ಧರಣನಾಥ ಭಟ್ಟಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧರಣನಾಥ ಭಟ್ಟಾಚಾರ್ಯ (೧೮೮೨ - ೧೨ ಡಿಸೆಂಬರ್ ೧೯೬೮) ಬಂಗಾಳಿ ಮೂಲದ ಭಾರತೀಯ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ.

ಕ್ರಾಂತಿಕಾರಿ ಚಟುವಟಿಕೆಗಳು[ಬದಲಾಯಿಸಿ]

ಭಟ್ಟಾಚಾರ್ಯರು ೧೮೮೨ ರಲ್ಲಿ ಬ್ರಿಟಿಷ್ ಭಾರತದ ಖುಲ್ನಾ ಜಿಲ್ಲೆಯಲ್ಲಿ ಗುರುಕುಲ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಉಮಾಚರಣ್ ಭಟ್ಟಾಚಾರ್ಯ. ಹಳೆಯ ಕುಟುಂಬದ ಸಂಪ್ರದಾಯದ ವಿರುದ್ಧ ಅವರು ಇಂಗ್ಲಿಷ್ ಶಿಕ್ಷಣಕ್ಕಾಗಿ ಬರಿಶಾಲೆಗೆ ಪ್ರವೇಶಿಸಿದರು ಮತ್ತು ಅಶ್ವಿನಿ ಕುಮಾರ್ ದತ್ತಾ ಅವರ ಸಂಪರ್ಕಕ್ಕೆ ಬಂದರು. ನಂತರ ಅವರು ತಮ್ಮ ತಂದೆಯೊಂದಿಗೆ ಕಲ್ಕತ್ತಾಗೆ ತೆರಳಿದರು ಮತ್ತು ಕ್ರಾಂತಿಕಾರಿ ಚಳುವಳಿಯತ್ತ ಆಕರ್ಷಿತರಾದರು. ಭಟ್ಟಾಚಾರ್ಯ ಬಿಪಿನ್ ಬಿಹಾರಿ ಗಂಗೂಲಿ ತಂಡದ ಸದಸ್ಯರಾದರು. ಇವರು ಮುರಾರಿಪುಕುರ್ ಬಾಂಬ್ ಪ್ರಕರಣದಲ್ಲಿ ಸಕ್ರಿಯರಾಗಿದ್ದರು. ಭಟ್ಟಾಚಾರ್ಯ ಭೂಗತರಾಗಿ ಬರ್ಮಾಕ್ಕೆ ಓಡಿಹೋದರು. ಭಾರತಕ್ಕೆ ಮರಳಿದ ನಂತರ, ದಿಯೋಘರ್ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಬಂಧಿಸಿ ಕಾರಾಗೃಹದಲ್ಲಿ ಇರಿಸಲಾಯಿತು. [೧]

ಸಾಮಾಜಿಕ ಕಾರ್ಯಗಳು[ಬದಲಾಯಿಸಿ]

ಸ್ವಾತಂತ್ರ್ಯದ ನಂತರ ಭಟ್ಟಾಚಾರ್ಯರು ರಾಜಕೀಯಕ್ಕೆ ಸೇರಿದರು ಮತ್ತು ಸಾಮಾಜಿಕ ಕಾರ್ಯಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಹೂಗ್ಲಿಯಲ್ಲಿ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. [೨] ೧೯೫೧ ರ ಅಸೆಂಬ್ಲಿ ಚುನಾವಣೆಯಲ್ಲಿ, ಅವರು ಭಾರತೀಯ ಜನಸಂಘದ ಬ್ಯಾನರ್ ಅಡಿಯಲ್ಲಿ ಧನೇಖಾಲಿ (ವಿಧಾನಸಭಾ ಕ್ಷೇತ್ರ)ಯಿಂದ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದರು. [೩][೪] ಅವರು ಹೂಗ್ಲಿ ಜಿಲ್ಲೆಯ ಹರಿಪಾಲ್‌ನಲ್ಲಿ ವಾಸಿಸುತ್ತಿದ್ದರು. ಭಟ್ಟಾಚಾರ್ಯರು ಹರಿಪಾಲ್ ಪ್ರದೇಶದಲ್ಲಿ ಹಲವಾರು ಶಾಲೆಗಳನ್ನು ಸ್ಥಾಪಿಸಿದರು ಮತ್ತು ವಿವೇಕಾನಂದ ಮಹಾವಿದ್ಯಾಲಯ, ಹರಿಪಾಲ್ ಎಂಬ ಕಾಲೇಜನ್ನು ೧೯೬೬ ರಲ್ಲಿ ಸ್ಥಾಪಿಸಿದರು. [೫]

ಉಲ್ಲೇಖಗಳು[ಬದಲಾಯಿಸಿ]

  1. Vol - I, Subodh C. Sengupta & Anjali Basu (2002). Sansab Bangali Charitavidhan (Bengali). Kolkata: Sahitya Sansad. p. 228. ISBN 81-85626-65-0.
  2. Indian National Congress (1946). "Congress hand-book, 1946". Retrieved March 27, 2019.
  3. "Dharanath Bhattacharya, Dhaniakhali Assembly Election 1951". Retrieved March 27, 2019.
  4. "Sanskrit Department". Archived from the original on ಮಾರ್ಚ್ 27, 2019. Retrieved March 27, 2019.
  5. "Vivekananda Mahavidyalaya". Retrieved March 27, 2019.