ಬನಶಂಕರಿ ದೇವಸ್ಥಾನ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:P1010015.JPG
'ಬನಶಂಕರಿ ಅಮ್ಮನವರ ಹೊಸ ದೇವಾಲಯ'

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ 'ಬನಶಂಕರಿ ದೇವಾಲಯ',[೧] ಕನಕಪುರ ರಸ್ತೆಯಲ್ಲಿದೆ. ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ. ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟ್ಟಿನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದಲ್ಲದೆ, ಹಳೆಯ ದೇವಸ್ಥಾನದ ಜಾಗದಲ್ಲಿ ಒಂದು ಹೊಸ ಸುಂದರ ದೇವಾಲಯ ಈಗ ಸಿದ್ಧಗೊಂಡಿದೆ.

ಚಿತ್ರ:1-PA250210.JPG
'ಈಶ್ವರ ಪಾರ್ವತಿ ದೇವಾಲಯ'

ಐತಿಹ್ಯ[ಬದಲಾಯಿಸಿ]

ಚಿತ್ರ:CTA, Ananth 025.JPG
'ಪುರಾತನ ಬನಶಂಕರಿ ಅಮ್ಮನವರ ಮಂದಿರ'

ಸ್ಥಳ ಪುರಾಣದ ರೀತ್ಯ , ಈ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು, ೧೯೧೫ ರಲ್ಲಿ. ಸೋಮಣ್ಣ ಶೆಟ್ಟಿ ಎಂಬುವವರು ಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಬೆಂಗಳೂರಿನ 'ಬನಶಂಕರಿ ದೇವಾಲಯ'ದಲ್ಲಿ ಸ್ಥಾಪಿಸಿದರು. ಬಹಳ ವರ್ಷಗಳಿಂದ ಈ ಮಂದಿರ ಭಕ್ತಾದಿಗಳ ಮನೋಕಾಮನೆಯನ್ನು ಈಡೇರಿಸುತ್ತಿತ್ತು. ಸಮಯ ಸರಿದಂತೆ ಶ್ರದ್ಧಾಳುಗಳು ಹೆಚ್ಚಾಗತೊಡಗಿದರು. ಭಕ್ತಾದಿಗಳ ಉದಾರ ಕಾಣಿಕೆಯಿಂದಾಗಿ ಈಗ ಕಾಣಿಸುತ್ತಿರುವ ಭವ್ಯ ದೇವಸ್ಥಾನವನ್ನು ನಿರ್ಮಿಸಲು ಸಾಧ್ಯವಾಯಿತು.

ವೈಶಿಷ್ಠ್ಯತೆ[ಬದಲಾಯಿಸಿ]

ಚಿತ್ರ:BA12.JPG
'ಹೊಸದಾಗಿ ನಿರ್ಮಾಣಗೊಂಡಿರುವ ಭವ್ಯ ಬನಶಂಕರಿ ಅಮ್ಮನವರ ದೇಗುಲ'

ಸಾಮಾನ್ಯವಾಗಿ ಹಿಂದುಗಳಿಗೆ ರಾಹುಕಾಲದಲ್ಲಿ ಯಾವ ವ್ರತ-ನಿಯಮಾದಿಗಳೂ ವರ್ಜಿತವಾಗಿವೆ. ಹಾಗಾಗಿ, ಅಮ್ಮನವರ ಪೂಜೆಯನ್ನು 'ರಾಹುಕಾಲ'ದ ಸಮಯದಲ್ಲಿ ನಡೆಸುವ ವಿಧಾನವು ಅತಿ ವಿಶೇಷವಾಗಿದೆ. 'ಪಂಚಾಂಗ'ದಲ್ಲೂ ಇದರ ಉಲ್ಲೇಖವಿದೆ. ಆದರೆ ರಾಹುಕಾಲದಲ್ಲೂ ನಡೆಯುವ ಈ ವಿಶೇಷ ಪೂಜಾವಿಧಾನದಿಂದಾಗಿ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರವಾಗಿದೆ. ಶುಕ್ರವಾರ, ಮಂಗಳವಾರ ಮತ್ತು ರವಿವಾರದಂದು ಭಕ್ತರ ದೊಡ್ಡ ಗುಂಪುನ್ನು ದೇವಾಲಯದಲ್ಲಿ ಕಾಣಬಹುದಾಗಿದೆ. ಬನಶಂಕರಿ ಅಮ್ಮನವರಿಗೆ ಅರ್ಧ ಕತ್ತರಿಸಿದ ನಿಂಬೆಹಣ್ಣಿನ ರಸಿಕೆ ತೆಗೆದು, ಅದರಲ್ಲಿ ಎಣ್ಣೆದೀಪವನ್ನು ಹಚ್ಚಿಡುವ ವಿಧಿ ಅನನ್ಯವಾದದ್ದು.

