ದ ಬಾಂಬೆ ಬರೋಡಾ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ ಕಂಪೆನಿ, (BB&CI)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬಯಿ ಬರೋಡ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ
ಸ್ಥಾಪನೆ೧೮೫೫
ಮುಖ್ಯ ಕಾರ್ಯಾಲಯಮುಂಬಯಿ (ಈಗ ಮುಂಬಯಿ), ಬ್ರಿಟಿಷ್ ಭಾರತ
ವ್ಯಾಪ್ತಿ ಪ್ರದೇಶಮುಂಬಯಿ ಪ್ರೆಸಿಡೆನ್ಸಿ ಮತ್ತು ರಾಜಸ್ಥಾನ್
ಉದ್ಯಮರೈಲ್ವೇಸ್
ಸೇವೆಗಳುರೈಲ್ ಟ್ರಾನ್ಸ್ ಪೋರ್ಟ್

ದ ಮುಂಬಯಿ ಬರೋಡಾ ಮತ್ತು ಸೆಂಟ್ರೆಲ್ ಇಂಡಿಯ ರೈಲ್ವೆ ಕಂಪೆನಿ, (BB&CI) ೧೮೫೫ ರಲ್ಲಿ ಸೇರಲ್ಪಟ್ಟಿತು. ಮುಂಬಯಿ ಮತ್ತು ಬರೋಡ ನಗರಗಳಿಗೆ ಸಂಪರ್ಕ. ೧೮೬೪ ರಲ್ಲಿ ರೈಲ್ವೇ ದಾರಿ ಹಾಕಲ್ಪಟ್ಟಿತು.

ಭಾರತದ ಮೊಟ್ಟಮೊದಲ ಉಪನಗರ ಸೇವಾ ಪದ್ಧತಿ[ಬದಲಾಯಿಸಿ]

ವಿರಾರ್ ಮತ್ತು ಕೊಲಾಬಾ ತನಕದ ಉಪನಗರದ ಸಂಚಾರ ವ್ಯವಸ್ಥೆಯಾಯಿತು. ಬ್ಯಾಕ್ ಬೇ ಜಿಲ್ಲೆಯಲ್ಲಿ, ೧೮೬೭ ರಲ್ಲಿ, ಚರ್ಚ್ ಗೇಟ್ ನಲ್ಲಿ ಪ್ರಮುಖ ಕಾರ್ಯಾಲಯವಾಯಿತು. ಮೀಟರ್ ಗೇಜ್ ಗೆ ರೈಲ್ವೆ ಸೇವೆಗಳ ದುರಸ್ತಿಯ ಕಾರ್ಯಾಲಯಗಳಿಗೆ ಅಜ್ಮೇರ್, ಪ್ರಮುಖಕಾರ್ಯಾಲಯವಾಗಿತ್ತು.

ವೆಸ್ಟರ್ನ್ ರೈಲ್ವೆಗೆ ವಿದ್ಯುತ್ ತಂತಿಯ ಕಂಬಗಳ ಅಳವಡಿಕೆ[ಬದಲಾಯಿಸಿ]

ದಕ್ಷಿಣ ಮುಂಬಯಿಯ, ಕೊಲಾಬಾದಿಂದ-ಬೋರಿವಲಿಗೆ (೩೭.೮ ಕಿ.ಮೀ) ವಿದ್ಯುತ್ ರೈಲ್ವೆ ದಾರಿ ಅಳವಡಿಸಿದ್ದು, ೫ ಜನವರಿ ೧೯೨೮ ರಲ್ಲಿ. ೧.೫ ಕಿ.ವ್ಯಾಟ್, ಡಿ.ಸಿ.ವಿದ್ಯುತ್ ಪದ್ಧತಿಯನ್ನು ಅಳವಡಿಸಲಾಯಿತು.

  1. ಕೊಲಾಬಾ ಹಾಗೂ ಗ್ರಾಂಟ್ ರೋಡ್ ನವರೆಗೆ, ಎರಡು ಟ್ರಾಕ್ ದಾರಿ,
  2. ಗ್ರಾಂಟ್ ರೋಡ್ ಬಾಂದ್ರ ವರೆಗೆ ಮತ್ತೆ ೪ ಟ್ರಾಕ್,
  3. ೧೯೨೮ ರಲ್ಲಿ ಬಾಂದ್ರ ಹಾಗೂ ಬೋರಿವಲಿವರೆಗೆ, ೨ ಉಪನಗರ ಟ್ರಾಕ್ ಗಳು
  4. ಉಗಿಬಂಡಿ ಓಡಾಡಲು ೨ ಟ್ರಾಕ್

೧೯೩೩,ರಲ್ಲಿ[ಬದಲಾಯಿಸಿ]

೧೯೩೩ ರಲ್ಲಿ, ಕೊಲಾಬಾ ರೈಲ್ವೆ ಸ್ಟೇಶನ್ ಮತ್ತು ೨ ಎಲೆಕ್ಟ್ರಿಫೈಡ್ ನಿಲ್ದಾಣಗಳನ್ನು ವಜಾಮಾಡಿದರು. ೧೯೩೬, ರಲ್ಲಿ ರೈಲ್ವೆ ವಿದ್ಯುತೀಕರಣದ ಹೆಚ್ಚುವರಿ ವ್ಯವಸ್ಥೆಗಳನ್ನು ಮುಂದುವರೆಸಿದರು.

