ತುಳುನಾಡು ದೇವಸ್ಥಾನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಆನೆಗುಡ್ಡೆ ದೇವಸ್ಥಾನ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರದೇಶವನ್ನು ತುಳು ನಾಡು ಎಂದು ಕರೆಯುತ್ತಾರೆ. ಈ ಹಿಂದೆ ಈ ಎರಡು ಜಿಲ್ಲೆಗಳು ದಕ್ಶಿಣ ಕನ್ನಡ ಜಿಲ್ಲೆಯ ಭಾಗವೇ ಆಗಿತ್ತು. ಆಗಷ್ಟ್ ೧೯೯೭ರಂದು ಉಡುಪಿ ಜಿಲ್ಲೆಯು ಇದರಿಂದ ಬೇರ್ಪಟ್ಟಿತು. ಸಾಂಸೃತಿಕವಾಗಿ ಕಾಸರಗೋಡು ಜಿಲ್ಲೆಯೂ ಸಹ ತುಳುನಾಡಿನ ಭಾಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫ ತಾಲೂಕುಗಳಿವೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ. ಉಡುಪಿ ಜಿಲ್ಲೆಯಲ್ಲಿ ೩ ತಾಲೂಕುಗಳಿವೆ. ಅವು ಉಡುಪಿ, ಕಾರ್ಕಳ ಹಾಗೂ ಕುಂದಾಪುರ.


ತುಳುನಾಡು ಅನೇಕ ದೇವಸ್ಥಾನಗಳಿಗೆ ಪ್ರಸಿದ್ಧವಾಗಿವೆ. ವಿಷ್ಣು, ಶಿವ ಹಾಗೂ ದುರ್ಗಾ ಮಾತೆಯರ ದೇವಸ್ಥಾನಗಳು ಇಲ್ಲಿ ಹೆಸರುವಾಸಿ ಆಗಿವೆ.ತಾಲೂಕುಗಳ ಅನುಸಾರ ತುಳುನಾಡಿನ ಪ್ರಸಿದ್ಧ ದೇವಸ್ಥಾನಗಳು ಇಂತಿವೆ.

  • ಉಡುಪಿ ತಾಲೂಕಿನ ದೇವಸ್ಥಾನಗಳು
    • ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುಂಜರುಗಿರಿ
    • ಶ್ರೀ ಪಜಕ ಕ್ಷೇತ್ರ
  • ಕುಂದಾಪುರ ತಾಲೂಕಿನ ದೇವಸ್ಥಾನಗಳು
    • ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
    • ಶ್ರೀ ಬ್ರಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ
  • ಕಾರ್ಕಳ ತಾಲೂಕಿನ ದೇವಸ್ಥಾನಗಳು
    • ಬೆಳ್ಮಣ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ
    • ಪೊಸ್ಸಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
    • ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
    • ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಹೀಗೆ ವಿವಿಧ ತಾಲೂಕುಗಳಲ್ಲಿ ಅನೇಕ ದೇವಸ್ಥಾನಗಳಿವೆ.