ಶಂಕರಮಠ, ಭದ್ರಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:023.JPG
'ಶಾರದಾ ದೇವಿಯ ಮಂದಿರ'

ಒಟ್ಟಾರೆ, ೧೪ ಶಂಕರಮಠಗಳಿರುವ ಕರ್ನಾಟಕ ರಾಜ್ಯದಲ್ಲಿ, ಭದ್ರಾವತಿಯಲ್ಲಿರುವ ಶಂಕರಮಠದ ಶಾಖೆ ಬಹಳ ಹೆಸರುವಾಸಿಯಾಗಿದೆ. ಸನ್, ೨೦೦೧ ರಲ್ಲಿ 'ಹೆಬ್ಬೂರು ಯತಿ'ಗಳಿಂದ ಗುದ್ದಲಿ ಪೂಜೆಯ ಶಾಸ್ತ್ರದ ಬಳಿಕ ಶೃಂಗೇರಿ ಯತೀಂದ್ರ, ಶ್ರೀ. ಶ್ರೀ. ಶ್ರೀ. ಭಾರತಿಮಹಾಸ್ವಾಮಿಗಳ ಅಮೃತಹಸ್ತದಿಂದ 'ಕುಂಬಾ ಭಿಷೇಕದ ಕಾರ್ಯಕ್ರಮ 'ಸಂಪನ್ನಗೊಂಡಿತು. ವರ್ಷದಲ್ಲಿ ೪ ಸಮಾರಂಭಗಳು ಬಹಳ ವಿಜೃಂಭಣೆಯಿಂದ ಜರುಗುತ್ತವೆ. ಅವುಗಳು :

  • ನವರಾತ್ರಿ ಉತ್ಸವ
  • ವಾರ್ಷಿಕೋತ್ಸವ
  • ಶಂಕರ ಜಯಂತಿ
  • ಕಾರ್ತಿಕಮಾಸದ ಪೂಜೆ
  • ದೀಪ ನಮಸ್ಕಾರ

ಭಾರತೀ ತೀರ್ಥರ ಸಭಾಭವನ[ಬದಲಾಯಿಸಿ]

ವಿಶಾಲವಾದ ಈ ಸಭಾಂಗಣದ ಉದ್ಘಾಟನೆ 'ಶ್ರೀ. ವಿಕೃತಿನಾಮ ಸಂವತ್ಸರ'ದ ಚೈತ್ರ, ಬಹುಳ,ಚತುರ್ಥಿ, ಶುಕ್ರವಾರದಂದು, ಅಂದರೆ, ತಾ.೦೨-೦೪-೨೦೧೦ ರಂದು, ಭಾರತೀ ತೀರ್ಥಸ್ವಾಮಿಗಳವರ ೬೦ ನೇ ವರ್ಷದಂದು ಅವರ ಅಮೃತಹಸ್ತದಿಂದ ಜರುಗಿತು. ಈ ಸಭಾಗೃಹದಲ್ಲಿ ಮದುವೆ, ಉಪನಯನ, ಮುಂತಾದ ಸಮಾರಂಭಗಳಿಗೆ ಅನುಕೂಲವಾದ ಸ್ಥಳವಾಗಿದೆ.

ಚಿತ್ರ:027.JPG
'ಭದ್ರಾವತಿಯ ಶಂಕರಮಠದ ಪ್ರಾಂಗಣದಲ್ಲಿರುವ ಭಾರತೀ ತೀರ್ಥ ಸಭಾಭವನ'