  1. ೨ ಪ್ರಮುಖ ಟ್ರಾಕ್ಸ್ ಗೆ, ಬಾಂದ್ರ ಮತ್ತು ಬೋರಿವಲಿವರೆಗೆ,
  2. ಬೋರಿವಲಿ ವಿರಾರ್ ತನಕ, ವಿದ್ಯುತ್ ಸಂಪರ್ಕ ಕೊಡಲಾಯಿತು. ಇದರಿಂದಾಗಿ, ಚರ್ಚ್ ಗೇಟ್-ವಿರಾರ್ ರೈಲು ಸೇವೆ ಸಂಪೂರ್ಣವಾದಂತಾಯಿತು.

ನಂತರದ ಬದಲಾವಣೆಗಳು[ಬದಲಾಯಿಸಿ]

ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ,೧೯೪೯,ರಲ್ಲಿ, ಗಾಯಕವಾಡ್ ರವರ ಬರೋಡಾ ರಾಜ್ಯ ರೈಲ್ವೆ,ಮುಂಬಯಿ ಬರೋಡಾ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ, ಭಾರತ ಸರಕಾರದ ಆಣತಿಯಂತೆ, ೫ ನವೆಂಬರ್, ೧೯೫೧ ರಲ್ಲಿ, 'ವೆಸ್ಟೆರ್ನ್ ರೈಲ್ವೆ' ಎಂಬ ಹೆಸರಿನಡಿಯಲ್ಲಿ ಕೆಳಗಿನ ರೈಲ್ವೆ ಶಾಖೆಗಳು ಕೆಲಸಮಾಡಲಾರಂಭಿಸಿದವು.

  1. ಮುಂಬಯಿ, ಬರೋಡಾ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ,
  2. ಸೌರಾಷ್ಟ್ರ ರೈಲ್ವೆ,
  3. ರಾಜ್ಪುಟಾನ ರೈಲ್ವೆ,
  4. ಜೈಪುರ್ ರೈಲ್ವೆ ಅಂಡ್ ಕಚ್ ಸ್ಟೇಟ್ ರೈಲ್ವೆ ಜೊತೆ ವಿಲೀನವಾಯಿತು.

ಗಾಂಧಿ ಚಲನ ಚಿತ್ರ[ಬದಲಾಯಿಸಿ]

೧೯೮೨ ರಲ್ಲಿ ನಿರ್ಮಿತಿಗೊಂಡ ರಿಚರ್ಡ್ ಅಟೆನ್ಬರೋರವರು ನಿಮಿಸಿದ, "ಗಾಂಧಿ" ಚಲನ ಚಿತ್ರದಲ್ಲಿ ಪಶ್ಚಿಮ ರೈಲ್ವೆಯಲ್ಲಿ ಹಲವಾರು ನಗರಗಳಿಗೆ ಗಾಂಧಿಯವರು ಬೇಟಿಕೊಟ್ಟ ಪ್ರಸಂಗಗಳನ್ನು ಬಳಸಲಾಗಿದೆ. ರಾಷ್ಟ್ರದ ನಾಯಕ,ಗಾಂಧೀಜಿಯವರ ಜೀವನ ಚರಿತ್ರೆ, ಬೆನ್ ಕಿಂಸ್ಲಿ ನಟಿಸಿದ, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳು.

ಈ ತಾಣಗಳನ್ನೂ ವೀಕ್ಷಿಸಿ[ಬದಲಾಯಿಸಿ]

  1. ಸ್ಟೀವನ್ಸ್ ರ ಬಗ್ಗೆ ಇಂಗ್ಲೀಷ್ ವಿಕಿಪೀಡಿಯ[ಶಾಶ್ವತವಾಗಿ ಮಡಿದ ಕೊಂಡಿ]
  2. ಚಾರ್ಲ್ಸ್ ಒಲಿವೆಂಟ್ ರ ಬಗ್ಗೆ ಇಂಗ್ಲೀಷ್ ವಿಕಿಪೀಡಿಯ
  3. ನೋಟ್ : Rao, M.A. (1988). Indian Railways, New Delhi: National Book Trust, pp. 150–1

ಉಲ್ಲೇಖಗಳು[ಬದಲಾಯಿಸಿ]