ನಾನಾಜಿ ದೇಶಮುಖ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾನಾಜಿ ದೇಶಮುಖ್

ಚಂಡಿಕಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ (ಅಕ್ಟೋಬರ್ ೧೧, ೧೯೧೬ - ಫೆಬ್ರುವರಿ ೨೭, ೨೦೧೦) ಭಾರತೀಯ ಜನಸಂಘ ಪಕ್ಷ ಮತ್ತು ಆರ್ ಎಸ್ ಎಸ್ ನ ಹಿರಿಯ ನಾಯಕ. ದೀನದಯಾಳ್ ಸಂಶೋಧನಾ ಕೇಂದ್ರದ ನೇತೃತ್ವ ವಹಿಸಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ, ನೈರ್ಮಲ್ಯ ಮತ್ತು ಗುಡಿಕೈಗಾರಿಕೆಗಳ ಸಬಲೀಕರಣಕ್ಕೆ ಕೊಡುಗೆ ಸಲ್ಲಿಸಿದುದಕ್ಕೆ ದೇಶ್‍ಮುಖರು ಖ್ಯಾತರಾಗಿದ್ದಾರೆ.

ಬಾಲ್ಯ[ಬದಲಾಯಿಸಿ]

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಅಮೃತರಾವ್ ದೇಶಮುಖ್ ಮತ್ತು ತಾಯಿ ರಾಜಾಬಾಯಿ ಅಮೃತರಾವ್ ದೇಶಮುಖ್. ಬಾಲ್ಯದಿಂದಲೇ ಬಾಲಗಂಗಾಧರ ತಿಲಕ್ ಮತ್ತು ಕೇಶವ ಹೆಗಡೆವಾರರ ಪ್ರಭಾವಕ್ಕೆ ಬಿದ್ದರು. ಆರ್.ಎಸ್.ಎಸ್ ಸೇರಿದ ಚಂಡಿಕಾದಾಸ್, ರಾಜಾಸ್ತಾನದ ಪಿಲಾನಿಯ ಬಿರ್ಲಾ ಕಾಲೇಜಿನಲ್ಲಿ (ಇಂದಿನ ಬಿಟ್ಸ್, ಪಿಲಾನಿ) ಪದವಿ ಪಡೆದರು.

ಹಿರಿಮೆ[ಬದಲಾಯಿಸಿ]

ಅರ್.ಎಸ್.ಎಸ್ ನ ಸದಸ್ಯರಾಗಿ, ನಂತರ ಭಾರತೀಯ ಜನಸಂಘದ ಹುರಿಯಾಳಾಗಿ ಉತ್ತರಪ್ರದೇಶದ ಆಗ್ರಾ, ಗೋರಖ್‍ಪುರಗಳಲ್ಲಿ ಶ್ರಮಿಸಿದ ಚಂಡಿಕಾದಾಸ್, ಆರ್.ಎಸ್.ಎಸ್ ನ ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಪತ್ರಿಕೆಗಳ ಸಂಪಾದನೆಯಲ್ಲಿ ತೊಡಗಿದರು.

ಪ್ರಶಸ್ತಿ[ಬದಲಾಯಿಸಿ]

ಈ ಕಾರ್ಯಕ್ಕಾಗಿ ಇವರಿಗೆ ಭಾರತ ಸರಕಾರವು ಪದ್ಮ ವಿಭೂಷಣ ಪ್ರಶಸ್ತಿಯನ್ನು ಮತ್ತು ಹಲವಾರು ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜಕೀಯ[ಬದಲಾಯಿಸಿ]

ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ಇವರು ರಾಜ್ಯಸಭೆಯ ಮಾನ್ಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.[೧]

ಭಾರತರತ್ನ (ಮರಣೋತ್ತರ) ನೀಡಲಾಗಿದೆ. 

ಆಕರಗಳು[ಬದಲಾಯಿಸಿ]