ಭೀಮಾಜಿ ಜೀವಾಜಿ ಹುಲಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೀಮಾಜಿ ಜೀವಾಜಿ ಹುಲಕವಿ ಇವರು ೧೮೯೫ರಲ್ಲಿ ಜನಿಸಿದರು. ಇವರು ಶಾಲಾ ಶಿಕ್ಷಕರಾಗಿದ್ದರು. ‘ವಾಗ್ಭೂಷಣ’ ಪತ್ರಿಕೆಯಲ್ಲಿ ಇವರ ಕೃತಿಗಳು ಧಾರಾವಾಹಿಯಾಗಿ ಪ್ರಕಟಗೊಂಡವು. ಇವರು ‘ಶಾರದೆಯ ಮುತ್ತಿನ ಸರ’ ಗ್ರಂಥಮಾಲೆಯ ಸಂಚಾಲಕರಾಗಿದ್ದರು.


ಇವರ ಕೆಲವು ಕೃತಿಗಳು:

  • ಪದ್ಮಾವತಿ ಪ್ರೇಮಮಂದಿರ
  • ಶ್ರೇಯಃ ಸಾಧನ
  • ಪತಿತ ಪರಿವರ್ತನ
  • ಶುದ್ಧಿ ಸಂಘಟನೆ
  • ಹತಭಾಗಿನಿಯಾದ ವಿಮಲೆ
  • ಶ್ರೀ ವಿದ್ಯಾರಣ್ಯ ಸ್ವಾಮಿಗಳು
  • ಕರ್ನಾಟಕ ಸ್ವಪ್ನ ವಾಸವದತ್ತೆ
  • ಅತ್ತೆ ಮನೆ ಕಾಟ ಅಥವಾ ಸುಶೀಲಾ ವಸಂತರ ದುರ್ದೈವ
  • ದುಷ್ಕರ್ಮ ಪರಿಪಾಕ ಅಥವಾ ಉನ್ಮಾದಿನಿಯಾದ ಮೋಹಿನಿ
  • ದೇವನಂದಿನಿ
  • ನನ್ನ ಕನಸು
  • ನರಗುಂದ ಬಂಡಾಯ


ಭೀಮಾಜಿ ಜೀವಾಜಿ ಹುಲಕವಿ ಇವರು ೧೯೫೯ರಲ್ಲಿ ನಿಧನರಾದರು.