ವಟು ವಿದ್ಯಾಲಯ
'ವಟು ವಿದ್ಯಾಲಯ'
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿಯ ದಂಡೆಯಮೇಲೆ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಸ್ಥಾಪನೆಯಾದ, ' ಶಿವಯೋಗ ಮಂದಿರ,' ತನ್ನ ಶತಮಾನೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿದೆ. ವೀರಶೈವ ಸ್ವಾಮಿಗಳಾಗಲು ಅರ್ಹತೆಯನ್ನು ಪಡೆಯಲು ಇಚ್ಛಿಸುವ ವಟುಗಳನ್ನು, ಇಲ್ಲಿ ತರಪೇತಿಗೊಳಿಸಿ ಮುಂದೆ ಮಠಗಳ ಹುದ್ದೆಯನ್ನು ನಿರ್ವಹಿಸಲು ತರಪೇತುಮಾಡಲಾಗುವುದು.
ವಿದ್ಯಾರ್ಜನೆಗೆ ಬರುವ ವಟುಗಳ ವಯೋಮಿತಿಯನ್ನು ಸ್ಪಷ್ಟೀಕರಿಸಿದ್ದಾರೆ
[ಬದಲಾಯಿಸಿ]ಸಾಮಾನ್ಯವಾಗಿ ಬರುವ ಜಂಗಮ ಕುಟುಂಬದ ಮಗುವಿಗೆ ೬ ವರ್ಷ ಇಲ್ಲವೆ ಅದಕ್ಕೂ ಕಡಿಮೆಯಿದ್ದರೆ ಪ್ರಶಸ್ತ್ಯ. (೬-೧೪ ದ ವಯೋಮಿತಿಯನ್ನೂ ಅಂಗೀಕರಿಸಲಾಗುವುದು). ಮುಂದೆ ಆ ಮಗು ತಂದೆ-ತಾಯಿಯಗಳೊಡನೆ ಭಾವನಾತ್ಮಕ ಸಂಬಂಧವನ್ನು ಕಡಿದುಕೊಳ್ಳಬೇಕಾದದ್ದರಿಂದ ಅದಕ್ಕೆ ತಯಾರಿ ಅತ್ಯವಶ್ಯಕ. ಸಾತ್ವಿಕ ಆಹಾರ ಸೇವನೆ, ಮನೋಚಾಂಚಲ್ಯದಿಂದ ವಿಚಲಿತರಾಗದಿರಲು ಜನಸಂಪರ್ಕದಿಂದ ದೂರವಿರಬೇಕು. ಮಠದ ಆವರಣವೇ ಸರ್ವಸ್ವ. ಇವೇ ಮುಂತಾದ ಸಾಮಾನ್ಯ ಅಘೋಷಿತನಿಯಮಗಳನ್ನು ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಪರಿಪಾಲಿಸತಕ್ಕವರಾಗಿರಬೇಕು. ಮನೋನಿಗ್ರಹಕ್ಕೆ ಪ್ರಥಮ ಆದ್ಯತೆ. ಆಚಾರ-ವಿಚಾರ, ಲಿಂಗಪೂಜೆ, ಆತ್ಮಬಲ ಸಂವರ್ಧನೆ, ವೀರಶೈವ ತತ್ವದರ್ಶನ, ವಚನ ಸಾಹಿತ್ಯ, ಸಂಸ್ಕೃತ, ಸಂಗೀತ, ಯೋಗಾಭ್ಯಾಸ, ಮುಂತಾದವುಗಳ ಪಕ್ವತೆಯನ್ನು ಸಾಧಿಸಿ, ಸಮಾಜ ಸೇವೆಗೆ ಸಿದ್ಧಗೊಳಿಸುವುದೇ ಪ್ರಮುಖ ಪ್ರಕ್ರಿಯೆಗಳಲ್ಲೊಂದು. ಇವುಗಳನ್ನು ವಟುವಿಗೆ ಬೇಕಾದ ಅರ್ಹತೆಗಳೆಂದರೂ ಅಡ್ಡಿಯಿಲ್ಲ.
ತಮ್ಮ ಮಕ್ಕಳು, ವೀರಶೈವ-ಮಠಾಧೀಶ್ವರ, ರಾಗಲೆಂಬ ಹಂಬಲವಿರುವವರಿಗೆ ಮಾತ್ರ ಇಲ್ಲಿ ಪ್ರಾಮುಖ್ಯತೆ ದೊರೆಯುತ್ತದೆ
[ಬದಲಾಯಿಸಿ]ತಮ್ಮ ಮಠಕ್ಕೊಬ್ಬ ಯೋಗ್ಯ ಮಠಾಧಿಪತಿ ಬೇಕೆಂಬ ತುಡಿತವಿರುವ ದಂಪತಿಗಳು, ಮಠದ ಸುಪರ್ದಿಗೆ ತಮ್ಮ ಬಾಲಕನನ್ನು ಕರೆತಂದು ಒಪ್ಪಿಸುತ್ತಾರೆ. ಬಾಲಕ ಮುಂದೆ ತರಪೇತಿಪಡೆದು, ಸಾಧಕನಾದ ಬಳಿಕ ಸಾಂಪ್ರದಾಯಕ ವಿಧಿ-ವಿಧಾನಗಳೊಂದಿಗೆ ಸ್ವಾಮಿತ್ವದ ಪಟ್ಟವನ್ನು ವಹಿಸಿಕೊಡಲಾಗುವುದು. ಬಾಲಕರ ವಯಸ್ಸು, ಅವರು ಸಿದ್ಧಿಸಿಕೊಳ್ಳುವ ಮನೋನಿಗ್ರಹ, ಸಾಮಥ್ಯವನ್ನು ಆಧರಿಸಿ,
- 'ವಟುಗಳು' ಮತ್ತು
- 'ಮರಿದೇವರೆಂದು,' ವಿಂಗಡಿಸುತ್ತಾರೆ.
ಪ್ರತಃಕಾಲ ೪-೩೦ ರಿಂದ ಆರಂಭವಾಗುವ ಮಠದ ದಿನಚರಿ, ಮುಕಾಯವಾವುವುದು ರಾತ್ರಿ, ೧೦ ಗಂಟೆಗೆ. ಮರಿದೇವರಾಗಿ ರೂಪುಗೊಳ್ಳುವಷ್ಟರಲ್ಲಿ ಬಾಲಯೋಗಿಗಳು ಸಂಪೂರ್ಣವಾಗಿ ಸ್ವಾಮಿತ್ವಕ್ಕೆ ಶರಣಾಗಿರುತ್ತಾರೆ. ಅಲ್ಲಿನ "ಶಿವಯೋಗ ಮಂದಿರ" ದ ಸ್ವಾಮೀಜಿ, " ಅಭಿನವ ಅನ್ನದಾನ ಮಹಾಸ್ವಾಮಿ," ಗಳ ಮಾತನ್ನು ಇಲ್ಲಿ ಉದ್ಧರಿಸಬಹುದು. " ಎಂ. ಎ, ಪಿ. ಎಚ್. ಡಿ ಆದವರು, ರಗಡ ಮಂದಿ ಸಿಗತಾರ, ಆದ್ರ, ಆಚಾರ-ವಿಚಾರ ಶುದ್ಧ ಇದ್ದವರು, ಮತ್ತ ಮನೋನಿಗ್ರಹ ಇದ್ದವರು, ಸಿಗೂದು ಕಷ್ಟ." ಈ ಮಾತು ಅಕ್ಷರಶಃ ದಿಟವೆನ್ನಬಹುದು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |