ಬಿ ಪುಟ್ಟಪ್ಪ ರಾಧಾಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ಪುಟ್ಟಯ್ಯ ರಾಧಾಕ್ರಷ್ಣ ಇವರ ಕಾಲ ಕ್ರಿ.ಶ. ೧೯೧೮-೨೦೧೨. ಇವರು ಬಿ.ಎಸ್.ಸಿ ಆನರ್ಸ್ ಪದವೀಧರರು. ಬಿ.ಎಸ್. ಆನರ್ಸ್ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಹೆಗ್ಗಳಿಎ ಇವರದು. ಮೈಸೂರು ಜಿಯಾಲಾಜಿಕಲ್ ಸೆಂಟರ್ನಲ್ಲಿ ಉದ್ಯೋಗ ಪ್ರಾರಂಭಿಸಿದ ಇವರು ೧೯೫೪ರಲ್ಲಿ 'ಡಾಕ್ಟರೇಟ್' ಪಡೆದು ಕರ್ನಾಟಕ ಸರ್ಕಾರದ ಗಣಿ ಭೂಗರ್ಭ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತ ಇವರು ಸಿ.ವಿ.ರಾಮನ್, ಚಾರ್ಲ್ಸ ಡಾರ್ವಿನ್, ಐನ್ಸ್ಟೀನ್, ರಾಮಾನುಜಂ, ಮೇರಿಕ್ಯೂರಿ ಮುಂತಾದವರ ಜೀವನ ಚರ್ರಿತ್ರೆಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಗಾಗಿ ಮೂರು ಬಾರಿ ಸಾಹಿತ್ಯ ಅಕಾಡಮಿಪ್ರಶಸ್ತಿ, ೧೯೯೧ ರಲ್ಲಿ ಪದ್ಮಶ್ರೀಪ್ರಶಸ್ತಿ, ಮತ್ತು ಕರ್ನಾಟಕ ಸರ್ಕಾರದ ರಾಜ್ಯೋತ್ಸವಪ್ರಶಸ್ತಿಗಳು ಲಭಿಸಿವೆ.