ಭಾರ್ಗವಿ ನಾರಾಯಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರ್ಗವಿ ನಾರಾಯಣ್, (೧೯೩೮ ಫೆಬ್ರವರಿ, ೪-೨೦೨೨, ಫೆಬ್ರವರಿ,೧೪) ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ. [೧] ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ.ಎರಡು ಕನಸು (೧೯೪೭), ಪಲ್ಲವಿ ಅನುಪಲ್ಲವಿ (೧೯೮೩) ಮತ್ತು ಬಾ ನಲ್ಲೆ ಮಧುಚಂದ್ರಕೆ (೧೯೯೩) ಹಾಗೂ ಮುಂತಾದವು.

ವೃತ್ತಿಜೀವನ[ಬದಲಾಯಿಸಿ]

ಭಾರ್ಗವಿ ನಾರಾಯಣ್, ಅವರು ಇಪ್ಪತ್ತು ಎರಡು ಚಿತ್ರಗಳು ಹಗೂ ದೂರದರ್ಶನದ ಸರಣಿಯ ಮಂಥನಾ ಮತ್ತು ಮುಕ್ತಾ (ಟಿವಿ ಸರಣಿಗಳು) ಸೇರಿದಂತೆ ಕನ್ನಡದಲ್ಲಿ ಅನೇಕ ನಾಟಕಗಳನ್ನು ನಟಿಸಿದ್ದಾರೆ. ಅವರು ಎಐರ್ ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಅವರು ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.[೨] ,[೩]

ಕಲೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಅವರು ಬೆಂಗಳೂರಿನ ಅಂಕಿತಾ ಪುಸ್ತಕ ಪ್ರಕಟಿಸಿದ 'ನಾ ಕ೦ಡ ನಮ್ಮವರ' ಎಂಬ ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದಾರೆ.[೪]

ವೈಯಕ್ತಿಕ ಜೀವನ[ಬದಲಾಯಿಸಿ]

ಭಾರ್ಗವಿ ೪ ಫೆಬ್ರವರಿ ೧೯೩೮ ರಂದು ಮತ್ತು ನಾಮಗಿರಿಯಮ್ಮ ಮತ್ತು ಎಂ.ರಾಮಸ್ವಾಮಿಯವರಿಗೆ ಜನಿಸಿದರು. ಬೆಲ್ಲಾವಾಡಿ ನಂಜುಂಡಯ್ಯ ನಾರಾಯಣ,ಇವರು ಕನ್ನಡ ಚಲನಚಿತ್ರದ ನಟ ಮತ್ತು ಸೌಂದರ್ಯ ವರ್ಧಕ ಕಲಾವಿದರಾಗಿದ್ದ, ಮೇಕಪ್ ನಾಣಿಯವರನ್ನು ಮದುವೆಯಾದರು. [೫] ಅವರಿಗೆ ನಾಲ್ಕು ಮಕ್ಕಳಿದ್ದಾರೆ; ಸುಜಾತಾ, ಪ್ರಕಾಶ್, ಪ್ರದೀಪ್ ಮತ್ತು ಸುಧಾ.[೬]. ಭಾರ್ಗವಿ ನಾರಾಯಣರ ಆತ್ಮಚರಿತ್ರೆ 'ನಾನು, ಭಾರ್ಗವಿ' [೭] ೨೦೧೨ ರಲ್ಲಿ ಬಿಡುಗಡೆಯಾಯಿತು, ಪ್ರಕಾಶಕ ಅಂಕಿತಾ ಪುಸ್ತಕ, ಬೆಂಗಳೂರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಘ, ಶಿವಮೊಗ್ಗ [೮]ಮತ್ತು "ಶ್ರೀಮತಿ ಗಂಗಮ್ಮ ಸೊಮಾಪ್ಪ ಬೊಮ್ಮೈ ಪ್ರತಿಷ್ಠಾನ", ಧಾರವಾಡ, ಕರ್ನಾಟಕದಿಂದ ತನ್ನ ಪುಸ್ತಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಪೋಷಕ ನಟಿ (೧೯೭೪-೭೫)
  • ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು (೧೯೯೮)
  • ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ
  • ಆಳ್ವಾಸ್ ನಡಿಸಿರಿ ಪ್ರಶಸ್ತಿ(೨೦೦೫)
  • ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ - ಅತ್ಯುತ್ತಮ ನಟಿ (ಎರಡು ಬಾರಿ)
  • ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ (೧೯೭೪-೭೫) - ರಾಜ್ಯ ಮಟ್ಟದ ಪ್ರಶಸ್ತಿ

ಚಲನಚಿತ್ರಗಳು[ಬದಲಾಯಿಸಿ]

  • ಪ್ರೊಫೆಸರ್ ಹುಚ್ಚೂರಾಯ
  • ಪಲ್ಲವಿ ೧೯೭೬
  • ಮುಯ್ಯಿ ೧೯೭೯
  • ಅ೦ತಿಮ ಘಟ್ಟ ೧೯೮೭
  • ಜ೦ಬೂ ಸವಾರಿ ೧೯೯೩
  • ಕಾದ ಬೆಳದಿ೦ಗಳು ೨೦೦೩
  • ಇದೊಳ್ಳೆ ರಾಮಾಯಣ ೨೦೧೬

ನಿಧನ[ಬದಲಾಯಿಸಿ]

ಭಾರ್ಗವಿ ನಾರಾಯಣ್,(೮೪) ವಯೋಸಹಜ ಖಾಯಿಲೆಯಿಂದ ನಿಧನರಾದರು. [೯]

ಉಲ್ಲೇಖಗಳು[ಬದಲಾಯಿಸಿ]

  1. https://timesofindia.indiatimes.com/entertainment/kannada/movies/news/Three-generations-come-together-for-one-film/articleshow/54655752.cms
  2. http://bangaloreliteraturefestival.org/participant/bhargavi-narayan/
  3. https://www.prajavani.net/news/article/2016/11/24/454360.html
  4. https://www.sapnaonline.com/books/kanda-nammavaru-bhargavi-narayan-1234567182923?position=6&searchString=
  5. ಮೇಕಪ್ ನಾಣಿಯವರನ್ನು ಮದುವೆಯಾದರು, ಒನ್ ಇಂಡಿಯ, ಸುಮತೀಂದ್ರ ನಾಡಿಗ್, January,23,2003
  6. https://vijaykarnataka.indiatimes.com/lavalavk/women/mother-daughter-supplement/articleshow/52089458.cms
  7. https://www.sapnaonline.com/books/naanu-bhargavi-bhargavi-narayan-1234051540-5551234051540?position=6&searchString=[ಶಾಶ್ವತವಾಗಿ ಮಡಿದ ಕೊಂಡಿ]
  8. https://www.thehindu.com/todays-paper/tp-national/tp-karnataka/karnataka-sangha-announces-awards-list/article3593389.ece
  9. ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ, ಕನ್ನಡ ಪ್ರಭ,14th February 2022, Archived 2022-02-15 ವೇಬ್ಯಾಕ್ ಮೆಷಿನ್ ನಲ್ಲಿ.