ನಾಕುತಂತಿ
Jump to navigation
Jump to search
ಲೇಖಕರು | ದ.ರಾ.ಬೇಂದ್ರೆ |
---|---|
ಪ್ರಕಾಶಕರು | ಕಾವ್ಯಧಾರಾ ಪ್ರಕಾಶನ |
ಪ್ರಕಟವಾದ ದಿನಾಂಕ | ೧೯೬೪ |
ನಾಕುತಂತಿ ಕನ್ನಡದ ವರಕವಿಯಂದು ಪ್ರಸಿದ್ಧರಾದ ದ.ರಾ.ಬೇಂದ್ರೆಯವರ ಕವಿತೆಗಳ ಸಂಗ್ರಹವಾಗಿದೆ. ಬೇಂದ್ರೆಯವರ ಈ ಕೃತಿಗೆ ೧೯೭೪ ಇಸವಿಯ ಜ್ಞಾನಪೀಠ ಪ್ರಶಸ್ತಿ ಬಂದಿದೆ.[೧][೨]
ನಾಕುತಂತಿ ನಾಲ್ಕು ಅಂಶಗಳನ್ನು ಕೇಂದ್ರೀಕರಿಸುವ ಕವಿತೆಗಳನ್ನು ಹೊಂದಿದೆ, ಅವುಗಳೆಂದರೆ ನಾನು, ನೀನು, ಆನು, ತಾನು. ಅದ್ವೈತ ಸಿದ್ಧಾಂತದ ಪ್ರಕಾರ ಇವು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿಯ ನಾಲ್ಕು ಹಂತಗಳು.
ಉದಯ ಟಿವಿಯಲ್ಲಿ ೨೦೦೫-೨೦೦೬ರಲ್ಲಿ ಇದೇ ಹೆಸರಿಂದ ಕನ್ನಡ ಧಾರಾವಾಹಿ ಪ್ರಸಾರವಾಗುತ್ತಿತ್ತು. ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಬೇಂದ್ರೆಯವರ ನಾಕುತಂತಿಯ ನಾನು-ನೀನು-ಆನು-ತಾನು ಕವಿತೆಯನ್ನು ಅಳವಡಿಸಿಕೊಂಡು ರಾಗ ಸಂಯೋಜಿಸಿದ್ದಾರೆ.