ಜಾತ್ರಾ ಮಹೋತ್ಸವ[ಬದಲಾಯಿಸಿ]

ಪ್ರತಿವರ್ಷವೂ ಅಮ್ಮನವರ ಜಾತ್ರೆ, ಡಿಸೆಂಬರ್ ತಿಂಗಳ ಕೊನೆಯವಾರ ಇಲ್ಲವೇ ಜನವರಿ ತಿಂಗಳ ಮೊದಲವಾರದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದಲ್ಲೂ ಕೂಡ ಬನಶಂಕರಿದೇವಿಯ ಪೂಜಾವಿಧಿಗಳು ಬಹಳ ಸುಂದರವಾಗಿಯೂ ವಿಧಿವತ್ತಾಗಿಯೂ ಜರುಗುತ್ತವೆ.

ವರ್ತಮಾನ ಹಾಗೂ ಭವಿಷ್ಯ[ಬದಲಾಯಿಸಿ]

ಚಿತ್ರ:BS14.JPG
ಹೊಸದಾಗಿ ನಿರ್ಮಿಸಿರುವ ಛಾವಣಿಯಡಿ ಭಕ್ತಾದಿಗಳು ಸೇರುವ ಸ್ಥಳ

ಕರ್ನಾಟಕ ಸರಕಾರಧರ್ಮಾರ್ಥ ಸೇವೆಯ ಅಡಿಯಲ್ಲಿ ಈ ದೇವಾಲಯ ಬರುವುದರಿಂದ ಸರಕಾರದ ಕೃಪಾಪೋಷಿತದ ವಲಯದಲ್ಲಿ ಪೂಜಾ-ವಿಧಿಗಳು ಚೆನ್ನಾಗಿ ನೆರವೇರುತ್ತವೆ.

ತಲುಪುವ ವಿಧಾನ[ಬದಲಾಯಿಸಿ]

ಈ ಪುರಾತನ ದೇವಾಲಯಕ್ಕೆ ಬೆಂಗಳೂರು ನಗರದ ಎಲ್ಲಾ ಕಡೆಯಿಂದಲೂ ಬಂದು ತಲುಪಲು ಸರಕಾರಿ ಬಸ್ ಸೌಕರ್ಯಗಳಿವೆ. 'ಮೆಜೆಸ್ಟಿಕ್', ನಿಂದ ಬನಶಂಕರಿಗೆ ಬರಲು ೧೨ನೇ ಸಂಖ್ಯೆಯ ಅಂಕಣದಲ್ಲಿ ಸೂಕ್ತವಾದ ಬಸ್ಸನ್ನು ಹತ್ತಬಹುದು. ಜಯನಗರ ೪ ನೇ ಬ್ಲಾಕ್ ಹಾಗೂ ಕತ್ರಿಗುಪ್ಪೆಗೆ ಇದು ಹತ್ತಿರವಿದೆ.ಸಾರಕ್ಕಿಬಡಾವಣೆ ಹತ್ತಿರದಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. 2 Blr.com, Banashankari Temple[ಶಾಶ್ವತವಾಗಿ ಮಡಿದ ಕೊಂಡಿ]