ಷಡಕ್ಷರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{ ಷಡಕ್ಷರದೇವ }}

  • ’ಓಂ’ಕಾರ ಅಥವಾ ಪ್ರಣವವನ್ನು ಪಂಚಾಕ್ಷರಿಗೆ ಸೇರಿಸಿದಾಗ ಉಂಟಾಗುವ ’ಓಂ ನಮಃ ಶಿವಾಯ’ಎಂಬ ಆರು ಅಕ್ಷರಗಳ ಮಂತ್ರವನ್ನೇ ಷಡಕ್ಷರಿ ಎನ್ನುವರು.
  • ಒಬ್ಬ ನಡುಗನ್ನಡದ ಕವಿ. ಇವನಿಗೆ ’ಮುಪ್ಪಿನ ಷಡಕ್ಷರಿ’ ಎಂಬ ಹೆಸರೂ ಉಂಟು.

ಮುಪ್ಪಿನ ಷಡಕ್ಷರಿ ಅವರು ಕ್ರಿ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಎಂಬ ಗ್ರಾಮದ ಬಳಿಯಿರುವ ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿದ್ದಾಗಿ ಸ್ಥಳೀಯ ಜನರು ನುಡಿಯುತ್ತಾರೆ. ಇವರು ಕೊಳ್ಳೇಗಾಲ ತಾಲೋಕಿನ ಚಿಲಕವಾಡಿ (ಕುಂತೂರು ಗ್ರಾಮದ ಪಕ್ಕದ ಗ್ರಾಮ) ಗ್ರಾಮದಲ್ಲಿರುವ ನಿಜಗುಣ ಶಿವಯೋಗಿಗಳ ಸಮಕಾಲೀನರಾಗಿದ್ದರು ಎಂದು ಸ್ಥಳೀಯ ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮ್ಮ ಪದ್ಯಗಳನ್ನು ಸ್ವರವಚನಗಳ ಮಾದರಿಯಲ್ಲಿ ರಚಿಸುತ್ತಿದ್ದರು ಎಂದು ಹೇಳಲಾಗಿದೆ.

ಷಡಕ್ಷರಿ ಕಾಲ[ಬದಲಾಯಿಸಿ]

ಕ್ರಿ.ಶ. ೧೫೦೦ ಸುಮಾರು

ಗುರು[ಬದಲಾಯಿಸಿ]

ಚಿಕವೀರದೇಶಿಕ

ಗ್ರಂಥ[ಬದಲಾಯಿಸಿ]

  • ರಾಜಶೇಖರ ವಿಳಾಸ
  • ಶಬರ ಶಂಕರವಿಳಾಸ
  • ಬಸವರಾಜವಿಜಯ

(೩ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ)

  • ಕವಿಕರ್ಣರಸಾಯನ

(ಈ ಗ್ರಂಥವನ್ನು ಸಂಸ್ಕೃತದಲ್ಲೂ ರಚಿಸಿದ್ದಾನೆ)

ಬಿರುದು[ಬದಲಾಯಿಸಿ]

  • ಉಭಯ ಕವಿತಾ ವಿಶಾರದ
"https://kn.wikipedia.org/w/index.php?title=ಷಡಕ್ಷರಿ&oldid=1204591" ಇಂದ ಪಡೆಯಲ್ಪಟ್ಟಿದೆ