ಸದಸ್ಯರ ಚರ್ಚೆಪುಟ:Kaushik Jadav

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ವಿವೇಕಾನಂದ

ನರೇಂದ್ರನು ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ಅಗ್ರಗಣ್ಯ ಆತನಿಗಾಯ್ತು ಗುರುಗಳಿಂದ ಆಧ್ಯಾತ್ಮದಲ್ಲಿ ನೈಪುಣ್ಯ ಕಾಳಿಕಾದೇವಿಯ ದರ್ಶನ ಭಾಗ್ಯವದು ಪುಣ್ಯ ತಾನಾದ ಜ್ಞಾನ - ಭಕ್ತಿ ವೈರಾಗ್ಯಗಳ ಗಡಣ ಗುರೂಪದೇಶ ಜಗಕೆ ಸಾರಲು ಕೈಗೊಂಡ ಪಣ ಪಾಶ್ಚ್ಯಾತ್ಯ ದೇಶದಲಿ ಮಾಡಿದನು ಹಿಂದೂ ಧರ್ಮದ ಭಾಷಣ ಆಧ್ಯಾತ್ಮದಲಿ ಪಾಶ್ಚ್ಯಾತ್ಯರಿಗೆ ತೆರೆಸಿದನು ಕಣ್ಣ ಸೋದರಿ ನಿವೇದಿತಾರಿಗೆ ತಾನಾದ ಅಣ್ಣ ಭಾರತಮಾತೆಯ ಸೇವಿಸಿ ತಾನಾದ ಧನ್ಯ.


ಮಹಾತ್ಮ ಗಾಂಧಿ

ಓ ಗಾಂಧಿ ತಾತ| ನೀನಾದೆ ಭಾರತದ ಪಿತ ಸತ್ಯಧರ್ಮ ಮಾರ್ಗದಿ ನೀ ನಡೆಯುತ ಜಗಕೆ ಸಾರಿದೆ ನೀ ಅಹಿಂಸಾವೃತ ದೇಶಕ್ಕಾಗಿ ನೀ ದುಡಿದೆ ಅನವರತ ಸ್ವಾತಂತ್ರ್ಯ ತಂದು ನೀ ನೀಡಿದೆ ಸಂತಸ ಭಾರತದ ಜನತೆಗೆ ನೀ ಬೋಧಿಸಿದೆ ಸಹೋದರ ಸಮತ ಆದರೆ ಜನತೆಗೆ ನೀ ಬೋಧಿಸಿದೆ ಸಹೋದರ ಸಮತ ಆದರೆ ಜನತೆಗೆ ಕೊನೆಗೂ ಬರಲಿಲ್ಲ ಒಮ್ಮತ ಅಂತ್ಯದಿ ನಿನಗೆ ಗೈದರು ಘಾತ ಇದರಿಂದಾಯಿತು ದೇಶವು ಅನಾಥ ಮತ್ತೊಮ್ಮೆ ಅವತರಿಸು ಈ ನಾಡಲಿ ತಾತ ನೀ ಸರಿಪಡಿಸು ಈ ನಾಡಲಿ ಆದ ಅನಾಹುತ ಓ ಗಾಂಧಿ ತಾತ | ನೀನಾದೆ ಭಾರತದ ಪಿತ.