ವೈ.ಕೆ.ಸಂಧ್ಯಾಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈ.ಕೆ.ಸಂಧ್ಯಾಶರ್ಮ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಪತ್ರಕರ್ತೆಯಾಗಿ ವೃತ್ತಿಜೀವನ ಆರಂಭಿಸಿದ ಶ್ರೀಮತಿ ಸಂಧ್ಯಾ, ಹವ್ಯಾಸಿ ರಂಗಭೂಮಿಯಲ್ಲಿ ಸಂಧ್ಯಾ ಕಲಾವಿದರು ತಂಡದ ಮೂಲಕ ಕ್ರಿಯಾಶೀಲರಾಗಿದ್ದಾರೆ. ಕಾದಂಬರಿ, ಸಣ್ಣಕಥೆ ಮತ್ತು ವಿಮರ್ಶೆ ಈ ಮೂರೂ ಪ್ರಕಾರಗಳಲ್ಲಿ ೫೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಲೇಖಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  • ಪರಿವೇಷ
  • ಪರಿಭ್ರಮಣ
  • ಕವಣೆಗಿಟ್ಟ ಕಲ್ಲು
  • ಕಾನನದ ನಡುವೆ
  • ನೃತ್ಯ ಸರಸ್ವತಿ
  • ಗುಪ್ತಗಾಮಿನಿ
  • ಶ್ವೇತ ಮಹಲ್
  • ಬೊಗಸೆ ಬೆಲದಿಂಗಳು
  • ನೆಲೆಗಾಣದ ಹಕ್ಕಿ
  • ಪ್ರೇಮಚಂದನ
  • ಬೆಳ್ಳಿಕಿರಣ
  • ಮೋಡದ ನೆರಳು
  • ಮನಸೇ ಒ ಮನಸೇ
  • ಮಧು ಸಿಂಚನ
  • ಕನಸಿಗೊಂದು ಕನ್ನಡಿ

ಕಥಾ ಸಂಕಲನ[ಬದಲಾಯಿಸಿ]

  • ಕಿರುಗುಟ್ಟುವ ದನಿಗಳು
  • ತಾಳ ತಪ್ಪಿದ ಮೇಳ
  • ಬೆಳಕಿಂಡಿ

ವಿಚಾರ ಸಾಹಿತ್ಯ[ಬದಲಾಯಿಸಿ]

  • ಮಹಿಳೆ ಮತ್ತು ಉದ್ಯೋಗ

ಜೀವನ ಚರಿತ್ರೆ[ಬದಲಾಯಿಸಿ]

  • ಅಹಲ್ಯಾಬಾಯಿ ಹೋಳ್ಕರ

ಸಂಪಾದನೆ[ಬದಲಾಯಿಸಿ]

  • ನಮ್ಮ ಲೇಖಕಿಯರು

ಪ್ರಶಸ್ತಿ[ಬದಲಾಯಿಸಿ]

  1. ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ,
  2. ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ,
  3. ಅತ್ತಿಮಬ್ಬೆ ಪ್ರಶಸ್ತಿ,
  4. ಗೊರೂರು ಪ್ರಶಸ್ತಿ,
  5. ಕರ್ನಾಟಕ ದಸರಾ ಪ್ರಶಸ್ತಿ,
  6. ಕನ್ನಡ ಲೇಖಕಿಯರ ಸಂಘದ ಪ್ರಶಸ್ತಿ,
  7. ಪಂಜೆ ಮಂಗೇಶರಾಯರ ಪ್ರಶಸ್ತಿ,
  8. ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ
  9. ಅಬ್ದುಲ್ ಕಲಾಮ್ ಪ್ರಶಸ್ತಿ,
  10. ‘ನಿದಂ’ ಸಂಸ್ಥೆಯಿಂದ ‘ವುಮನ್ ಅಚಿವರ್’

ವೈಶಿಷ್ತ್ಯ[ಬದಲಾಯಿಸಿ]

ಸಂಧ್ಯಾ ತಮ್ಮ[೧]ಜಾಲತಾಣದ ಮೂಲಕ ನೃತ್ಯ, ನಾಟಕಗಳ ವಿಮರ್ಶೆ ಮತ್ತು ಸಣ್ಣ ಕಥೆಗಳನ್ನು ಪ್ರಕಟಿಸುತ್ತಾ, ಇಂಟರ್ ನೆಟ್ ನಲ್ಲಿ ಸಹ ಛಾಪನ್ನು ಮೂಡಿಸಿದ್ದಾರೆ

  1. https://sandhyapatrike.com