ತ್ರಿದೋಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಯುರ್ವೇದದ ಪ್ರಕಾರ, ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು ವಸ್ತುಗಳಲ್ಲಿ ಒಂದು. ಇಪ್ಪತ್ತನೇ ಶತಮಾನದ ಸಾಹಿತ್ಯದಿಂದ ಆರಂಭಗೊಂಡು, ಈ ಕಲ್ಪನೆಯನ್ನು ತ್ರಿದೋಷೋಪದೇಶ ಎಂದು ಕರೆಯಲಾಗುತ್ತಿದೆ. ಅಧಿಕೃತ ಆಯುರ್ವೇದ ಶಾಸ್ತ್ರಗ್ರಂಥಗಳು ಶರೀರದಲ್ಲಿ ಈ ಮೂರು ವಸ್ತುಗಳ ಪ್ರಮಾಣ ಮತ್ತು ಗುಣಮಟ್ಟಗಳು ಹೇಗೆ ಋತುಗಳು, ದಿನದ ಸಮಯ, ಆಹಾರ ಮತ್ತು ಹಲವು ಇತರ ಅಂಶಗಳ ಪ್ರಕಾರ ಏರಿಳಿಯುತ್ತವೆ ಎಂದು ವಿವರಿಸುತ್ತವೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದಿಕ ಔಷಧಶಾಸ್ತ್ರದ ಕೇಂದ್ರ ಪರಿಕಲ್ಪನೆಯಾಗಿದೆ.[೧]

ವಾತ ದೋಷವು ಶುಷ್ಕ, ತಂಪು, ಬೆಳಕು, ನಿಮಿಷ ಮತ್ತು ಚಲನೆಯ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಶರೀರದಲ್ಲಿನ ಎಲ ಚಲನೆಯು ವಾತದ ಗುಣಲಕ್ಷಣಗಳಿಂದ ಇರುತ್ತದೆ. ನೋವು ಅವ್ಯವಸ್ಥಿತ ವಾತದ ವಿಶಿಷ್ಟ ಗುಣಲಕ್ಷಣವಾಗಿದೆ. ಸಮತೋಲ ತಪ್ಪಿದ ವಾತಕ್ಕೆ ಸಂಬಂಧಿಸಿದ ಕೆಲವು ರೋಗಗಳೆಂದರೆ ವಾಯು ತುಂಬಿರುವಿಕೆ, ಸಂಧಿವಾತ, ವಾಯುನೋವು, ಇತ್ಯಾದಿ. ವಾತವನ್ನು ಗಾಳಿ ಎಂದು ವ್ಯಾಖ್ಯಾನಿಸಬಾರದು.

ಪಿತ್ತವು ಚಯಾಪಚಯ ಕ್ರಿಯೆಯನ್ನು ಪ್ರತಿನಿಧಿಸುತ್ತದೆ; ಉಷ್ಣ, ತೇವವಾದದ್ದು, ದ್ರವ, ತೀಕ್ಷ್ಣ ಮತ್ತು ಹುಳಿ ಇದರ ಗುಣಲಕ್ಷಣಗಳಾಗಿವೆ. ಉಷ್ಣ ಇದರ ಮುಖ್ಯ ಗುಣವಾಗಿದೆ. ಇದು ಜೀರ್ಣಕ್ರಿಯೆಯನ್ನು ನಿರ್ದೇಶಿಸಲು ಮತ್ತು ಚಯಾಪಚಯವನ್ನು ವರ್ಧಿಸಲು ಪಿತ್ತರಸವನ್ನು ಬಳಸುವ ಶಕ್ತಿ ತತ್ವವಾಗಿದೆ. ದೇಹದ ಉಷ್ಣ ಅಥವಾ ಸುಡುವ ಸಂವೇದನೆ ಮತ್ತು ಕೆಂಪುತನ ಇದರ ಪ್ರಾಥಮಿಕ ಗುಣಲಕ್ಷಣಗಳಾಗಿವೆ.

ಕಫವು ನೀರಿನಂಥ ಅಂಶವಾಗಿದೆ. ಭಾರತ್ವ, ತಂಪು, ಮೃದುತ್ವ, ನಿಧಾನ, ಎರೆ ಸವರಿಕೆ ಮತ್ತು ಪೋಷಕಾಂಶಗಳ ವಾಹಕವಾಗಿರುವುದು ಇದರ ಗುಣಲಕ್ಷಣವಾಗಿವೆ. ಇದು ಶರೀರದ ಪೋಷಕ ಘಟಕವಾಗಿದೆ. ಎಲ್ಲ ಮೃದು ಅಂಗಗಳು ಕಫದಿಂದ ಮಾಡಲ್ಪಟ್ಟಿವೆ ಮತ್ತು ಇದು ಪೋಷಣೆ ಮತ್ತು ಎರೆ ಸವರಿಕೆಯ ಜೊತೆಗೆ ರುಚಿಯ ಗ್ರಹಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ದೋಷಗಳು ಭೌತಿಕ ಶರೀರವನ್ನು ಸೃಷ್ಟಿಸುವ ಶಕ್ತಿಗಳಾಗಿವೆ. ಇವು ಬೆಳವಣಿಗೆ ಮತ್ತು ವಯಸ್ಸಾಗುವಿಕೆ, ಆರೋಗ್ಯ ಮತ್ತು ರೋಗದ ಪರಿಸ್ಥಿತಿಗಳನ್ನು ತೀರ್ಮಾನಿಸುತ್ತವೆ. ಸಾಮಾನ್ಯವಾಗಿ, ಮೂರು ದೋಷಗಳಲ್ಲಿ ಒಂದು ದೋಷವು ಪ್ರಬಲವಾಗಿರುತ್ತದೆ ಮತ್ತು ಒಬ್ಬರ ದೇಹ ಪ್ರಕೃತಿ ಅಥವಾ ಮನಸ್ಸು-ದೇಹದ ಬಗೆಯನ್ನು ತೀರ್ಮಾನಿಸುತ್ತದೆ. ವ್ಯಕ್ತಿಗತ ರೂಢಿಗಳು, ಭಾವನಾತ್ಮಕ ಪ್ರತಿಕ್ರಿಯೆಗಳು ಮತ್ತು ದೇಹದ ಬಗೆಯನ್ನು ತಿಳಿದುಕೊಂಡು, ಅಭ್ಯಾಸಿಗಳು ಅದರ ಅನುಸಾರವಾಗಿ ತಮ್ಮ ಯೋಗದ ಅಭ್ಯಾಸವನ್ನು ಹೊಂದಿಸಿಕೊಳ್ಳಬಹುದು. ಇದೇ ತತ್ವವು ಆಯುರ್ವೇದ ಚಿಕಿತ್ಸೆಗಳಿಗೆ ಅನ್ವಯಯಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Hari Ghotra, Ayurveda - The Three Doshas [೧]
"https://kn.wikipedia.org/w/index.php?title=ತ್ರಿದೋಷ&oldid=1081801" ಇಂದ ಪಡೆಯಲ್ಪಟ್ಟಿದೆ