದೂರ್ ಸೂರಜ್ಮಾಲ್ ಜುಂಜುನ್‌ವಾಲಾ ಅವರ ಕೊಡುಗೆಯಾಗಿದ್ದು, ಇದು ೨೦೦ ಅಡಿಗಳಷ್ಟು ಆಳದಲ್ಲಿದೆ. ಅಕ್ಟೋಬರ್ ೧೯೨೪ ರ ಮಹಾ ಪ್ರವಾಹದಿಂದ ಈ ಸೇತುವೆಯು ಕೊಚ್ಚಿಹೋಗಿ, ಇದರ ಎಡಭಾಗದ ತಳಭಾಗವನ್ನು ದುರ್ಬಲಗೊಳಿಸಿತ್ತು. ಈ ಹಳೆ ಸೇತುವೆಯ ಸ್ಥಳದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಹೊಸ ಸೇತುವೆಯನ್ನು ಪುನರ್ನಿರ್ಮಿಸಲು ಹೆಚ್ಚುವರಿ ವೆಚ್ಚವನ್ನು ರಾಯ್ ಬಹದ್ದೂರ್ ಶೆಪರ್ಷಾದ್ ತುಲ್ಶನ್ ಅವರು ತಮ್ಮ ತಂದೆಯ ಗೌರವಾನ್ವಿತ ಸ್ಮರಣೆಯನ್ನು ಉಳಿಸಲು ಕೊಡುಗೆ ನೀಡಿದ್ದಾರೆ ಮತ್ತು ಈ ಸೇತುವೆಯನ್ನು ದಾಟಲು ಯಾವುದೇ ಸುಂಕ ಅಥವಾ ತೆರಿಗೆ ವಿಧಿಸುವುದಾಗಲಿ ಅಥವಾ ವಸೂಲು ಮಾಡಿಕೊಳ್ಳುವುದಾಗಲಿ ಮಾಡುವಂತಿಲ್ಲ .

ಎರಡನೇ ಫಲಕ ಹೀಗಿದೆ: